Breaking News
ಗಂಗಾವತಿ: ರಾಷ್ಟ್ರೀಯ ಲೋಕ ಅದಾಲತ್- ನಾಲ್ಕು ನ್ಯಾಯಾಲಯಗಳಲ್ಲಿ 617 ಕೇಸ್ ಗಳ ಇತ್ಯರ್ಥ!

*8.48 ಕೋಟಿ ರೂ. ಸರಕಾರಕ್ಕೆ ಜಮೆ,ವೈಮನಸ್ಸು ಬಿಟ್ಟು ಒಂದಾದ ಮೂರು ಜೋಡಿ ದಂಪತಿಗಳು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:.ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ನಾಲ್ಕು ನ್ಯಾಯಾಲಯಗಳ ಅದಾಲತ್ ನಲ್ಲಿ 617 ಪ್ರಕರಣ ಇತ್ಯರ್ಥಹೊಂಡಿದ್ದು, 8.48 ರೂ. ಕೋಟಿ ಸರಕಾರಕ್ಕೆ ಜಮೆಯಾಗಿದೆ. ಮೂವರು ದಂಪತಿಗಳು ವೈಷಮ್ಯ ಬಿಟ್ಟು ಒಂದಾಗಿರುವುದು ಇಂದಿನ ಲೋಕ ಅದಾಲತ್ ನ ವಿಶೇಷವಾಗಿದೆ.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯಿಂದ ಮಾಹಿತಿ ನೀಡಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಅಧ್ಯಕ್ಷರು ಆಗಿರುವ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಸಿವಿಲ್ ನ್ಯಾಯಾಧೀಶ ಗುಡದಪ್ಪ ಬಸವಣೆಪ್ಪ ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣವರ ಉಪಸ್ಥಿತಿಯಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನಾಲ್ಕು ತಾಲೂಕ ನ್ಯಾಯಾಲಯದಲ್ಲಿ ಒಟ್ಟು 10884 ಬಾಕಿ ಪ್ರಕರಣಗಳಿದ್ದು ಸದರಿ ರಾಷ್ಟ್ರೀಯ ಲೋಕ ಅದಾಲತನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ ಸಾಲ ವಸೂಲಿ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ, ಜನನ ಮರಣ, ಮತ್ತು ಕ್ರಿಮಿನಲ್ ಕೇಸಸ್ ಗಳನ್ನು ಸೇರಿ 1438 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 51 ಮೋಟಾರು ವಾಹನ ಇತರೆ ಪ್ರಕರಣಗಳು 60 ಒಟ್ಟು 111 ಪ್ರಕರಣಗಳು ಇತ್ಯರ್ಥ. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 20 ಮೋಟಾರು ವಾಹನ 02 ವೈವಾಹಿಕ ಪ್ರಕರಣ 03 ಬ್ಯಾಂಕ ಪ್ರಕರಣ 10 ಚೆಕ್ ಬೌನ್ಸ್ 04 ಇನ್ನಿತರ ಪ್ರಕರಣಗಳು ಸೇತಿ ಒಟ್ಟು 39 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 21 ಚೆಕ್ ಬೌನ್ಸ್ 01 ಕೌಟಂಬಿಕ ದೌರ್ಜನ್ಯ 182 ಜನನ ಮರಣ 86 ಕ್ರೀಮಿನಲ್ ಸೇರಿ ಇನ್ನಿತರ 16 ಪ್ರಕರಣಗಳು ಒಟ್ಟು 306 ಪ್ರಕರಣಗಳು ಇತ್ಯರ್ಥಪಡಿಸಿದೆ. ಮತಗತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 04 ಚೆಕ್ ಬೌನ್ಸ , ಕೌಟಂಬಿಕ ದೌರ್ಜನ್ಯ 101 ಜನನ ಮರಣ 33 ಕ್ರೀಮಿನಲ್ ಕೇಸಸ್ ಇನ್ನಿತರ 23 ಪ್ರಕರಣಗಳು ಸೇರಿ ಒಟ್ಟು 161 ಪ್ರಕರಣಗಳು ಇತ್ಯರ್ಥಪಡಿಸಿದ್ದು, ನಾಲ್ಕು ನ್ಯಾಯಾಲಯಗಳು ಸೇರಿ ಲೋಕದ ಅದಾಲತನಲ್ಲಿ ಒಟ್ಟು 617 ಪ್ರಕರಣಗಳು ಇತ್ಯರ್ಥಗೊಂಡಿರುತ್ತದಲವೆ. ಹಾಗೂ ನಾಲ್ಕು ನ್ಯಾಯಾಲಯದಲ್ಲಿ ಸೇರಿ 8,48,25,621.00 ರೂ. ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಸದರಿ ಲೋಕ ಅದಾಲತನಲ್ಲಿ ವಕೀಲರು ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮತ್ತು ಸಂಘದ ಸದಸ್ಯರು ಮತ್ತು ವಕೀಲರಗಳು ಲೋಕ ಅದಾಲತನಲ್ಲಿ ಭಾಗವಹಿಸಿ ಲೋಕ ಯಶಸ್ವಿಗೊಳಿಸಿದ್ದಾರೆ.

**
ಅಪಘಾತ ವಿಮೆ‌ ರೂ.90.00 ಲಕ್ಷ ಪರಿಹಾರ ವಿತರಣೆ
ವ್ಯಾಜ್ಯ ಪೂರ್ವ 1739 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಅಹ್ವಾನಿಸಲಾಗಿದೆ. ಸದರಿ ಲೋಕದ ಅದಾಲತನಲ್ಲಿ ಒಟ್ಟು 30 ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ. 25,97,642.00 ಸರ್ಕಾರಕ್ಕೆ ಜಮಾ ಮಾಡಲಾಗಿದೆ. MVC 557/25 ರ ಪ್ರಕರಣದಲ್ಲಿ ಬಿ. ಅಂಜಿನಪ್ಪ ಮತ್ತು ಶ ಸಿದ್ರಾಮಸ್ವಾಮಿ ಆರ್ ಹಿರೇಮಠ ವಕೀಲರು ಇವರು HDFC ERGO Insurance ಕಂಪನಿಯ ಪರವಾಗಿ ಈ ಪ್ರಕರಣದ ಅರ್ಜಿದಾರರು ವಾಯು ವಿವಾಹರಕ್ಕೆ ಹೋಗುವಾಗ ಹಿಂದುಗಡೆಯಿಂದ ಮೋಟರ್ ಸೈಕಲ್ ವಾಹನ ಬಂದು ಅಪಘಾತ ಮಾಡಿದು ಅರ್ಜಿದಾರರು ಗುತ್ತಿಗೆದಾರರಾಗಿದ್ದು ಸದರಿ ಅರ್ಜಿದಾರ ಹುಲುಗಪ್ಪ ತಂದೆ ಸುಬಾಸ್ ಕಂದಕುರರು ಮೃತ ಪಟ್ಟಿರುತ್ತಾರೆ. ಮೃತರ ವಾರಸ್ತುದಾರರಿಗೆ ರಾಷ್ಟ್ರೀಯ ಲೋಕ ಅದಾಲತನಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮೂಲಕ ರೂ. 90,00,ಲಕ್ಷ ರೂ.ಗಳ ಪರಿಹಾರ ನೀಡಲಾಯಿತು

ಗಂಗಾವತಿ: ಮೃತ್ಯು ಇಂಜೆಕ್ಷನ್ ಹಾವಳಿ!  ಮಾತ್ರೆ ಪುಡಿಯ ಇಂಜೆಕ್ಷನ್ ಚುಚ್ಚಿಕೊಳ್ತಿದ್ದಾರೆ ಯುವಕರು!

*ನಗರ ಠಾಣೆ ದೂರು ದಾಖಲು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದಲ್ಲಿ ಈಗ ಹೊಸದೊಂದು ಆತಂಕ ಶುರುವಾಗಿದೆ!

ಶಾಮಿಯಾನ ಕೆಲಸ ಮಾಡೋ ಯುವಕರು, ಸ್ಲಂ ನಿವಾಸಿಗಳನ್ನೇ ಟಾರ್ಗೆಟ್ ಮಾಡಿರೋ ‘ಟ್ಯಾಬ್ಲೆಟ್’ ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ! ಮೈಕೈ ನೋವಿಗೆ ಬಳಸೋ ಪೇನ್ ಕಿಲ್ಲರ್ ಮಾತ್ರೆ ಈಗ ಕಿಕ್ ಕೊಡೋ ಡ್ರಗ್ಸ್ ಆಗಿ ಬದಲಾಗಿದೆ!

ಯುವಕರ ಬದುಕಲ್ಲಿ ಇಂಜೆಕ್ಷನ್ ವಿಷ!

ಶಾಮಿಯಾನ ಕೆಲಸ ಮಾಡುವಾಗ ಬರೋ ಮೈಕೈ ನೋವನ್ನ ಕಡಿಮೆ ಮಾಡಿಕೊಳ್ಳೋಕೆ ಅಂತ ಯುವಕರು ನುಂಗೋಕೆ ಶುರು ಮಾಡಿದ ‘ಟ್ಯಾಪೆಂಟಡಾಲ್’ ಅನ್ನೋ ಮಾತ್ರೆ ಈಗ ಅವರ ಪ್ರಾಣಕ್ಕೆ ಕುತ್ತಾಗಿದೆ. ಮೊದಲು ಮಾತ್ರೆ ನುಂಗುತ್ತಿದ್ದವರು ಈಗ ಹೆಚ್ಚಿನ ಅಮಲಿಗಾಗಿ ಆ ಮಾತ್ರೆಯನ್ನ ಪುಡಿ ಮಾಡಿ, ನೀರಿನಲ್ಲಿ ಕಲಸಿ, ನೇರವಾಗಿ ನರಗಳಿಗೆ ಇಂಜೆಕ್ಟ್ ಮಾಡಿಕೊಳ್ತಿದ್ದಾರೆ! ಇದರಿಂದ ಕೈಕಾಲುಗಳು ಊದಿಕೊಳ್ಳುತ್ತಿವೆ, ಮೈಮೇಲೆ ಗಾಯಗಳಾಗ್ತಿವೆ!

ಫ್ಯಾನ್ಸಿ ಸ್ಟೋರ್‌ನಲ್ಲಿ ವಿಷದ ವ್ಯಾಪಾರ!

ನಗರದ ದುರ್ಗಾದೇವಿ ಗುಡಿ ಹತ್ತಿರ ಇರೋ ‘ಕೃಷ್ಣಾ ಫ್ಯಾನ್ಸಿ ಸ್ಟೋರ್’ ಈ ಕಿರಾತಕ ಕೆಲಸಕ್ಕೆ ಅಡ್ಡಾವಾಗಿದೆ! ಅಂಗಡಿ ಮಾಲೀಕ ಕಿಶನ್ ಕುಮಾರ್ ಕೇವಲ 300 ರೂಪಾಯಿಗೆ ಎರಡೆರಡು ಮಾತ್ರೆಗಳನ್ನ ವೈದ್ಯರ ಚೀಟಿ ಇಲ್ಲದೆ ಮಾರುತ್ತಿದ್ದಾನೆ. ಈ ಮಾತ್ರೆ ಸಿಗಲಿಲ್ಲ ಅಂದ್ರೆ ಯುವಕರು ಹುಚ್ಚರಂತಾಗ್ತಿದ್ದಾರೆ, ಹಣಕ್ಕಾಗಿ ಹೆತ್ತವರ ಜೇಬಿಗೇ ಕನ್ನ ಹಾಕ್ತಿದ್ದಾರೆ!

ದೂರು ದಾಖಲು:

ಈ ಜಾಲದ ಬಗ್ಗೆ ಸಂತ್ರಸ್ತ ಯುವಕ ಪೊಲೀಸ್ ಠಾಣೆ

ದೂರು ನೀಡಿದ್ದು ನಗರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ಮಾಳೆ ಅವರು . ಬಿ.ಎನ್.ಎಸ್. ಸೆಕ್ಷನ್ 123 ರಡಿ ಕೇಸ್ ದಾಖಲಾಗಿದ್ದು, ಫ್ಯಾನ್ಸಿ ಸ್ಟೋರ್ ಮಾಲೀಕ ಕಿಶನ್ ಕುಮಾರ್‌ನನ್ನ ತನಿಖೆಗೆ ಒಳಪಡಿಸಲಾಗಿದ್ದು ಇನ್ನಷ್ಟು ದುಷ್ಕರ್ಮಿಗಳ ಬಂಧನ ಸಾಧ್ಯತೆ ಇದೆ.

ಲಕ್ಷ ರೂ.ಮೌಲ್ಯದ ಬೋರಮಳ ಚಿನ್ನದ ಸರವನ್ನು ಮಾಲಕಿಗೆ ಮರಳಿಸಿದ ಕೆ ಎಸ್ ಸರ್ ಟಿ ಸಿ  ಸಿಬ್ಬಂದಿ ವರ್ಗ!

*ಕೊಪ್ಪಳ ರಾಯಚೂರು ಬಸ್ ನಲ್ಲಿ ಚಿನ್ನದ ಸರದ ಬ್ಯಾಗ ಇಟ್ಟಿದ್ದ ಮಹಿಳೆ.

*ಶೌಚಾಲಯಕ್ಕೆ ಹೋದ ಸಂದರ್ಭದಲ್ಲಿ ಬಸ್ ತಪ್ಪಿಸಿಕೊಂಡಿದ್ದ ಮಹಿಳೆ.

*ಕೆಎಸಾರ್ಟಿಸಿ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಸ್ಸಿನಲ್ಲಿ ಚಿನ್ನದ ಸರವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದ ಮಹಿಳಾ ಪ್ರಯಾಣಿಕರಿಗೆ ಚಿನ್ನದ ಸರದ ಬ್ಯಾಗನ್ನು ಕೆಎಸಾರ್ಟಿಸಿ ಅಧಿಕಾರಿಗಳು ಮರಳಿಸಿದ್ದಾರೆ. ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ರಾಯಚೂರಿಗೆ ಹೋಗಲು ಕೊಪ್ಪಳ ರಾಯಚೂರು ಬಸ್ಸಿನಲ್ಲಿ ಸೀಟು ಹಿಡಿದು ಸೀಟಿನ ಮೇಲೆ ತನ್ನ ಬ್ಯಾಗನ್ನು ಇಟ್ಡು ಶೌಚಾಲಯಕ್ಕೆ ತೆರಳಿದಾಗ ಬಸ್ ಹೊರಟಿದ್ದು ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ ಕೆಎಸಾರ್ಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದು ಗಂಗಾವತಿ ಬಸ್ ನಿಲ್ದಾಣದಲ್ಲಿ ಬಸ್ ನಲ್ಲಿ ಇದ್ದ ಬ್ಯಾಗನ್ನು ಸಹಾಯಕ ನಿಯಂತ್ರಣ ಅಧಿಕಾರಿ ನಾಗರಾಜ ಪೂಜಾರ ಹಾಗೂ ಬಸ್ ಕಂಡಕ್ಟರ್ ಶರಣಪ್ಪ ಮಹಿಳೆಯನ್ನು ಕೊಪ್ಪಳ ದಿಂದ ಕರೆಸಿ ಬ್ಯಾಗನ್ನು ತಲುಪಿಸಿದ್ದಾರೆ

ಬ್ಯಾಗ ತೆರೆದು ನೋಡಿದಾಗ ಐದು ಗ್ರಾಂ ಗೂ ಹೆಚ್ಚು ಚಿನ್ನದ ಬೋರಮಳದ ಸರ ಇರುವುದು ಗೊತ್ತಾಗಿದೆ.

ಒತ್ತಡ ಬದುಕಿನ ಮಧ್ಯದಲ್ಲೂ ಕೆಎಸಾರ್ಟಿಸಿ ನೌಕರರು ಪ್ರಯಾಣಿಕರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಒಳಗಾಗಿದೆ

ಚಿನ್ನದ ಸರ ವಾಪಸ್ ಪಡೆದ ಮಹಿಳೆ ಕೆಎಸಾರ್ಟಿಸಿ ನೌಕರರು, ಕಂಡಕ್ಟರ್, ಡ್ರೈವರ್ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ.