Breaking News
ಇರಕಲ್ ಗಡಾ ಭಾಗದ ರೈತರ ಮನೆ ಮಗ,ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ‌‌ ವಿಧಿವಶ.

*ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಫಲ ಮಂಗಳವಾರ ಬೆಳಗಿನ

ನಿಧನ.

*ಮಾ.24 ರಂದು ಯಲಮಗೇರಿಯಲ್ಲಿ ಅಂತ್ಯಕ್ರಿಯೆ.

*ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಚಿವ ಎಚ್.ಕೆ.ಪಾಟೀಲ್ ಹಾಗೂ ಮಾಜಿ ಸಂಸದ ಎಚ್.ಜಿ.ರಾಮುಲು ಕುಟುಂಬದ ಆಪ್ತರು

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಕಲ್ ಗಡಾ ಭಾಗದ ರೈತರ ಮನೆಮಗ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಸೋಮವಾರ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕೆಲ ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಕರಿಯಣ್ಣ ಸಂಗಟಿಯವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಪತ್ನಿ,ಮೂರು ಜನ ಪುತ್ರರು,ಮೂರು ಜನ ಪುತ್ರಿಯರು ಸೇರಿ ಅಪಾರ ಬಂಧುಗಳು ಹಾಗೂ ಅಭಿಮಾನಿಗಳನ್ನು ಕರಿಯಣ್ಣ ಸಂಗಟಿ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇರಕಲ್ ಗಡ ಸಮೀಪದ ಯಲಮಗೇರಾದಲ್ಲಿ ಮಾ. 24ರಂದು ಮಂಗಳವಾರ ಬೆಳ್ಳಿಗ್ಗೆ10.30ಕ್ಕೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

 

ಕರಿಯಣ್ಣ ಸಂಗಟಿ ಯವರು ಜಿಲ್ಲಾ ಪಂಚಾಯಿತಿಯಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ನಂತರ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಸೇವೆಯನ್ನು ಮಾಡಿದ್ದಾರೆ. ಜಿಲ್ಲೆಯ ನೀರಾವರಿ ಮತ್ತು ವಿದ್ಯುತ್ ಸಮಸ್ಯೆ ಕುರಿತಂತೆ ಹಲವು ಪ್ರತಿಭಟನೆಗಳನ್ನು ಮಾಡಿ ರೈತರಿಗೆ ಕೃಷಿಕರಿಗೆ ಮತ್ತು ಕೆರೆ ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಕರಿಯಣ್ಣ ಸಂಗಟಿ ಕಾರ್ಯವನ್ನು ಮಾಡಿದ್ದಾರೆ.

ಜೂನ್ 1, 1965 ರಂದು ಇರಕಲ್ ಗಡಾ ಹೋಬಳಿಯ ಯಲಮಗೇರಾದಲ್ಲಿ ಜನನವಾಗಿದೆ.ಕೊಪ್ಪಳದಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.

ಗಂಗಾವತಿ ತಾಲೂಕಿನ ಆರಾಳ ಗ್ರಾಮದ ರುದ್ರಮ್ಮ ಇವರೊಂದಿಗೆ ವಿವಾಹವಾಗಿದ್ದಾರೆ.

1982-1983 ರಿಂದ 84 ರವರೆಗೆ ರಾಯಚೂರು ಜಿಲ್ಲಾ ಸೇವಾದಳದ ಸಂಘಟಕರಾಗಿದ್ದರು.

1985-86 ರಿಂದ 89 ರವರೆಗೆ ಕೊಪ್ಪಳ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ. 1990-1992 ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ. 1992 ಸದಸ್ಯರು, ಕೊಪ್ಪಳ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್. 1995 ಸದಸ್ಯರು, ರಾಯಚೂರು ಜಿಲ್ಲಾ ಜಿಲ್ಲಾ ಪಂಚಾಯತ್.1997 ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಜಿಲ್ಲಾ ಪಂಚಾಯತ್.

1998 ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ. ಅಧ್ಯಕ್ಷರು, ಕಾಳಿದಾಸ ಪ್ರೌಢಶಾಲೆ, ಕೊಪ್ಪಳ. ಅಧ್ಯಕ್ಷರು, ರಾಜೀವ್ ಗಾಂಧಿ ಯುವಕ ಮಂಡಲ, ಕೊಪ್ಪಳ.

ಸಾಮಾಜಿಕ ಮತ್ತು ಇತರ ಚಟುವಟಿಕೆಗಳು: ಅವರು ವನಮಹೋತ್ಸವವನ್ನು ಆಚರಿಸುವಲ್ಲಿ ಪಕ್ಷದ ಮುಖ್ಯಸ್ಥರ ನಿರ್ದೇಶನಗಳನ್ನು ಜಾರಿಗೆ ತಂದರು ಮತ್ತು ಕೊಪ್ಪಳದ ಇಡೀ ತಾಲ್ಲೂಕಿನಲ್ಲಿ ಇದನ್ನು ಕಾಣಬಹುದು. ಅವರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಮತ್ತು ಇತರರಿಗಾಗಿ ಆರೋಗ್ಯ ಮತ್ತು ಕಣ್ಣಿನ ಶಿಬಿರವನ್ನು ಏರ್ಪಡಿಸಿದರು ಮತ್ತು ಹೆಚ್ಚಿನ ಸಂಖ್ಯೆಯ ನಾಗರಿಕರು ಪ್ರಯೋಜನ ಪಡೆದರು. ಅವರು ಗ್ರಾಮಸ್ಥರನ್ನು ಕುಟುಂಬ ಯೋಜನೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಪ್ರೇರೇಪಿಸಿದರು ಮತ್ತು 450 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. 1992 ರಲ್ಲಿ ಕೊಪ್ಪಳದಲ್ಲಿ ಶ್ರೀ. ಎಚ್. ಎಸ್. ಪಾಟೀಲ್, ಶ್ರೀ ಗವಿ ಸಿದ್ದಪ್ಪ ಬಳ್ಳಾರಿ ಮತ್ತು ಶ್ರೀ ಎಂ. ಆರ್. ರಾಮಪುರಿ ಅವರ ಮಾರ್ಗದರ್ಶನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಅವರು ಶ್ರಮಿಸಿದರು. ಮಹಿಳಾ ಪಡೆಯನ್ನು ಸಜ್ಜುಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಾರೆ ಮತ್ತು ಅವರನ್ನು ಕಾಂಗ್ರೆಸ್ ಸದಸ್ಯರಾಗಲು ಪ್ರೇರೇಪಿಸಿದ್ದಾರೆ ಮತ್ತು ಅವರು ಮುಸ್ಲಿಂ ಸಮುದಾಯದಲ್ಲಿ ಅಕ್ಕನ ಬಳಗ, ಮಹಿಳ ಮಂಡಲ ಮತ್ತು ಚಾಂದಬಿ ಸಂಘವನ್ನು ನಡೆಸುತ್ತಿದ್ದಾರೆ.

ಕರಿಯಣ್ಣ ಸಂಗಟಿಯವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ,ಸಚಿವ ಎಚ್. ಕೆ.ಪಾಟೀಲ್ ಮಾಜಿ ಸಂಸದರಾದ ಹೆಚ್‌.ಜಿ. ರಾಮುಲು ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ಮುಖಂಡರಿಗೆ ಆಪ್ತರಾಗಿದ್ದರು.

ಸಂತಾಪ: ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ,ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್

ಎಂ.ರೇವಣ್ಣ, ಸಿಎಂ‌ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ,

ಕೊಪ್ಪಳದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕೆ.ರಾಜಶೇಖರ ಹಿಟ್ನಾಳ,

ಶಾಸಕ ಗಾಲಿ ಜನಾರ್ದನ ರೆಡ್ಡಿ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಹೆಚ್.ಆರ್.ಗವಿಯಪ್ಪ,

ಸಚಿವರಾದ ಶಿವರಾಜ ತಂಗಡಗಿ,ಮಾಜಿ ಸಂಸದ ಹೆಚ್.ಜಿ.ರಾಮುಲು,ಕೆ.ವಿರೂಪಾಕ್ಷಪ್ಪ, ಕರಡಿ ಸಂಗಣ್ಣ,ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ,

ಮಾಜಿ ಸಚಿವರಾದ ಸಾಲೋಣಿ ನಾಗಪ್ಪ, ಎಂ.ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ,ಅಮರೇಗೌಡ ಭಯ್ಯಾಪೂರ, ಆನೆಗೊಂದಿ ರಾಜವಂಶದ ಲಲಿತಾರಾಣಿ ಶ್ರೀರಂಗದೇವರಾಯಲು,

ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ,

ಪರಣ್ಣ ಮನವಳ್ಳಿ, ಎಚ್. ಎಸ್. ಮುರಳಿಧರ,ಜಿ.ವೀರಪ್ಪ, ದಡೇಸೂಗೂರು ಬಸವರಾಜ,ಜೆಡಿಎಸ್ ರಾಜ್ಯ ಮುಖಂಡ ಸಿ.ವಿ.ಚಂದ್ರಶೇಖರ ಸೇರಿ ವಿವಿಧ ಸಮಾಜ,ಸಂಘ ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ