*ತಿರುಪತಿ ನಾಯಕ ಪಿಲಿಗುಂಡ ಗೆ * ರಾಜ್ಯ ಮಟ್ಟದ ಸರ್ವೋತ್ತಮ ಕ್ರೀಡಾ ಸೇವರತ್ನ ಪ್ರಶಸ್ತಿ.
ಕಿಷ್ಕಿಂಧವಾಣಿ ಸುದ್ದಿ
ಕೊಪ್ಪಳ:-ತಾಲ್ಲೂಕಿನ ಮುನಿರಾಬಾದ
ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ತಿರುಪತಿ ನಾಯಕ ಇವರಿಗೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ನೇತ್ರ ಕಲಾ ಸಂಘ ವತಿಯಿಂದ ನೀಡುವ ರಾಜ್ಯ ಮಟ್ಟದ ಸರ್ವೋತ್ತಮ ಕ್ರೀಡಾ ಸೇವಾ ರತ್ನ ಲಭಿಸಿದೆ,
ತಿರುಪತಿ ನಾಯಕ ದೈಹಿಕ ಶಿಕ್ಷಣ ಉಪನ್ಯಾಸಕರು ಇವರು ಕಳೆದ 10 ವರ್ಷಗಳ ದಿಂದ ವಿದ್ಯಾರ್ಥಿಗಳನ್ನು ಜಿಲ್ಲಾ, ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟ ಕ್ಕೆ ಆಯ್ಕೆಯಾಗುವಲ್ಲಿ ಇವರ ಪಾತ್ರ ಬಹುದೊಡ್ಡದು. ಬಳ್ಳಾರಿ ಯ ಡಾ.ಜೋಳದ ರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಮಾರ್ಚ್ 8 ರಂದು ಆಯೋಜಿಸಿರುವ ಸಮಾರಂಭದಲ್ಲಿ
ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

