ಕನಕಗಿರಿ ಕನಕಾಚಲಪತಿ ಮಹಾರಥೋತ್ಸವಕ್ಕೆ ಸಾಕ್ಷಿಯಾಯ್ತು ಲಕ್ಷಾಂತರ ಭಕ್ತ ಸಮೂಹ!
*ಐತಿಹಾಸಿಕ ಹಿನ್ನೆಲೆಯ ಕನಕಗಿರಿ ಜಾತ್ರೆ
ಕಿಷ್ಕಿಂಧವಾಣಿ
ಕನಕಗಿರಿ: ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪ್ರಸಿದ್ಧ ಕನಕಗಿರಿಯ ಸುಕ್ಷೇತ್ರದ
ಕನಕಾಚಲಪತಿ ಲಕ್ಷ್ಮೀ ನರಸಿಂಹಸ್ವಾಮಿಯ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ
ಶ್ರದ್ಧೆ, ಭಕ್ತಿಯಿಂದ ಬುಧವಾರ ಸಂಜೆ ಜರುಗಿತು.
ರಥೋತ್ಸವದ ನಿಮಿತ್ತ ಬೆಳಗ್ಗೆ ಕನಕಾಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ರಥದ ಮುಂಭಾಗದಲ್ಲಿ ರಥಾಂಗ ಹೋಮ, ಹವನ, ಪೂರ್ಣಾಹುತಿ, ಅನ್ನಬಲಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ರಥಕ್ಕೆ ಹಸಿರು ತರಿಳು ತೋರಣ, ಗೊಂಬೆ, ಹೂ, ಬಾವುಟ, ಐದು ಪ್ರಕಾರದ ಚಟ್ಟುಗಳನ್ನು ಕಟ್ಟಿದ ರಥಕ್ಕೆ ಶೃಂಗರಿಸಲಾಗಿತ್ತು. ರಾಜಬೀದಿಯಲ್ಲಿ ರಥೋತ್ಸವ ಆರಂಭವಾಗುತ್ತಿದ್ದಂತೆ ಭಕ್ತ ಸಮೂಹ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು. ಭಕ್ತಗಣ ರಥದ ಗಾಲಿಗೆ ತೆಂಗಿನಕಾಯಿ ಹೋಡೆದು ಹರಕೆ ತಿರಿಸಿದರು.
ರಥ ಸಂಜೆ 4.20ಕ್ಕೆ ಆರಂಭಗೊಂಡಿತು. ಕೆಲ ನಿಮಿಷಗಳಲ್ಲಿ ಮೊದಲು ತನ್ನ ದಾರಿ ಬದಲಿಸಿದ ರಥ ಮುಂದೆ ಹೋಗದಿದ್ದಾಗ ಮತ್ತೆ ಹಿಂದಕ್ಕೆ ಎಳೆದು ನಂತರ ರಥವನ್ನು ಎಳೆಯಲಾಗಿತು. ಕೆಲ ನಿಮಿಷಗಳಲ್ಲಿ ಮತ್ತೆ ರಥ ಅಡ್ಡ ನಿಂತಾಗ ಮತ್ತೆ ಹಿಂದಕ್ಕೆ ಎಳೆದು ಮುಂದಕ್ಕೆ ಎಳೆಯಲಾಯಿತು. ನಂತರ ಎದಿರು ಹನುಮಪ್ಪನ ದೇವಸ್ಥಾನಕ್ಕೆ ತೆರಳಿ ನಂತರ 1.20 ನಿಮಿಷದಲ್ಲಿ ರಾಜಗಾಂಭಿರ್ಯದಂತೆ ತನ್ನ ಮೂಲಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಲಕ್ಷಾಂತರ ಭಕ್ತರು ಕೆಕೆ ಹಾಕಿ ಸಂಭ್ರಮಿಸಿದರು. ಕೆಲ ಭಕ್ತರು ತಂಗಿದ್ದ ಸ್ಥಳದಿಂದ ದೇವಸ್ಥಾನದ ವರಗೆ ದೀಡ್ ಸ್ಕಾರ ಹಾಕಿ ಬೇಡಿಕೊಂಡ ಹರಕೆಗಳನ್ನು ತೀರಿಸಿದರು.ಸಿಹಿ ತಿನಿಸು ಸಮರ್ಪಣೆ ಮಾಡಿದರು. ಭಾಜಾ ತಾಷಾ, ವಾಧ್ಯಮೇಳ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದವು. ಭಕ್ತರು ಮನೆಯ ಮಾಳಿಗೆ, ರಾಜಬೀದಿಯಲ್ಲಿ ನಿಂತು ರಥೋತ್ಸವವನ್ನು ವೀಕ್ಷಿಸಿದರು. ಜಿಲ್ಲೆ, ರಾಜ್ಯ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ಭಾಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಜಾತ್ರಾಮಹೋತ್ಸವದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರಡಿ, ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ತನುಶ್ರೀ, ಉಪಾಧ್ಯಕ್ಷ ಕಂಠಿರಂಗ ನಾಯಕ, ಶಾಸಕ ರಮೇಶ ಜಾರಕಿಹೋಳಿ ಪುತ್ರ ಅಮರನಾಥ ಜಾರಕಿಹೋಳಿ ಸೇರಿದಂತೆ ಹಲವು ಗಣ್ಯರು ಇದ್ದರು

