Breaking News
ರೈತರ ಒತ್ತಾಯದ ಫಲ: ಸಮರೋಪಾದಿಯಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಜೋಡಣಾ ಕಾಮಗಾರಿ.

*ಪ್ರಸ್ತುತ 21 ಕ್ರಸ್‌ಗೇಟ್‌ಗಳ ಜೋಡಣೆ ಪೂರ್ಣ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ.

ಗಂಗಾವತಿ: ಕೊಪ್ಪಳ ರಾಯಚೂರು ಬಳ್ಳಾರಿ ಮತ್ತು ತೆಲಂಗಾಣ ಆಂಧ್ರಪ್ರದೇಶದ ಜೀವನದಿಯಾಗಿರುವ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಗಳ ಮರು ಜೋಡಣಾ ಕಾಮಗಾರಿ ಬರದಿಂದ ಸಾಗಿದ್ದು ಸದ್ಯ 21 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಭರದಿಂದ ಸಾಗಿದೆ. ಒಟ್ಟು 32 ಕ್ರಸ್ಟ್‌ ಗೇಟುಗಳನ್ನು ಬದಲಾಯಿಸುವ ಕಾಮಗಾರಿ ಇದಾಗಿದ್ದು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಜೂನ್ ಒಳಗೆ ಅಂದರೆ ಮಳೆಗಾಲ ಆರಂಭಕ್ಕೂ ಮುಂಚೆ ಕ್ರಸ್ಟ್‌ ಗೇಟುಗಳನ್ನು ಜೋಡಣೆ ಮಾಡುವ ಷರತ್ತನ್ನು ಟೆಂಡರ್ ನಲ್ಲಿ ಹಾಕಲಾಗಿದೆ.

ಕಲಕೆದ 2024ರ ಅ.10ರಂದು ಡ್ಯಾಂನ 19ನೇ ಕ್ರಸ್ಟ್ ಗೇಟ್ ಚೈನ್ ಹರಿದುಬಿದ್ದ ಪರಿಣಾಮ ಕ್ರಸ್ಟ್‌ ಗೇಟು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿತ್ತು. ದುರಂತ ಜರುಗಿ ಒಂದು ವರ್ಷದ ನಂತರ (2025ರ ಡಿಸೆಂಬರ್‌ನಲ್ಲಿ) ಗೇಟ್‌ಗಳ ಬದಲಾವಣೆಗೆ ಚಾಲನೆ ನೀಡಲಾಗಿತ್ತು. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ ಈವರೆಗೆ 21 ಗೇಟ್ ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್ ಗಳ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ಮುಂದಿನ ತಿಂಗಳ ಕೊನೆಯ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಗೇಟ್‌ಗಳಿಗೆ ಪೇಂಟಿಂಗ್ ನಡೆಯಲಿದ್ದು, ಟೆಂಡರ್ ಷರತ್ತಿನಂತೆ ನಿಗದಿತ ಜಲಾಶಯಕ್ಕೆ ಹೊಸ ನೀರು ಬರುವ ಮುನ್ನವೇ ಕಾರ್ಯ ಮುಗಿಸಬೇಕು.

ಗುಜರಾತ್ ಮೂಲದ ಗುತ್ತಿಗೆದಾರ ಕಾಮಗಾರಿ ಗುತ್ತಿಗೆ ಪಡೆದಿದ್ದು‌ 60 ಕಾರ್ಮಿಕರು ತೊಡಗಿಸಿ ಕೊಂಡಿದ್ದಾರೆ. ಪ್ರತಿ ತಂಡದಲ್ಲಿ ಐದ-ರಿಂದ ಆರು ಜನರಂತೆ ಒಟ್ಟು ಎಂಟತ್ತು ತಂಡಗಳು ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. 5 2 01, 02, 03, 04, 05, 06, 11. 17. 18, 19, 20, 24, 25, 26, 27, 28, 29, 30, 31, 32 ಮತ್ತು 33ನೇ ಸಂಖ್ಯೆಯ ಕ್ರಸ್ಟ್ ಗೇಟ್ ಗಳ ಅಳವಡಿಕೆ ಪೂರ್ಣಗೊಂಡಿದೆ. ಇವುಗಳಲ್ಲಿ 04, 11, 17, 18, 19, 20, 24 ಹಾಗೂ 31 ಸಂಖ್ಯೆಯ ಗೇಟ್‌ಗಳ ಪ್ರಾಯೋಗಿಕ ಪರೀಕ್ಷೆ

ಯಶಸ್ವಿಯಾಗಿದೆ. ಪ್ರಸ್ತುತ 06, 07, 08, 09, 12, 21 ಮತ್ತು 22ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಶೇ.50 ರಷ್ಟು ಹೊಸ ಕ್ರಸ್ಟ್‌ ಗೇಟುಗಳ ತಯಾರಿಕೆ ಪೈಕಿ ಶೇ.

ಈಗಾಗಲೇ 30 ಹೊಸ ಗೇಟ್‌ಗಳ ತಯಾರಿಕೆ ಮುಗಿದಿದ್ದು ಇವುಗಳ ಪರೀಕ್ಷಾರ್ಥ ಕಾರ್ಯ ಮಾತ್ರ ಬಾಕಿ ಇದೆ. ಜಲಾಶಯದಲ್ಲಿದ್ದ 33 ಹಳೆಯ ಗೇಟ್‌ಗಳ ಪೈಕಿ 29 ಗೇಟ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

***

ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದರಿಂದ ಈಗಾಗಲೇ ರೈತರಿಗೆ ಒಂದು ಬೆಳೆ ನಷ್ಟವಾಗಿದೆ. ಏಪ್ರಿಲ್ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡರೆ ಮುಂದಿನ ಬೆಳೆಗೆ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ.

-ಟಿ.ವಿ.ಸತ್ಯನಾರಾಯಣ ಹಾಗೂ ಯಡ್ಲಪಲ್ಲಿ ಆನಂದರಾವ್ ರೈತ ಮುಖಡರು.

 

***

“ಗೇಟ್‌ಗಳ ತಯಾರಿಕೆ ಹಾಗೂ ಆಳವಡಿಕೆ ಕಾರ್ಯ ವೇಗವಾಗಿ ಸಾಗಿದೆ. ಈವರೆಗೆ 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.

ಇನ್ನುಳಿದ ಮೂರು ಹೊಸ ಗೇಟ್ ಗಳ ತಯಾರಿಕೆ ಹಾಗೂ ನಾಲ್ಕು ಹಳೆಯ ಗೇಟ್ ತೆರವು ಕಾರ್ಯ ಒಂದು ವಾರದೊಳಗೆ ಮುಕ್ತಾಯವಾಗಲಿದೆ.

-ಒ.ಆರ್.ಕೆ. ರೆಡ್ಡಿ ಕಾರ್ಯದರ್ಶಿ ತುಂಗಭದ್ರಾ ಬೋರ್ಡ್.

ಭರತ್‌ ಕಂದಕೂರಗೆ ಪ್ರಶಸ್ತಿ 

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: ಬೆಂಗಳೂರು ಫೋಟೋಗ್ರಾಫಿಕ್‌ ಕ್ಲಬ್‌ ಆಯೋಜಿಸಿದ್ದ ‘ಕರ್ನಾಟಕದ ಜಾತ್ರೆ ಮತ್ತು ಉತ್ಸವಗಳು’ ಕುರಿತ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಹಕ ಭರತ್ ಕಂದಕೂರ ಅವರಿಗೆ ಬಹುಮಾನ ಲಭಿಸಿದೆ.

ದೊಡ್ಡಬಳ್ಳಾಪುರದ ಸುಧೀರ್‌ ಭಜನೆ ಹಟ್ಟಿ ಅವರ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಚಿತ್ರ (ಪ್ರಥಮ ಸ್ಥಾನ), ದೊಡ್ಡಬಳ್ಳಾಪುರದ ಬಿ.ಎನ್‌.ಉಮಾಶಂಕರ್‌ ಅವರ ಗೋಕಾಕದ ಭಂಡಾರ ಜಾತ್ರೆ ಚಿತ್ರ (ದ್ವಿತೀಯ ಸ್ಥಾನ), ಕೊಪ್ಪಳದ ಛಾಯಾಗ್ರಾಹಕ ಭರತ್ ಕಂದಕೂರ ಅವರ ಅಂಜನಾದ್ರಿ ಬೆಟ್ಟದ ಹನುಮ ಮಾಲೆ ಚಿತ್ರ (ತೃತೀಯ ಸ್ಥಾನ) ಪಡೆದಿವೆ.

ಮುಂದಿನ ವರ್ಷದ ಛಾಯಾಚಿತ್ರ ಸ್ಪರ್ಧೆಗೆ ‘ಕನಾಟಕದ ಹಬ್ಬ ಮತ್ತು ಆಚರಣೆಗಳು’ ಎನ್ನುವ ವಿಷಯ ಆಯ್ಕೆ ಮಾಡಲಾಗಿದ್ದು, ಛಾಯಾಗ್ರಾಹಕರು ಭಾಗಿಯಾಗಬಹುದು ಎಂದು ಕ್ಲಬ್‌ ಅಧ್ಯಕ್ಷ ಟಿ.ಕೆಂಪಣ್ಣ ತಿಳಿಸಿದ್ದಾರೆ. ಪ್ರಶಸ್ತಿಯು ನಗದು ಹಾಗೂ ಪುರಸ್ಕಾರ ಒಳಗೊಂಡಿದ್ದು ಏಪ್ರಿಲ್‌ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಬೆಂಗಳೂರಿನ 5 ತಿಂಗಳ ಮಗುವಿನ ಕಾಯಿಲೆ ಚಿಕಿತ್ಸೆಗಾಗಿ ಮಿಡಿದ ಗಂಗಾವತಿ ಯುವತಿಯರು! ಸಾರ್ವಜನಿಕರಿಂದ ದೇಣಿಗೆ ಸಂಗ್ರಹ.

*ಮಾನವೀಯತೆಗಿಲ್ಲ ಜಾತಿ,ಗಡಿ ಸೀಮೆ ಯುವತಿಯರ ಕಾರ್ಯಕ್ಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಮಾನವೀಯತೆಗೆ ಜಾತಿ, ಗಡಿ, ಸೀಮೆ, ಲಿಂಗ ತಾರತಮ್ಯ ಯಾವುದು ಇಲ್ಲ. ಎಲ್ಲಿಯೂ ಒಂದು ಮಗುಕಾಯಿಲೆಯಿಂದ ಬಳಲುತ್ತಿರುವಾಗ ಗಂಗಾವತಿಯ ಕೆಲ ಯುವತಿಯರು ಮಗುವಿನ ಜೀವ ಉಳಿಸಲು ದಾನಿಗಳಿಂದ

ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಮೋಕ್ಷಜ್ಞ ಎನ್ನುವ ಐದು ತಿಂಗಳ ಮಗುವಿಗೆ ಎಸ್ ಎಂ ಎ ಟೈಪ್ -1 ಕಾಯಿಲೆ ಇದ್ದು ಚಿಕಿತ್ಸೆ ಕೋಟ್ಯಾಂತರ ರೂ.ಗಳು ಬೇಕಾಗಿದ್ದು ಮಗುವಿನ ಪಾಲಕರು ಬಡವರಾದ ಕಾರಣ ಧಾರವಾಡದ ಸಾಮರಸ್ಯ ಟ್ರಸ್ಟ್ ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಪಾಲಕರಿಗೆ ಕೊಡುವ ಉದ್ದೇಶ ಹೊಂದಿದ್ದು ಗಂಗಾವತಿಯಲ್ಲಿ ಟ್ರಸ್ಟ್ ಪರವಾಗಿ ಸಿದ್ದಿಕೇರಿಯ ಪದವೀಧರ ಯುವತಿರಾದ ಲಕ್ಷ್ಮಿ, ಚೈತ್ರಾ,ಅಖಿಲಾ ಮತ್ತು ಕುಮಾರ ಪ್ರಜ್ವಲ್ ಕಳೆದೆರಡು ದಿನಗಳಿಂದ ಗಂಗಾವತಿ ನಗರದ ಬೀದಿಗಳಲ್ಲಿ ಸುತ್ತಾಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಮಾನವೀಯ ಕಾರ್ಯದ ಕುರಿತು ತಂಡದಲ್ಲಿರುವ ಅತಿಥಿ ಶಿಕ್ಷಕಿ ಲಕ್ಷ್ಮಿ ಮಾತನಾಡಿ, ಮೋಕ್ಷಜ್ಞ ಚಿಕ್ಕ ಮಗುವಾಗಿದ್ದು ಪಾಲಕರು ಆರ್ಥಿಕವಾಗಿ ಚಿಕಿತ್ಸೆ ಕೊಡಿಸುವಷ್ಟು ಹಣ ಹೊಂದಿಸಲು ಆಗುತ್ತಿಲ್ಲ ಈಗಾಗಲೇ ಅನೇಕ ದಾನಿಗಳು ಮಗುವಿನ ಚಿಕಿತ್ಸೆ ಸ್ಪಂದಿಸಿ ದೇಣಿಗೆ ನೀಡಿದ್ದಾರೆ. ಗಂಗಾವತಿ ಜನರು ಸಹ ಇಡೀ ನಾಡಿನ ಮಠ ಮಾನ್ಯಗಳಿಗೆ ಅಕ್ಕಿಯನ್ನು ದೇಣಿಗೆ ನೀಡಿ ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದ್ದು ಮಗುವಿನ ಚಿಕಿತ್ಸೆಗೆ ಹಣ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯ ಬೇಕಿದ್ದು ಕಳೆದೆರಡು‌ ದಿನಗಳಿಂದ ಜನರ ಸ್ಪಂದನೆ ಅತ್ಯುತ್ತಮವಾಗಿದೆ. ನಾವು ಸಂಗ್ರಹಿಸುವ ಹಣವನ್ನು ಧಾರವಾಡದ ಸಾಮರಸ್ಯ ಟ್ರಸ್ಟ್ ಗೆ ಕಳಿಸಿ ಅಲ್ಲಿಂದ ಮಗುವಿನ‌ ಪಾಲಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದಿದ್ದಕ್ಕೆ ಸಿದ್ದರಾಮಯ್ಯನವರು ನಮ್ಮ ವಿರೋಧಿಸುತ್ತಿದ್ದಾರೆ:ಪೂಜ್ಯ ಪ್ರಣವಾನಂದ ಸ್ವಾಮೀಜಿ.

https://youtu.be/szFuAJuDMcc?si=bos6FtIEZlQdqxNo

 

 

*ಈಡಿಗ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ 750 ಕಿ.ಮೀ.ಬೆಂಗಳೂರು ಪಾದಯಾತ್ರೆ ಸ್ಪಂದಿಸದ ರಾಜ್ಯ ಸರಕಾರ ಸ್ವಾಮೀಜಿ ಆಕ್ರೋಶ.

*ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಚಿವ ತಂಗಡಗಿಯವರನ್ನು ಹೋಗದಂತೆ ಸಚಿವ ಮಧುಬಂಗಾರಪ್ಪ ತಡೆದು ಸಿಎಂ ಕಿವಿ ಚುಚ್ವುವ ಮಾತನಾಡಿದ್ದಾರೆ:ಆರೋಪ

*ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಇದ್ದಂತೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಆಗಲಿ ಎಂದು ಅತ್ಯಂತ ಹಿಂದುಳಿದ ಮಠಾಧೀಶರ ವೇದಿಕೆಯ ಪರವಾಗಿ ಬೆಂಬಲ ನೀಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮನ್ನು ಹಾಗೂ ಆರ್ಯ ಈಡಿಗ ಸಮಾಜವನ್ನು ವಿರೋಧಿಸಲು ಪ್ರಮುಖ ಕಾರಣವಾಗಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಈಡಿಗ ಸಮಾಜದವರು ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಆರ್ಯ ಈಡಿಗರ ಸಮಾಜದ ಜಗದ್ಗುರು ಪೂಜ್ಯ ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ಗಂಗಾವತಿಯ ಸರ್ವೇಶ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಆರ್ಯ ಈಡಿಗ ಸಮಾಜದವರು ರಾಜ್ಯದಲ್ಲಿ

ಶೇ. 95 ರಷ್ಟು ಅತ್ಯಂತ ಬಡತನದಲ್ಲಿದ್ದು ಈಡಿಗರ ಸಮಾಜವನ್ನು ಮೇಲೆತ್ತುವ ಸಲುವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಮತ್ತು ಕಲಬುರ್ಗಿಯಿಂದ ಬೆಂಗಳೂರಿಗೆ ಎರಡು ಬಾರಿ ಪಾದಯಾತ್ರೆ ಮಾಡಿ ಸರಕಾರದ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಕಲಬುರ್ಗಿಯಿಂದ 750 ಕಿಲೋಮೀಟರ್ ಬೆಂಗಳೂರು ಪಾದಯಾತ್ರೆ ನಂತರ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಹಿಂದುಳಿದ ವರ್ಗದ ಸಚಿವ ಶಿವರಾಜ ತಂಗಡಗಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಮ್ಮ ಮನವಲಿಸಲು ಮುಂದೆ ಬಂದರು. ಆದರೆ ತಮ್ಮ ಬೇಡಿಕೆಗಳು ಮುಖ್ಯಮಂತ್ರಿಯವರು ಈಡೇರಿಸುವ ಭರವಸೆಗಳಾಗಿದ್ದು ತಮ್ಮ ನೇತೃತ್ವದಲ್ಲಿ ಆರ್ಯ ಈಡಿಗ ಸಮಾಜದ ಕೆಲ ಮುಖಂಡರ ಸಭೆಯನ್ನು ಮುಖ್ಯಮಂತ್ರಿಗಳೊಂದಿಗೆ ನಡೆಸಲು ವ್ಯವಸ್ಥೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿ ಅವರ ಮೂಲಕ ಹೇಳಿ ಕಳಿಸಲಾಗಿತ್ತು, ಆರ್ಯ ಈಡಿಗ ಸಮಾಜದವರೇ ಆಗಿರುವ ಸಚಿವ ಮಧು ಬಂಗಾರಪ್ಪ ಸೇರಿದಂತೆ ಆರು ಜನ ಎಂಎಲ್ಎಗಳು ಸ್ವಾಮೀಜಿಗಳನ್ನು ಮುಖ್ಯಮಂತ್ರಿಗಳ ಹತ್ತಿರ ಕರೆದುಕೊಂಡು ಬರಬಾರದು ಎಂದು ತಾಕೀತು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಯ ಈಡಿಗ ಸಮಾಜದ ಸಚಿವ ಮಧು ಬಂಗಾರಪ್ಪ ಮತ್ತು ಆರು ಜನ ಶಾಸಕರು ನಮ್ಮ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಮ್ಮ ಸಮಾಜದ ಆರು ಜನ ಶಾಸಕರಿಗೆ ಸರಿಯಾದ ಬುದ್ದಿ ಕಲಿಸಲು ಯೋಜನೆ ರೂಪಿಸಲಾಗಿದ್ದು 224 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್ಯ ಈಡಿಗ ಜಾಗೃತಿ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಸರಿಯಾದ ಬುದ್ಧಿ ಕಲಿಸಲಾಗುತ್ತದೆ. ಏಪ್ರೀಲ್ ಮೊದಲ ವಾರದಲ್ಲಿ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ನಿವಾಸದ ಹತ್ತಿರ ಆರ್ಯ ಈಡಿಗರ ಶಕ್ತಿ ಸಮಾವೇಶ ನಡೆಸಿ ಲಕ್ಷಾಂತರ ಈಡಿಗ ಸಮಾಜದವರನ್ನು ಕರೆಸಿ, ಶಕ್ತಿಪ್ರದರ್ಶನ ಮಾಡಲಾಗುತ್ತದೆ.

ರೆಡ್ಡಿ ಶ್ರೀನಿವಾಸ ಕೊಂಡಿ ಮಂಚಣ್ಣ ಪೂಜ್ಯ ಆರೋಪ:

ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣ ಎನ್ನುವ ವ್ಯಕ್ತಿ ಇಡೀ ಸಮಾಜಕ್ಕೆ ಮಾರಕವಾಗುವ ಕೃತ್ಯಗಳನ್ನು ಮಾಡಿ ಬಸವಣ್ಣನವರಿಗೆ ಸಂಕಷ್ಟ ತಂದಿಟ್ಟಿದ್ದರು. ಅದರಂತೆ ಆರ್ಯ ಈಡಿಗ ಸಮಾಜದಲ್ಲಿ ರೆಡ್ಡಿ ಶ್ರೀನಿವಾಸ ಅವರು ಕೊಂಡಿ ಮಂಚಣ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಅವರು ತಮ್ಮ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ 2023ನೇ ಇಸ್ವಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ ಶಿವರಾಜ ತಂಗಡಗಿ ಅವರನ್ನು ಮಂತ್ರಿ ಮಾಡಲು ತಮ್ಮನ್ನು ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಸಚಿವರನ್ನಾಗಿ ಮಾಡಿಸುವಾಗ ತಮ್ಮ ನೆರವನ್ನು ಪಡೆದುಕೊಂಡ ಶಿವರಾಜ್ ತಂಗಡಗಿ ಹಾಗೂ ರೆಡ್ಡಿ ಶ್ರೀನಿವಾಸ್ ಇದೀಗ ತಮ್ಮ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಮತ್ತು ಗುತ್ತಿಗೆ ಕಾಮಗಾರಿ ಪಡೆಯಲು ಶಿವರಾಜ್ ತಂಗಡಗಿಯವರನ್ನು ಓಲೈಸಲು ರೆಡ್ಡಿ ಶ್ರೀನಿವಾಸ್ ಮುಂದಾಗಿದ್ದು ಇಂತಹ ಸಮಾಜ ದ್ರೋಹಿಗಳಿಗೆ ಮುಂಬರುವ ದಿನಗಳಲ್ಲಿ ಸರಿಯಾಗಿ ಬುದ್ಧಿ ಕಲಿಸಲಾಗುತ್ತದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಕಾಶಿವಿಶ್ವನಾಥ ಬಿಚ್ಚಾಲಿ ಮುಖಂಡರಾದ

ಯರಡೋಣಿ ನಾಗಪ್ಪ, ಪರಮೇಶ್ವರ,ವಿರೇಶ,ಶಾಮಣ್ಣ, ಅಂಬುಜಮ್ಮ,ಸುಭಾಷ್, ಆನಂದಬಾಬು,ಶ್ರವಣ ಸೇರಿ ಹಲವರಿದ್ದರು.

 

 

***

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ, ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನ ಮಟ್ಟು ಸೇರಿದಂತೆ ಕೆಲವು ಪ್ರಮುಖ ಆರ್ಯ ಈಡಿಗ ಸಮಾಜದ ಹಿರಿಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರುವ ಶಕ್ತಿ ಇದ್ದರೂ ಅವರು ವೇದಿಕೆ ಮುಂಭಾಗದಲ್ಲಿ ಒಂದು ತರಹ ವೇದಿಕೆ ಹಿಂಭಾಗದಲ್ಲಿ ಒಂದು ತರ ಇರುತ್ತಾರೆ. ಆದ್ದರಿಂದ ಅವರ ಹತ್ತಿರ ಸಮಾಜದ ಬೇಡಿಕೆಗಳ ಕುರಿತು ತಾವು ಚರ್ಚೆ ಮಾಡಿಲ್ಲ. ಬಿ.ಕೆ.ಹರಿಪ್ರಸಾದ ಅವರಿಗೆ ಸಿದ್ದರಾಮಯ್ಯನವರು ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ. ದಿನೇಶ ಅಮ್ಮಿನಮಟ್ಟು ಅವರ ಹೆಸರು ವಿಧಾನಪರಿಷತ್ ಸ್ಥಾನಕ್ಕೆ ಶಿಫಾರಸ್ಸು ಆಗಿದ್ದರೂ ಯಾಕೆ ಆ ಸ್ಥಾನ ಬೇರೆಯವರಿಗೆ ಯಾಕೆ ಹೋಯಿತು.

ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಕೋಟ ಶ್ರೀನಿವಾಸ ಪೂಜಾರಿ ಸುನಿಲ್ ಕುಮಾರ್ ಸೇರಿದಂತೆ ಪ್ರಮುಖರ ವಿರುದ್ಧ ತಾವು ಹೋರಾಟ ಮಾಡಿದ್ದು ಆರ್ಯ ಈಡಿಗ ಸಮಾಜಕ್ಕಾಗಿ ನಿರಂತರ ಹೋರಾಟ ಮಾಡಲಾಗುತ್ತದೆ.

-ಪೂಜ್ಯ ಪ್ರಣವಾನಂದ ಸ್ವಾಮೀಜಿ.

ಕೋತಿಗಳ ಹಾವಳಿ ಮೂರು ಜನರಿಗೆ ಗಾಯ!

*ಸಾರ್ವಜನಿಕರ ಆಕ್ರೋಶ,ಅರಣ್ಯ ಇಲಾಖೆಯಿಂದ ಕೋತಿಗಳ ಸೆರೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನೆ ಹತ್ತಿರ ಇರುವ ಕಾಲೋನಿ ಹಾಗೂ ಬನ್ನಿಗಿಡದ ಕ್ಯಾಂಪ್ ಸೇರಿ ಸುತ್ತಲಿನ ವಾರ್ಡುಗಳಲ್ಲಿ

ಕಳೆದ ಒಂದು ವಾರದಿಂದ ಕೋತಿಗಳ ವಿಪರೀತ ಹಾವಳಿ ಹೆಚ್ಚಾಗಿದ್ದು ಪಾದಚಾರಿಗಳು,ಮನೆ ಮುಂದೆ ಕುಳಿತ ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡಿ ಮೂರು ಜನರು ಗಾಯಗೊಂಡಿದ್ದಾರೆ.

ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಅರಣ್ಯ ಇಲಾಖೆಯವರು ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದವರೆಗೆ ಕೋತಿಗಳನ್ನು ಸೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋತಿಗಳನ್ನು ಸೆರೆ ಹಿಡಿದಿದ್ದರಿಂದ ಅಲ್ಲಿನ ನಿವಾಸಿಗರು ನಿಟ್ಟು ಉಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಬಸವರಾಜ ಪೂಜಾರಿ, ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್, ಗುಂಡಪ್ಪ, ಎಸ್ಎಂ ಡಿ ಸುಲೇಮಾನ್ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಶಿವಾನಂದ, ಮಂಜುನಾಥ್, ಶಿವಕುಮಾರ್, ಗ್ಯಾನನಗೌಡ ಗಸ್ತು ಅರಣ್ಯ ಪಾಲಕರು, ಮೌಲಾಸಾಬ್ ಸೇರಿದಂತೆ ಎಲ್ಲರೂ ಸೇರಿಕೊಂಡು ಕೋತಿ ಹಿಡಿದಿರುತ್ತಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿಂಗನಾಳ ಪಂಪಾಪತಿ,ಕೆ.ಕಾಳಪ್ಪ,

ಮಹಾಬಲೇಶ ಸಿಂಗನಾಳ, ರಾಜಶೇಖರ ಗುಂಡೂರು, ಗೋಪಾಲ ಜಕ್ಕ, ಸಾಗರ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವೈಭವದಿಂದ ಜರುಗಿದ ಬಾಚಿಗೊಂಡನಹಳ್ಳಿ-2 ಶ್ರೀ ಆಂಜನೇಯ ಸ್ವಾಮಿ ನೂತನ ಮಹಾರಥೋತ್ಸವ.

* ಹೋಮ,ಹವನ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನೂತನ ರಥೋತ್ಸವಕ್ಕೆ ಚಾಲನೆ.
* ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಪೂಜ್ಯರಿಂದ ಸನ್ಮಾನ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ವೈಭವ,ಶ್ರದ್ಧೆ, ಭಕ್ತಿಯಿಂದ ಜರುಗಿದ ತಾಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯದೈವ ಶ್ರೀಆಂಜನೇಯಸ್ವಾಮಿ ದೇವರ ನೂತನ ಮಹಾರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ತುಂಗಭದ್ರಾ ಡ್ಯಾಂ ನಿರ್ಮಾಣದ ನಂತರ ಸ್ಥಳಾಂತರಗೊಂಡಿದ್ದ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ತೇರು ಶೀಥಿಲಾವಸ್ಥೆಯಾಗಿದ್ದರಿಂದ ಗ್ರಾಮಸ್ಥರು ದೇಣಿಗೆ ಸಲ್ಲಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಹಗರಿಬೊಮ್ಮನಹಳ್ಳಿಯ ಸಿದ್ದಪ್ಪ ಚಿತ್ರಗಾರ ಶಿಲ್ಪಿ ಅವರು ವೈಶಿಷ್ಟ್ಯಪೂರ್ಣವಾಗಿ ಸಂಪ್ರದಾಯದಂತೆ
ಆರ್ಷಕವಾಗಿ ತೇರು ನಿರ್ಮಿಸಿದ್ದಾರೆ.
ಶ್ರೀ ರಾಮನವಮಿ ಶುಕ್ರವಾರದಂದು ಬೆಳಗಿನ ಜಾವ ಹೋಮ ಹವನ ರುದ್ರಾಭಿಷೇಕವನ್ನು ಕೈಗೊಂಡು ನಂತರ ದಂಪತಿಗಳ ಸಮೇತ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ಸಂಜೆ ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು.
ರಥೋತ್ಸವದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯರಿಂದ ರಥ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಿದ್ದ ದಾನಿಗಳನ್ನು ಸತ್ಕರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಹಂಪಸಾಗರದ ಮಹದೇವ ತಾತನವರು, ಕಡ್ಲ ಬಾಳಿನ ಗವಿಮಠದ ಶಾಂತವೀರ ಸ್ವಾಮಿಗಳು, ತೋಂಟದಾರ್ಯ ಮಠದ ಕಿರಿಯ ಸ್ವಾಮೀಜಿ, ಗಾಯಿತ್ರಿ ದೇವಸ್ಥಾನದ ಅರ್ಚಕ ವೆಂಕಟ ರಾಮರಾಜು,
ಗ್ರಾಮದ ಮುಖಂಡರಾದ ಹೊಳಗುಂದಿ ಕೊಟ್ರಪ್ಪ, ನೇತಾಜಿಗೌಡ,
ಶೇಖರಪ್ಪ ,ಶ್ರೀಕಾಂತ ನೇತಾಜಿ ಗೌಡ ವೀರಭದ್ರಪ್ಪ ಸಣ್ಣಬಸಪ್ಪ ಗೊಂಡಬಾಳ,ನೆಂಬದಾರ ಪಿತಾಂಬ್ರಪ್ಪ,ಬಿ.ಸುರೇಶ,ಗೊಂಡಬಾಳ ಮಂಜುನಾಥ,ಗೊಂಡಬಾಳ ನಾಗರಾಜ, ಗೊಂಡಬಾಳ ರುದ್ರಪ್ಪ,
ಜಿ.ಚೆನ್ನಪ್ಪ, ಹೇಮಂತಕುಮಾರ,ಆನಂದ ಹರಿಜನ,ಪರಶುರಾಮ, ಫಕೀರಪ್ಪದುರುಗಪ್ಪ,ದವಲಸಾನ,ರಾಜಸಾಬ,ಚಿತ್ವಾಡಗಿ ವಿರೇಶ,ಚಿತ್ವಾಡಗಿ ದುರುಗಪ್ಪ ಸರ್ವ ಸಮಾಜದವರು ಪಾಲ್ಗೊಂಡಿದ್ದರು.

ವಿದೇಶಿ ಮಹಿಳೆ ಅತ್ಯಾಚಾರ ಕೇಸ್ ಸೇರಿ ಅತೀ ಸೂಕ್ಷ್ಮ ಕೇಸ್ ಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ    ಪಿಐ ಪ್ರಕಾಶ ಎಲ್.ಮಾಳೆಯವರಿಗೆ ಮುಖ್ಯಮಂತ್ರಿ ಪದಕ ಘೋಷಣೆ. 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ರಾಜ್ಯ ಪೊಲೀಸ್‌ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಗಂಗಾವತಿ ನಗರದ ಪೊಲೀಸ್ ಠಾಣೆ ಪಿಐ ಪ್ರಕಾಶ ಎಲ್.ಮಾಳೆ ಅವರು ಭಾಜನರಾಗಿದ್ದಾರೆ. ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತೋರಿದ ನಿಷ್ಠೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚಿಗೆ ಜರುಗಿದ ಸಾಣಾಪುರ ಕೆರೆಯ ಹತ್ತಿರ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಕೋಮು ಸಂಘರ್ಷ ಇತರೆ ಸೂಕ್ಷ್ಮ ಕೇಸ್ ಗಳಲ್ಲಿ ಪ್ರಕಾಶ್ ಮಾಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಇತರ ಅಧಿಕಾರಿಗಳ ಜೊತೆಗೆ ಕಾರ್ಯ ಮಾಡಿದ್ದಾರೆ.

ಈಗಾಗಲೇ ವಲಯ ಪೊಲೀಸ್ ಅಧಿಕಾರಿಗಳು ಪ್ರಕಾಶ್ ಮಾಳೆ ಸೇರಿದಂತೆ ಈ ಪ್ರಕರಣಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಸನ್ಮಾನಿಸಿದ್ದಾರೆ.

ಮಾಳೆ ಅವರು ಕೊಪ್ಪಳ,ರಾಯಚೂರು,ಬಳ್ಳಾರಿ ಜಿಲ್ಲೆಯಲ್ಲಿ ಪಿಎಸೈ, ಸಿಪಿಐಯಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಳೆ ಅವರ ಕರ್ತವ್ಯವನ್ನು ಪೊಲೀಸ್ ಇಲಾಖೆ ಗುರುತಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ

ಘೋಷಿಸಿಸಲಾಗಿದೆ.

ಪ್ರಶಸ್ತಿ ಭಾಜನರಾದ ಪ್ರಕಾಶ ಮಾಳೆ ಯವರನ್ನು

ಗಂಗಾವತಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಭಿನಂದಸಿ ಸನ್ಮಾನಿಸಿ ಗೌರವಿಸಿದರು.

ಏ 02ಕ್ಕೆ ಪ್ರದಾನ:

ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏ. 02 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

ಈ ಸಂದರ್ಭದಲ್ಲಿ ಪಿಎಸ್ಐ ಟಿ.ಜಿ.ನಾಗರಾಜ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರಿದ್ದರು.

ಅಕ್ರಮ‌ ಪಿಡಿಎಸ್ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಸಂಘಟನೆಗಳ ಮುಖಂಡರು!

*ಮಾನ್ವಿ ಮೂಲದ ಗಣ್ಯ ವ್ಯಕ್ತಿಯೊರ್ವನ ಮಾಲೀಕತ್ವದ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ ಆರೋಪ.

*ಕೂಕನಪಳ್ಳಿಯಿಂದ ಮಾನ್ವಿ ರೈಸ್ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ.

*ಅಕ್ರಮ ಕುರಿತು ಪ್ರಭಾವುಗಳ ಕೈವಾಡ,

ಪೊಲೀಸ್ ಕೇಸ್ ದಾಖಲಿಸುವಂತೆ ಸಂಘಟನೆಯ ಮುಖಂಡರ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಕನ್ನಡಪರ,ದಲಿತಪರ ಸಂಘಟನೆಗಳ ಮುಖಂಡರು ಹಿಡಿದು ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಶನಿವಾರ ಬೆಳಗ್ಗೆ ಜರುಗಿದೆ.

ಖಚಿತ ಮಾಹಿತಿಯ ಮೇರೆಗೆ ಸಂಘಟನೆಗಳ ಮುಖಂಡರು ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಕೂಕನಪಳ್ಳಿ ಯಿಂದ ಮಾನ್ವಿ ಕಡೆಗೆ ಹೊರಟಿದ್ದ ನಾಲ್ಕು ಲಾರಿಗಳ ಪೈಕಿ ಒಂದನ್ನು ಹಿಡಿದು ದಾಖಲಾತಿ ಪರಿಶೀಲಿಸಿ ನಂತರ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯ

ಚೀಲಗಳು ಇರುವ ಕುರಿತು ಮಾಹಿತಿ ನೀಡಿದ್ದಾರೆ.

ಕೂಡಲೇ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ ಹಾಗೂ ಪೊಲೀಸ್ ಇಲಾಖೆಯವರು ಲಾರಿಯನ್ನು ನಗರ ಪೊಲೀಸ್ ಠಾಣೆಗೆ ತಂದು ಅಕ್ಕಿ ಸಾಗಿಸುತ್ತಿದ್ದ ಕುರಿತು ಅಧಿಕೃತ ಬಿಲ್ ಹಾಗೂ ಚಾಲಕನಿಂದ ಮಾಹಿತಿಯನ್ನು ಪಡೆದು 35 ಟನ್ ಅಕ್ಕಿಯಲ್ಲಿ ಪಿಡಿಎಸ್ ಹಾಗೂ ಇತರೆ ಅಕ್ಕಿ ಇರುವ ಕುರಿತು ತಪಾಸಣೆ ನಡೆಸುತ್ತಿದ್ದಾರೆ.

ಒಂದು ಮಾಹಿತಿ ಪ್ರಕಾರ ಮಾನ್ವಿಯ ಕಾಂಗ್ರೆಸ್ ಮುಖಂಡನೊರ್ವನ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಪಿಡಿಎಸ್ ಅಕ್ಕಿಯನ್ನು ಪಾಲೀಸ್ ಮಾಡಿ ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು

ಇದಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ಅಕ್ಕಿ ತುಂಬಿಸಿಕೊಂಡು ಮಾನ್ವಿಗೆ ಸಾಗಿಸುವ ಕುರಿತು ಮಾಹಿತಿ ಇದೆ.

ಗೊಂದಲ: ಸಂಘಟನೆ ಅವರು ಹೇಳುವ ಪ್ರಕಾರ ಕುಕನಪಳ್ಳಿ

ಯಿಂದ ಮಾನ್ವಿಗೆ 5 ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತ, ನಾವು ಬರುವ ವೇಳೆಗೆ ನಾಲ್ಕು ಲಾರಿಗಳು ಪಾಸ್ ಆಗಿದ್ದು ಒಂದು ಲಾರಿಯನ್ನು ಮಾತ್ರ ನಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.ಲಾರಿಗಳು ಸಂಚಾರ ಮಾಡಿದ ವಿಡಿಯೋ ಹೇಮಗುಡ್ಡ ಮತ್ತು ಮರಳಿ ಟೋಲ್ ನಲ್ಲಿ ಚಿತ್ರೀಕರಣವಾಗಿದ್ದು ಮಾನ್ವಿ ಮೂಲದ ಕೆಲವು ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಪಿಡಿಎಫ್ ಅಕ್ಕಿಯನ್ನು ಮಾರಾಟ ಮಾಡುವ ಜಾಲಹೊಂದಿದ್ದು,ಆ ಮೂಲಕ ರಾಯಚೂರು,ಕೊಪ್ಪಳ ಜಿಲ್ಲೆಯಿಂದ ಪಿ ಡಿ ಎಸ್ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಪಾಲಿಶ್ ಮಾಡಿ,ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಕೇಸ್ ಆಗದಂತೆ ಮಾನ್ವಿದ ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ರಾಜಕೀಯ ವ್ಯಕ್ತಿಯ ಮೂಲಕ ಪೊಲೀಸ್ ಮೇಲೆ ಒತ್ತಡ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಕೇಸ್ ದಾಖಲು:

ಕೆಲವು ಸಂಘಟನೆಯವರು ವಡ್ಡರಹಟ್ಟಿ ಹತ್ತಿರ ಲಾರಿಯೊಂದನ್ನ ತಡೆದು ಅದರಲ್ಲಿ ಪಿ ಡಿ ಎಸ್ ಅಕ್ಕಿಯ ಚೀಲಗಳು ಇವೆ ಎಂದು ಪೊಲೀಸ್ ಠಾಣೆಗೆ ಆಹಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಸಿದ್ದು ,ಈ ಕುರಿತು ಪರಿಶೀಲನೆ ಮಾಡಿ ಅಕ್ರಮ ಪಿ ಡಿ ಎಸ್ ಹಾಕಿ ಸಾಗಾಟದ ಕುರಿತು ದೂರು ದಾಖಲಿಸಿಕೊಳ್ಳಲಾಗುತ್ತದೆ ಎಂದು ಡಿವೈಎಸ್ ಪಿ

ಜೆ.ಎಸ್. ನ್ಯಾಮಗೌಡ ತಿಳಿಸಿದ್ದಾರೆ.

 

 

ಬಾಗಲಕೋಟೆಯ ಎಲ್ಲಾ ಸಮುದಾಯಗಳ ಬೆಂಬಲ ಚರಂತಿಮಠ ಅವರಿಗಿದೆ :ಬಿ ಶ್ರೀರಾಮುಲು.

*ನೇಕಾರ ಮತ್ತು ಗುಜರಾತ್ ಸಮುದಾಯದವರ ಜತೆ ಸಭೆ.

ಕಿಷ್ಕಿಂಧವಾಣಿ ಸುದ್ದಿ

ಬಾಗಲಕೋಟೆ,: ಬಾಗಲಕೋಟೆಯ ಎಲ್ಲಾ ಸಮುದಾಯಗಳ ಬೆಂಬಲ ಆಶೀರ್ವಾದ ಚರಂತಿಮಠ ಅವರಿಗೆ ಇದೆ. ಆದ್ದರಿಂದ ಉಪಚುನಾವಣೆಯಲ್ಲಿ ಅವರು ಅತ್ಯಧಿಕ ಮತಗಳಿಂದ ಗೆಲುವು ಪಡೆಯಲಿದ್ದಾರೆ. ಕಾಂಗ್ರೆಸ್ ನವರ ಕಪಟ ನಾಟಕ ಈ ಉಪಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಬಿ. ಶ್ರೀರಾಮುಲು ಹೇಳಿದರು.

ಅವರು ಬಾಗಲಕೋಟೆ ನಗರದಲ್ಲಿ

ನೇಕಾರ ಸಮುದಾಯ ಹಾಗೂ ಗುಜರಾತಿ ಸಮುದಾಯದ ಪ್ರಮುಖರ ಜೊತೆ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕೊಡ ತುಂಬಿದೆ ಗ್ಯಾರಂಟಿ ನೆಪದಲ್ಲಿ ಸುಳ್ಳು ಯೋಜನೆಯನ್ನು ಪ್ರಕಟಿಸಿ ಜನರನ್ನು ಮರಳು ಮಾಡಿ ಗೆದ್ದು ಸರ್ಕಾರ ರಚನೆ ಮಾಡಿದ ಕಾಂಗ್ರೆಸ್ ಪಕ್ಷ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಿತ್ಯವೂ ಕಾಳಗವಾಡುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನಸಾಮಾನ್ಯರ ಕಷ್ಟವನ್ನು ಯಾರೂ ಕೇಳುತ್ತಿಲ್ಲ,

ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ರಾಜ್ಯದ ಜನರು ಬುದ್ಧಿ ಹೇಳುವ ಚುನಾವಣೆಗಳಾಗಿದ್ದು ಎರಡು ಕಡೆ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಪಡೆಯಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್, ಅಭ್ಯರ್ಥಿ ವೀರಣ್ಣ ಚರಂತಿ ಮಠ, ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡೆ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು….

UNESCO restrictions only for Anegundi–Kishkindha region! Rules ignored in Hampi and Kamalapur!

Public representatives favor tourism in Hampi–Kamalapur region
Are the people and representatives of Anegundi–Kishkindha helpless?
Kishkindha Vani Special Report
By K. Ningajja

Gangavathi: Authorities are strictly enforcing the rules of the Hampi Development Authority only in the 15 villages of the Anegundi–Kishkindha region, which falls under the UNESCO area, leaving the local people helpless under the burden of UNESCO restrictions.
However, in Kamalapur and Hampi areas, which also come under the UNESCO jurisdiction and Hampi Development Authority, rules are being ignored. It is alleged that due to the support of MLAs, MPs, and district in-charge ministers, people there are freely conducting commercial activities and developing tourism.
In the first week of April, UNESCO representatives in charge of India are expected to visit the Anegundi–Kishkindha region to review development works, tourism activities, and monuments as per UNESCO guidelines. Ahead of their visit, the Hampi Development Authority and Koppal district administration have cut off commercial electricity connections in the Anegundi core zone 15 days in advance, plunging the area into darkness. This has also caused drinking water shortages and created inconvenience for thousands of tourists who visit daily.
In Thadebagilu village near Srirangadevarayalu Circle, locals had set up small sheds on private lands to sell tea, gobi manchurian, juice, and fruits, earning their livelihood through tourism using commercial electricity connections from JESCOM. However, due to the upcoming UNESCO visit, Hampi Development Authority officials issued notices to JESCOM officials in Gangavathi and got all electricity connections disconnected.
Commercial power connections exist in Hampi too:
In about 13 villages including Kamalapur under the Hampi Development Authority, commercial activities are openly carried out, and shops are running with commercial electricity connections. But the authorities seem to ignore these activities in Hampi. Instead, in the 15 villages of Anegundi, strict restrictions are imposed, especially in core zones like Anegundi and Virupapur Gaddi, where no commercial activity is allowed. Authorities from departments like electricity (JESCOM), forest, and revenue frequently conduct operations, removing small shops and preventing locals from earning a livelihood through tourism.
Helpless situation:
About 35 years ago, people of these 15 villages believed that inclusion under UNESCO would bring prosperity. But today, they feel helpless and are waiting for someone to support them. Locals allege that under pressure, Hampi Development Authority officials are behaving as if UNESCO rules apply only to Anegundi, while commercial activities in Hampi continue under the patronage of public representatives.
It is also said that the authorities have convinced elected representatives of Koppal district using outdated and unscientific rules of UNESCO and the Hampi Development Authority, leading to lack of support for tourism development in Anegundi. Locals have expressed disappointment over this.
Even though hotels and other commercial activities are running in Hampi–Kamalapur, no government department or authority is taking action on their own to shut them down. But in Anegundi, authorities and various departments are taking actions that negatively impact tourism. Locals have questioned the government, asking what kind of justice this is.