Breaking News
ಹಂಪಿ ಪ್ರಾಧಿಕಾರದ ನೋಟೀಸ್ ವಿರುದ್ಧ ಹೈಕೋರ್ಟ್ ಗೆ ಹೋಗಿದ್ದ ಸಾಣಾಪುರ ಮತ್ತು ಆನೆಗೊಂದಿ ಭಾಗದ ರೆಸಾರ್ಟ್ ಮಾಲೀಕರ ದಾವೆ ತಿರಸ್ಕಾರ.

 

*ಶೀಘ್ರ ಪ್ರಾಧಿಕಾರದ ಹಾಗೂ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಾಣಾಪುರ ಭಾಗದ ಕೃಷಿ ಭೂಮಿಯಲ್ಲಿ

ರೆಸಾರ್ಟ್, ಹೊಟೇಲ್ ಗಳ ನಿರ್ಮಾಣ ಮಾಡಲಾಗಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವಲಯ ನಿಯಮಾವಳಿಗಳಿಗೆ ವಿರುದ್ದವಾಗಿದೆ ಎಂದು ಪ್ರಾಧಿಕಾರ ಕಳೆದ ನಾಲ್ಕೈದು ವರ್ಷಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ 16 ಜನ ರೆಸಾರ್ಟ್ ಹೊಟೇಲ್ ಮಾಲೀಕರು ತಡೆಯಾಜ್ಞೆ ತಂದಿದ್ದರು.ಇದೀಗ ಪ್ರಾಧಿಕಾರವು ಪ್ರಸ್ತುತ 2007 ನಿಯಮಾಳಿ ಹಾಗೂ ವಲಯ ನಿಯಮಾವಳಿಗಳ ಉಲ್ಲಂಘನೆ ಕುರಿತು ಹೈಕೋರ್ಟ್ ಗೆ ಮನವರಿಕೆ ಮಾಡಿದ್ದು ಏ.21 ರಂದು

ರೆಸಾರ್ಟ್ ,ಹೊಟೇಲ್ ಮಾಲೀಕರ ತಡೆಯಾಜ್ಞೆಯನ್ನು ವಜಾಗೊಳಿಸಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಮೇಶ್ ತಿಳಿಸಿದ್ದಾರೆ.

ಜಿಲ್ಲಾಡಳಿತ ಗಮನಕ್ಕೆ ತಂದು ಪದ್ಮಾವತಿ ಶ್ರೀನಿವಾಸರಾವ್,ನಾಮಗೌಡ,ಜಮಲಪ್ಪ,ಶಬ್ಬೀರ್ ಅಹಮದ್,ಶೇರಖಾನ್(2),ಮಹಮದ್ ಅಲಿ,ಯಲಕೂರಿ ರಮೇಶ,ರಾಮಾಂಜನೇಯ, ಪೆದ್ದಚಂದ್ರಯ್ಯ,ಲಕ್ಷ್ಮಿ,ಮಣಿಮಹೇಶ,ಮಲದಮ್ಮ,ನೂರಜಹಾನ್ ಮತ್ತು ಶೇರಖಾನ್ ಇವರ ಮಾಲೀಕತ್ವದ ರೆಸಾರ್ಟ್ ಹೊಟೇಲ್ ಗಳನ್ನು ಶೀಘ್ರ ತೆರೆವು ಮಾಡಲಾಗುವುದು ತಿಳಿಸಿದ್ದಾರೆ.

ಕಿಷ್ಕಿಂಧಾ ಅಂಜನಾದ್ರಿ ವಾಹನಪಾರ್ಕಿಂಗ್ ಸ್ಥಳ ಹರಾಜು ಸ್ಥಗಿತ

 

* ಅಧಿಕ ಹಣಕ್ಕೆ ಹರಾಜು ನಿಗದಿ,ಹರಾಜು ಕೂಗಲು ಬಾರದ ಬಿಡ್ ದಾರರು!

*ಪ್ರಚಾರದ ಕೊರತೆ ಹರಾಜಿನಲ್ಲಿ ಬೆರಳೆಕೆಯ ಬಿಡದ್ ದಾರರು ಭಾಗಿ.

*ಪಾರ್ಕಿಂಗ್ ಜಾಗದ ಕೊರತೆಯೂ ಹರಾಜು ಪ್ರಕ್ರಿಯೆ ಸ್ಥಗಿತಕ್ಕೆ ಕಾರಣ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ,ಮ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಧಾರ್ಮಿಕ ಕೇಂದ್ರದಲ್ಲಿ ಸೋಮವಾರ ಜರುಗಿದ ವಾಹನಗಳ ಪಾರ್ಕಿಂಗ್ ಹರಾಜು ಪ್ರಕ್ರಿಯೆ ಬೆರಳಿನಕೆಯ ಬಿಡ್ ದಾರರು ಆಗಮಿಸಿದ್ದರಿಂದ ಸ್ಥಗಿತವಾಗಿದೆ.

ಒಂದು ತಿಂಗಳ ಹಿಂದೆ ಅಂಬಾದಾಸ ಎನ್ನುವವರಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ಒಂದು ವರ್ಷದ ಅವಧಿಗೆ ಕೆಲವು‌ ಷರತ್ತಿನೊಂದಿಗೆ ವಹಿಸಲಾಗಿತ್ತು. ನಿಗದಿತ ಸಮಯದಲ್ಲಿ ಹರಾಜು ಹಣ ಪಾವತಿ ಮಾಡದೇ ಇರುವ ಕಾರಣ ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡು ಏ.27 ರಂದು

ಪುನಹ ಪಾರ್ಕಿಂಗ್ ಟೆಂಡರ್ ಹರಾಜ ಕರೆಯಲಾಗಿತ್ತು.

ಅಂಜನಾದ್ರಿ ಬೆಟ್ಟ ಪ್ರವರ್ಧಮಾನಕ್ಕೆ ಬಂದಾಗಿನಿಂದ ಕೆಲವು ವರ್ಷಗಳ ಕಾಲ ದೇವಸ್ಥಾನ ಕಮಿಟಿ ಅವರೇ ಪಾರ್ಕಿಂಗ್ ಜಾಗದಲ್ಲಿ ವಾಹನಗಳಿಗೆ ನಿಗದಿತ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದರು.

ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಟೆಂಡರ್ ಜಾಗವನ್ನು ಒಂದು ವರ್ಷದ ಅವಧಿಗೆ ನಿಗದಿ ಮಾಡಿ ಹರಾಜು ಕೂಗಲಾಗುತ್ತಿತ್ತು.

ಕಳೆದ ವರ್ಷ ಬಸಾಪಟ್ಟಣದ ವ್ಯಕ್ತಿಗೆ 25 ಲಕ್ಷ ರೂಪಾಯಿಗ ಪಾರ್ಕಿಂಗ್ ಜಾಗವನ್ನು ಹರಾಜು ನೀಡಲಾಗಿತ್ತು.

ಕಳೆದ ಒಂದು ತಿಂಗಳ ಹಿಂದೆ ಅಂಬಾದಾಸ್ ಎನ್ನುವ ವ್ಯಕ್ತಿಗೆ 31.10ಲಕ್ಷ ರೂ.ಗಳಿಗೆ ಪಾರ್ಕಿಂಗ್ ಜಾಗವನ್ನು ವಹಿಸಲಾಗಿತ್ತು. ಉಳಿದ ಹಣವನ್ನು ಅಂಬಾದಾಸ್ ದೇವಸ್ಥಾನ ಕಮಿಟಿಗೆ ಪಾವತಿ ಮಾಡದೆ ಇರುವ ಕಾರಣ ಠೇವಣಿ ಇಟ್ಟಿದ್ದ ಲಕ್ಷ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡು ಪುನಹ ಏ. 27ರಂದು ಪಾರ್ಕಿಂಗ್ ಜಾಗದ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು.

ದೇವಸ್ಥಾನ ಕಮಿಟಿಯವರ ತಪ್ಪಿನಿಂದಾಗಿ ಪಾರ್ಕಿಂಗ್ ಜಾಗದ ಹರಾಜು ಪ್ರಕ್ರಿಯೆಯನ್ನು ಪತ್ರಿಕೆಗಳಿಗೆ ಜಾಹೀರಾತು ನೀಡದೆ, ಕೆಲವೇ ಕೆಲವು ಪತ್ರಿಕೆಗೆ ಜಾಹೀರಾತು ನೀಡಿ ಪಾರ್ಕಿಂಗ್ ಜಾಗದ ಟೆಂಡರ್ ಹರಾಜು ನಡೆಸಿದ್ದು ಪ್ರಚಾರದ ಕೊರತೆಯ ಕಾರಣ ಬೆರಳೆಣಿಕೆಯ ಹರಾಜು ಕೂಗುವವರು ಬಂದಿದ್ದರು. ಪಾರ್ಕಿಂಗ್ ಜಾಗದಲ್ಲಿ ಮೂಲಸೌಕರ್ಯಗಳ ಕೊರತೆಯ ಕಾರಣ ಹರಾಜು ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳದೆ ಪಾರ್ಕಿಂಗ್ ಜಾಗ ಕಡಿಮೆ ಇದೆ. ದೇವಸ್ಥಾನ ಕಮಿಟಿ ಅವರು ಅಧಿಕ ಬೆಲೆಗೆ ಹರಾಜು ಕೂಗುವುದರಿಂದ ಪಾರ್ಕಿಂಗ್ ಹರಾಜು ಪಡೆದ ನಮಗೆ ಲಾಭವಾಗುವುದಿಲ್ಲ, ಆದ್ದರಿಂದ ಪಕ್ಕದ ಹಂಪಿಯಲ್ಲಿ ಭಾರಿ ವಾಹನಗಳಿಗೆ ರೂ.50 ಕಾರು ಟಾಟಾ ಎಸಿ ಗಳಿಗೆ ರೂ.30 ಆಟೋಗಳಿಗೆ ರೂ.10 ಮತ್ತು ಬೈಕ್ ಗಳಿಗೆ ೫ ರೂಪಾಯಿ ಹಣ ನಿಗದಿ ಮಾಡಿದಂತೆ ಅಂಜನಾದ್ರಿಯಲ್ಲಿಯೂ ಶುಲ್ಕ ನಿಗದಿ ಮಾಡಬೇಕು. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯದ ವ್ಯವಸ್ಥೆ ಮಾಡಬೇಕು ಮತ್ತು ಈಗಿರುವ ಜಾಗವನ್ನು ನಿಗದಿ ಮಾಡಿ ಜಾಗಕ್ಕೆ ತಕ್ಕಂತೆ ವಾಹನಗಳು ನಿಲ್ಲುವಂತೆ ಅಂದಾಜಿಸಿ ಟೆಂಡರ್ ಹಣವನ್ನು ನಿಗದಿ ಮಾಡುವಂತೆ ಹರಾಜಿನಲ್ಲಿ ಪಾಲ್ಗೊಂಡಿದ್ದ ಐದು ಜನ ಬಿಟ್ಟುದಾರರು ಮನವಿ ಮಾಡಿದರು.

ಟೆಂಡರ್ ಪ್ರಕ್ರಿಯೆ ಗೊಂದಲದ ಪರಿಣಾಮವಾಗಿ ಗ್ರೇಟ್-2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್ ಅವರು ಸಹಾಯಕ‌ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಟೆಂಡರ್ ಪ್ರಕ್ರಿಯೆ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಮುಂಬರುವ ದಿನಗಳಲ್ಲಿ ಪಾರ್ಕಿಂಗ್ ಜಾಗದ ಸರ್ವೆ ಮಾಡಿ ಮೂಲ ಸೌಕರ್ಯ ಒದಗಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಟೆಂಡರ್ ನಡೆಸಲಾಗುತ್ತದೆ ಎಂದು ಟೆಂಡರ್ ನಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ತಿಳಿಸಲಾಯಿತು.

ಆನೆಗೊಂದಿಯಲ್ಲಿ ಪಾರಂಪರೀಕ ಹೋಂಸ್ಟೇ ನಿರ್ಮಾಣಕ್ಕೆ ಪ್ರಾಧಿಕಾರದ ಪರವಾನಿಗೆ ಬೇಕಿಲ್ಲ:ಶಾಸಕ ಜನಾರ್ದನರೆಡ್ಡಿ

 *ಶಾಸಕರ ನೇತೃತ್ವದಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಹಾಗೂ ಆನೆಗೊಂದಿ ಗ್ರಾಮಸ್ಥರ ಸಭೆ

*ಶ್ರೀಕೃಷ್ಣದೇವರಾಯ ಪುತ್ಥಳಿ ಹತ್ತಿರ 12 ಎಕರೆ ಭೂಮಿ ಸ್ವಾಧೀನಕ್ಕೆ ಸೂಚನೆ

*ಬ್ಯಾಟರಿ ಚಾಲಿತ ವಾಹನಗಳು ಹಾಗೂ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ನಿರ್ಮಾಣ

*ಮನೆಯ ಮಾಲೀಕರೇ ಹೋಂಸ್ಟೇ ನಡೆಸುವ ಷರತ್ತು

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಐತಿಹಾಸಿಕ ಆನೆಗೊಂದಿಯಲ್ಲಿರುವ ಮನೆಗಳಲ್ಲಿ ಪಾರಂಪರೀಕವಾಗಿ ಮನೆಗಳನ್ನು ಪ್ರಾಧಿಕಾರದ ಡಿಸೈನ್ ನಂತೆ ಮನೆಗಳನ್ನು ನಿರ್ಮಿಸಿಕೊಂಡು ಮನೆ ಮಾಲೀಕರು ಒಂದರಿಂದ ಆರು ರೂಮ್ ಗಳ ವರೆಗೆ ಹೋಂಸ್ಟೇ  ಪ್ರವಾಸಿಗರಿಗೆ ಬಾಡಿಗೆ ನೀಡಲು ಅವಕಾಶವಿದ್ದು, ಇದಕ್ಕೆ ಪ್ರಾಧಿಕಾರದ ಎನ್‌ಓಸಿ ಅಗತ್ಯವಿಲ್ಲ.ಶೀಘ್ರ ಆನೆಗೊಂದಿಯ 17 ಮನೆಗಳಲ್ಲಿ ಹೋಂಸ್ಟೇ ನಡೆಸಲು ಅವಕಾಶ ಕಲ್ಪಿಸಲು ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಕಾನೂನು ರೀತ್ಯಾ ಒಪ್ಪಿಗೆ ನೀಡಿದ್ದಾರೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು. ಅವರು ಕಮಲಾಪೂರದಲ್ಲಿ ಹಂಪಿ ಅಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಆನೆಗೊಂದಿ ಸ್ಥಳೀಯರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.  ಹೋಂಸ್ಟೇ ನಿರ್ಮಾಣ ಮತ್ತು ಪರವಾನಿಗೆ ನೀಡುವುದು ಪ್ರಾಧಿಕಾರ ಎಂದು ಜನರಲ್ಲಿ ತಪ್ಪು ಕಲ್ಪನೆ ಇದೆ. ಆದ್ದರಿಂದ ಗೊಂದಲ ದೂರ ಮಾಡಲು ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡಿದ್ದು ಆನೆಗೊಂದಿಯಲ್ಲಿ ನೆಲ ಮಹಡಿ ಮನೆಗಳನ್ನು ಪ್ರಾಧಿಕಾರ ಕೊಡುವ ಡಿಸೈನ್ ನಂತೆ ನಿರ್ಮಿಸಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಗಾಳಿ, ನೀರು, ಪರಿಸರ ಉತ್ತಮವಾಗಿರಿಸಕೊಳ್ಳಬೇಕು ಹಾಗಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿ  ಗ್ರಾ.ಪಂ.ಪೊಲೀಸ್ ಮತ್ತು ಪ್ರವಾಸೋದ್ಯಮ ಇಲಾಖೆ ಎನ್‌ಓಸಿ ಪಡೆದು ಪ್ರಾಧಿಕಾರಕ್ಕೆ ಸಲ್ಲಿಸಿ ಹೋಂಸ್ಟೇನ್ ವ್ಯವಹಾರವನ್ನು ನಡೆಸಲು ಅವಕಾಶವಿದ್ದು ಇದುವರೆಗೂ ಬಾಕಿ ಇದ್ದ  17 ಅರ್ಜಿಗಳಿಗೆ  ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಒಪ್ಪಿಗೆ ನೀಡಿದ್ದು ಶೀಘ್ರ 17 ಹೋಂ ಸ್ಟೇಗಳು ಆರಂಭವಾಗಲಿವೆ. ಉಳಿದವರು ಸಹ ಇದೇ ಕಾನೂನು ಪಾಲನೆ ಮಾಡುವ ಮೂಲಕ ಹೋಂ ಸ್ಟೇ ಆರಂಭಿಸಬೇಕು.  ಆನೆಗೊಂದಿ ಪ್ರವೇಶ ದ್ವಾರದ(ಅಗಸಿ) ಹತ್ತಿರ ಇರುವ ಶ್ರೀಕೃಷ್ಣದೇವರಾಯ ಪುತ್ಥಳಿ ಜಾಹ ಶೀಘ್ರ ರಸ್ತೆ ಅಗಲೀಕರಣ ಕಾರಣದಿಂದ ತೆರವು ಮಾಡಲಾಗುತ್ತದೆ. ಪುನಹ ಪುತ್ಥಳಿಯನ್ನು ರಸ್ತೆ ಅಗಲೀಕರಣದ ನಂತರ ಅಲ್ಲೇ ಇರಿಸಲಾಗುವುದು, ಊರಮ್ಮ ಗುಡಿ ಹಿಂದಿನ 12 ಎಕರೆ ಭೂಮಿಯನ್ನು ಜಿಲ್ಲಾಡಳಿತ ಸ್ವಾಧೀನಕ್ಕೆ ಪಡೆದು ಇಲ್ಲಿ ಪ್ರವಾಸಿಗರಿಗೆ ತಂಗುದಾಣ, ಶೌಚಾಲಯ ಮತ್ತು ಪ್ರಾಧಿಕಾರದಿಂದ ಮಂಜೂರಿಯಾದ 20 ಬ್ಯಾಟರಿ ಚಾಲಿತ ಕಾರುಗಳನ್ನು ನಿಲುಗಡೆ ಮಾಡಲಾಗುತ್ತದೆ. ಇನ್ನೂ ಮುಂದೆ ಆನೆಗೊಂದಿಯವರನ್ನು ಹೊರತು ಪಡಿಸಿ ಪ್ರವಾಸಿಗರ ವಾಹನಗಳನ್ನು ಊರಮ್ಮ ಗುಡಿ ಹಿಂದಿನ ಜಾಗದಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆ ಮಾಡಿ ನವವೃಂದಾವನ, ಚಿಂತಾಮಣಿ ಮತ್ತು ಆನೆಗೊಂದಿಯ ತಾಣಗಳನ್ನು ವೀಕ್ಷಣೆಗೆ ಆಗಮಿಸುವವರನ್ನು ಬ್ಯಾಟರಿ ಕಾರುಗಳಲ್ಲಿ ಕರೆದುಕೊಂಡು ಹೋಗುವ ಅನುಕೂಲ ಮಾಡಲಾಗುತ್ತದೆ. ಆನೆಗೊಂದಿ ಯುವಕರಿಗೆ ಇದರಿಂದ ಉದ್ಯೋಗ ಲಭಿಸುತ್ತದೆ.  ಆನೆಗೊಂದಿ ಭಾಗದ ಪ್ರತಿ ಕಾಯಕ್ಕೂ ಪ್ರಾಧಿಕಾರ ತೊಂದರೆ ಕೊಡುತ್ತದೆ ಎನ್ನುವುದು ತಪ್ಪು ಕೆಲ ಪರವಾನಿಗೆ ಕೊಡುವ ಅಧಿಕಾರ ಗ್ರಾ.ಪಂ. ಹಾಗೂ ಪ್ರವಾಸೋದ್ಯಮ ಇಲಾಖೆಗೆ ಇದೆ. ಸರಿಯಾದ ದಾಖಲೆಗಳೊಂದಿಗೆ ಜನರು ಅಧಿಕಾರಿಗಳನ್ನು ಭೇಟಿಯಾಗಬೇಕು. ಸ್ಥಳೀಯರನ್ನೊಳಗೊಂಡ ಸಭೆ ನಡೆಸಿದ್ದು ಶೀಘ್ರ ಆನೆಗೊಂದಿ ಭಾಗದ ಸಮಸ್ಯೆಗಳು ಪರಿಹಾರವಾಗಲಿವೆ ಎಂದರು. ಸಭೆಯಲ್ಲಿ ಪ್ರಾಧಿಕಾರದ ಕಮೀಷನ್ ರಮೇಶ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ನಾಗರಾಜ, ಶ್ರೀಕೃಷ್ಣದೇವರಾಯ,ರತ್ನಶ್ರೀರಾಯ,ಟಿ.ಜಿ.ಬಾಬು,ಮಂಜುನಾಥ ಕಲಾಲ್,ಆನಂದರೆಡ್ಡಿ,ಶಂಕರರೆಡ್ಡಿ,ಯಮನೂರ ಸೇರಿ ಆನೆಗೊಂದಿಯ ಪ್ರಮುಖರಿದ್ದರು.