ಕುಟುಂಬದ ಏಳ್ಗೆ, ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ: ಪದ್ಮವಿಠ್ಠಲ್ *ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ದಿನಾಚರಣೆ

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ಕುಟುಂಬದ ಏಳ್ಗೆ ಮತ್ತು ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ. ಆದ್ದರಿಂದ ಮಹತ್ವದ ವಿಷಯಗಳನ್ನು ಪುರುಷರು
ಮಹಿಳೆಯರ ಹತ್ತಿರ ಚರ್ಚಿಸುವುದು ಅಗತ್ಯವಾಗಿದೆ ಎಂದು ಸಂಘಪರಿವಾರದ ಹಿರಿಯರಾದ ಪದ್ಮವಿಠಲ್ ಹೇಳಿದರು.
ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಘಾಟಿಸಿದರು
ಪ್ರಸಕ್ತ ದಿನಗಳಲ್ಲಿ ಮಹಿಳೆ ನೌಕರಿಯ ಜೊತೆಗೆ ಕುಟುಂಬ ಪಾಲನೆಯ ಹೊರೆ ಹಾಗೂ ಜವಾಬ್ದಾರಿ ಮಹತ್ತರವಾಗಿದೆ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯೂ ಆಕೆಯ ಮೇಲಿದೆ.
ಕುಟುಂಬವನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸಲು ಮಹಿಳೆಯು ಉದ್ಯೋಗಸ್ಥಿಯಾಗುವುದು ಅನಿವಾರ್ಯವಾಗಿದೆ ಎಂದರು.
ಪ್ರಸ್ತಾವಿಕವಾಗಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂಪಿಎಂ ಮಂಜುನಾಥ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ಮಹಿಳೆಯರ ವಸೇವೆ ಯನ್ನು ಗುರುತಿಸಿ ಈ ವರ್ಷ ಸನ್ಮಾನಿಸುತ್ತಿರುವುದು ಸಂಘದ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ನಾಗರತ್ನ ವೈ ಇಟಗಿ, ಸಂಘದ ಪದಾಧಿಕಾರಿಗಳಾದ ಆರ್. ಜಯಶ್ರೀ, ಅರ್ಪಿತ ಆನಂದ್, ಗಾಳೆಮ್ಮ. ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ದೀಪಿಕಾ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜೆ.ಎಂ. ಜ್ಯೋತೇಶ್ವರಿ. ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಗೌರಮ್ಮ ಆಯುಷ್ಯ ಡಾ. ಹಾಲಮ್ಮ, ಎಂ. ಯಂಕ ರೆಡ್ಡಿ. ಹಂಸಾಗರದ ಆನಂದ,ಆಂಜನೇಯ, ಸೋಮಶೇಖರ್,
ಎನ್ ಮಂಜುನಾಥ, ಸದಸ್ಯ ರಾಜು ಸೋಗಿ, ಸೊನ್ನದ ಕೊಟ್ರೇಶ್, ಹೆಚ್ ಲೋಕಪ್ಪ, ಗುಲ್ಜಾರ್ ಬೇಗಮ್, ನಾಗಲಕ್ಷ್ಮಿ, ಕೆಎಂ ನಿರ್ಮಲ,ಭಾರತಿ. ಪ್ರಮೋದಿನಿ, ಕವಿತಾ, ಉಷಾರಾಣಿ,ಖಾಜಾ ಬೂನ, ಶಾಂತಕುಮಾರಿ, ಶೋಭಾ, ಶಾರದಾ ಇದ್ದರು.

