Breaking News
ದುರಂಧರ್ ದಿ ರಿವೆಂಜ್ ಸಿನೆಮಾ ವೀಕ್ಷಿಸಿದ ಗಾಲಿ ಜನಾರ್ದನ ರೆಡ್ಡಿ ಮೆಚ್ಚುಗೆ.

*ಯುವಜನರಲ್ಲಿ ದೇಶದ ಇತಿಹಾಸ ಮತ್ತು ದೇಶಭಕ್ತಿ ಮೂಡಿಸುವ ಚಿತ್ರವಾಗಿದೆ.

*ವಿಶ್ವದಾದ್ಯಂತ ಖ್ಯಾತಿ ಪಡೆದ “ದುರಂಧರ್ – ದಿ ರಿವೆಂಜ್” ಚಿತ್ರವನ್ನು ಬೆಂಗಳೂರಿನ ಒರಾಯಿನ್ ಮಾಲ್‌ನಲ್ಲಿ ರೆಡ್ಡಿ ವೀಕ್ಷಣೆ.

*ಚಿತ್ರೀಕರಣ ಮತ್ತು ತಾಂತ್ರಿಕ ಬಳಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಗಂಗಾವತಿಯ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಗಾಲಿ ಜನಾರ್ದನ್ ರೆಡ್ಡಿ ಅವರು ಇತ್ತೀಚೆಗೆ ಬಿಡುಗಡೆಯಾಗಿರುವ ದುರಂದರ್ ದಿ ರಿಮೆಂಜ್ ಚಲನಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಕಿಷ್ಕಿಂಧವಾಣಿ ಜತೆ ಅವರು ಮಾತನಾಡಿ, ಚಿತ್ರ ನಿಜವಾಗಿಯೂ ಅದ್ಭುತ ಅನುಭವ ನೀಡಿತು. ತಾಂತ್ರಿಕವಾಗಿ ಚಿತ್ರವು ಉನ್ನತ ಮಟ್ಟದಲ್ಲಿದೆ. ಛಾಯಾಗ್ರಹಣವು ಚಿತ್ರದ ಗಂಭೀರ ಮತ್ತು ಕರಾಳತೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಹಿನ್ನೆಲೆ ಸಂಗೀತವು ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸಿದೆ. ನಾಯಕ ರಣವೀರ್ ಸಿಂಗ್ ಪಾತ್ರವು ಮೆಚ್ಚುವಂತಿದೆ ಅವರ ನೋಟ ಮತ್ತು ಆಕ್ರೋಶ ಪಾತ್ರಕ್ಕೆ ಜೀವ ತುಂಬಿದೆ.

ದೇಶಭಕ್ತಿ ಭಾವನೆಯ ದೃಶ್ಯಗಳು, ಗಡಿಯಲ್ಲಿ ಕಾಯುವ ಸೈನಿಕರಿರಲಿ ಅಥವಾ ದೇಶದ ಒಳಗಿರುವ ದೇಶಪ್ರೇಮಿಗಳಿರಲಿ, ರಾಷ್ಟ್ರದ ರಕ್ಷಣೆಗಾಗಿ ನಿಲ್ಲುವ ಪ್ರತಿಯೊಬ್ಬನೂ ‘ದುರಂಧ‌ರ್’ ಎಂಬ ಸಂದೇಶವನ್ನು ಈ ಚಿತ್ರ ಸಾರುತ್ತದೆ. ಶತ್ರು ದೇಶಗಳ ಕುತಂತ್ರವನ್ನು ಮೆಟ್ಟಿ ನಿಲ್ಲುವ ನಾಯಕನ ಸಾಹಸಗಳು ಪ್ರೇಕ್ಷಕರಲ್ಲಿ ಹೆಮ್ಮೆಯ ಭಾವ ಮೂಡಿಸುತ್ತವೆ. ಈ ಸಿನಿಮಾ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕೆಂದು ಬಯಸುತ್ತೇನೆ.

ಚಿತ್ರತಂಡದ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು ತಿಳಿಸುತ್ತೇನೆ ಎಂದಿದ್ದಾರೆ.