Breaking News
ಲಕ್ಷ ರೂ.ಮೌಲ್ಯದ ಬೋರಮಳ ಚಿನ್ನದ ಸರವನ್ನು ಮಾಲಕಿಗೆ ಮರಳಿಸಿದ ಕೆ ಎಸ್ ಸರ್ ಟಿ ಸಿ  ಸಿಬ್ಬಂದಿ ವರ್ಗ!

*ಕೊಪ್ಪಳ ರಾಯಚೂರು ಬಸ್ ನಲ್ಲಿ ಚಿನ್ನದ ಸರದ ಬ್ಯಾಗ ಇಟ್ಟಿದ್ದ ಮಹಿಳೆ.

*ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಬಸ್ ತಪ್ಪಿಸಿಕೊಂಡಿದ್ದ ಮಹಿಳೆ.

*ಕೆಎಸಾರ್ಟಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದ ಮಹಿಳಾ ಪ್ರಯಾಣಿಕರಿಗೆ ಚಿನ್ನದ ಸರದ ಬ್ಯಾಗನ್ನು ಕೆಎಸಾರ್ಟಿಸಿ ಅಧಿಕಾರಿಗಳು ಮರಳಿಸಿದ್ದಾರೆ. ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ರಾಯಚೂರಿಗೆ ಹೋಗಲು ಕೊಪ್ಪಳ ರಾಯಚೂರು ಬಸ್ಸಿನಲ್ಲಿ ಸೀಟು ಹಿಡಿದು ಸೀಟಿನ ಮೇಲೆ ತನ್ನ ಬ್ಯಾಗನ್ನು ಇಟ್ಡು ಶೌಚಾಲಯಕ್ಕೆ ತೆರಳಿದಾಗ ಬಸ್ ಹೊರಟಿದ್ದು ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಕೆಎಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಗಂಗಾವತಿ ಬಸ್ ನಿಲ್ದಾಣದಲ್ಲಿ ಬಸ್ ನಲ್ಲಿ ಇದ್ದ ಬ್ಯಾಗನ್ನು ಸಹಾಯಕ ನಿಯಂತ್ರಣ ಅಧಿಕಾರಿ ನಾಗರಾಜ ಪೂಜಾರ ಹಾಗೂ ಬಸ್ ಕಂಡಕ್ಟರ್ ಶರಣಪ್ಪ ಮಹಿಳೆಯನ್ನು ಕೊಪ್ಪಳ ದಿಂದ ಕರೆಸಿ ಬ್ಯಾಗನ್ನು ತಲುಪಿಸಿದ್ದಾರೆ

ಬ್ಯಾಗ ತೆರೆದು ನೋಡಿದಾಗ ಐದು ಗ್ರಾಂ ಗೂ ಹೆಚ್ಚು ಚಿನ್ನದ ಬೋರಮಳದ ಸರ ಇರುವುದು ಗೊತ್ತಾಗಿದೆ.

ಒತ್ತಡ ಬದುಕಿನ ಮಧ್ಯದಲ್ಲೂ ಕೆಎಸಾರ್ಟಿಸಿ ನೌಕರರು ಪ್ರಯಾಣಿಕರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಒಳಗಾಗಿದೆ

ಚಿನ್ನದ ಸರ ವಾಪಸ್ ಪಡೆದ ಮಹಿಳೆ ಕೆಎಸಾರ್ಟಿಸಿ ನೌಕರರು, ಕಂಡಕ್ಟರ್, ಡ್ರೈವರ್ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ.