Breaking News
ಐತಿಹಾಸಿಕ ಆನೆಗೊಂದಿ ಉತ್ಸವಕ್ಕಾಗಿ ಶಾಶ್ವತ ಭೂಮಿ ಖರೀದಿಸುವಂತೆ ಆಗ್ರಹ

*ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ.

ಕಿಷ್ಕಿಂಧವಾಣಿ ಸುದ್ದಿ ಗಂಗಾವತಿ :ತಾಲೂಕಿನ ಐತಿಹಾಸಿಕ

ಆನೆಗೊಂದಿ ಉತ್ಸವಕ್ಕಾಗಿ ಶಾಶ್ವತ ಭೂಮಿ ಖರೀದಿಸಿ ಸರ್ಕಾರ ಸ್ವಾದಿನಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.

 

 

ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ,ಆನೆಗೊಂದಿಯ ವಿಜಯನಗರಸಾಮ್ರಾಜ್ಯ ದ ಮೂಲ ರಾಜಧಾನಿಯಾಗಿತ್ತು. ಇಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ವಿಶ್ವ ಪರಂಪರೆ ಪಟ್ಟಿಯಲ್ಲಿಯೂ ಸೇರಿದೆ. ಆನೆಗುಂದಿ ಉತ್ಸವ ಎರಡು ವರ್ಷಗಳಿಂದ ನಡೆದಿಲ್ಲ. ಅಧಿವೇಶನ ಮುಗಿದ ತಕ್ಷಣವೇ ಈ ಬಾರಿ ಕಡ್ಡಾಯವಾಗಿ ಆನೆಗೊಂದಿ

ಉತ್ಸವ ಆಚರಿಸಲೇಬೇಕು. ಆನೆಗೊಂದಿ ಉತ್ಸವ ಆಚರಣೆಯನ್ನು ಮಾಡುವ ವೇದಿಕೆಯ ಭೂಮಿಯು ಖಾಸಗಿಯವರದ್ದಾಗಿರುತ್ತದೆ.

ಕಿಷ್ಕಿಂಧಾ ಅಂಜನಾದ್ರಿ ಸ್ಥಳ ಸಮೀಪದಲ್ಲಿರುವದರಿಂದ ಅಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಗುತ್ತಿರುವದರಿಂದ ಅವರು ತಮ್ಮ ಭೂಮಿಯನ್ನು ಬೇರೆಯವರಿಗೆ ಮಾರಿದರೆ ಅಥವಾ ಕಟ್ಟಡಗಳನ್ನು ನಿರ್ಮಿಸಿದರೆ, ಮುಂದಿನ ದಿನಗಳಲ್ಲಿ ಉತ್ಸವ ಮಾಡಲು ಸ್ಥಳದ ಅಭಾವ ಉಂಟಾಗುತ್ತದೆ.ಉತ್ಸವ ಆಚರಿಸಲು ದೊಡ್ಡ ಸಮಸ್ಯೆಯಾಗುತ್ತದೆ. ಸಮಸ್ಯೆ ಆಗುವ ಮೊದಲೇ ಸರಕಾರ ಎಚ್ಚತ್ತುಕೊಂಡು ವಿಳಂಬ ಮಾಡದೇ ಅವರಿಂದ ಭೂಮಿ ಖರೀದಿಸಿ ಸ್ವಾದಿನಪಡಿಸಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಪದಾಧಿಕಾರಿ ರಾಮಣ್ಣ ರುದ್ರಾಕ್ಷಿ ಇದ್ದರು.