Breaking News
ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿಸುವಂತೆ ಗ್ರಾಮಸ್ಥರಿಂದ ಪಾದಯಾತ್ರೆ ಪ್ರತಿಭಟನೆ. * ಕಂದಾಯ ನಿರೀಕ್ಷಕನಿಂದ ಅವಜ್ಞಾನಿಕ ವರದಿ ತಿರಸ್ಕರಿಸುವಂತೆ ಒತ್ತಾಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಆಗ್ರಹಿಸಿ ಬಸವನದುರ್ಗ ಗ್ರಾಮಸ್ಥರು ತಮ್ಮ ಗ್ರಾಮದಿಂದ ಗಂಗಾವತಿಯ ತಹಸೀಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಕೆ. ವಿ. ವೆಂಕಟೇಶ ಬಾಬು ಮಾತನಾಡಿ, ಬಸವನದುರ್ಗ ಗ್ರಾಮ ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಇಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಹಟ್ಟಿ, ಕ್ಯಾಂಪು,ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜಿಲ್ಲಾಡಳಿತಕ್ಕೆ ವರದಿಯನ್ನು ಕಳಿಸುವಾಗ ಆನೆಗೊಂದಿ ಭಾಗದ ಕಂದಾಯ ನಿರೀಕ್ಷಕ ಬಷೀರ್ ಅಹಮದ್ ಎನ್ನುವ ಅಧಿಕಾರಿ ಬಸವನ ದುರ್ಗದ ಬಗ್ಗೆ ತಪ್ಪು ಮಾಹಿತಿಯನ್ನು ಕಳಿಸಿದ್ದರಿಂದ ಈ ಭಾರಿ ಬಸವನದುರ್ಗ ಕಂದಾಯ ಗ್ರಾಮವಾಗಿ ಮಾರ್ಪಡಲು ಸಾಧ್ಯವಿಲ್ಲ, ಆದ್ದರಿಂದ ಅಧಿಕಾರಿಯ ಅವೈಜ್ಞಾನಿಕ ವರದಿಯನ್ನು ತಿರಸ್ಕಾರ ಮಾಡಿ, ಪುನಃ ವರದಿ ಪಡೆದು ಇದೇ ವರ್ಷದಲ್ಲಿ ಬಸವನ ದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಿರಂತರವಾಗಿ ಗ್ರಾಮದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ,  ಗ್ರಾ.ಪಂ.ಮಾಜಿ  ಸದಸ್ಯ ರಾಜಶೇಖರ, ರಾಮಕೃಷ್ಣ ನಾಯಕ,  ಯಮನಪ್ಪ, ಲೈಂದರ್,  ಸಲೀಂ ಪಾಷಾ,  ಎ.ರಮೇಶ,  ಶ್ರೀನಿವಾಸ ರೆಡ್ಡಿ, ನಾಗೆರೆಡ್ಡಿ,  ಗೋಪಾಲ್ ರೆಡ್ಡಿ,  ಜಗದೀಶ, ಮಂಜುನಾಥ ಜಂಗರ,   ವೇಣುಗೋಪಾಲ,  ಎ. ರವಿ,  ರಾಮನಗೌಡ, ರಂಗಪ್ಪ , ಅಂಬರೀಶ, ಸುಗಪ್ಪ , ಬೇಗಮ್ಮ, ರೇಣಮ್ಮ, ದುರ್ಗಮ್ಮ, ಯಮನಮ್ಮ ಸೇರಿದಂತೆ ಅನೇಕರಿದ್ದರು.