Breaking News
ಬೆಂಗಳೂರಿನ 5 ತಿಂಗಳ ಮಗುವಿನ ಕಾಯಿಲೆ ಚಿಕಿತ್ಸೆಗಾಗಿ ಮಿಡಿದ ಗಂಗಾವತಿ ಯುವತಿಯರು! ಸಾರ್ವಜನಿಕರಿಂದ ದೇಣಿಗೆ ಸಂಗ್ರಹ.

*ಮಾನವೀಯತೆಗಿಲ್ಲ ಜಾತಿ,ಗಡಿ ಸೀಮೆ ಯುವತಿಯರ ಕಾರ್ಯಕ್ಕೆ ಮೆಚ್ಚುಗೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಮಾನವೀಯತೆಗೆ ಜಾತಿ, ಗಡಿ, ಸೀಮೆ, ಲಿಂಗ ತಾರತಮ್ಯ ಯಾವುದು ಇಲ್ಲ. ಎಲ್ಲಿಯೂ ಒಂದು ಮಗುಕಾಯಿಲೆಯಿಂದ ಬಳಲುತ್ತಿರುವಾಗ ಗಂಗಾವತಿಯ ಕೆಲ ಯುವತಿಯರು ಮಗುವಿನ ಜೀವ ಉಳಿಸಲು ದಾನಿಗಳಿಂದ

ದೇಣಿಗೆ ಸಂಗ್ರಹಿಸುವ ಕಾರ್ಯ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನ ಮೋಕ್ಷಜ್ಞ ಎನ್ನುವ ಐದು ತಿಂಗಳ ಮಗುವಿಗೆ ಎಸ್ ಎಂ ಎ ಟೈಪ್ -1 ಕಾಯಿಲೆ ಇದ್ದು ಚಿಕಿತ್ಸೆ ಕೋಟ್ಯಾಂತರ ರೂ.ಗಳು ಬೇಕಾಗಿದ್ದು ಮಗುವಿನ ಪಾಲಕರು ಬಡವರಾದ ಕಾರಣ ಧಾರವಾಡದ ಸಾಮರಸ್ಯ ಟ್ರಸ್ಟ್ ಸಾರ್ವಜನಿಕರಿಂದ ದೇಣಿಗೆಗಳನ್ನು ಸಂಗ್ರಹಿಸಿ ಪಾಲಕರಿಗೆ ಕೊಡುವ ಉದ್ದೇಶ ಹೊಂದಿದ್ದು ಗಂಗಾವತಿಯಲ್ಲಿ ಟ್ರಸ್ಟ್ ಪರವಾಗಿ ಸಿದ್ದಿಕೇರಿಯ ಪದವೀಧರ ಯುವತಿರಾದ ಲಕ್ಷ್ಮಿ, ಚೈತ್ರಾ,ಅಖಿಲಾ ಮತ್ತು ಕುಮಾರ ಪ್ರಜ್ವಲ್ ಕಳೆದೆರಡು ದಿನಗಳಿಂದ ಗಂಗಾವತಿ ನಗರದ ಬೀದಿಗಳಲ್ಲಿ ಸುತ್ತಾಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ಮಾನವೀಯ ಕಾರ್ಯದ ಕುರಿತು ತಂಡದಲ್ಲಿರುವ ಅತಿಥಿ ಶಿಕ್ಷಕಿ ಲಕ್ಷ್ಮಿ ಮಾತನಾಡಿ, ಮೋಕ್ಷಜ್ಞ ಚಿಕ್ಕ ಮಗುವಾಗಿದ್ದು ಪಾಲಕರು ಆರ್ಥಿಕವಾಗಿ ಚಿಕಿತ್ಸೆ ಕೊಡಿಸುವಷ್ಟು ಹಣ ಹೊಂದಿಸಲು ಆಗುತ್ತಿಲ್ಲ ಈಗಾಗಲೇ ಅನೇಕ ದಾನಿಗಳು ಮಗುವಿನ ಚಿಕಿತ್ಸೆ ಸ್ಪಂದಿಸಿ ದೇಣಿಗೆ ನೀಡಿದ್ದಾರೆ. ಗಂಗಾವತಿ ಜನರು ಸಹ ಇಡೀ ನಾಡಿನ ಮಠ ಮಾನ್ಯಗಳಿಗೆ ಅಕ್ಕಿಯನ್ನು ದೇಣಿಗೆ ನೀಡಿ ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದ್ದು ಮಗುವಿನ ಚಿಕಿತ್ಸೆಗೆ ಹಣ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆಯ ಬೇಕಿದ್ದು ಕಳೆದೆರಡು‌ ದಿನಗಳಿಂದ ಜನರ ಸ್ಪಂದನೆ ಅತ್ಯುತ್ತಮವಾಗಿದೆ. ನಾವು ಸಂಗ್ರಹಿಸುವ ಹಣವನ್ನು ಧಾರವಾಡದ ಸಾಮರಸ್ಯ ಟ್ರಸ್ಟ್ ಗೆ ಕಳಿಸಿ ಅಲ್ಲಿಂದ ಮಗುವಿನ‌ ಪಾಲಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.