Breaking News
ತಂಗಡಗಿ,ರಾಯರೆಡ್ಡಿ ಮತ್ತು ಹಿಟ್ನಾಳ ಕುಟುಂಬದವರು ಅನ್ಸಾರಿಗೆ ಬಗ್ಗೆ ಸಿಎಂಗೆ ಸುಳ್ಳು ಹೇಳ್ತಾರೆ

 

*ಅನ್ಸಾರಿಯವರ ಅಭಿಮಾನಿಗಳು ಹೆದರದಂತೆ ಅನ್ಸಾರಿ ಧೈರ್ಯ

*ಬಿಎಲ್‌ಎ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಂಗಡಗಿ ಯಿಂದ ನೇಮಕ

*ಹುಸಿಯಾದ ಎಂಪಿ ಎಲೆಕ್ಷನ್ ಭರವಸೆ, 224 ಕ್ಷೇತ್ರಗಳಲ್ಲಿ ಅನ್ಸಾರಿಯವರ ಮಾತಿಗೆ ಬೆಲೆ ಇದೆ

*ಸೋಶೀಯಲ್ ಮೀಡಿಯಾದಲ್ಲಿ ಪುನಹ ವೈರಲ್ ಆಯ್ತು ಅನ್ಸಾರಿ ಆಪ್ತನ ಪತ್ರ

ಕಿಷ್ಕಿಂಧವಾಣಿ ವಿಶೇಷ

ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಎಲ್‌ಎ ಆಗಿ ಸಂಸದ ಕೆ.ರಾಜಶೇಖರ ಹಿಟ್ನಾಳ ನೇಮಕಾತಿಯ ನಂತರ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಸೋಶೀಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದು ಅನ್ಸಾರಿಯವರ ಆಪ್ತ ಪುನೀತ್ ಎನ್ನುವ ವ್ಯಕ್ತಿ ಅಭಿಮಾನಿಗಳ ವಿಷಯವನ್ನು ಇಕ್ಬಾಲ್ ಅನ್ಸಾರಿಯವರಿಗೆ ತಿಳಿಸಿ ಅವರಿಂದ ಬಂದ ಸಂದೇಶವನ್ನು ಸೋಶಿಯಲ್ ಮೀಡಿಯಾದ ಮೂಲಕ ಅನ್ಸಾರಿ ಅಭಿಮಾನಿಗಳಿಗೆ ಮನವರಿಕೆ ಮಾಡಿದ್ದಾರೆ.

ಬಿಎಲ್‌ಎ ನೇಮಕಾತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮಾಡಿಸಿದ್ದಾರೆ. ಸಣ್ಣ ಪುಟ್ಟ ಹುದ್ದೆಗಳಿಗೆ ಅನ್ಸಾರಿಯವರು ತಲೆ ಕೆಡಿಸಿಕೊಳ್ಳುವುದಿಲ್ಲ, ಲೋಕಸಭಾ ಚುನಾವಣೆಯಲ್ಲಿ ಕೆ.ರಾಜಶೇಖರ ಹಿಟ್ನಾಳ ಪರವಾಗಿ ಅನ್ಸಾರಿಯವರು ಕೆಲಸ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಗಾವತಿಯಲ್ಲಿ ಅನ್ಸಾರಿಯವರ ಮನೆಗೆ ಆಗಮಿಸಿ ಗಂಗಾವತಿ ಕೆಲಸ ಕಾರ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ಗಂಗಾವತಿ ನಿಂದೇ ಯಾರು ಮಧ್ಯೆ ಬರುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಆದರೆ ಈಗ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಹಾಗೂ ಹಿಟ್ನಾಳ ಕುಟುಂಬದವರು ಮುಖ್ಯಮಂತ್ರಿಗಳಿಗೆ ಅನ್ಸಾರಿಯವರ ಬಗ್ಗೆ ಸುಳ್ಳು ಹೇಳಿದ್ದಾರೆ.

ತಂಗಡಗಿ, ರಾಯರೆಡ್ಡಿ ಹಾಗೂ ಹಿಟ್ನಾಳ ಕುಟುಂಬದವರಿಗೆ ಗಂಗಾವತಿ ಏನು ಸಂಬಂಧವಿಲ್ಲದಿದ್ದರೂ ಅನ್ಸಾರಿ ಸೋತಿದ್ದಾರೆಂದು ಇವರೆಲ್ಲಾ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಪಿಸಿಸಿ ಅನ್ಸಾರಿಯವರ ಕುರಿತು ಸುಳ್ಳು ಮಾತು ಕೇಳಿ ಬಿಎಲ್‌ಎ ಬದಲಾಯಿಸಿದ್ದು ನಮ್ಮ ಅನ್ಸಾರಿ ಸಾಹೇಬರು 224 ಕ್ಷೇತ್ರಗಳಲ್ಲಿ ಹೋಗಿ ಮತದಾರರಿಗೆ ಮನವರಿಕೆ ಮಾಡುವ ಶಕ್ತಿ ಹೊಂದಿದ್ದಾರೆ. ಅಭಿಮಾನಿಗಳು ನಿರೀಕ್ಷೆಯಲ್ಲಿರಿ.

ಗಂಗಾವತಿಯಲ್ಲಿ ಜನಪರ ಕೆಲಸ ಮಾಡಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರೆ ಇವರಿಗೇನು ತೊಂದರೆಯಾಗುತ್ತದೆ. ಶೀಘ್ರವೇ ಅನ್ಸಾರಿಯವರು ಮನೆಮನೆ ಆಗಮಿಸಿ ಸಂಘಟನೆ ಮಾಡಲಿದ್ದಾರೆ ಎಂದು ಪುನೀತ್ ಸ್ಟೇಟಸ್ ಹಾಕಿ ಅನ್ಸಾರಿ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಅನುದಾನ ರಹಿತವಾಗಿ ಅಂಬೇಡ್ಕರ್ ಸರ್ಕಲ್” ನಿರ್ಮಾಣ ಹಗರಿಬೊಮ್ಮನಹಳ್ಳಿಯಲ್ಲಿ ದಲಿತ ಸಂಘಟನೆಗಳ ಆಕ್ರೋಶ !

 

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ:

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ದಲಿತ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ದಶಕಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ದಲಿತ ಸಂಘಟನೆಗಳು, ಈ ವರ್ಷ ಅಂಬೇಡ್ಕರ್ ಜಯಂತಿಯ ಎರಡು ವಾರಗಳ ಮುಂಚಿತವಾಗಿ ಮಾಡಿದ ಸರ್ಕಲ್ ನಿರ್ಮಾಣದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.

ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಬೇಕಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ ಎಂದು ಹೇಳಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ. ನೇಮಿರಾಜ್ ನಾಯ್ಕ ವಿರುದ್ಧ ದಲಿತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಅನುದಾನ ಯಾವ ಇಲಾಖೆಯಿಂದ ಬಂದಿದೆ, ಯಾವ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ ಹಾಗೂ ಗುತ್ತಿಗೆದಾರರು ಯಾರೆನ್ನುವ ವಿಷಯ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

“20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಸೌಲಭ್ಯಗಳನ್ನು ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ತಡ ಮಾಡಿದ್ದು ಸರಿಯಲ್ಲ,

50 ಲಕ್ಷ ರೂ. ಅನುದಾನ ಯಾವ ಅನುದಾನದಲ್ಲಿ ಮಂಜೂರಾಗಿದೆ,

ಕಾಮಗಾರಿ ಟೆಂಡರ್ ಪ್ರಕ್ರಿಯೆ ಏನಾಗಿದೆ,

ಕಾಮಗಾರಿ ಸ್ಥಳದಲ್ಲಿ ವಿವರವಾದ ಮಾಹಿತಿ ನಾಮಫಲಕ ಯಾಕೆ ಹಾಕಿಲ್ಲ,

ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳಿ, ಕಾರ್ಯರೂಪಕ್ಕೆ ತರದಿರುವುದು ಯಾಕೆಂದು ದಲಿತ ಪರ ಸಂಘಟನೆಗಳ ಮುಖಂಡರು ಪ್ರಶ್ನಿಸಿದ್ದಾರೆ.

“ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಗೌರವವನ್ನು ಜಾರಿಗೆ ತರುವುದೇ ಅಂಬೇಡ್ಕರ್ ಅವರಿಗೆ ನಿಜವಾದ ಗೌರವ” ಎಂದು ದಲಿತ ಪರ ಸಂಘಟನೆಗಳ ಮುಖಂಡರಾದ ಪರಶುರಾಮ್ ಹೆಗ್ಡಳ್ ,ಮರಿಯಪ್ಪ ದಸಮಾಪುರ, ರಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

****

ಈಗಾಗಲೇ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಸೇರಿ ನಾಲ್ಕು ಮಹನೀಯರ ಸರ್ಕಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಪೊಲೀಸ್ ಠಾಣೆಯ ಹತ್ತಿರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸರ್ಕಲ್ ನಿರ್ಮಾಣಕ್ಕೆ ಶಾಸಕರ ವಿಶೇಷ ಅನುದಾನದಲ್ಲಿ ಈಗಾಗಲೇ 50 ಲಕ್ಷ ರೂ.ಮಂಜೂರು ಮಾಡಲಾಗಿದ್ದು ಇನ್ನೂ15 ಲಕ್ಷ ರೂ.ಮಂಜೂರಿ ಮಾಡಲಾಗುತ್ತದೆ. ಈಗಾಗಲೇ ಭೂಮಿ ಲೇವೆಲ್ ನಿರ್ಮಾಣ ಕಾಮಗಾರಿ ನಡೆದಿದ್ದಿ ಇನ್ನೂ ಡಿಸೈನ್ ಬಂದಿಲ್ಲ.ಡಿಸೈನ್ ಬಂದ ನಂತರ ಪೂರ್ಣ ಪ್ರಮಾಣದ ಕಾಮಗಾರಿ ನಡೆಯುತ್ತದೆ. ಅಂಬೇಡ್ಕರ್ ಬಗ್ಗೆ ನಮಗೆ ಬದ್ದತೆ ಇದೆ.ಸಂಘಟನೆಗಳ ಮುಖಂಡರು ಅನ್ಯತಾ ಭಾವಿಸದೇ ಸಹಕಾರ ನೀಡಬೇಕು. ನಾಲ್ಕು ಸರ್ಕಲ್ ಗಳ ನಿರ್ಮಾಣ ಶೀಘ್ರ ಮುಕ್ತಾಯಗೊಳಿಸಲಾಗುತ್ತದೆ.

-ನೇಮಿರಾಜ್ ನಾಯ್ಕ ಶಾಸಕರು ಹಗರಿಬೊಮ್ಮನಹಳ್ಳಿ