ಅಂತರ ವಿಶ್ವ ವಿದ್ಯಾಲಯ ಖೋ-ಖೋ ತಂಡಕ್ಕೆ ಹೆ.ಆರ್.ಶ್ರೀರಾಮುಲು ಕಾಲೇಜು ವಿದ್ಯಾರ್ಥಿ ಬಸವರಾಜ ಆಯ್ಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ತಂಡಕ್ಕೆ ಕೊಪ್ಪಳ ವಿವಿಯಿಂದ ಗಂಗಾವತಿಯ ಹೆಚ್.ಆರ್.ಶ್ರೀರಾಮುಲು ಮಹಾವಿದ್ಯಾಲಯದ ವಿದ್ಯಾರ್ಥಿ ಬಸವರಾಜ್.ಬಿ ಆಯ್ಕೆಯಾಗಿದ್ದಾನೆ. ದಾವಣಗೆರೆಯಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯ ಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಕೊಪ್ಪಳ ವಿವಿಯನ್ನು ಪ್ರತಿನಿಧಿಸಲಿದ್ದರೆ. ಕ್ರೀಡಾಪಟು ಬಸವರಾಜ ಅವರಿಗೆ ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎ. ಸೋಮರಾಜು, ಪ್ರಾಚಾರ್ಯ ಡಾ. ವಿಜಯಾನಂದ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮೋಹನ್ ಹೊಸಕೋಟಿ ಅವರು ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.




ಕಿಷ್ಕಿಂಧವಾಣಿ ಸುದ್ದಿ