Breaking News
ಅಕ್ರಮ ಇಟ್ಮಂಗಿ ಭಟ್ಟಿಗಳಿಗೆ ಅಕ್ರಮ ಮಣ್ಣು ಸಾಗಾಣಿಕೆ ತಡೆಯುವಂತೆ ಆಗ್ರಹ

*ಅಕ್ರಮವಾಗಿ ಮಣ್ಣು ಸಾಗಾಟ :ಜನಪ್ರತಿನಿಧಿಗಳ ಹಿಂಬಾಲಕರು, ಅಧಿಕಾರಿಗಳು ಶಾಮೀಲು

*ಅಕ್ರಮದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರನ್ನು ಟಾರ್ಗೆಟ್ ಮಾಡುತ್ತಿರುವ ಡಿವೈಎಸ್ಪಿ ಆಮಾನತ್ತಿಗೆ ಆಗ್ರಹ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇಟ್ಟಂಗಿ ಭಟ್ಟಿಗಳನ್ನು ನಡೆಸಲಾಗುತ್ತಿದ್ದು ಈ ಇಟ್ಟಂಗಿ ಭಟ್ಟಿ ಗಳಿಗೆ ಅಕ್ರಮವಾಗಿ ತುಂಗಭದ್ರಾ ಡ್ಯಾಮಿನ ಹಿಂಭಾಗದಿಂದ ಫಲವತ್ತಾದ ಮಣ್ಣನ್ನು ತಂದು ಉಪಯೋಗಿಸಲಾಗುತ್ತಿದೆ. ವೆಂಕಟಗಿರಿ ಭಾಗದ ಪರಿಸರ ವ್ಯಾಪಕವಾಗಿ ಹಾನಿ ಮತ್ತು ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟವಾಗುತ್ತಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹೋರಾಟಗಾರರನ್ನೇ ಡಿ ಎಸ್ ಪಿ ಅವರು ಟಾರ್ಗೆಟ್ ಮಾಡುತ್ತಿದ್ದು ಅವರನ್ನು ಅಮಾನತು ಮಾಡುವಂತೆ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅಜಯ್‌ಕುಮಾರ ಚಲುವಾದಿ ಒತ್ತಾಯಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ 15-20 ವರ್ಷಗಳಿಂದ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯದ ಹಿಂಭಾಗದಲ್ಲಿ ಅಕ್ರಮವಾಗಿ ಮಣ್ಣು ಅಗೆದು ಗಂಗಾವತಿ ತಾಲೂಕಿನ ವೆಂಕಟಗಿರಿ ಸಮೀಪ ಇರುವ ಇಟ್ಟಿಗೆ ಭಟ್ಟಿಗಳಿಗೆ ಸಾಗಾಟ ಮಾಡಲಾಗುತ್ತಿದೆ. ರಾತ್ರೋ ರಾತ್ರಿ ಹತ್ತಾರು ಟಿಪ್ಪರುಗಳು, ಲಾರಿಗಳು ಪ್ರತಿ ದಿನಾಲೂ ಮಣ್ಣು ಸಾಗಾಟ ಮಾಡುತ್ತಿದ್ದು, ಡ್ಯಾಂ ಹಿಂಭಾಗದಲ್ಲಿ ದೊರೆಯುವ ಫಲವತ್ತತ್ತೆಯಿಂದ ಕೂಡಿದ ಮಣ್ಣನ್ನು ರೈತರ ಜಮೀನುಗಳಿಗೆ ಹಾಕುವುದು ಬಿಟ್ಟು, ದುಬಾರಿ ಹಣಕ್ಕೆ ಕೆಲ ಪ್ರಭಾವಿಗಳು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಈ ದಂಧೆವು ಕೆಲ ಹಲವು ವರ್ಷಗಳಿಂದ ನಡೆಯುತ್ತಿದೆ. ಮಾರ್ಚ್ 04,2026 ರಂದು ಸಂಘಟನೆಯ ಕಾರ್ಯಕರ್ತರು ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯ ಮಾಹಿತಿಯನ್ನು 112 ಗೆ ಕರೆ ಮಾಡಿ, ಮಾಹಿತಿ ನೀಡಲಾಗಿತ್ತು. ಆಗ ಲಾರಿ ಮಾಲೀಕರು ಸಂಘಟನೆಯ ಕಾರ್ಯಕರ್ತರಿಗೆ ಹಣ ಆಮಿಷವನ್ನು ನೀಡಿದ್ದಾರೆ. ಕಾರ್ಯಕರ್ತರು ಹಣದ ಆಮಿಷಕ್ಕೆ ಮಣಿಯದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೇಲ್ಲ ಆದರೂ ಗಂಗಾವತಿ ಡಿವೈಎಸ್ಪಿಯವರು ಟಿಪ್ಪರು ಲಾರಿಗಳನ್ನು ಹಿಡಿಯಲು ನಿಮಗೆ ಏನು ಅಧಿಕಾರವಿದೆ. ನಿಮ್ಮ ಮೇಲೆಯೇ ರಾಬರಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಧಮ್ಕಿ ಹಾಕಿರುವುದು ಅತ್ಯಂತ ಖಂಡನೀಯವಾಗಿದೆ. ಈ ರೀತಿಯಾಗಿ ಅಕ್ರಮ ಮಣ್ಣು ಸಾಗಾಟ ಮಾಡುವುದನ್ನು ತಡೆಯಲು ಮುಂದಾಗಿರುವ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿರುವುದು ಅಧಿಕಾರಿಗಳ ನಡೆಯ ಮೇಲೆ ಅನುಮಾನ ಉಂಟಾಗುತ್ತಿದೆ. ಕೂಡಲೇ ಎಸ್ಪಿಯವರು,ಐಜಿಯವತು ಅಕ್ರಮವಾಗಿ ಡ್ಯಾಂನ ಮಣ್ಣನ್ನು ಅಕ್ರಮವಾಗಿ ಇಟ್ಡಂಗಿ ಭಟ್ಟಿಗಳಿಗೆ ಸಾಗಾಟ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಹಾಗೂ ಹೋರಾಟಗಾರರಿಗೆ

ಧಮ್ಕಿ ಹಾಕಿರುವ ಡಿವೈಎಸ್ಪಿ ಅವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ

ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಯಮನೂರ ಮಾದಿಗ,ಪ್ರಮುಖರಾದ ಮರ್ದಾನ ಅಲಿ, ಉಮೇಶ ನಾಯಕ, ಶಿವಕುಮಾರ ಹಾಗೂ ಇತರರಿದ್ದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿಯನ್ನು  ಕೈಬಿಡುವಂತೆ ಕೊಪ್ಪಳದಲ್ಲಿ ಬೃಹತ್ ಪಾದಯಾತ್ರೆ!

*ಪ್ರತಿಭಟನೆಯ ನಂತರ ಡಿಸಿ ಅವರಿಗೆ ಮನವಿ ಸಲ್ಲಿಕೆ.

*ಲಲಿತಾರಾಣಿ ಶ್ರೀರಂಗದೇವರಾಯಲು,ಶ್ರೀಕೃಷ್ಣದೇವರಾಯ ಸೇರಿ ಪ್ರಮಖರ ನೇತೃತ್ವ

*ಪ್ರಾಧಿಕಾರ ಜೀವಿಸುವ ಹಕ್ಕುಗಳನ್ನು ಕಸಿದುಕೊಂಡಿದೆ.

*20 ವರ್ಷಗಳಿಂದ ಮಾಸ್ಟರ್ ಪ್ಲಾನ್ ರಚನೆಯಾಗಿಲ್ಲ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮಾರಕಗಳ ರಕ್ಷಣೆಯ ನೆಪದಲ್ಲಿ ಜನಸಾಮಾನ್ಯರ ಜೀವಿಸುವ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಸಿದುಕೊಂಡಿದೆ ಆದ್ದರಿಂದ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡುವಂತೆ ಆಗ್ರಹಿಸಿ ಆನೆಗೊಂದಿ ರಾಜ ವಂಶಸ್ಥರ ನೇತೃತ್ವದಲ್ಲಿ 15 ಗ್ರಾಮಗಳ ಗ್ರಾಮಸ್ಥರು ರೈತರು ಮಹಿಳೆಯರು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಆನೆಗೊಂದಿ ರಾಜ ವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ಶ್ರೀ ಕೃಷ್ಣದೇವರಾಯಲು ಮಾತನಾಡಿ ಐತಿಹಾಸಿಕ ಪ್ರಸಿದ್ಧ ಆನೆಗೊಂದಿ ಕಿಷ್ಕಿಂಧಾ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಳೆದ 35 ವರ್ಷಗಳ ಹಿಂದೆ ಆನೆಗೊಂದಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲು ಒಪ್ಪಿಕೊಳ್ಳಲಾಗಿತ್ತು ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಇತ್ತೀಚಿನ ಕೆಲ ನಿಯಮಗಳು ಮತ್ತು ಅಧಿಕಾರಿಗಳು ಆನೆಗುಂದಿ ಭಾಗದ ಜನರ ಜೀವಿಸುವ ಹಕ್ಕನ್ನು ಮತ್ತು ಮಾನವ ಹಕ್ಕುಗಳನ್ನು ಕಸಿದುಕೊಂಡಿದೆ.ಇಲ್ಲಿನ ಜನರನ್ನು ಕತ್ತಲಿನಲ್ಲಿ ಬದುಕನ್ನು ದೂಡುವಂತೆ ಮಾಡಿದೆ. ಮನೆಗಳಿಗೆ ಸಣ್ಣಪುಟ್ಟ ವ್ಯಾಪಾರದ ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಖಂಡಿತ ಮಾಡುವುದು, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದು, ಗುಡಿಸಲು, ಮನೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಹಂಪಿ ಅಭಿವೃದ್ಧಿ ಭಾಗದ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಆನೆಗೊಂದಿ ಭಾಗದ ಜನರನ್ನು ಅನುಮಾನದಿಂದ ನೋಡುತ್ತಿದ್ದಾರೆ ಅಕ್ರಮದ ಹೆಸರಿನಲ್ಲಿ ಇಲ್ಲಿಯ ಅಂಗಡಿ ಮುಂಗಟ್ಟುಗಳನ್ನು ಮನೆಗಳನ್ನು ಮಾನವೀಯತೆ ಇಲ್ಲದೆ ತೆರವುಗೊಳಿಸಲಾಗುತ್ತಿದೆ.

ಕಳೆದ 20 ವರ್ಷಗಳಿಂದ ಮಹಾಯೋಜನೆ ಮಾಸ್ಟರ್ ಪ್ಲಾನ್ ಘೋಷಣೆಯಾಗಿಲ್ಲ. ಸ್ಮಾರಕಗಳ ಸಂರಕ್ಷಣೆ ಸಾವಿರಾರು ವರ್ಷಗಳಿಂದ ಆನೆಗೊಂದಿ ಭಾಗದ 15 ಹಳ್ಳಿಗ ಜನರೇ ಮಾಡಿದ್ದಾರೆ ಆದರೆ ಸ್ಮಾರಕಗಳ ಸಂರಕ್ಷಣೆ ನೆಪದಲ್ಲಿ ಆನೆಗೊಂದಿ ಭಾಗದ 15 ಗ್ರಾಮಗಳ ಗ್ರಾಮಗಳ ಗ್ರಾಮಸ್ಥರನ್ನು ಒಕ್ಕಲಿಬ್ಬಿಸುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಕಂಡನೀಯವಾಗಿದೆ. ಜನಪ್ರತಿನಿಧಿಗಳು ನಮ್ಮ ಭಾಗದ ಸಮಸ್ಯೆಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ನಾಲ್ಕು ಪಂಚಾಯತಿಯ ಪಿಡಿಓಗಳು ರವಾನೆ ಮಾಡುತ್ತಾರೆ ನಂತರ ಪ್ರಾಧಿಕಾರದ ಅಧಿಕಾರಿಗಳು ಇದು ಮಾಡಲು ಬರುವುದಿಲ್ಲ ನಿಯಮಗಳು ಅಡ್ಡಿಯಾಗುತ್ತವೆ ಎಂದು ಶರಬರೆಯುತ್ತಾರೆ. ಇದರಿಂದ ಆನೆಗೊಂದಿ ಗ್ರಾಮದ 15 ಗ್ರಾಮಗಳ ಜನರ ಬದುಕು ಸಂಕಷ್ಟದಿಂದ ಕೂಡಿದೆ, ಆದ್ದರಿಂದ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಿಂದ ಆನೆಗೊಂದಿ ಭಾಗವನ್ನು ಕೈಬಿಡಬೇಕು. ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು. ಸಣ್ಣಪುಟ್ಟ ವ್ಯಾಪಾರಕ್ಕೆ ಟ್ರೇಡ್ ಲೈಸೆನ್ಸ್ ಕೊಡುವ ಅಧಿಕಾರವನ್ನು ಗ್ರಾಮ ಪಂಚಾಯತಿಗಳಿಗೆ ನೀಡಬೇಕು.

ಕೂಡಲೇ ಸಂಸದರು ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಮಟ್ಟದಲ್ಲಿ ಮಾತುಕತೆ ನಡೆಸಿ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕಾರಿಗನೂರನ್ನು ಕೈ ಬಿಟ್ಟಂತೆ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಕೈಬಿಡಬೇಕು.

1961 ರಾಜ್ಯ ಪುರಾತತ್ವ ಮತ್ತು ಪ್ರಾಚ್ಯ ವಸ್ತು ಸಂಬಂಧಿಸಿದಂತೆ ಕಾಯಿದೆಗೆ ವಿಧಾನಸಭೆಯಲ್ಲಿ ತಿದ್ದುಪಡಿ ತಂದು

1988 ಪುರಾತತ್ವ ಮತ್ತು ಪ್ರಾಚ್ಯ ವಸ್ತು ಅಧಿನಿಯಮ ವ್ಯಾಪ್ತಿಗೆ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು

ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಪ್ಪು ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿ ಸೇರಿಸಿದ್ದು ಮೊದಲಿಗೆ ಕೋರ್ ಝೋನ್ ನಿಂದ ಆನೆಗೊಂದಿ ಮತ್ತು ವಿರುಪಾಪುರ ಗಡ್ಡಿಯನ್ನು ಕೈಬಿಡಬೇಕು.

ಕೂಡಲೇ ಆನೆಗುಂದಿ ಭಾಗದ 15 ಗ್ರಾಮಗಳ ಗ್ರಾಮಸ್ಥರನ್ನು ರಾಜವಂಶಸ್ಥರನ್ನು ರೈತರನ್ನು ಮಹಿಳೆಯರನ್ನು ಸೇರಿಸಿ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಜ್ಯ ವಸ್ತು ಇಲಾಖೆ ಹಂಪಿ ಅಭಿವೃದ್ಧಿ ಪ್ರಾಧಿಕಾರದವರು ಸಭೆ ನಡೆಸಿ ಸೂಕ್ತ ಪರಿಹಾರವನ್ನು ನೀಡಬೇಕು ಕೂಡಲೇ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಲಲಿತ ರಾಣಿ ಶ್ರೀರಂಗದೇವರಾಯಲು, ಶ್ರೀ ಕೃಷ್ಣದೇವರಾಯಲು, ರತ್ನಶ್ರೀ ರಾಯಲು,

ಆನೆಗೊಂದಿ, ಮಲ್ಲಾಪುರ, ಸಾಣಾಪುರ ಮತ್ತು ಸಂಗಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಪಕ್ಷಾತೀತ,ಜಾತ್ಯತೀತವಾಗಿ ಸಾವಿರಾರು ರೈತರು,ಕೃಷಿ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು ಮತ್ತು ಮಹಿಳೆಯರಿದ್ದರು.

ಮಲ್ಲಾಪೂರ ಸೀಮಾ ಮಲಕನಮರಡಿ ಕೃಷಿಭೂಮಿಯಲ್ಲಿ ನಿತ್ಯವೂ ಚಿರತೆಗಳ ಪ್ರತ್ಯಕ್ಷ!

*ಆಕಳ ಕರುವನ್ನು ತಿಂದು ಮತ್ತೊಂದು ಬೇಟೆಗೆ ಹೊಂಚು ಹಾಕುತ್ತಿರುವ ಚಿರತೆಗಳು.
*ಮಲಕನಮರಡಿ ಸುತ್ತಲಿನ ಗ್ರಾಮಸ್ಥರು.
*ಅರಣ್ಯ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ್ಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪ್ರತಿನಿತ್ಯ ದನ ಕರು ನಾಯಿ ಮತ್ತು ಕುರಿ ಮೇಕೆಗಳನ್ನು ತಿನ್ನುತ್ತಿರುವ ಚಿರತೆಯ ಕಾಟದಿಂದ ಗ್ರಾಮಸ್ಥರು ಮತ್ತು ಕೃಷಿ ಮಾಡುವ ಕೃಷಿಕರು ಭಯಭೀತರಾಗಿರುವ ಘಟನೆ ತಾಲೂಕಿನ ಮಲ್ಲಾಪುರ ಸೀಮೆಯ ಮಲಕನಮರಡಿ ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿ ಜರುಗಿದೆ.
ಮಲಕನ ಮರಡಿ ಗ್ರಾಮದ ಬಾಲಾಜಿ ಕ್ರಷರ್ ಮಿಷನ್ ಹತ್ತಿರದ ಬೆಟ್ಟ ಗುಡ್ಡಗಳಲ್ಲಿ ಚಿರತೆಗಳು ನಿತ್ಯವೂ ಗ್ರಾಮಸ್ಥರು, ಕುರಿಗಗಾಯಿಗಳು ಕೃಷಿಕರಿಗೆ ಪ್ರತ್ಯಕ್ಷವಾಗುತ್ತಿದ್ದು ಜನಜಾನುವಾರುಗಳಿಗೆ ಬಹಳ ತೊಂದರೆಯಾಗುತ್ತಿದೆ.
ರವಿವಾರ ಸಂಜೆ ಕರುವೊಂದನ್ನು ಕೊಂದಿರುವ ಚಿರತೆ ಅದನ್ನು ಅರ್ಧಂಬರ್ಧ ತಿಂದು ಹೋಗಿದ್ದು ಇದೇ ವಾರದಲ್ಲಿ ಹಲವು ಕುರಿ,ಮೇಕೆ ಮತ್ತು ನಾಯಿಗಳನ್ನು ಹೊತ್ತು ಹೊಯ್ದಿದೆ.
ಈ ಕುರಿತು ಅರಣ್ಯ ಇಲಾಖೆಯವರಿಗೆ ಬೋನು ಇರಿಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಮಲಕನಮರಡಿ ಗ್ರಾಮದ ಕೃಷಿಕರು ಮನವಿ ಮಾಡಿದರೂ ಅರಣ್ಯ ಮತ್ತು ಕಂದಾಯ,ಪೊಲೀಸ್‌ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕೃಷಿಕ ಖಾದ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.