Breaking News
ರಾಜಾ ಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರ ಅಭಿಮಾನಿಗಳ ಸಭೆ ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆಗೆ ನಿರ್ಧಾರ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಲು ಯೋಜನೆ

ಕಿಮ್ಮಿಂಧವಾಣಿ ಸುದ್ದಿ

 

ಗಂಗಾವತಿ: ಮಾಜಿ ಸಚಿವರು ಹಾಗೂ ಆನೆಗೊಂದಿ ರಾಜವಂಶಸ್ಥರಾದರಾಜಾ ಶ್ರೀರಂಗದೇವರಾಯಲು

 

ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಸತ್ಕರಿಸಲು ತೀರ್ಮಾನ ಕೈಗೊಳ್ಳಲಾಯಿತು.ರಾಜಾಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರಅಭಿಮಾನಿಗಳ ಸಭೆ ಕರೆದು ತೀರ್ಮಾನಿಸಲಾಗುತ್ತದೆ ಎಂದು ಆನೆಗೊಂದಿಯ ಹಿರಿಯ ಮುಖಂಡರಾದ ಹಂಪಿ ಹನುಮಂತಯ್ಯ ಹೇಳಿದರು.

 

ಸಾವಯವ ಕೃಷಿ ಕೇಂದ್ರದಲ್ಲಿ ರಾಜಾ ಅವರು ತಾಲೂಕಿನ ತಿರುಮಲಾಪೂರದ

 

ಶ್ರೀರಂಗದೇವರಾಯಲು ಪ್ರತಿಷ್ಠಾನ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದರು.

 

ಶ್ರೀರಂಗದೇವರಾಯಲು ಜನಸಾಮಾನ್ಯರ ರಾಜಕಾರಣಿಯಾಗಿದ್ದರು. ಅವರ ಹೆಸರಿನಲ್ಲಿ ಮತ್ತು ಅವರ ಕುಟುಂಬಸ್ಥರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜನೆ ಮಾಡಬೇಕು. ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಬೇಕು.

 

ವೈಚಾರಿಕ ಮತ್ತು ಜನೋಪಯೋಗಿ ಯೋಜನೆಗಳ ಕುರಿತು ಶ್ರೀರಂಗದೇವರಾಯಲು ಅವರಿಗಿದ್ದ ಕಳಕಳಿಯನ್ನು ಕಾರ್ಯಕ್ರಮ ರೂಪದಲ್ಲಿ

 

ಅನುಷ್ಠಾನ ಮಾಡಬೇಕು. ತುಂಗಭದ್ರಾ ಡ್ಯಾಂ ಕಾಲುವೆಗಳ ಕುರಿತು ಮತ್ತು ವಿಶೇಷವಾಗಿ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿಗಾಗಿ

 

ಮೂಲಕ ಶ್ರೀರಂಗದೇವರಾಯಲು ಇನ್ನೂ ಜನಮಾನಸದಲ್ಲಿದ್ದು ಅವರ ಕಾರ್ಯಗಳನ್ನು ಪ್ರತಿಷ್ಠಾನಗಳ ಮೂಲಕ ಅನುಷ್ಟಾನ ಮಾಡಲು ತೀರ್ಮಾನಿಸಾಗಿದೆ ಎಂದರು.

 

ಹಲವು ಭಾರಿ ಮುಖ್ಯಮಂತ್ರಿಗಳಿಗೆ ಅವರು ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಶಾಶ್ವತ ದುರಸ್ತಿ ಕಾರ್ಯಗಳಾಗಿದ್ದು ಅವರಿದ್ದ ನೀರಾವರಿ ಕಾಳಜಿ ಮತ್ತು ಬಡವರಿಗೆ ಮನೆಗಳ ನಿರ್ಮಾಣ ಮತ್ತು ಆನೆಗೊಂದಿ ಉತ್ಸವ ಹಾಗೂ ತಳವಾರ ಘಟ್ಟ ಸೇತುವೆ ಕನಸು ಹೀಗೆ ಹಲವು ಜನಪರವಾದ ಯೋಜನೆಗಳನ್ನು ಮತ್ತು ಗಂಗಾವತಿಯಲ್ಲಿ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಬೃಹತ್ ಬಸ್ ನಿಲ್ದಾಣ, 100 ಹಾಸಿಗೆ ಸರಕಾರಿ ಆಸ್ಪತ್ರೆ, ಮಿನಿವಿಧಾನಸೌಧ ಹೀಗೆ ಹಲವು ಕಾರ್ಯಗಳ

 

ಸಭೆಯಲ್ಲಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಟಿ.ಸತ್ಯನಾರಾಯಣ, ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ, ಕೆ.ನಿಂಗಜ್ಜ, ಮುಖಂಡರಾದ ಕೆ.. ತಿರುಕಪ್ಪ, ಟಿ.ಜಿ.ಬಾಬು, ವೈರಮೇಶ, ನರಸಿಂಹಲು. ಕೆ. ವೆಂಕಟೇಶ. ಇಲ್ಲೂರು ರಾಮಕೃಷ್ಣ, ಚಂದ್ರಣ್ಣ, ಯುವರಾಜ,ನಟ ವಿಷ್ಣುಜೋಶಿ ಆದಾಪೂರ, ಶಿವಚ್ಯು, ಬಾಳೆಕಾಯಿ ತಿಮ್ಮಪ್ಪ,ಕೆ.ಪವನಕುಮಾರ ಸೇರಿ ಆನೆಗೊಂದಿ ಭಾಗದ ಮುಖಂಡರಿದ್ದರು

ಮರಕುಂಬಿ ಪ್ರಕರಣದ ಮುಂಚೂಣಿ ನಾಯಕ ನಿತ್ಯಾನಂದ ಸ್ವಾಮಿ ನಿಧನ ನುಡಿ ನಮನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮುರುಕುಂಬಿಯ ಅಸ್ಪೃಶ್ಯರ ಮೇಲಿನ ದೌರ್ಜನ ಖಂಡಿಸಿ ನಡೆದ ದಶಕಗಳ ಹೋರಾಟದ ಮುಂಚೂಣಿ ನಾಯಕರಾಗಿದ್ದ ಸಿಪಿಐಎಂ ಪಕ್ಷದ ನಿತ್ಯಾನಂದ ಸ್ವಾಮಿ ಅವರು ಭೂಮಿ ಚಳವಳಿ ಸೇರಿದಂತೆ ಗಂಗಾವತಿಯ ಪ್ರಮುಖ ಚಳುವಳಿಯಲ್ಲಿ ಹೋರಾಟದ ನೆನಪುಗಳು ಜೀವಂತವಾಗಿವೆ ಎಂದು ಸಿಐಟಿಯು ರಾಜ್ಯ ಮುಖಂಡ ಎಂ ನಿರುಪಾದಿ ಬೆಣಕಲ್ ಹೇಳಿದರು ಅವರು ಸಿಪಿಐಎಂ ಕಚೇರಿಯಲ್ಲಿ ನಿತ್ಯಾನಂದ ಸ್ವಾಮಿ ಅವರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಿತ್ಯಾನಂದ ಸ್ವಾಮಿ ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.

ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರುಗಳಾದ ಎಂ.ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ,

ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಸೇರಿದಂತೆ ಅನೇಕರಿದ್ದರು