Breaking News
ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಗೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಗೋಲ್ ಮಾಲ್!

*ಮೇರಿಟ್ ನಂತೆ ಆಯ್ಕೆಯಾಗದ ವಿದ್ಯಾರ್ಥಿಗಳು, ಆಯ್ಕೆ ಪಟ್ಟಿಗೆ ರದ್ದುಗೊಳಿಸುವಂತೆ ಆಗ್ರಹ.

 

ಕಿಷ್ಕಿಂಧವಾಣಿ ವಿಶೇಷ
ಕೆ.ನಿಂಗಜ್ಜ
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಮೆಟ್ರಿಕ್ ಪೂರ್ವ ಹಾಸ್ಟಲ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಹಾಸ್ಟೆಲ್ ಗೆ ಆಯ್ಕೆಯಾದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯನ್ನು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಹಾಗೂ ಹಾಸ್ಟೆಲ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟ ಮಾಡಿದ್ದು ಹಾಸ್ಟೆಲ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಅನುಸರಿಸಿರುವ ಮಾನದಂಡದ ಕುರಿತು ಅನುಮಾನಗಳು ವ್ಯಕ್ತವಾಗಿವೆ.
ಕೂಡಲೇ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮತ್ತೊಮ್ಮೆ ಪಾರದರ್ಶಕವಾಗಿ ಆಯ್ಕೆಪಟ್ಟಿ ಪ್ರಕಟಿಸುವಂತೆ ಪಾಲಕರು ಹಾಗೂ ವಿದ್ಯಾರ್ಥಿ ಸಂಘಟನೆಯವರು ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಸುವ ಜಿಲ್ಲೆಯ 60 ಕ್ಕೂ ಹೆಚ್ಚು ಮೆಟ್ರಿಕ್ ಪೂರ್ವ ವಸತಿ ಸಹಿತ ಹಾಸ್ಟೆಲ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಇಲಾಖೆಯವರು ನಡೆಸುತ್ತಾರೆ.
ಪ್ರತಿ ಹಾಸ್ಟೆಲಿಗೆ 60 ಸೀಟುಗಳಿದ್ದು ಅಲ್ಪಸಂಖ್ಯಾತರ ಇಲಾಖೆಯ ನಿಯಮದಂತೆ ಶೇ. 75 ರಷ್ಟು ಅಲ್ಪಸಂಖ್ಯಾತರಿಗೆ ಉಳಿದ ಶೇ. 25 ಎಸ್ಸಿ, ಎಸ್ಟಿ, ಒಬಿಸಿ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿದೆ.
ಕಳೆದ ಮಾರ್ಚ್ -ಏಪ್ರಿಲ್ ನಲ್ಲಿ ಜರುಗಿದ ಪ್ರವೇಶ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು ಕಳೆದ ವಾರ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇಲಾಖೆಯು ಕಚೇರಿ ಮತ್ತು ಹಾಸ್ಟೆಲ್ ಗಳ ನೋಟಿಸ್ ಬೋರ್ಡ್ ನಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.
ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ಆಗಿರುವ ಕುರಿತು ವಿದ್ಯಾರ್ಥಿ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ.
ಎಸ್ಸಿ ಒಳಮೀಸಲಾತಿ ಅನ್ವಯ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು 83 ಅಂಕ ಪಡೆದ ವಿದ್ಯಾರ್ಥಿಗೆ ಅವಕಾಶ ಸಿಕ್ಕಿಲ್ಲ,37 ಅಂಕ ಪಡೆದ ವಿದ್ಯಾರ್ಥಿ ಸೀಟು ಸಿಕ್ಕಿದೆ, ಅತ್ಯಂತ ಬಡತನದಲ್ಲಿರುವ ಕುಷ್ಟಗಿ ಅಲೆಮಾರಿ ಕುಟುಂಬದ ವಿದ್ಯಾರ್ಥಿನಿ 42 ಅಂಕ ಪಡೆದಿದ್ದರೂ ಪ್ರವೇಶ ಸಿಕ್ಕಿಲ್ಲ. ಇದರಿಂದಾಗಿ ಮೇರಿಟ್ ಆಧಾರದಲ್ಲಿ ಹಾಸ್ಟೆಲ್ ಗೆ ವಿದ್ಯಾರ್ಥಿಗಳ ಆಯ್ಕೆಯಾಗಿರುವುದು ಅನುಮಾನವಾಗಿದ್ದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳ ಮೇಲೆ ಪಾಲಕರು ಅನುಮಾನಪಡುವಂತಾಗಿದೆ.
ಕಳೆದ ವರ್ಷ ವಸತಿ ಶಾಲೆಗಳಿಗೆ ಬೋಧಕ ಸಿಬ್ಬಂದಿ ಆಯ್ಕೆ ಮಾಡುವಾಗಲೂ ಗೋಲ್ಮಾನ್ ನಡೆದಿರುವ ಕುರಿತು ದೂರುಗಳಿದ್ದು ಅಲ್ಪಸಂಖ್ಯಾತರ ಇಲಾಖೆಯ ಮೇಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಸೂಕ್ತ ತನಿಖೆ ನಡೆಸಬೇಕಿದೆ.
ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಗಳಿಗೆ ಮಕ್ಕಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕಿದೆ. ಆಗಿರುವ ನ್ಯೂನ್ಯತೆ ಕುರಿತು ತನಿಖೆ ನಡೆಸಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಸೀಟು ಸಿಗುವಂತಾಗಬೇಕಿದೆ.
***
ಅಲ್ಪಸಂಖ್ಯಾತರ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಇರುವ ಹಾಸ್ಟೆಲ್ ಗಳಿಗೆ ಮಕ್ಕಳ ಪ್ರವೇಶ ಪಡೆಯಲು ನಡೆಸಿದ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಗೊಂದಲದಿಂದ ಕೂಡಿದೆ. ಎಸ್ಸಿ ಒಳಮೀಸಲಾತಿ ಅನ್ವಯ 83 ಅಂಕ ಪಡೆದ ವಿದ್ಯಾರ್ಥಿಗೆ ಹಾಸ್ಟೆಲ್ ನಲ್ಲಿ ಸೀಟು ಸಿಕ್ಕಿಲ್ಲ .37 ಅಂಕ ಪಡೆದ ವಿದ್ಯಾರ್ಥಿಗೆ ಸೀಟು ಸಿಕ್ಕಿದೆ. ಕುಷ್ಟಗಿಯ ಅಲೆಮಾರಿ ಜನಾಂದ ವಿದ್ಯಾರ್ಥಿನಿ 42 ಅಂಕ ಪಡೆದಿದ್ದರೂ ಸೀಟು ಸಿಗದೆ ಅನ್ಯಾಯವಾಗಿದ್ದು ಇದರಂತೆ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
ಆದ್ದರಿಂದ ಕೂಡಲೇ ಆಯ್ಕೆ ಪಟ್ಟನ್ನು ರದ್ದು ಮಾಡಿ ಪಾರದರ್ಶಕವಾಗಿ ಆಯ್ಕೆಪಟ್ಟಿ ಪ್ರಕಟಿಸಬೇಕು. ಇಲ್ಲದಿದ್ದರೆ ಡಿ ವೈ ಎಫ್ ಐ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ.ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹಲವು ಗೋಲ್ ಮಾಲ್ಗಳಿಗೆ ಹೆಸರಾಗಿದ್ದು,ಕಳೆದ ವರ್ಷ ಬೋಧಕರನ್ನು ನೇಮಕ ಮಾಡಿಕೊಳ್ಳುವಾಗಲೂ ಗೋಲ್ಮಾಲ್ ಮಾಡಿದ್ದಾರೆ.
ಕೂಡಲೇ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಬೇಕು.
-ಅಮರೇಶ ಕಡಗದ್ ಮುಖಂಡ ಡಿವೈಎಫ್ ಐ ಕೊಪ್ಪಳ.

ಹೃದಯ ಸ್ತಂಭನ ಯುವ ನ್ಯಾಯವಾದಿ ಕನಕೇಶ್ ನಿಧನ.

 

*ಕೋರ್ಟಿನಲ್ಲಿ ಜರುಗಿದ ಕಾರ್ಯಕ್ರಮದ ಊಟ ಸೇವಿಸಿ ಹೊರಬಂದು ಕುಸಿದು ಬಿದ್ದು ಸಾವು.

*ಕಳೆದ ಆರು ತಿಂಗಳ ಹಿಂದೆ ವಕೀಲ ವೃತ್ತಿಯನ್ನು ಆರಂಭಿಸಿದ್ದ ಯುವ ನ್ಯಾಯವಾದಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕೋರ್ಟ್ ಆವರಣದಲ್ಲಿಯೇ ಯುವ ನ್ಯಾಯವಾದಿ ಬರುವ ಹೃದಯ ಸ್ತಂಭನವಾಗಿ ಕುಸಿದು ಬಿದ್ದು ಮರಣ ಹೊಂದಿದ ಹೃದಯವಿದ್ರಾವಕ ಘಟನೆ ನಗರದ ಕೋರ್ಟ್ ಆವರಣದಲ್ಲಿರುವ ಕ್ಯಾಂಟೀನ್ ಹತ್ತಿರ ಬುಧವಾರ ಮಧ್ಯಾಹ್ನ ಜರುಗಿದೆ.

ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ನಿವಾಸಿ ಕನಕೇಶ್

(26) ಹೃದಯ ಸ್ತಂಭನ ಮೃತಪಟ್ಟಿರುವ ಯುವ ನ್ಯಾಯವಾದಿಯಾಗಿದ್ದು ಕಳೆದ ಆರು ತಿಂಗಳ ಹಿಂದೆ ಹಿರಿಯ ನ್ಯಾಯವಾದಿ ಹೆಚ್.ಎಂ.ಮಂಜುನಾಥ ಇವರ ಮಾರ್ಗದರ್ಶನದಲ್ಲಿ ಗಂಗಾವತಿ ಕೋರ್ಟಿನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದ್ದರು. ಗಂಗಾವತಿಯ ಅಪ್ಸಾನಿ ನಾರಾಯಣರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಆರು ತಿಂಗಳ ಹಿಂದೆ ಮುಗಿಸಿದ್ದ ಕನಕೇಶ್ ಸ್ಥಳೀಯ ನ್ಯಾಯಾಲಯದಲ್ಲಿ ತಮ್ಮ ವಕೀಲ ವೃತ್ತಿಯನ್ನು ಮಾಡುತ್ತಿದ್ದರು.

ಒಂದನೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸದಾನಂದ ನಾಗಪ್ಪ ನಾಯ್ಕ ಇವರ ವರ್ಗಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದ ಪಾಲ್ಗೊಂಡಿದ್ದ ಕನಕೇಶ್ ಬುಧವಾರ ನ್ಯಾಯಾಧೀಶರ ಬಿಳ್ಕೋಡುಗೆ ಕಾರ್ಯಕ್ರಮದ ಊಟ ಮಾಡಿ ನಂತರ ಕೋರ್ಟ್ ಕ್ಯಾಂಟೀನ್ ಹತ್ತಿರ ಬಂದು ಗೆಳೆಯರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಏಕಾಏಕಿ ಕುಸಿದು ಬಿದ್ದು ಎಚ್ಚರ ತಪ್ಪಿದ ಕಾರಣ ಕೂಡಲೇ ಸಹಪಾಠಿಗಳು ಮತ್ತು ವಕೀಲರು ಡಾ.ಜಿ.ಚಂದ್ರಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಪಡಿಸುವ ಯತ್ನ ನಡೆಸಿದರು ವೈದ್ಯರು ಪರೀಕ್ಷೆ ಮಾಡಿ ಹೃದಯ ಸ್ತಂಭನವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರುಗಳು ವಕೀಲರು ಹಾಗೂ ಗಣ್ಯರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.