Breaking News
ರೈತರ ಒತ್ತಾಯದ ಫಲ: ಸಮರೋಪಾದಿಯಲ್ಲಿ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಜೋಡಣಾ ಕಾಮಗಾರಿ.

*ಪ್ರಸ್ತುತ 21 ಕ್ರಸ್‌ಗೇಟ್‌ಗಳ ಜೋಡಣೆ ಪೂರ್ಣ

ಕಿಷ್ಕಿಂಧವಾಣಿ ವಿಶೇಷ

ಕೆ.ನಿಂಗಜ್ಜ.

ಗಂಗಾವತಿ: ಕೊಪ್ಪಳ ರಾಯಚೂರು ಬಳ್ಳಾರಿ ಮತ್ತು ತೆಲಂಗಾಣ ಆಂಧ್ರಪ್ರದೇಶದ ಜೀವನದಿಯಾಗಿರುವ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಗಳ ಮರು ಜೋಡಣಾ ಕಾಮಗಾರಿ ಬರದಿಂದ ಸಾಗಿದ್ದು ಸದ್ಯ 21 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಭರದಿಂದ ಸಾಗಿದೆ. ಒಟ್ಟು 32 ಕ್ರಸ್ಟ್‌ ಗೇಟುಗಳನ್ನು ಬದಲಾಯಿಸುವ ಕಾಮಗಾರಿ ಇದಾಗಿದ್ದು ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಜೂನ್ ಒಳಗೆ ಅಂದರೆ ಮಳೆಗಾಲ ಆರಂಭಕ್ಕೂ ಮುಂಚೆ ಕ್ರಸ್ಟ್‌ ಗೇಟುಗಳನ್ನು ಜೋಡಣೆ ಮಾಡುವ ಷರತ್ತನ್ನು ಟೆಂಡರ್ ನಲ್ಲಿ ಹಾಕಲಾಗಿದೆ.

ಕಲಕೆದ 2024ರ ಅ.10ರಂದು ಡ್ಯಾಂನ 19ನೇ ಕ್ರಸ್ಟ್ ಗೇಟ್ ಚೈನ್ ಹರಿದುಬಿದ್ದ ಪರಿಣಾಮ ಕ್ರಸ್ಟ್‌ ಗೇಟು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿತ್ತು. ದುರಂತ ಜರುಗಿ ಒಂದು ವರ್ಷದ ನಂತರ (2025ರ ಡಿಸೆಂಬರ್‌ನಲ್ಲಿ) ಗೇಟ್‌ಗಳ ಬದಲಾವಣೆಗೆ ಚಾಲನೆ ನೀಡಲಾಗಿತ್ತು. ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ ಈವರೆಗೆ 21 ಗೇಟ್ ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್ ಗಳ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದ್ದು, ಮುಂದಿನ ತಿಂಗಳ ಕೊನೆಯ ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಗೇಟ್‌ಗಳಿಗೆ ಪೇಂಟಿಂಗ್ ನಡೆಯಲಿದ್ದು, ಟೆಂಡರ್ ಷರತ್ತಿನಂತೆ ನಿಗದಿತ ಜಲಾಶಯಕ್ಕೆ ಹೊಸ ನೀರು ಬರುವ ಮುನ್ನವೇ ಕಾರ್ಯ ಮುಗಿಸಬೇಕು.

ಗುಜರಾತ್ ಮೂಲದ ಗುತ್ತಿಗೆದಾರ ಕಾಮಗಾರಿ ಗುತ್ತಿಗೆ ಪಡೆದಿದ್ದು‌ 60 ಕಾರ್ಮಿಕರು ತೊಡಗಿಸಿ ಕೊಂಡಿದ್ದಾರೆ. ಪ್ರತಿ ತಂಡದಲ್ಲಿ ಐದ-ರಿಂದ ಆರು ಜನರಂತೆ ಒಟ್ಟು ಎಂಟತ್ತು ತಂಡಗಳು ಅಳವಡಿಕೆ ಕಾರ್ಯದಲ್ಲಿ ತೊಡಗಿವೆ. 5 2 01, 02, 03, 04, 05, 06, 11. 17. 18, 19, 20, 24, 25, 26, 27, 28, 29, 30, 31, 32 ಮತ್ತು 33ನೇ ಸಂಖ್ಯೆಯ ಕ್ರಸ್ಟ್ ಗೇಟ್ ಗಳ ಅಳವಡಿಕೆ ಪೂರ್ಣಗೊಂಡಿದೆ. ಇವುಗಳಲ್ಲಿ 04, 11, 17, 18, 19, 20, 24 ಹಾಗೂ 31 ಸಂಖ್ಯೆಯ ಗೇಟ್‌ಗಳ ಪ್ರಾಯೋಗಿಕ ಪರೀಕ್ಷೆ

ಯಶಸ್ವಿಯಾಗಿದೆ. ಪ್ರಸ್ತುತ 06, 07, 08, 09, 12, 21 ಮತ್ತು 22ನೇ ಸಂಖ್ಯೆಯ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಶೇ.50 ರಷ್ಟು ಹೊಸ ಕ್ರಸ್ಟ್‌ ಗೇಟುಗಳ ತಯಾರಿಕೆ ಪೈಕಿ ಶೇ.

ಈಗಾಗಲೇ 30 ಹೊಸ ಗೇಟ್‌ಗಳ ತಯಾರಿಕೆ ಮುಗಿದಿದ್ದು ಇವುಗಳ ಪರೀಕ್ಷಾರ್ಥ ಕಾರ್ಯ ಮಾತ್ರ ಬಾಕಿ ಇದೆ. ಜಲಾಶಯದಲ್ಲಿದ್ದ 33 ಹಳೆಯ ಗೇಟ್‌ಗಳ ಪೈಕಿ 29 ಗೇಟ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.

***

ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದರಿಂದ ಈಗಾಗಲೇ ರೈತರಿಗೆ ಒಂದು ಬೆಳೆ ನಷ್ಟವಾಗಿದೆ. ಏಪ್ರಿಲ್ ತಿಂಗಳೊಳಗೆ ಎಲ್ಲಾ 33 ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಪೂರ್ಣಗೊಂಡರೆ ಮುಂದಿನ ಬೆಳೆಗೆ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ.

-ಟಿ.ವಿ.ಸತ್ಯನಾರಾಯಣ ಹಾಗೂ ಯಡ್ಲಪಲ್ಲಿ ಆನಂದರಾವ್ ರೈತ ಮುಖಡರು.

 

***

“ಗೇಟ್‌ಗಳ ತಯಾರಿಕೆ ಹಾಗೂ ಆಳವಡಿಕೆ ಕಾರ್ಯ ವೇಗವಾಗಿ ಸಾಗಿದೆ. ಈವರೆಗೆ 21 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಉಳಿದ ಗೇಟ್‌ಗಳ ಕೆಲಸ ಏಪ್ರಿಲ್ ವೇಳೆಗೆ ಮುಕ್ತಾಯವಾಗಲಿದೆ.

ಇನ್ನುಳಿದ ಮೂರು ಹೊಸ ಗೇಟ್ ಗಳ ತಯಾರಿಕೆ ಹಾಗೂ ನಾಲ್ಕು ಹಳೆಯ ಗೇಟ್ ತೆರವು ಕಾರ್ಯ ಒಂದು ವಾರದೊಳಗೆ ಮುಕ್ತಾಯವಾಗಲಿದೆ.

-ಒ.ಆರ್.ಕೆ. ರೆಡ್ಡಿ ಕಾರ್ಯದರ್ಶಿ ತುಂಗಭದ್ರಾ ಬೋರ್ಡ್.