ನವ ಬೃಂದಾವನ ಗಡ್ಡಿಯ ಯತಿವರ್ಯರ ದರ್ಶನಕ್ಕೆ ಆಗಮಿಸಿದ ನವರಸ ನಾಯಕ,ರಾಜ್ಯಸಭಾ ಸದಸ್ಯ ಜಗ್ಗೇಶ್.
*ನಟ ಅಪ್ಪಟ ರಾಯರ ಭಕ್ತ
*ರಾಯರನ್ನು ನಂಬಿದರೆ ಕಷ್ಟಗಳು ದೂರ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಕನ್ನಡ ಚಿತ್ರರಂಗದ ನವರಸ ನಾಯಕ ಎಂದು ಖ್ಯಾತಿ ಪಡೆದ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತಾಲೂಕಿನ ಆನೆಗೊಂದಿಯ ಐತಿಹಾಸಿಕ ನವೃಂದಾವನಗಡ್ಡಿಗೆ ಆಗಮಿಸಿ ಯತಿವರ್ಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಆಗಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮಹಾದೈವ ಅವರು, ನಾನು ಚಿಕ್ಕಂದಿನಿಂದಲೂ ರಾಯರ ಭಕ್ತನಾಗಿದ್ದು ನಬೃಂದಾವನ ಗಡ್ಡಿಯಲ್ಲಿರುವ 9 ಯತಿಗಳ ದರ್ಶನ ಮಾಡುವ ಬಯಕೆ ಬಹಳ ವರ್ಷಗಳಿಂದ ಇದ್ದು,ಇಂದು ಆಸೆ ಈಡೇರಿದೆ ಪ್ರತಿಯೊಬ್ಬರೂ ಭಕ್ತಿಯ ಹಾದಿಯಲ್ಲಿ ನಡೆದು ದೇವರ ಸ್ಮರಣೆಯ ಮೂಲಕ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕು ಧರ್ಮದ ದಾರಿ ಬಿಟ್ಟು ನಡೆದರೆ ದೇವರು ಮೆಚ್ಚುವುದಿಲ್ಲ ನವ ಬೃಂದಾವನ ಗಡ್ಡಿ ಅತ್ಯಂತ ಪವಿತ್ರ ಕ್ಷೇತ್ರವಾಗಿದ್ದು 9 ಯತಿಗಳು ಇಲ್ಲಿ ಲೀನರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ ಇಲ್ಲಿಗೆ ಬಂದಿದ್ದು ಬಹಳ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಸದ ಎನ್. ಪದ್ಮನಾಭರಾಜು, ಗೋಪಿನಾಥ್, ಹೆಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರದೀಪ್ ಹೊಸಪೇಟೆ ಇತರರಿದ್ದರು.

