Breaking News
ಪೌರ ಸೇವಾ ನೌಕರರ ಸಮಸ್ಯೆ ಹಂತ ಹಂತವಾಗಿ ಪರಿಹಾರಕ್ಕೆ ಯತ್ನ:ಶೈಲಾ ಕೆ.ಡಿ. * ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳ ಪದಗ್ರಹಣ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಪೌರ ಸೇವಾ ನೌಕರರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷೆ ಶೈಲಾ ಕೆ.ಡಿ. ಹೇಳಿದರು. ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಪೌರ ಸೇವಾ ನೌಕರರ ರಾಜ್ಯಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.,

 

ಪೌರ ಸೇವಾ ನೌಕರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಅರಿವು ನನಗಿದೆ. ಎಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಹಂತ ಹಂತವಾಗಿ ಅವುಗಳನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು

 

ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ ನಗರ, ಪಟ್ಟಣಗಳನ್ನು ಸ್ವಚ್ಛವಾಗಿಟ್ಟು ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆದು, ಸಾಮಾಜದ ಆರೋಗ್ಯಕ್ಕೆ ಅಡಿಪಾಯವಾಗಿದ್ದ ಪೌರಕಾರ್ಮಿಕರು ‘ನೈರ್ಮಲ್ಯ ಸೈನ್ನಿಕ’ರಾಗಿದ್ದಾರೆ ಎಂದರು.

 

ಪೌರ ಕಾರ್ಮಿಕರು ಸಮಾಜದ ಸ್ವಾಸ್ಯ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಅನನ್ಯ ಮತ್ತು ಅವಶ್ಯಕ ಕೊಡುಗೆ ನೀಡುತ್ತಾರೆ. ಪ್ರತಿದಿನ ಬೆಳಿಗ್ಗೆ ಮಳೆ,ಚಳಿ, ಬಿಸಲೆನ್ನದೇ ಸ್ವಚ್ಛತೆ, ತ್ಯಾಜ್ಯನಿರ್ವಣೆ ಮತ್ತು ರಸ್ತೆಗಳ ನಿರ್ವಹಣೆ ಮೂಲಕ ಹರಡುವ ರೋಗಗಳನ್ನು ತಡೆಗಟ್ಟಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುತ್ತಾರೆ. ಕೋವಿಡ್ ಸಮಯದಲ್ಲಿ ಇವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸಾರ್ವಜನಿಕರ ಪ್ರಾಣ ಉಳಿಸಿದ್ದಾರೆ. ಇವರ ಸೇವೆ ಸಮಾಜಕ್ಕೆ ಕನ್ನಡಿಯಾಗಿದೆ. ಇವರ ಕುಟುಂಬಗಳ ಕಲ್ಯಾಣಕ್ಕಾಗಿ ಸರ್ಕಾರ ಇವರೆಲ್ಲಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಈಡೇರಿಸಬೇಕಾಗಿದೆ ಎಂದರು.

 

ಕಾರ್ಯಕ್ರಮದಲ್ಲಿ ಗಜಾನನ ನಾಯಕ, ಆರೋಗ್ಯ ನೀರಿಕ್ಷಕ ನಾಗರಾಜ್, ವ್ಯವಸ್ತಾಪಕ ಷಣ್ಮುಖ, ತಾಲೂಕ ಅದ್ಯಕ್ಷ ವಹೀದ್ ಖಾನ್, ರಮೇಶ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಗಡಪ್ಪ ಹುಲಿಹೈದರ್, ಜಂಟಿ ಕಾರ್ಯದರ್ಶಿ ಲಾಲಸಾಬ್ ಎಂ. ಮನಿಯಾರ್, ಮಹಿಬೂಬು ಪಾಷಾ, ರಾಮಣ್ಣ ಕಳ್ಳಿಮನಿ, ಮತ್ತು ಸಂಘದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

ಮಾ.03 ರಂದು ಚಂದ್ರ ಗ್ರಹಣ: ಅರ್ಧ ದಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಗುಡಿ ಬಂದ್

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ಚಂದ್ರ ಗ್ರಹಣದ ಪ್ರಯುಕ್ತ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕೊಪ್ಪಳ ಜಿಲ್ಲೆಗೆ ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಹುಣ್ಣಿಮೆ ದಿನವಾದ ಮಾ.03 ರಂದು ಮಧ್ಯಾಹ್ನ 12 ಗಂಟೆಯೊಳಗೆ ಮಾತ್ರ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶ್ರೀ ವಿಶ್ವಾವಸು ನಾಮ ಸಂವತ್ಸರ ಪಾಲ್ಗುಣ ಶುಕ್ಲ ಹುಣ್ಣಿಮೆ ಮಾ. 3ರ ಮಂಗಳವಾರ ಪೂರ್ವ ನಕ್ಷತ್ರ ಸಿಂಹರಾಶಿ ಗ್ರದ್ಯೋದಿತ ಚಂದ್ರ ಗ್ರಹಣ ಇರುವುದರಿಂದ ಅಂದು ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಭಕ್ತರಿಗೆ ಶ್ರೀ ಹುಲಿಗೆಮ್ಮ ದೇವಿಯವರ ದರ್ಶನದ ವ್ಯವಸ್ಥೆ ಇರುತ್ತದೆ. ನಂತರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಹಣ ಆಚರಣೆ ಇರುವುದರಿಂದ ದೇವರ ದರ್ಶನ ಇರುವುದಿಲ್ಲ. ಗ್ರಹಣ ಮೋಕ್ಷವಾದ ಅಂದು ಸಂಜೆ 7 ಗಂಟೆಯ ನಂತರ ದೇವಾಲಯದ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ನೆರವೇರುತ್ತವೆ ಎಂದು ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ನವ ಬೃಂದಾವನ ಗಡ್ಡಿಯ ಯತಿವರ್ಯರ ದರ್ಶನಕ್ಕೆ ಆಗಮಿಸಿದ ನವರಸ ನಾಯಕ,ರಾಜ್ಯಸಭಾ ಸದಸ್ಯ ಜಗ್ಗೇಶ್.

*ನಟ ಅಪ್ಪಟ ರಾಯರ ಭಕ್ತ

*ರಾಯರನ್ನು ನಂಬಿದರೆ ಕಷ್ಟಗಳು ದೂರ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕನ್ನಡ ಚಿತ್ರರಂಗದ ನವರಸ ನಾಯಕ ಎಂದು ಖ್ಯಾತಿ ಪಡೆದ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವೃಂದಾವನಗಡ್ಡಿಗೆ ಆಗಮಿಸಿ ಯತಿವರ್ಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾದೈವ ಅವರು, ನಾನು ಚಿಕ್ಕಂದಿನಿಂದಲೂ ರಾಯರ ಭಕ್ತನಾಗಿದ್ದು ನಬೃಂದಾವನ ಗಡ್ಡಿಯಲ್ಲಿರುವ 9 ಯತಿಗಳ ದರ್ಶನ ಮಾಡುವ ಬಯಕೆ ಬಹಳ ವರ್ಷಗಳಿಂದ ಇದ್ದು,ಇಂದು ಆಸೆ ಈಡೇರಿದೆ ಪ್ರತಿಯೊಬ್ಬರೂ ಭಕ್ತಿಯ ಹಾದಿಯಲ್ಲಿ ನಡೆದು ದೇವರ ಸ್ಮರಣೆಯ ಮೂಲಕ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಧರ್ಮದ ದಾರಿ ಬಿಟ್ಟು ನಡೆದರೆ ದೇವರು ಮೆಚ್ಚುವುದಿಲ್ಲ ನವ ಬೃಂದಾವನ ಗಡ್ಡಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು 9 ಯತಿಗಳು ಇಲ್ಲಿ ಲೀನರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ ಇಲ್ಲಿಗೆ ಬಂದಿದ್ದು ಬಹಳ ಸಂತೋಷವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಸದ ಎನ್. ಪದ್ಮನಾಭರಾಜು, ಗೋಪಿನಾಥ್, ಹೆಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರದೀಪ್ ಹೊಸಪೇಟೆ ಇತರರಿದ್ದರು.

ಅಪ್ರಾಪ್ತೆಗೆ ಹೆರಿಗೆ, ಪೋಕ್ಸೋ ಕೇಸ್ ದಾಖಲು ಸೋದರ ಮಾವನಿಂದ ಕೃತ್ಯ.

ಅಪ್ರಾಪ್ತೆಗೆ ಹೆದರಿಸಿ ಆತ್ಯಾಚಾರ,ಬೇರೆಯವರಿಗೆ ಹೇಳದಂತೆ ತಾಕೀತು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನ ಗ್ರಾಮೀಣ ಭಾಗದ ಅಲ್ಪಸಂಖ್ಯಾತರ ಕಾಲೇಜಿನ

ವಸತಿ ನಿಲಯದಲ್ಲಿ ಅಪ್ರಾಪ್ತೆ ಹೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ

ಬಾಧಿತೆಯ ತಾಯಿ ಅಣ್ಣ ಅನ್ವರಬಾಷಾ ಇವರ ಪುತ್ರ ಅಲ್ಪಪಬಾಷಾ (21) ಈತನು ಅಪ್ರಾಪ್ತೆಯನ್ನು ಪುಸಲಾಯಿಸಿ ಕಳೆದ ಅಕ್ಟೋಬರ್ ತಿಂಗಳಿಂದ ಲೈಂಗಿಕ ದೌರ್ಜನ್ಯವೆಸಗಿದ್ದು

ಲೈಂಗೀಕ ದೌರ್ಜನ್ಯವೆಸಗಿರುವ ಕುರಿತು ದೂರಿನಲ್ಲಿ ತಿಳಿಸಲಾಗಿದೆ.

ಫೆಬ್ರುವರಿ 19 ನೇ ತಾರೀಖಿನಂದು ರಾತ್ರಿ ಜಾಸ್ತಿ ರಕ್ತ ಸ್ರಾವವಾಗಿದ್ದು ಹಾಸ್ಟೆಲ್ ವಾರ್ಡನ್ ಅವರಿಗೆ ತಿಳಿಸಿದಾಗ ಬಾಲಕಿಯ ತಂದೆ-ತಾಯಿಯವರಿಗೆ ಫೋನ್ ಮಾಡಿ ಕರೆಯಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರ ಜತೆ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೃತ್ಯವೆಸಗಿದ ಅಲ್ಲಪಾಬಾಷಾ ಹೊಸ ಮಲಪನಗುಡಿ ಈತನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

ಶ್ರೀರಾಘವೇಂದ್ರಸ್ವಾಮಿಗಳನ್ನು ಸ್ಮರಿಸಿದರೆ ಕಷ್ಟಗಳು ಪರಿಹಾರ: ವಿಜಯೀಂದ್ರ ಆಚಾರ್ಯಶ್ರೀ

ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತೋತ್ಸವ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಕಲಿಯುಗದ ಕಾಮಧೇನು ಭಕ್ತ ರಕ್ಷಕರಾದ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳನ್ನು ಸ್ಮರಣೆ ಮಾತ್ರದಿಂದ ಸಂಕಷ್ಟಗಳು ದೂರವಾಗುತ್ತವೆ ಎಂದು ಮೈಸೂರಿನ ಡಾ. ಬೆ.ನಾ..ವಿಜಯೀಂದ್ರ ಆಚಾರ್ಯ ಹೇಳಿದರು.

ಅವರು ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಧ್ವ ಸಂಘದ ವತಿಯಿಂದ ಏರ್ಪಡಿಸಿದ್ದ ಶ್ರೀರಾಘವೇಂದ್ರಸ್ವಾಮಿಗಳ 431ನೇ ವರ್ಧಂತಿ ಮಹೋತ್ಸವ ಹಾಗು ಶ್ರೀ ಮಧ್ ಭಾಗವತ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮಹಿಮೆ ಪ್ರವಚನದ ಸಮಾರೋಪದಲ್ಲಿ ಮಾತನಾಡಿದರು. ರಾಘವೇಂದ್ರಸ್ವಾಮಿಗಳು ಇಂದಿಗೆ ಜನ್ಮ ತಾಳಿ 431 ವರ್ಷಗಳು ಕಳೆದವು. ಅವರ ಪವಾಡಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಗುರು ಸಾರ್ವಭೌಮರು ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎನಿಸಿಕೊಂಡಿದ್ದಾರೆ.ಭಕ್ತರ ಆಶೋತ್ತರಗಳನ್ನು ಈಡೇರಿಸುವ ಮಹಾಮಹಿಮರಾಗಿದ್ದಾರೆ. ಮಂತ್ರಾಲಕ್ಕೆ ಹೋಗಿ ರಾಘವೇಂದ್ರರನ್ನು ಯಾರು ಸ್ಮರಣೆ ಮಾಡುತ್ತಾರೆ ಅಂತವರಿಗೆ ಪರಿಹಾರ, ಕಷ್ಟ ನಾಶ, ಹಾಗು ಆರ್ಥಿಕವಾಗಿ ಪ್ರಬಲರಾಗಲು ಆಶೀರ್ವಾದ ಮಾಡುವ ಶಕ್ತಿ ಶ್ರೀಗಳಲ್ಲಿದೆ ಎಂದರು.

ಗಂಗಾವತಿಯಲ್ಲಿರುವ ಭಕ್ತರು ಧಾರ್ಮಿಕತೆ ಹೊಂದಿದವರಾಗಿದ್ದಾರೆ. ಗಂಗಾವತಿಯಲ್ಲಿರುವ ರಾಘವೇಂದ್ರಸ್ವಾಮಿಗಳ ಮಠ ಎರಡನೇ ಮಂತ್ರಾಲಯ ಎನಿಸಿಕೊಂಡಿದೆ. ಇದಕ್ಕೆ ಸಾಕ್ಷಿ ಇಲ್ಲಿ ನೆರೆದಿರುವ ಭಕ್ತರೆ ಸಾಕ್ಷಿಯಾಗಿದೆ.

ಕಳೆದ ಒಂದು ವಾರದಿಂದ ಶ್ರೀಮದ್ ಭಾಗವತ ಮತ್ತು ಶ್ರೀರಾಘವೇಂದ್ರಸ್ವಾಮಿಗಳವರ ಮಹಿಮೆಯನ್ನು ಕೇಳಿದ್ದೀರಿ. ಇಲ್ಲಿ ಕೇಳಿದ ಮಹಿಮೆಯನ್ನು ಅರ್ಥೈಸಿಕೊಂಡು ಮಕ್ಕಳಿಗೆ, ಕುಟಂಬಕ್ಕೆ ಸಂಸ್ಕಾರ ಜೊತೆಗೆ ಸಂಸ್ಕ್ರತಿ ತಿಳಿ ಹೇಳ ಬೇಕೆಂದರು.

ಇದೇ ಸಂದರ್ಭದಲ್ಲಿ ಮಧ್ವ ಸಂಘ ಹಾಗು ಶ್ರೀ ರಾಘವೇಂದ್ರಸ್ವಾಮಿಗಳ ಮಠದಿಂದ ಡಾ. ಬೆ.ನಾ.ವಿಜಯೀಂದ್ರಚಾರ ಅವರನ್ನು ಮಧ್ವ ಸಂಘದಿಂದ ಗೌರವಿಸಲಾಯಿತು.

ವರ್ಧಂತೋತ್ಸವದ ಅಂಗವಾಗಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ವೆಂಕಟೇಶ್ವರ ಸ್ವಾಮಿಯ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಪಂಚಮೃತಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾರ್ಮೀಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಬ್ರಾಹ್ಮಣ ಸಮಾಜದ ಮುಖಂಡ ನವಲಿ ಗುರುರಾಜ್ ರಾವ್, ಮಧ್ವ ಸಂಘದ ಅದ್ಯಕ್ಷ ವಾಮನರಾವ್ ಮುಖ್ತೆದಾರ, ಮಠದ ವ್ಯವಸ್ಥಾಪಕ ಸಾಮಾವೇಧ ಗುರುರಾಜ ಆಚಾರ, ಪ್ರಲ್ಹಾದರಾವ್ ಹೇರೂರು, ನಾಗರಾಜ್ ಚಾರ ಸರ್ ಜೋಷಿ, ಗುರುರಾಜ ಅಯೋದ್ಯ, ನ್ಯಾಯವಾದಿ ಕೃಷ್ಣ ದೇಶಪಾಂಡೆ, ರಾಮಮೂರ್ತಿ ನವಲಿ, ಲಕ್ಷ್ಮಣರಾವ್ ಬೆಳ್ಳುಬ್ಬಿ, ಸುಧೀರ್ ನವಲಿ, ರಾಮಕೃಷ್ಣ ಜಾಹಗಿರದಾರ, ಉದಯ ಜಾಹಗೀರದಾರ

ಅರ್ಚಕ ಭೀಮಸೇನಾಚಾರ್ಯ, ಶಿಕ್ಷಕ ವೇಣುಗೋಪಾಲ್ , ಶ್ರೀನಿವಾಸ ದಾಸನಾಳ, ವಿಜಯೀಂದ್ರಚಾರ ಜೋಷಿ ಆದಾಪುರ,ಪತ್ರಕರ್ತ ರಾಮಮೂರ್ತಿ ನವಲಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.