Breaking News
ಹೊಸಳ್ಳಿ ಸರಕಾರಿ ಶಾಲೆಗೆ ದಾನ ನೀಡಿದ ಭೂಮಿ ವಾಪಸ್ ಪಡೆಯಲು ಯತ್ನ.ಸರಕಾರದ ದಾಖಲೆ ತಿದ್ದಿದ ಅಧಿಕಾರಿಗಳ ವಿರುದ್ಧ ಕ್ರಮ ಆಗ್ರಹಿಸಿ ಕಂದಾಯ ಸಚಿವರಿಗೆ ಮನವಿ ಸಲ್ಲಿಕೆ.

*ಐದು ಎಕರೆ ದಾನ ನೀಡಿದ ಭೂಮಿಯಲ್ಲಿ ಮೂರು ಎಕರೆ ವಾಪಸ್ ಪಡೆಯಲು ಯತ್ನ.

*ಕೃತ್ಯಕ್ಕೆ ಸಹಕರಿಸಿ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಅಧಿಕಾರ ಅಮಾನತ್ತಿಗೆ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ತಾಲೂಕಿನ ಹೊಸಳ್ಳಿ ಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಈ ಹಿಂದಿನ ಕಲ್ಮಠದ ಪೂಜ್ಯರು ಸರ್ಕಾರಿ ಶಾಲೆಗೆ ಐದು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಪ್ರಸ್ತುತ ಇರುವ ಮಠಾಧೀಶರು ಐದು ಎಕರೆ ಭೂಮಿಯಲ್ಲಿ ಮೂರು ಎಕರೆಯ ಭೂಮಿಯನ್ನು ವಾಪಸ್ ಪಡೆಯಲು ದಾಖಲಾತಿ ತಿದ್ದುವ ಯತ್ನ

ನಡೆಸಿದ್ದು ಸರ್ಕಾರಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಆದ್ದರಿಂದ ಕೂಡಲೇ ಕಂದಾಯ ಮತ್ತು ಶಿಕ್ಷಣ ಸಚಿವರು ಮಧ್ಯಪ್ರವೇಶ ಮಾಡಿ ಸರ್ಕಾರಿ ಶಾಲೆಗೆ ಐದು ಎಕರೆ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡುವಂತೆ ಕಂದಾಯ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಹೊಸಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಬೆಂಗಳೂರಿನಲ್ಲಿ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರ ಶಾಲೆಯ 5 ಎಕರೆ ಭೂಮಿ (ಸರ್ವೇ ನಂ. 16/2/4) ಕಬಳಿಕೆ ಮಾಡುವ ಪ್ರಯತ್ನ ನಡೆಯುತ್ತಿದೆ.

ಕಲ್ಮಠದ ಪ್ರಸ್ತುತ ಪೀಠಾಧಿಪತಿಯಾಗಿರುವ ಡಾ.

ಕೊಟ್ಟೂರ ಸ್ವಾಮಿಗಳವರಿಂದ ಶಾಲೆಯ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತರಲಾಯಿತು. ವಿಷಯದ ಗಂಭೀರತೆಯನ್ನು ಅರಿತ ಸಚಿವರು ತಕ್ಷಣ ತಹಶೀಲ್ದಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣವನ್ನು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮತ್ತು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರು ಪ್ರತ್ಯೇಕವಾಗಿ ಮನವಿ ಪತ್ರ ಸ್ವೀಕರಿಸಿ ಸರ್ಕಾರ ಶಾಲೆಯ ಭೂಮಿಯನ್ನು ಯಾವುದೇ ರೀತಿಯ ಕಬಳಿಕೆಯಿಂದ ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಗ್ರಾಮದ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರ ಶಾಲೆಯ ಭೂಮಿಯನ್ನು ಉಳಿಸುವುದು ಅತ್ಯಂತ ಅವಶ್ಯಕವಾಗಿದ್ದು, ಯಾವುದೇ ರೀತಿಯ ಅನಧಿಕೃತ ಕಬಳಿಕೆಯನ್ನು ಸಹಿಸಲಾಗುವುದಿಲ್ಲ.

ಈ ಸಂಬಂಧ ತಕ್ಷಣ ಸೂಕ್ತ ಕ್ರಮ ಕೈಗೊಂಡು ಶಾಲೆಯ ಭೂಮಿಯನ್ನು ರಕ್ಷಿಸಬೇಕೆಂದು ಸರ್ಕಾರವನ್ನು ಸಂಘಟನೆಯ ವತಿಯಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಮಾರ್ಗ) ರಾಜ್ಯಾಧ್ಯಕ್ಷ ನಾರಾಯಣ ಎಂ., ಕಲಬುರಗಿ ವಿಯತ್ ಅಧ್ಯಕ್ಷ ಮಂಜುನಾಥ ಸಾಸಲಮರಿ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಹೇಶ್ ಡಿ,

ಸೇರಿದಂತೆ ಹೊಸಳ್ಳಿ ಗ್ರಾಮಸ್ಥರಿದ್ದರು.