Breaking News
ವೆಂಕಟಗಿರಿ ಕೆಪಿಎಸ್ ಆದರ್ಶ ಶಾಲೆ ನಿರ್ಮಾಣಕ್ಕೆ ಗಂಜಿ ದಂಪತಿಗಳಿಂದ ಭೂಮಿದಾನ!

 

*ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಸೇವೆ ದೊರಕಲು ದಂಪತಿಗಳ ದಾನ ಸಾರ್ಥಕ.

*1.13 ಎಕರೆ ಭೂಮಿ ದಾನ,ರಾಜ್ಯಪಾಲ ಹೆಸರಿನಲ್ಲಿ ನೋಂದಾವಣೆ.

*ತಾಲೂಕು ಆಡಳಿತದಿಂದ ಗಂಜಿ ದಂಪತಿಗಳಿಗೆ ಸನ್ಮಾನ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮಕ್ಕೆ ನೂತನವಾಗಿ ಮಂಜೂರಾಗಿರುವ ಕೆಪಿಎಸ್ ಆದರ್ಶ ಸರ್ಕಾರಿ ಶಾಲೆಗೆ ವೆಂಕಟಗಿರಿ ಗ್ರಾಮದ ಗಂಜಿ ಮನೆತನದ ದಂಪತಿಗಳಾದ ಈರಮ್ಮ ಹಾಗೂ ಹನುಮಂತಪ್ಪ ಗಂಜಿ ಇವರು ತಮ್ಮ ಸ್ವಂತ ಮಾಲೀಕತ್ವದ 1.13 ಎಕರೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಶಾಲೆಯ ನಿರ್ಮಾಣಕ್ಕೆ ಧಾನವಾಗಿ ನೀಡಿದ್ದಾರೆ ಗುರುವಾರ ತಹಸೀಲ್ ಕಚೇರಿಯಲ್ಲಿ ರಾಜ್ಯಪಾಲರ ಹೆಸರಿಗೆ ಭೂಮಿಯನ್ನು ದಂಪತಿಗಳು ಆಗಮಿಸಿ, ನೋಂದಾವಣೆ ಮಾಡಿಸಿದರು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಭೂಮಿಯನ್ನು ದಾನ ನೀಡಿದ ಗಂಜಿ ದಂಪತಿಗಳಿಗೆ ತಾಲೂಕು ಆಡಳಿತದ ವತಿಯಿಂದ ಹಾಗೂ ವೆಂಕಟಗಿರಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟಗಿರಿ ಗ್ರಾಮದ ಹಿರಿಯರು ಹಾಗೂ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಅಮರೇಗೌಡ ಅವರು ಮಾತನಾಡಿ ಸರ್ಕಾರ ವೆಂಕಟಗಿರಿ ಗ್ರಾಮಕ್ಕೆ ಕೆಪಿಎಸ್ ಆದರ್ಶ ಶಾಲೆಯನ್ನು ಮಂಜೂರಿ ಮಾಡಿದ್ದು ಜಾಗದ ಕೊರತೆಯಿಂದ ದಾನಿಗಳಾದ ಗಂಜಿ ಹನುಮಂತಪ್ಪ ಹಾಗೂ ಈರಮ್ಮ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 1. 13 ಎಕರೆ ಭೂಮಿಯನ್ನು ಶಾಲೆ ನಿರ್ಮಾಣ ಮಾಡಲು ದಾನವಾಗಿ ನೀಡುವುದಾಗಿ ತಿಳಿಸಿ ಮಹಾನ್ ಕಾರ್ಯ ಮಾಡಿದ್ದಾರೆ. ಅವರ ಕುಟುಂಬ ಶಾಶ್ವತವಾಗಿ ಶೈಕ್ಷಣಿಕ ಸೇವೆ ನೀಡುವ ಕುಟುಂಬವಾಗಿ ಗ್ರಾಮದಲ್ಲಿ ಮಾದರಿಯಾಗಲಿದೆ. ಇಂತಹ ಮಾದರಿಯ ದಾನಿಗಳು ಪ್ರತಿ ಗ್ರಾಮದಲ್ಲಿ ಇದ್ದರೆ ಶೈಕ್ಷಣಿಕವಾಗಿ ಬಡ ಮಕ್ಕಳು ಹಾಗೂ ಗ್ರಾಮೀಣ ಭಾಗದ ಮಕ್ಕಳು ಮುಂದುವರೆಯಲು ಸಾಧ್ಯವಾಗುತ್ತದೆ. ಹನುಮಂತಪ್ಪ ಹಾಗೂ ಈರಮ್ಮನವರ ದಾನ ಶ್ರೇಷ್ಠವಾದ ದಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಯು ವಸಂತಕುಮಾರಿ, ಬಿ ಇ ಓ ನಟೇಶ್,ದೈಹಿಕ ನಿರ್ದೇಶಕಿ ಸರಸ್ವತಿ ಜೂಡಿ, ಮುಖ್ಯ ಶಿಕ್ಷಕ ಲಕ್ಷ್ಮಣ ರಾಠೋಡ್ ಶಿಕ್ಷಕರಾದ ಬಸವರಾಜ್ ಬಿರಾದಾರ್,ಕಂದಾಯ ನಿರೀಕ್ಷಕ ಮಹೇಶ ದಲಾಲ್,

 

ಬಿಆರ್ ಸಿ ಮಂಜುನಾಥ ವಸ್ತ್ರದ್, ಹನುಮಂತಪ್ಪ ಗಂಜಿ,ಈರಮ್ಮ ಗಂಜಿ, ಮದ್ದಾನೆಪ್ಪ ಗಂಜಿ, ದಾನಿಗಳ ಸುಪುತ್ರರಾದ ಪಂಪಾಪತಿ, ನಿಂಗಪ್ಪ ,ರಾಘವೇಂದ್ರ ಭೋವಿ ಶಿಕ್ಷಣ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.