Breaking News
ಆನೆಗೊಂದಿಯಲ್ಲಿ ಪಾರಂಪರೀಕ ಹೋಂಸ್ಟೇ ನಿರ್ಮಾಣಕ್ಕೆ ಪ್ರಾಧಿಕಾರದ ಪರವಾನಿಗೆ ಬೇಕಿಲ್ಲ:ಶಾಸಕ ಜನಾರ್ದನರೆಡ್ಡಿ

 *ಶಾಸಕರ ನೇತೃತ್ವದಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಹಾಗೂ ಆನೆಗೊಂದಿ ಗ್ರಾಮಸ್ಥರ ಸಭೆ

*ಶ್ರೀಕೃಷ್ಣದೇವರಾಯ ಪುತ್ಥಳಿ ಹತ್ತಿರ 12 ಎಕರೆ ಭೂಮಿ ಸ್ವಾಧೀನಕ್ಕೆ ಸೂಚನೆ

*ಬ್ಯಾಟರಿ ಚಾಲಿತ ವಾಹನಗಳು ಹಾಗೂ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ನಿರ್ಮಾಣ

*ಮನೆಯ ಮಾಲೀಕರೇ ಹೋಂಸ್ಟೇ ನಡೆಸುವ ಷರತ್ತು

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಐತಿಹಾಸಿಕ ಆನೆಗೊಂದಿಯಲ್ಲಿರುವ ಮನೆಗಳಲ್ಲಿ ಪಾರಂಪರೀಕವಾಗಿ ಮನೆಗಳನ್ನು ಪ್ರಾಧಿಕಾರದ ಡಿಸೈನ್ ನಂತೆ ಮನೆಗಳನ್ನು ನಿರ್ಮಿಸಿಕೊಂಡು ಮನೆ ಮಾಲೀಕರು ಒಂದರಿಂದ ಆರು ರೂಮ್ ಗಳ ವರೆಗೆ ಹೋಂಸ್ಟೇ  ಪ್ರವಾಸಿಗರಿಗೆ ಬಾಡಿಗೆ ನೀಡಲು ಅವಕಾಶವಿದ್ದು, ಇದಕ್ಕೆ ಪ್ರಾಧಿಕಾರದ ಎನ್‌ಓಸಿ ಅಗತ್ಯವಿಲ್ಲ.ಶೀಘ್ರ ಆನೆಗೊಂದಿಯ 17 ಮನೆಗಳಲ್ಲಿ ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಲು ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕಾನೂನು ರೀತ್ಯಾ ಒಪ್ಪಿಗೆ ನೀಡಿದ್ದಾರೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ಅವರು ಕಮಲಾಪೂರದಲ್ಲಿ ಹಂಪಿ ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಆನೆಗೊಂದಿ ಸ್ಥಳೀಯರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.  ಹೋಂಸ್ಟೇ ನಿರ್ಮಾಣ ಮತ್ತು ಪರವಾನಿಗೆ ನೀಡುವುದು ಪ್ರಾಧಿಕಾರ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ. ಆದ್ದರಿಂದ ಗೊಂದಲ ದೂರ ಮಾಡಲು ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಿದ್ದು ಆನೆಗೊಂದಿಯಲ್ಲಿ ನೆಲ ಮಹಡಿ ಮನೆಗಳನ್ನು ಪ್ರಾಧಿಕಾರ ಕೊಡುವ ಡಿಸೈನ್ ನಂತೆ ನಿರ್ಮಿಸಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಗಾಳಿ, ನೀರು, ಪರಿಸರ ಉತ್ತಮವಾಗಿರಿಸಕೊಳ್ಳಬೇಕು ಹಾಗಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ  ಗ್ರಾ.ಪಂ.ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಎನ್‌ಓಸಿ ಪಡೆದು ಪ್ರಾಧಿಕಾರಕ್ಕೆ ಸಲ್ಲಿಸಿ ಹೋಂಸ್ಟೇನ್ ವ್ಯವಹಾರವನ್ನು ನಡೆಸಲು ಅವಕಾಶವಿದ್ದು ಇದುವರೆಗೂ ಬಾಕಿ ಇದ್ದ  17 ಅರ್ಜಿಗಳಿಗೆ  ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರ 17 ಹೋಂ ಸ್ಟೇಗಳು ಆರಂಭವಾಗಲಿವೆ. ಉಳಿದವರು ಸಹ ಇದೇ ಕಾನೂನು ಪಾಲನೆ ಮಾಡುವ ಮೂಲಕ ಹೋಂ ಸ್ಟೇ ಆರಂಭಿಸಬೇಕು.  ಆನೆಗೊಂದಿ ಪ್ರವೇಶ ದ್ವಾರದ(ಅಗಸಿ) ಹತ್ತಿರ ಇರುವ ಶ್ರೀಕೃಷ್ಣದೇವರಾಯ ಪುತ್ಥಳಿ ಜಾಹ ಶೀಘ್ರ ರಸ್ತೆ ಅಗಲೀಕರಣ ಕಾರಣದಿಂದ ತೆರವು ಮಾಡಲಾಗುತ್ತದೆ. ಪುನಹ ಪುತ್ಥಳಿಯನ್ನು ರಸ್ತೆ ಅಗಲೀಕರಣದ ನಂತರ ಅಲ್ಲೇ ಇರಿಸಲಾಗುವುದು, ಊರಮ್ಮ ಗುಡಿ ಹಿಂದಿನ 12 ಎಕರೆ ಭೂಮಿಯನ್ನು ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆದು ಇಲ್ಲಿ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ಮತ್ತು ಪ್ರಾಧಿಕಾರದಿಂದ ಮಂಜೂರಿಯಾದ 20 ಬ್ಯಾಟರಿ ಚಾಲಿತ ಕಾರುಗಳನ್ನು ನಿಲುಗಡೆ ಮಾಡಲಾಗುತ್ತದೆ. ಇನ್ನೂ ಮುಂದೆ ಆನೆಗೊಂದಿಯವರನ್ನು ಹೊರತು ಪಡಿಸಿ ಪ್ರವಾಸಿಗರ ವಾಹನಗಳನ್ನು ಊರಮ್ಮ ಗುಡಿ ಹಿಂದಿನ ಜಾಗದಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಿ ನವವೃಂದಾವನ, ಚಿಂತಾಮಣಿ ಮತ್ತು ಆನೆಗೊಂದಿಯ ತಾಣಗಳನ್ನು ವೀಕ್ಷಣೆಗೆ ಆಗಮಿಸುವವರನ್ನು ಬ್ಯಾಟರಿ ಕಾರುಗಳಲ್ಲಿ ಕರೆದುಕೊಂಡು ಹೋಗುವ ಅನುಕೂಲ ಮಾಡಲಾಗುತ್ತದೆ. ಆನೆಗೊಂದಿ ಯುವಕರಿಗೆ ಇದರಿಂದ ಉದ್ಯೋಗ ಲಭಿಸುತ್ತದೆ.  ಆನೆಗೊಂದಿ ಭಾಗದ ಪ್ರತಿ ಕಾಯಕ್ಕೂ ಪ್ರಾಧಿಕಾರ ತೊಂದರೆ ಕೊಡುತ್ತದೆ ಎನ್ನುವುದು ತಪ್ಪು ಕೆಲ ಪರವಾನಿಗೆ ಕೊಡುವ ಅಧಿಕಾರ ಗ್ರಾ.ಪಂ. ಹಾಗೂ ಪ್ರವಾಸೋದ್ಯಮ ಇಲಾಖೆಗೆ ಇದೆ. ಸರಿಯಾದ ದಾಖಲೆಗಳೊಂದಿಗೆ ಜನರು ಅಧಿಕಾರಿಗಳನ್ನು ಭೇಟಿಯಾಗಬೇಕು. ಸ್ಥಳೀಯರನ್ನೊಳಗೊಂಡ ಸಭೆ ನಡೆಸಿದ್ದು ಶೀಘ್ರ ಆನೆಗೊಂದಿ ಭಾಗದ ಸಮಸ್ಯೆಗಳು ಪರಿಹಾರವಾಗಲಿವೆ ಎಂದರು. ಸಭೆಯಲ್ಲಿ ಪ್ರಾಧಿಕಾರದ ಕಮೀಷನ್ ರಮೇಶ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ನಾಗರಾಜ, ಶ್ರೀಕೃಷ್ಣದೇವರಾಯ,ರತ್ನಶ್ರೀರಾಯ,ಟಿ.ಜಿ.ಬಾಬು,ಮಂಜುನಾಥ ಕಲಾಲ್,ಆನಂದರೆಡ್ಡಿ,ಶಂಕರರೆಡ್ಡಿ,ಯಮನೂರ ಸೇರಿ ಆನೆಗೊಂದಿಯ ಪ್ರಮುಖರಿದ್ದರು.