Breaking News
ಕರಿಯಣ್ಣ ಸಂಗಟಿಯವರಿಗೆ ಅಭಿಮಾನಿಗಳಿಂದ ಶ್ರದ್ಧಾಂಜಲಿ..

*ಜನಸಾಮಾನ್ಯರ ನಾಯಕ ಕರಿಯಣ್ಣ ಸಂಗಟಿ ಸರಳ ಸಜ್ಜನಿಕೆಯ ಪ್ರತೀಕವಾಗಿದ್ದಾರೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿಧಾನ ಪರಿಷತ್ ಮಾಜಿ ಸದಸ್ಯ ದಿವಂಗತ ಕರಿಯಣ್ಣ ಸಂಗಟಿಯವರು ಜನಸಾಮಾನ್ಯರ ನಾಯಕರಾಗಿದ್ದರು.

ಅವರು ಸರಳ ಸಜ್ಜನಿಕೆಯ ಪ್ರತಿರೂಪವಾಗಿದ್ದರು ಎಂದು ಯುವ ಕಾಂಗ್ರೆಸ್ ಮುಖಂಡ ಎಚ್. ಆರ್. ಭರತ್ ಹೇಳಿದರು.

ಅವರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ಕರಿಯಣ್ಣ ಸಂಗಟಿ ಅಭಿಮಾನಿಗಳ ಬಳಗದ ವತಿಯಿಂದ ದಿವಂಗತ ಕರಿಯಣ್ಣ ಸಂಗಟಿಯರಿಗೆ ನುಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇರಕಲ್ ಗಡ ಭಾಗದಲ್ಲಿ ಸಂಘಟಿಯವರು ರೈತರಿಗೆ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಹಗಲು ಇರುಳು ಕೆಲಸ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ ಎಂಎಲ್ಸಿ ಯಾಗಿ ತಮ್ಮ ಅನುದಾನವನ್ನು ಕೃಷಿಕರು ಮತ್ತು ಗ್ರಾಮೀಣ ಭಾಗದ ಜನರಿಗಾಗಿ ಮೀಸಲಿಟ್ಟು ಯೋಜನೆಗಳನ್ನು ಅನುಷ್ಠಾನ ಮಾಡಿದ್ದರು. ಅವರು ನಮ್ಮೊಂದಿಗೆ ಇಲ್ಲ ಅವರ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

ಈ ಸಂದರ್ಭದಲ್ಲಿ

ಬಿ.ಕೃಷ್ಣಪ್ಪ ನಾಯಕ, ಸೋಮಶೇಖರ್ ಗೌಡ, ಹನುಮಂತ ರಾಯ,ಗೌಳಿ ರಮೇಶ,

ರಾಜಶೇಖರ ಮುಷ್ಟೂರ, ಸುರೇಶ, ಮಂಜುನಾಥ, ಸುರೇಶ್ ಗೌರಪ್ಪ ,ಉಸ್ಮಾನ್ ಬಿಚ್ಗತ್ತಿ ,ಅಶೋಕ ಜುಲೈನಗರ, ಮಾರಪ್ಪ ನಾಯಕ, ವಸಂತ ನಾಯಕ, ಶೋಭಾ ಸಿಂಗ್, ಸಂತೋಷ್ ರಾಯ್ಕರ್ ಜಗದೀಶ್ , ಆಯುಬ್ ಖಾನ್, ವೀರನಗೌಡ, ಅನ್ವರ್ ಜಿನ್ನಾ,ರಾಮಣ್ಣ ಸೇರಿದಂತೆ ಅನೇಕರಿದ್ದರು.