Breaking News
ನೂತನ ಜಡ್ಜ್ ಆಗಿ ನೇಮಕಗೊಂಡ ಸಂತೋಷ ಬೆಳಗೋಡ ಅವರಿಗೆ ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದಲ್ಲಿ ಸನ್ಮಾನ.

*ಪರಿಶ್ರಮ ಅಧ್ಯಯನದ ಮೂಲಕ ಗುರಿ ಸಾಧಿಸಿದ ಸಂತೋಷ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಸತತ ಪರಿಶ್ರಮ ಹಾಗೂ ಅಧ್ಯಯನದ ಮೂಲಕ ಯಾರು ಬೇಕಾದರೂ ಗುರಿಯನ್ನು ತಲುಪಬಹುದು ಎಂದು ನೂತನವಾಗಿ ಜಡ್ಜ್ ಆಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಅವರಿಂದ ಸರ್ವರೂ ಸಾಧಿಸುವುದನ್ನು ಕಲಿಯಬೇಕು ಎಂದು ಚಿಕ್ಕಜಂತಗಲ್ ಕರಿಮುಲ್ಲಾ ದರ್ಗಾದ ಮುಖ್ಯಸ್ಥರಾದ

ಸೈಯದ್ ತಾಹಿರ್ ಕಾದ್ರಿ ಆದಿಲ್ ಪಾಶ ಸಾಹೇಬರು ಸಜ್ಜದ ನಸಿನ್ ಕರಿ ಮುಲ್ಲಾ ಕಾದ್ರಿ ಹೇಳಿದರು.

ಅವರು ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಶ್ರೀ ಕರಿಮುಲ್ಲಾ ಖಾದ್ರಿ ಅವರ ದರ್ಗಾದ ಉರುಸು ಕಾರ್ಯಕ್ರಮದಲ್ಲಿ ನೂತನವಾಗಿ ನ್ಯಾಯಾಧೀಶರಾಗಿ ನೇಮಕಗೊಂಡಿರುವ ಸಂತೋಷ ಬೆಳಗೋಡು ಇವರನ್ನು ಸಮಸ್ತ ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಶಿಕ್ಷಣದ ಮೂಲಕ ಸರ್ವರೂ ಉನ್ನತ ಹುದ್ದೆಗೆ ಹೋಗಲು ಸಾಧ್ಯ, ಆದರೆ ಪರಿಶ್ರಮ ಮತ್ತು ಸತತ ವಿದ್ಯಾಭ್ಯಾಸ ಮಾಡುವುದು ಅವಶ್ಯಕ.ಗ್ರಾಮೀಣ ಭಾಗದಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆದು ಪಾಲಕರ ಕನಸನ್ನು ಮಕ್ಕಳು ನನಸು ಮಾಡಿ ಇಡೀ ಸಮುದಾಯ ಮೆಚ್ಚುವ ಕಾರ್ಯ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ

ಕಾರ್ಯಕ್ರಮದಲ್ಲಿ ಚಿಕ್ಕ ಜಂತಗಲ್ ಗ್ರಾಮದ ಹಿರಿಯರಾಗಿರುವ ಸೈಯದ್ ಅಲಿ ಸಾಹೇಬ, ನ್ಯಾಯವಾದಿಗಳಾದ ಸೈಯದ್ ಹಾಶುಮುದ್ದೀನ್, ಗೌಸ್ ಪಿರ್, ಎಜಿಪಿ ಭಾನು ಬಿ, ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಖಂಡ ಡಾ.ಶೇಖ್ ಇಲಿಯಸ್ ಬಾಬಾ, ಶರಣಯ್ಯ ಸ್ವಾಮಿ, ಬಟಾರಿ ಮಂಜುನಾಥ, ಬಿ ವೀರಪ್ಪ, ಅಂದನಯ್ಯ ಸ್ವಾಮಿ, ರಾಜಸಾಬ, ರಾಜಶೇಖರ, ಮುಕ್ಕಣ್ಣಗೌಡ, ಬಿ ಮಂಜು, ಆದಿಂ ಪಾಷಾ, ವಲಿಸಾಬ, ಇಮ್ರಾನ ಸಾಬ, ಬುಡನ ಸಾಬ, ಬಾಸು ಸಾಬ, ಬಶೀರ್, ಖಾಜಾ ಸಾಬ, ಶೇಕ್ ಮಹಮ್ಮದ

ಸೇರಿ ಅನೇಕರಿದ್ದರು.