Breaking News
ಹೊಲದ ಹದ್ದುಬಸ್ತು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಗರಿಬೊಮ್ಮನಹಳ್ಳಿ ಸರ್ವೇಯರ್ ಲೋಕಾಯುಕ್ತರ ಬಲೆಗೆ!.

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಹೊಲದ ಹದ್ದುಬಸ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಭೂಮಾಪನಾ ಇಲಾಖೆಯ ಸರ್ವೇಯರ್ ಲಂಚದ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣ ಗುರುವಾರ ಪಟ್ಟಣದ ಭೂಮಾಪನಾ ಇಲಾಖೆಯ ಕಚೇರಿಯಲ್ಲಿಜರುಗಿದೆ.

ತಾಲೂಕಿನ ವರದಾಪುರ ಗ್ರಾಮದ ದೇವೇಂದ್ರಪ್ಪ ಎನ್ನುವವರು ತಮ್ಮ ಹೊಲದ ಹದ್ದುಬಸ್ತಿಗಾಗಿ

2024 ರಲ್ಲಿಯೇ ಸರ್ವೆಯರ್ ಕೊಟ್ರೇಶ್ ನಾಯಕ್ ಅವರಿಗೆ ದೇವೇಂದ್ರಪ್ಪ ಅವರ ಕಡತ ಬಂದಿತ್ತು. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕೊಟ್ರೇಶ್ ಅವರು ಹದ್ದುಬಸ್ತು ಮಾಡಿಕೊಡದೆ ವಿಳಂಬ ಮಾಡುತ್ತಿದ್ದರು. ಈಗಾಗಲೇ ಹತ್ತು ಸಾವಿರ ರೂ. ಲಂಚ ಹಣ ಪಡೆದಿದ್ದು, ಪುನ ಮೂವತ್ತು ಸಾವಿರ ರೂ. ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದರು.ಈ ಕುರಿತು ದೇವೇಂದ್ರಪ್ಪ ವಿಜಯನಗರ ಜಿಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಮೇತ ಕೊಟ್ರೇಶ ಅವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಸಚಿನ್ ಎಸ್ ಛಲವಾದಿ, ಪೊಲೀಸ್ ನಿರೀಕ್ಷಕ ರಾಜೇಶ ಎಸ್. ಲಮಾಣಿ, ಇನ್ಸ್ಪೆಕ್ಟರ ಅಮರೇಶ್ ಹುಬ್ಳಿ, ಸಿಬ್ಬಂದಿಯವರಾದ . ಸುರೇಶ, ಶ್ರೀನಿವಾಸ, ರೇಣುಕಪ್ಪ. ಕುಮಾರ ನಾಯ್ಕ್ ಚನ್ನಬಸಪ್ಪ ಮತ್ತು ಕೃಷ್ಣ ಇದ್ದರು.