Breaking News
ಕುವೆಂಪು ವಿಶ್ವವಿದ್ಯಾಲಯದಿಂದ  ಕೃಷ್ಣಕುಮಾರ್ ಮೈಲಾ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

 

 

ಕಿಷ್ಕಿಂಧವಾಣಿ ಸುದ್ದಿ

​ಗಂಗಾವತಿ:ನಗರದ ಕಲ್ಮಠ ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಕುಮಾರ್ ಮೈಲಾ ಅವರು ತಮ್ಮ  ಸಂಶೋಧನೆಗಾಗಿ ಕುುವೆಂಪು ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ. ​ ಕೃಷ್ಣಕುಮಾರ್ ಅವರು ಮಾರ್ಗದರ್ಶಕ ಡಾ. ಶ್ವೇತಾ ಅಳವಂಡಿ ಅವರ ಮಾರ್ಗದರ್ಶನದಲ್ಲಿ ​”ಕರ್ನಾಟಕದ ಗಂಗಾವತಿ ತಾಲೂಕಿನ ಹನುಮನಹಳ್ಳಿ ಪ್ರದೇಶದಲ್ಲಿ ಅವಿಫೌನಾಗಳ (Avifauna) ವೈವಿಧ್ಯತೆ ಮತ್ತು ವಿತರಣೆಯ ಕುರಿತು ಅಧ್ಯಯನಗಳು – ಜೇನುನೊಣ ತಿನ್ನುವವರಿಗೆ ವಿಶೇಷ ಉಲ್ಲೇಖದೊಂದಿಗೆ (ಮೆರಾಪ್ಸ್ ಫಿಲಿಪಿನಸ್ ಮತ್ತು ಮೆರಾಪ್ಸ್ ಓರಿಯಂಟಲಿಸ್)”  ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿದ್ದಕ್ಕೆ ಡಾಕ್ಟರೇಟ್ ಪದವಿ ದೊರಕಿದೆ. ​ ಏಪ್ರಿಲ್ 6, 2026 ರಂದು ನಡೆದ ಕುುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಕೃಷ್ಣಕುಮಾರ್ ಮೈಲಾ ಅವರಿಗೆ  ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.