Breaking News
ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬೆನ್ನಲ್ಲೇ ಬುಗಿಲೆದ್ದ ಭಿನ್ನಮತ!!

 

*ನಾಗರಾಜ ನಂದಾಪೂರಗೆ ಅನ್ಸಾರಿ ಸಾಹೇಬರು ಶಿಫಾರಸ್ಸು ಮಾಡಿಲ್ಲ.

*ಗಂಗಾವತಿಯಲ್ಲಿ ಪಕ್ಷ ದ್ರೋಹಿಗಳಿಗೆ ಆದ್ಯತೆ: ಆರೋಪ

*ಪಕ್ಷದ ಸಂಘಟನೆ, ಸದಸ್ಯತ್ವ ಇತರೆ ಕಾರ್ಯಗಳನ್ನು ಅನ್ಸಾರಿ ಸಾಹೇಬರ ಅನುಮತಿ ಕಡ್ಡಾಯ!

*ಪುನೀತ್ ಎನ್ನುವ ವ್ಯಕ್ತಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬಗ್ಗೆ ಆಕ್ಷೇಪ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನಾಗರಾಜ್ ನಂದಾಪುರ ಅವರನ್ನು ನೇಮಕ ಮಾಡಲಾಗಿದ್ದು ಇವರ ನೇಮಕವನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಾಹೇಬರು ಶಿಫಾರಸು ಮಾಡಿಲ್ಲ ಆದ್ದರಿಂದ ನಾಗರಾಜ ನಂದಾಪುರ ಅವರು ಅನ್ಸಾರಿ ಸಾಹೇಬರ ಬಣ ಅಲ್ಲ ಎಂದು ಅನ್ಸಾರಿ ಬಣದ ಕಾರ್ಯಕರ್ತ ಪುನೀತ್ ಎನ್ನುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅನ್ಸಾರಿ ಬಣದ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ನಾಗರಾಜ್ ನಂದಾಪುರವರು 2018ರಲ್ಲಿ ಅನುಸರಿ ಸಾಹೇಬರ ಬಣದಲ್ಲಿ ಗುರುತಿಸಿಕೊಂಡು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಅನುಭವಿಸಿ ನಂತರ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ ಇವರಂತೆ ಕೊಪ್ಪಳ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಆರೆಸ್ಸೆಸ್ ಬೆಂಬಲಿಸುವವರಿದ್ದು ಗಂಗಾವತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಇವರನ್ನು ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಸಾಕ್ಷಿ ಸಮೇತ ದೂರು ನೀಡಿದರೂ ಇದುವರೆಗೂ ಶಿಸ್ತು ಕ್ರಮ ಜರುಗಿಲ್ಲ, ಆದರೆ ದಾವಣಗೆರೆಯ ಉಪಚುನಾವಣೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂದು ಕೆಲವರನ್ನು ಪಕ್ಷದಿಂದ ಹೊರಹಾಕಲಾಗಿದೆ. ದಾವಣಗೆರೆಯಲ್ಲಿ ಒಂದು ನ್ಯಾಯ ಗಂಗಾವತಿಯಲ್ಲಿ ಮತ್ತೊಂದು ನ್ಯಾಯವಾಗಿದೆ.

ಆದ್ದರಿಂದ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆ ಪಕ್ಷದ ಸದಸ್ಯತ್ವ ಅಭಿಯಾನ ಪಕ್ಷದ ಸಭೆ ಸಮಾರಂಭಕ್ಕೆ ಅನ್ಸಾರಿ ಬಣದ ಕಾಂಗ್ರೆಸ್ ಕಾರ್ಯಕರ್ತರು ತೆರಳಬೇಕಾದರೆ ಅನ್ಸಾರಿ ಸಾಹೇಬರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪುನೀತ್ ಸೂಚನೆ ನೀಡಿದ್ದು ಈ ಸಂದೇಶವನ್ನು ಕಾಂಗ್ರೆಸ್ ವಾಟ್ಸಪ್ ಗ್ರೂಪ್ ಸೇರಿದಂತೆ ಗಂಗಾವತಿಯ ಮತ್ತು ಕೊಪ್ಪಳದ ಪ್ರಮುಖ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಲಾಗಿದೆ.