
* ಅಧಿಕ ಹಣಕ್ಕೆ ಹರಾಜು ನಿಗದಿ,ಹರಾಜು ಕೂಗಲು ಬಾರದ ಬಿಡ್ ದಾರರು!
*ಪ್ರಚಾರದ ಕೊರತೆ ಹರಾಜಿನಲ್ಲಿ ಬೆರಳೆಕೆಯ ಬಿಡದ್ ದಾರರು ಭಾಗಿ.
*ಪಾರ್ಕಿಂಗ್ ಜಾಗದ ಕೊರತೆಯೂ ಹರಾಜು ಪ್ರಕ್ರಿಯೆ ಸ್ಥಗಿತಕ್ಕೆ ಕಾರಣ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ,ಮ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಧಾರ್ಮಿಕ ಕೇಂದ್ರದಲ್ಲಿ ಸೋಮವಾರ ಜರುಗಿದ ವಾಹನಗಳ ಪಾರ್ಕಿಂಗ್ ಹರಾಜು ಪ್ರಕ್ರಿಯೆ ಬೆರಳಿನಕೆಯ ಬಿಡ್ ದಾರರು ಆಗಮಿಸಿದ್ದರಿಂದ ಸ್ಥಗಿತವಾಗಿದೆ.
ಒಂದು ತಿಂಗಳ ಹಿಂದೆ ಅಂಬಾದಾಸ ಎನ್ನುವವರಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ಒಂದು ವರ್ಷದ ಅವಧಿಗೆ ಕೆಲವು ಷರತ್ತಿನೊಂದಿಗೆ ವಹಿಸಲಾಗಿತ್ತು. ನಿಗದಿತ ಸಮಯದಲ್ಲಿ ಹರಾಜು ಹಣ ಪಾವತಿ ಮಾಡದೇ ಇರುವ ಕಾರಣ ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡು ಏ.27 ರಂದು
ಪುನಹ ಪಾರ್ಕಿಂಗ್ ಟೆಂಡರ್ ಹರಾಜ ಕರೆಯಲಾಗಿತ್ತು.
ಅಂಜನಾದ್ರಿ ಬೆಟ್ಟ ಪ್ರವರ್ಧಮಾನಕ್ಕೆ ಬಂದಾಗಿನಿಂದ ಕೆಲವು ವರ್ಷಗಳ ಕಾಲ ದೇವಸ್ಥಾನ ಕಮಿಟಿ ಅವರೇ ಪಾರ್ಕಿಂಗ್ ಜಾಗದಲ್ಲಿ ವಾಹನಗಳಿಗೆ ನಿಗದಿತ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದರು.
ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಟೆಂಡರ್ ಜಾಗವನ್ನು ಒಂದು ವರ್ಷದ ಅವಧಿಗೆ ನಿಗದಿ ಮಾಡಿ ಹರಾಜು ಕೂಗಲಾಗುತ್ತಿತ್ತು.
ಕಳೆದ ವರ್ಷ ಬಸಾಪಟ್ಟಣದ ವ್ಯಕ್ತಿಗೆ 25 ಲಕ್ಷ ರೂಪಾಯಿಗ ಪಾರ್ಕಿಂಗ್ ಜಾಗವನ್ನು ಹರಾಜು ನೀಡಲಾಗಿತ್ತು.
ಕಳೆದ ಒಂದು ತಿಂಗಳ ಹಿಂದೆ ಅಂಬಾದಾಸ್ ಎನ್ನುವ ವ್ಯಕ್ತಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ವಹಿಸಲಾಗಿತ್ತು. ಉಳಿದ ಹಣವನ್ನು ಅಂಬಾದಾಸ್ ದೇವಸ್ಥಾನ ಕಮಿಟಿಗೆ ಪಾವತಿ ಮಾಡದೆ ಇರುವ ಕಾರಣ ಠೇವಣಿ ಇಟ್ಟಿದ್ದ ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡು ಪುನಹ ಏ. 27ರಂದು ಪಾರ್ಕಿಂಗ್ ಜಾಗದ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು.
ದೇವಸ್ಥಾನ ಕಮಿಟಿಯವರ ತಪ್ಪಿನಿಂದಾಗಿ ಪಾರ್ಕಿಂಗ್ ಜಾಗದ ಹರಾಜು ಪ್ರಕ್ರಿಯೆಯನ್ನು ಪತ್ರಿಕೆಗಳಿಗೆ ಜಾಹೀರಾತು ನೀಡದೆ, ಕೆಲವೇ ಕೆಲವು ಪತ್ರಿಕೆಗೆ ಜಾಹೀರಾತು ನೀಡಿ ಪಾರ್ಕಿಂಗ್ ಜಾಗದ ಟೆಂಡರ್ ಹರಾಜು ನಡೆಸಿದ್ದು ಪ್ರಚಾರದ ಕೊರತೆಯ ಕಾರಣ ಬೆರಳೆಣಿಕೆಯ ಹರಾಜು ಕೂಗುವವರು ಬಂದಿದ್ದರು. ಪಾರ್ಕಿಂಗ್ ಜಾಗದಲ್ಲಿ ಮೂಲಸೌಕರ್ಯಗಳ ಕೊರತೆಯ ಕಾರಣ ಹರಾಜು ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳದೆ ಪಾರ್ಕಿಂಗ್ ಜಾಗ ಕಡಿಮೆ ಇದೆ. ದೇವಸ್ಥಾನ ಕಮಿಟಿ ಅವರು ಅಧಿಕ ಬೆಲೆಗೆ ಹರಾಜು ಕೂಗುವುದರಿಂದ ಪಾರ್ಕಿಂಗ್ ಹರಾಜು ಪಡೆದ ನಮಗೆ ಲಾಭವಾಗುವುದಿಲ್ಲ, ಆದ್ದರಿಂದ ಪಕ್ಕದ ಹಂಪಿಯಲ್ಲಿ ಭಾರಿ ವಾಹನಗಳಿಗೆ ರೂ.50 ಕಾರು ಟಾಟಾ ಎಸಿ ಗಳಿಗೆ ರೂ.30 ಆಟೋಗಳಿಗೆ ರೂ.10 ಮತ್ತು ಬೈಕ್ ಗಳಿಗೆ ೫ ರೂಪಾಯಿ ಹಣ ನಿಗದಿ ಮಾಡಿದಂತೆ ಅಂಜನಾದ್ರಿಯಲ್ಲಿಯೂ ಶುಲ್ಕ ನಿಗದಿ ಮಾಡಬೇಕು. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯದ ವ್ಯವಸ್ಥೆ ಮಾಡಬೇಕು ಮತ್ತು ಈಗಿರುವ ಜಾಗವನ್ನು ನಿಗದಿ ಮಾಡಿ ಜಾಗಕ್ಕೆ ತಕ್ಕಂತೆ ವಾಹನಗಳು ನಿಲ್ಲುವಂತೆ ಅಂದಾಜಿಸಿ ಟೆಂಡರ್ ಹಣವನ್ನು ನಿಗದಿ ಮಾಡುವಂತೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಐದು ಜನ ಬಿಟ್ಟುದಾರರು ಮನವಿ ಮಾಡಿದರು.
ಟೆಂಡರ್ ಪ್ರಕ್ರಿಯೆ ಗೊಂದಲದ ಪರಿಣಾಮವಾಗಿ ಗ್ರೇಟ್-2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್ ಅವರು ಸಹಾಯಕ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಟೆಂಡರ್ ಪ್ರಕ್ರಿಯೆ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಮುಂಬರುವ ದಿನಗಳಲ್ಲಿ ಪಾರ್ಕಿಂಗ್ ಜಾಗದ ಸರ್ವೆ ಮಾಡಿ ಮೂಲ ಸೌಕರ್ಯ ಒದಗಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಟೆಂಡರ್ ನಡೆಸಲಾಗುತ್ತದೆ ಎಂದು ಟೆಂಡರ್ ನಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ತಿಳಿಸಲಾಯಿತು.