Breaking News
2023,24 ಸಿಂಚನ ಕಾವ್ಯ ಪ್ರಶಸ್ತಿ ಗೆ ಹುರಕಡ್ಲಿ ಶಿವಕುಮಾರ್ ಹಾಗೂ ಸೋಮಲಿಂಗ ಬೇಡರ ಆಯ್ಕೆ.

ಕಿಷ್ಕಿಂಧವಾಣಿ ಸುದ್ದಿ

ಹೂವಿನ ಹಡಗಲಿ: 2023 ರ ಸಿಂಚನ ಕಾವ್ಯ ಪ್ರಶಸ್ತಿಗೆ ಬಾಚಿಗೊಂಡನಹಳ್ಳಿಯ ಹುರಕಡ್ಲಿ ಶಿವಕುಮಾರ ಹಾಗೂ ಸೋಮಲಿಂಗ ಬೇಡರ ಅವರನ್ನು 2023-24 ರ ಸಿಂಚನ ಕಾವ್ಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕಿ ಸವಿತಾ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಸೋಮಲಿಂಗ ಬೇಡರ ಅವರ “ಗೋರಿ ಮತ್ತು ಧರ್ಮ” ಹಾಗೂ ಬಾಚಿಗೊಂಡನಹಳ್ಳಿಯ ಹುರಕಡ್ಲಿ ಶಿವಕುಮಾರ ರವರ “ಕನ್ನಡಮೆನಿಪ್ಪಾ ನಾಡು”

ಕೃತಿಗಳಿಗೆ ಪ್ರಶಸ್ತಿ ಗ ಲಭಿಸಿದೆ. ಪ್ರಶಸ್ತಿ ತಲಾ 5000 ನಗದು, 2000 ರೂ ಮೌಲ್ಯದ ಪುಸ್ತಕಗಳು ಸ್ಮರಣಿಕೆ ನೀಡಿ ಪ್ರಶಸ್ತಿ ಪ್ರದಾನ

ಮಾಡಲಾಗುವುದು. ಮಾರ್ಚ್ 29 ಭಾನುವಾರ ಹೂವಿನ ಹಡಗಲಿಯ ಸರ್ಕಾರಿ ನೌಕರರ ಭವನದಲ್ಲಿ ಪ್ರಶಸ್ತಿ ಪ್ರದಾನ ಹಾಗೂ

ಗದಗಿನ ನಿರಂತರ ಪ್ರಕಾಶನದ ಎ.ಎಸ್ ಮಕಾನದಾರ ರವರ ಕಾವ್ಯ ಕೃತಿ “ದರ್ವೇಶಿ ಪದ್ಯ”

ಕೃತಿಗಳ ಲೋಕಾರ್ಪಣೆ ನಡೆಯಲಿದೆ.

ಹಿರಿಯ ಸಾಹಿತಿ ಹರಪನಹಳ್ಳಿಯ ಇಸ್ಮಾಯಿಲ್ ಯಲಿಗಾರ್ ಕೃತಿಗಳ ಲೋಕಾರ್ಪಣೆ ಮಾಡುವರು.

ಹಾವೇರಿಯ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಉಪನ್ಯಾಸಕಿ

ಡಾ ಪುಷ್ಪಾ ಶಲವಡಿಮಠ

ಕೃತಿ ಕುರಿತು ಮಾಹಿತಿ ನೀಡುವರು.

ಸಾಹಿತಿ ತೋ ಮ ಶಂಕ್ರಯ್ಯ ಅಧ್ಯಕ್ಷತೆ ವಹಿಸುವರು.

ಕವಿ ರಾಮಪ್ಪ ಕೋಟಿಹಾಳ

ಪ್ರಶಸ್ತಿ ಪಡೆದ ಕೃತಿಗಳ ಕುರಿತು ಮಾತನಾಡುವರು.

 

ಇದೇ ವೇಳ ಸಾಹಿತ್ಯ ಸಂಗೀತ ರಂಗಭೂಮಿ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ಗೌರವಿಸಲಾಗುವುದು.

ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು

ಸವಿತಾ ಅಂಗಡಿ ಕೋರಿದ್ದಾರೆ.