Breaking News
ವೆಂಕಟಗಿರಿ ಕೆಪಿಎಸ್ ಆದರ್ಶ ಶಾಲೆ ನಿರ್ಮಾಣಕ್ಕೆ ಗಂಜಿ ದಂಪತಿಗಳಿಂದ ಭೂಮಿದಾನ!

 

*ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಸೇವೆ ದೊರಕಲು ದಂಪತಿಗಳ ದಾನ ಸಾರ್ಥಕ.

*1.13 ಎಕರೆ ಭೂಮಿ ದಾನ,ರಾಜ್ಯಪಾಲ ಹೆಸರಿನಲ್ಲಿ ನೋಂದಾವಣೆ.

*ತಾಲೂಕು ಆಡಳಿತದಿಂದ ಗಂಜಿ ದಂಪತಿಗಳಿಗೆ ಸನ್ಮಾನ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮಕ್ಕೆ ನೂತನವಾಗಿ ಮಂಜೂರಾಗಿರುವ ಕೆಪಿಎಸ್ ಆದರ್ಶ ಸರ್ಕಾರಿ ಶಾಲೆಗೆ ವೆಂಕಟಗಿರಿ ಗ್ರಾಮದ ಗಂಜಿ ಮನೆತನದ ದಂಪತಿಗಳಾದ ಈರಮ್ಮ ಹಾಗೂ ಹನುಮಂತಪ್ಪ ಗಂಜಿ ಇವರು ತಮ್ಮ ಸ್ವಂತ ಮಾಲೀಕತ್ವದ 1.13 ಎಕರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಶಾಲೆಯ ನಿರ್ಮಾಣಕ್ಕೆ ಧಾನವಾಗಿ ನೀಡಿದ್ದಾರೆ ಗುರುವಾರ ತಹಸೀಲ್ ಕಚೇರಿಯಲ್ಲಿ ರಾಜ್ಯಪಾಲರ ಹೆಸರಿಗೆ ಭೂಮಿಯನ್ನು ದಂಪತಿಗಳು ಆಗಮಿಸಿ, ನೋಂದಾವಣೆ ಮಾಡಿಸಿದರು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಭೂಮಿಯನ್ನು ದಾನ ನೀಡಿದ ಗಂಜಿ ದಂಪತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಹಾಗೂ ವೆಂಕಟಗಿರಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟಗಿರಿ ಗ್ರಾಮದ ಹಿರಿಯರು ಹಾಗೂ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಅಮರೇಗೌಡ ಅವರು ಮಾತನಾಡಿ ಸರ್ಕಾರ ವೆಂಕಟಗಿರಿ ಗ್ರಾಮಕ್ಕೆ ಕೆಪಿಎಸ್ ಆದರ್ಶ ಶಾಲೆಯನ್ನು ಮಂಜೂರಿ ಮಾಡಿದ್ದು ಜಾಗದ ಕೊರತೆಯಿಂದ ದಾನಿಗಳಾದ ಗಂಜಿ ಹನುಮಂತಪ್ಪ ಹಾಗೂ ಈರಮ್ಮ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 1. 13 ಎಕರೆ ಭೂಮಿಯನ್ನು ಶಾಲೆ ನಿರ್ಮಾಣ ಮಾಡಲು ದಾನವಾಗಿ ನೀಡುವುದಾಗಿ ತಿಳಿಸಿ ಮಹಾನ್ ಕಾರ್ಯ ಮಾಡಿದ್ದಾರೆ. ಅವರ ಕುಟುಂಬ ಶಾಶ್ವತವಾಗಿ ಶೈಕ್ಷಣಿಕ ಸೇವೆ ನೀಡುವ ಕುಟುಂಬವಾಗಿ ಗ್ರಾಮದಲ್ಲಿ ಮಾದರಿಯಾಗಲಿದೆ. ಇಂತಹ ಮಾದರಿಯ ದಾನಿಗಳು ಪ್ರತಿ ಗ್ರಾಮದಲ್ಲಿ ಇದ್ದರೆ ಶೈಕ್ಷಣಿಕವಾಗಿ ಬಡ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳು ಮುಂದುವರೆಯಲು ಸಾಧ್ಯವಾಗುತ್ತದೆ. ಹನುಮಂತಪ್ಪ ಹಾಗೂ ಈರಮ್ಮನವರ ದಾನ ಶ್ರೇಷ್ಠವಾದ ದಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಯು ವಸಂತಕುಮಾರಿ, ಬಿ ಇ ಓ ನಟೇಶ್,ದೈಹಿಕ ನಿರ್ದೇಶಕಿ ಸರಸ್ವತಿ ಜೂಡಿ, ಮುಖ್ಯ ಶಿಕ್ಷಕ ಲಕ್ಷ್ಮಣ ರಾಠೋಡ್ ಶಿಕ್ಷಕರಾದ ಬಸವರಾಜ್ ಬಿರಾದಾರ್,ಕಂದಾಯ ನಿರೀಕ್ಷಕ ಮಹೇಶ ದಲಾಲ್,

 

ಬಿಆರ್ ಸಿ ಮಂಜುನಾಥ ವಸ್ತ್ರದ್, ಹನುಮಂತಪ್ಪ ಗಂಜಿ,ಈರಮ್ಮ ಗಂಜಿ, ಮದ್ದಾನೆಪ್ಪ ಗಂಜಿ, ದಾನಿಗಳ ಸುಪುತ್ರರಾದ ಪಂಪಾಪತಿ, ನಿಂಗಪ್ಪ ,ರಾಘವೇಂದ್ರ ಭೋವಿ ಶಿಕ್ಷಣ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬೆನ್ನಲ್ಲೇ ಬುಗಿಲೆದ್ದ ಭಿನ್ನಮತ!!

 

*ನಾಗರಾಜ ನಂದಾಪೂರಗೆ ಅನ್ಸಾರಿ ಸಾಹೇಬರು ಶಿಫಾರಸ್ಸು ಮಾಡಿಲ್ಲ.

*ಗಂಗಾವತಿಯಲ್ಲಿ ಪಕ್ಷ ದ್ರೋಹಿಗಳಿಗೆ ಆದ್ಯತೆ: ಆರೋಪ

*ಪಕ್ಷದ ಸಂಘಟನೆ, ಸದಸ್ಯತ್ವ ಇತರೆ ಕಾರ್ಯಗಳನ್ನು ಅನ್ಸಾರಿ ಸಾಹೇಬರ ಅನುಮತಿ ಕಡ್ಡಾಯ!

*ಪುನೀತ್ ಎನ್ನುವ ವ್ಯಕ್ತಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಬಗ್ಗೆ ಆಕ್ಷೇಪ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಗಂಗಾವತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನಾಗರಾಜ್ ನಂದಾಪುರ ಅವರನ್ನು ನೇಮಕ ಮಾಡಲಾಗಿದ್ದು ಇವರ ನೇಮಕವನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಾಹೇಬರು ಶಿಫಾರಸು ಮಾಡಿಲ್ಲ ಆದ್ದರಿಂದ ನಾಗರಾಜ ನಂದಾಪುರ ಅವರು ಅನ್ಸಾರಿ ಸಾಹೇಬರ ಬಣ ಅಲ್ಲ ಎಂದು ಅನ್ಸಾರಿ ಬಣದ ಕಾರ್ಯಕರ್ತ ಪುನೀತ್ ಎನ್ನುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅನ್ಸಾರಿ ಬಣದ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ನಾಗರಾಜ್ ನಂದಾಪುರವರು 2018ರಲ್ಲಿ ಅನುಸರಿ ಸಾಹೇಬರ ಬಣದಲ್ಲಿ ಗುರುತಿಸಿಕೊಂಡು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಅನುಭವಿಸಿ ನಂತರ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ ಇವರಂತೆ ಕೊಪ್ಪಳ ಜಿಲ್ಲೆಯಲ್ಲಿ ಅನೇಕರು ಬಿಜೆಪಿ ಆರೆಸ್ಸೆಸ್ ಬೆಂಬಲಿಸುವವರಿದ್ದು ಗಂಗಾವತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಇವರನ್ನು ಬೆಂಬಲಿಸುವ ಮೂಲಕ ಪಕ್ಷದ್ರೋಹದ ಕೆಲಸ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗೆ ಸಾಕ್ಷಿ ಸಮೇತ ದೂರು ನೀಡಿದರೂ ಇದುವರೆಗೂ ಶಿಸ್ತು ಕ್ರಮ ಜರುಗಿಲ್ಲ, ಆದರೆ ದಾವಣಗೆರೆಯ ಉಪಚುನಾವಣೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂದು ಕೆಲವರನ್ನು ಪಕ್ಷದಿಂದ ಹೊರಹಾಕಲಾಗಿದೆ. ದಾವಣಗೆರೆಯಲ್ಲಿ ಒಂದು ನ್ಯಾಯ ಗಂಗಾವತಿಯಲ್ಲಿ ಮತ್ತೊಂದು ನ್ಯಾಯವಾಗಿದೆ.

ಆದ್ದರಿಂದ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಂಘಟನೆ ಪಕ್ಷದ ಸದಸ್ಯತ್ವ ಅಭಿಯಾನ ಪಕ್ಷದ ಸಭೆ ಸಮಾರಂಭಕ್ಕೆ ಅನ್ಸಾರಿ ಬಣದ ಕಾಂಗ್ರೆಸ್ ಕಾರ್ಯಕರ್ತರು ತೆರಳಬೇಕಾದರೆ ಅನ್ಸಾರಿ ಸಾಹೇಬರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕೆಂದು ಪುನೀತ್ ಸೂಚನೆ ನೀಡಿದ್ದು ಈ ಸಂದೇಶವನ್ನು ಕಾಂಗ್ರೆಸ್ ವಾಟ್ಸಪ್ ಗ್ರೂಪ್ ಸೇರಿದಂತೆ ಗಂಗಾವತಿಯ ಮತ್ತು ಕೊಪ್ಪಳದ ಪ್ರಮುಖ ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡಲಾಗಿದೆ.

 

ಹೊಲದ ಹದ್ದುಬಸ್ತು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಗರಿಬೊಮ್ಮನಹಳ್ಳಿ ಸರ್ವೇಯರ್ ಲೋಕಾಯುಕ್ತರ ಬಲೆಗೆ!.

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಹೊಲದ ಹದ್ದುಬಸ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಭೂಮಾಪನಾ ಇಲಾಖೆಯ ಸರ್ವೇಯರ್ ಲಂಚದ ಸಮೇತ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಕರಣ ಗುರುವಾರ ಪಟ್ಟಣದ ಭೂಮಾಪನಾ ಇಲಾಖೆಯ ಕಚೇರಿಯಲ್ಲಿಜರುಗಿದೆ.

ತಾಲೂಕಿನ ವರದಾಪುರ ಗ್ರಾಮದ ದೇವೇಂದ್ರಪ್ಪ ಎನ್ನುವವರು ತಮ್ಮ ಹೊಲದ ಹದ್ದುಬಸ್ತಿಗಾಗಿ

2024 ರಲ್ಲಿಯೇ ಸರ್ವೆಯರ್ ಕೊಟ್ರೇಶ್ ನಾಯಕ್ ಅವರಿಗೆ ದೇವೇಂದ್ರಪ್ಪ ಅವರ ಕಡತ ಬಂದಿತ್ತು. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಕೊಟ್ರೇಶ್ ಅವರು ಹದ್ದುಬಸ್ತು ಮಾಡಿಕೊಡದೆ ವಿಳಂಬ ಮಾಡುತ್ತಿದ್ದರು. ಈಗಾಗಲೇ ಹತ್ತು ಸಾವಿರ ರೂ. ಲಂಚ ಹಣ ಪಡೆದಿದ್ದು, ಪುನ ಮೂವತ್ತು ಸಾವಿರ ರೂ. ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದರು.ಈ ಕುರಿತು ದೇವೇಂದ್ರಪ್ಪ ವಿಜಯನಗರ ಜಿಲ್ಲಾ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಲಂಚದ ಹಣದ ಸಮೇತ ಕೊಟ್ರೇಶ ಅವರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಸಚಿನ್ ಎಸ್ ಛಲವಾದಿ, ಪೊಲೀಸ್ ನಿರೀಕ್ಷಕ ರಾಜೇಶ ಎಸ್. ಲಮಾಣಿ, ಇನ್ಸ್ಪೆಕ್ಟರ ಅಮರೇಶ್ ಹುಬ್ಳಿ, ಸಿಬ್ಬಂದಿಯವರಾದ . ಸುರೇಶ, ಶ್ರೀನಿವಾಸ, ರೇಣುಕಪ್ಪ. ಕುಮಾರ ನಾಯ್ಕ್ ಚನ್ನಬಸಪ್ಪ ಮತ್ತು ಕೃಷ್ಣ ಇದ್ದರು.