ಕೋತಿಗಳ ಹಾವಳಿ ಮೂರು ಜನರಿಗೆ ಗಾಯ!
*ಸಾರ್ವಜನಿಕರ ಆಕ್ರೋಶ,ಅರಣ್ಯ ಇಲಾಖೆಯಿಂದ ಕೋತಿಗಳ ಸೆರೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮನೆ ಹತ್ತಿರ ಇರುವ ಕಾಲೋನಿ ಹಾಗೂ ಬನ್ನಿಗಿಡದ ಕ್ಯಾಂಪ್ ಸೇರಿ ಸುತ್ತಲಿನ ವಾರ್ಡುಗಳಲ್ಲಿ
ಕಳೆದ ಒಂದು ವಾರದಿಂದ ಕೋತಿಗಳ ವಿಪರೀತ ಹಾವಳಿ ಹೆಚ್ಚಾಗಿದ್ದು ಪಾದಚಾರಿಗಳು,ಮನೆ ಮುಂದೆ ಕುಳಿತ ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡಿ ಮೂರು ಜನರು ಗಾಯಗೊಂಡಿದ್ದಾರೆ.
ಸಾರ್ವಜನಿಕರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಂತರ ಅರಣ್ಯ ಇಲಾಖೆಯವರು ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದವರೆಗೆ ಕೋತಿಗಳನ್ನು ಸೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೋತಿಗಳನ್ನು ಸೆರೆ ಹಿಡಿದಿದ್ದರಿಂದ ಅಲ್ಲಿನ ನಿವಾಸಿಗರು ನಿಟ್ಟು ಉಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಬಸವರಾಜ ಪೂಜಾರಿ, ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್, ಗುಂಡಪ್ಪ, ಎಸ್ಎಂ ಡಿ ಸುಲೇಮಾನ್ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಶಿವಾನಂದ, ಮಂಜುನಾಥ್, ಶಿವಕುಮಾರ್, ಗ್ಯಾನನಗೌಡ ಗಸ್ತು ಅರಣ್ಯ ಪಾಲಕರು, ಮೌಲಾಸಾಬ್ ಸೇರಿದಂತೆ ಎಲ್ಲರೂ ಸೇರಿಕೊಂಡು ಕೋತಿ ಹಿಡಿದಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿಂಗನಾಳ ಪಂಪಾಪತಿ,ಕೆ.ಕಾಳಪ್ಪ,
ಮಹಾಬಲೇಶ ಸಿಂಗನಾಳ, ರಾಜಶೇಖರ ಗುಂಡೂರು, ಗೋಪಾಲ ಜಕ್ಕ, ಸಾಗರ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


