Breaking News
ಅಕ್ರಮ‌ ಪಿಡಿಎಸ್ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಸಂಘಟನೆಗಳ ಮುಖಂಡರು!

*ಮಾನ್ವಿ ಮೂಲದ ಗಣ್ಯ ವ್ಯಕ್ತಿಯೊರ್ವನ ಮಾಲೀಕತ್ವದ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ ಆರೋಪ.

*ಕೂಕನಪಳ್ಳಿಯಿಂದ ಮಾನ್ವಿ ರೈಸ್ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ.

*ಅಕ್ರಮ ಕುರಿತು ಪ್ರಭಾವುಗಳ ಕೈವಾಡ,

ಪೊಲೀಸ್ ಕೇಸ್ ದಾಖಲಿಸುವಂತೆ ಸಂಘಟನೆಯ ಮುಖಂಡರ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಕನ್ನಡಪರ,ದಲಿತಪರ ಸಂಘಟನೆಗಳ ಮುಖಂಡರು ಹಿಡಿದು ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಶನಿವಾರ ಬೆಳಗ್ಗೆ ಜರುಗಿದೆ.

ಖಚಿತ ಮಾಹಿತಿಯ ಮೇರೆಗೆ ಸಂಘಟನೆಗಳ ಮುಖಂಡರು ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಕೂಕನಪಳ್ಳಿ ಯಿಂದ ಮಾನ್ವಿ ಕಡೆಗೆ ಹೊರಟಿದ್ದ ನಾಲ್ಕು ಲಾರಿಗಳ ಪೈಕಿ ಒಂದನ್ನು ಹಿಡಿದು ದಾಖಲಾತಿ ಪರಿಶೀಲಿಸಿ ನಂತರ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯ

ಚೀಲಗಳು ಇರುವ ಕುರಿತು ಮಾಹಿತಿ ನೀಡಿದ್ದಾರೆ.

ಕೂಡಲೇ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ ಹಾಗೂ ಪೊಲೀಸ್ ಇಲಾಖೆಯವರು ಲಾರಿಯನ್ನು ನಗರ ಪೊಲೀಸ್ ಠಾಣೆಗೆ ತಂದು ಅಕ್ಕಿ ಸಾಗಿಸುತ್ತಿದ್ದ ಕುರಿತು ಅಧಿಕೃತ ಬಿಲ್ ಹಾಗೂ ಚಾಲಕನಿಂದ ಮಾಹಿತಿಯನ್ನು ಪಡೆದು 35 ಟನ್ ಅಕ್ಕಿಯಲ್ಲಿ ಪಿಡಿಎಸ್ ಹಾಗೂ ಇತರೆ ಅಕ್ಕಿ ಇರುವ ಕುರಿತು ತಪಾಸಣೆ ನಡೆಸುತ್ತಿದ್ದಾರೆ.

ಒಂದು ಮಾಹಿತಿ ಪ್ರಕಾರ ಮಾನ್ವಿಯ ಕಾಂಗ್ರೆಸ್ ಮುಖಂಡನೊರ್ವನ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಪಿಡಿಎಸ್ ಅಕ್ಕಿಯನ್ನು ಪಾಲೀಸ್ ಮಾಡಿ ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು

ಇದಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ಅಕ್ಕಿ ತುಂಬಿಸಿಕೊಂಡು ಮಾನ್ವಿಗೆ ಸಾಗಿಸುವ ಕುರಿತು ಮಾಹಿತಿ ಇದೆ.

ಗೊಂದಲ: ಸಂಘಟನೆ ಅವರು ಹೇಳುವ ಪ್ರಕಾರ ಕುಕನಪಳ್ಳಿ

ಯಿಂದ ಮಾನ್ವಿಗೆ 5 ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತ, ನಾವು ಬರುವ ವೇಳೆಗೆ ನಾಲ್ಕು ಲಾರಿಗಳು ಪಾಸ್ ಆಗಿದ್ದು ಒಂದು ಲಾರಿಯನ್ನು ಮಾತ್ರ ನಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.ಲಾರಿಗಳು ಸಂಚಾರ ಮಾಡಿದ ವಿಡಿಯೋ ಹೇಮಗುಡ್ಡ ಮತ್ತು ಮರಳಿ ಟೋಲ್ ನಲ್ಲಿ ಚಿತ್ರೀಕರಣವಾಗಿದ್ದು ಮಾನ್ವಿ ಮೂಲದ ಕೆಲವು ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಪಿಡಿಎಫ್ ಅಕ್ಕಿಯನ್ನು ಮಾರಾಟ ಮಾಡುವ ಜಾಲಹೊಂದಿದ್ದು,ಆ ಮೂಲಕ ರಾಯಚೂರು,ಕೊಪ್ಪಳ ಜಿಲ್ಲೆಯಿಂದ ಪಿ ಡಿ ಎಸ್ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಪಾಲಿಶ್ ಮಾಡಿ,ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಕೇಸ್ ಆಗದಂತೆ ಮಾನ್ವಿದ ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ರಾಜಕೀಯ ವ್ಯಕ್ತಿಯ ಮೂಲಕ ಪೊಲೀಸ್ ಮೇಲೆ ಒತ್ತಡ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಕೇಸ್ ದಾಖಲು:

ಕೆಲವು ಸಂಘಟನೆಯವರು ವಡ್ಡರಹಟ್ಟಿ ಹತ್ತಿರ ಲಾರಿಯೊಂದನ್ನ ತಡೆದು ಅದರಲ್ಲಿ ಪಿ ಡಿ ಎಸ್ ಅಕ್ಕಿಯ ಚೀಲಗಳು ಇವೆ ಎಂದು ಪೊಲೀಸ್ ಠಾಣೆಗೆ ಆಹಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಸಿದ್ದು ,ಈ ಕುರಿತು ಪರಿಶೀಲನೆ ಮಾಡಿ ಅಕ್ರಮ ಪಿ ಡಿ ಎಸ್ ಹಾಕಿ ಸಾಗಾಟದ ಕುರಿತು ದೂರು ದಾಖಲಿಸಿಕೊಳ್ಳಲಾಗುತ್ತದೆ ಎಂದು ಡಿವೈಎಸ್ ಪಿ

ಜೆ.ಎಸ್. ನ್ಯಾಮಗೌಡ ತಿಳಿಸಿದ್ದಾರೆ.