Breaking News
ವಾಲ್ಮೀಕಿಶ್ರೀಗಳ ಕ್ಷೇಮ ವಿಚಾರಿಸಿದ ಕೆಎಂಎಫ್ ಬಳ್ಳಾರಿ ಮಾಜಿ ಅಧ್ಯಕ್ಷ ಭೀಮ್ ನಾಯ್ಕ್

ಹಗರಿಬೊಮ್ಮನಹಳ್ಳಿ:
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಡಾ.ಪ್ರಸನ್ನಾನಂದಪುರಿ ಮಹಾ ಸ್ವಾಮೀಜಿಯವರ ಆರೋಗ್ಯ -ಕ್ಷೇಮವನ್ನು ಮಡಿವಾಳ ಗುರುಪೀಠದ ಪೀಠಾಧಿಪತಿ ಬಸವಮಾಚಿದೇವ ಪರಾಮಪೂಜ್ಯರ ದಿವ್ಯ ಉಪಸ್ಥಿತಿಯಲ್ಲಿ ಕೆಎಂಎಫ್ ಬಳ್ಳಾರಿಯ ಮಾಜಿ ಅಧ್ಯಕ್ಷ ಭೀಮ್ ನಾಯ್ಕ್ ಕುಶಲೋಪಚರಿ ವಿಚಾರಿಸಿ ಉಭಯ ಶ್ರೀಗಳನ್ನು ಸತ್ಕರಿಸಿ ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪೂಜ್ಯ ವಾಲ್ಮೀಕಿ ಶ್ರೀಗಳು ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು,ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ಶ್ರೀಗಳು ವಾಲ್ಮೀಕಿ ಸಮುದಾಯ ಸೇರಿದಂತೆ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಿಟ್ಟು ಶ್ರಮಿಸಿ ಭಕ್ತ ವೃಂದಕ್ಕೆ ಹಾಗೂ ಸಮುದಾಯದ ಸೇವೆಗೆ ಶ್ರೀಗಳ ಮಾರ್ಗದರ್ಶನ ಅವಶ್ಯಕತೆ ಇದ್ದು ಮಹಾ ಸ್ವಾಮೀಜಿಗಳು ಆದಷ್ಟು ಬೇಗ ಪೂರ್ಣ ಗುಣಮುಖರಾಗಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮರಿರಾಮಪ್ಪ ಸೇರಿ ಹಗರಿಬೊಮ್ಮನಹಳ್ಳಿ
ವಾಲ್ಮೀಕಿ ಸಮುದಾಯದ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸಮುದಾಯದ ಹಿರಿಯರು ಹಾಗೂ ಎಲ್ಲಾ ಸಮುದಾಯದ ಮುಖಂಡರು ಸೇರಿದಂತೆ ಹಿರಿಯರಿದ್ದರು.