ಮರಕುಂಬಿ ಪ್ರಕರಣದ ಮುಂಚೂಣಿ ನಾಯಕ ನಿತ್ಯಾನಂದ ಸ್ವಾಮಿ ನಿಧನ ನುಡಿ ನಮನ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಮುರುಕುಂಬಿಯ ಅಸ್ಪೃಶ್ಯರ ಮೇಲಿನ ದೌರ್ಜನ ಖಂಡಿಸಿ ನಡೆದ ದಶಕಗಳ ಹೋರಾಟದ ಮುಂಚೂಣಿ ನಾಯಕರಾಗಿದ್ದ ಸಿಪಿಐಎಂ ಪಕ್ಷದ ನಿತ್ಯಾನಂದ ಸ್ವಾಮಿ ಅವರು ಭೂಮಿ ಚಳವಳಿ ಸೇರಿದಂತೆ ಗಂಗಾವತಿಯ ಪ್ರಮುಖ ಚಳುವಳಿಯಲ್ಲಿ ಹೋರಾಟದ ನೆನಪುಗಳು ಜೀವಂತವಾಗಿವೆ ಎಂದು ಸಿಐಟಿಯು ರಾಜ್ಯ ಮುಖಂಡ ಎಂ ನಿರುಪಾದಿ ಬೆಣಕಲ್ ಹೇಳಿದರು ಅವರು ಸಿಪಿಐಎಂ ಕಚೇರಿಯಲ್ಲಿ ನಿತ್ಯಾನಂದ ಸ್ವಾಮಿ ಅವರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿತ್ಯಾನಂದ ಸ್ವಾಮಿ ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರುಗಳಾದ ಎಂ.ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ,
ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಸೇರಿದಂತೆ ಅನೇಕರಿದ್ದರು

