Breaking News
ಬಿಸಿಎಂ‌ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಪುಂಡರ ಹಾಳಿ ತಡೆಯುವಂತೆ ತಾ.ಪಂ.ಎದುರು ವಿದ್ಯಾರ್ಥಿನಿಯರ ಪ್ರತಿಭಟನೆ.

* ಕಳಪೆ ಆಹಾರ ಪೂರೈಕೆ ಆಸ್ವಚ್ಛತೆ ಸೇರಿದತೆ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಪ್ರಶಾಂತ ನಗರದಲ್ಲಿರುವ ಬಿಸಿಎಂ ಇಲಾಖೆಯ ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ನಲ್ಲಿ ಪ್ರತಿನಿತ್ಯವೂ ಪುಂಡರ ಹಾವಳಿ ಹೆಚ್ಚಾಗಿದ್ದು ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದು ವಿದ್ಯಾಭ್ಯಾಸ ಮಾಡಬೇಕಾಗಿದೆ. ಆದ್ದರಿಂದ ಸೂಕ್ತ ಭದ್ರತೆ ಒದಗಿಸಬೇಕು ಮತ್ತು ಹಾಸ್ಟೆಲ್ ನಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುತ್ತಿದ್ದು ತರಕಾರಿ ಸೇರಿದಂತೆ ಪೌಷ್ಟಿಕಾಂಶ ಇರುವ ಆಹಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಬಿ ಸಿ ಎಂ ಇಲಾಖೆಯ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಎಸ್ ಎಫ್ ಐ ನೇತೃತ್ವದಲ್ಲಿ ತಾಲೂಕ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಮುಖಂಡ ಬಾಲಾಜಿ ಮಾತನಾಡಿ, ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಅತ್ಯಂತ ಚಿಕ್ಕ ಬಿಲ್ಡಿಂಗ್ ನಲ್ಲಿ ಇದ್ದು ವಿದ್ಯಾರ್ಥಿನಿಯರು ಗಾಳಿ, ಬೆಳಕು ಇಲ್ಲದಂತ ಸ್ಥಿತಿಯಲ್ಲಿ ಅ ನೈರ್ಮಲ್ಯಯುತ ಜೀವನ‌‌ ನಡೆಸಬೇಕಿದೆ. ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ರಾತ್ರಿ ಊಟ ಕಳಪೆ ಮಟ್ಟದ್ದಾಗಿರುತ್ತದೆ. ಸೂಕ್ತ ತರಕಾರಿ ಇರುವುದಿಲ್ಲ, ಅಶುದ್ದ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತೆ, ಹಣ್ಣುಗಳನ್ನು ನೀಡುತ್ತಿಲ್ಲ, ದಿನಪತ್ರಿಕೆ ತರಿಸುತ್ತಿಲ್ಲ, ಹೀಗೆ ಹಲವು ಸಮಸ್ಯೆಗಳ ಮಧ್ಯೆ ನಿತ್ಯವೂ ಹಾಸ್ಟೆಲ್ ಗೆ ಪುಂಡರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಅಥವಾ ಅರಿಶಿನವನ್ನು ಹಚ್ಚಿಕೊಂಡು ವಿದ್ಯಾರ್ಥಿನಿಯರ ರೂಮುಗಳನ್ನು ಮತ್ತು ಮಳಿಗೆಯ ಮೇಲೆ ನಿತ್ಯವೂ ರಾತ್ರಿ ಸಂದರ್ಭದಲ್ಲಿ ಕೆಲ ಯುವಕರು ಆಗಮಿಸಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಈ ಕುರಿತು ಮಹಿಳಾ ವಾರ್ಡನ್ ಹಾಗೂ ಸೆಕ್ಯೂರಿಟಿಯವರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ಪ್ರಶಾಂತ್ ನಗರದಲ್ಲಿರುವ ಹಾಸ್ಟೆಲ್ ನ್ನು ಬಸ್ ನಿಲ್ದಾಣದ ಹತ್ತಿರಕ್ಕೆ ಸ್ಥಳಾಂತರ ಮಾಡಬೇಕು. ಪೌಷ್ಟಿಕವುಳ್ಳ ಆಹಾರವನ್ನು ವಿತರಣೆ ಮಾಡಬೇಕು.ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು. ಹಣ್ಣು ಸೇರಿದಂತೆ ಸರ್ಕಾರದ ನಿಯಮದಂತೆ ಆಹಾರ ಪದಾರ್ಥಗಳನ್ನು ನಿರ್ಧರಿಸಬೇಕು. ರವಿವಾರ ಬೆಳಗ್ಗೆ ಇಡ್ಲಿ ಚಟ್ನಿಯನ್ನು ಉಪಾರಕ್ಕಾಗಿ ವಿತರಿಸಿದ್ದು ಇವು ವಾಸನೆಯಿಂದ ಕೂಡಿವೆ, ನಿತ್ಯವೂ ಇಂತಹ ಆಹಾರವನ್ನು ಸೇವನೆ ಮಾಡಲು ಆಗುತ್ತಿಲ್ಲ. ಆದ್ದರಿಂದ ಕೂಡಲೇ ವಾರ್ಡನ್ ಅವರನ್ನು ವರ್ಗಾವಣೆ ಮಾಡಿ ಸರಿಯಾಗಿ ಆಹಾರ ಪದಾರ್ಥಗಳನ್ನು ವಿತರಿಸುವ ವಾರ್ಡನ್ ಅವರನ್ನು ನೇಮಿಸುವಂತೆ ವಿದ್ಯಾರ್ಥಿಗಳು ಇಲಾಖೆ ಅಧಿಕಾರಿಗಳು ವಿದ್ಯಾರ್ಥಿನಿಯರ ಬೇಡಿಕೆಯನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರು ಮತ್ತು ಎಸ್ಎಫ್ಐ ನ ವಿವಿಧ ಪದಾಧಿಕಾರಿಗಳು ಉಪಸ್ಥಿತಮಾತನಾಡಿ,