Breaking News
ವೈಭವದಿಂದ ಜರುಗಿದ ಬಾಚಿಗೊಂಡನಹಳ್ಳಿ-2 ಶ್ರೀ ಆಂಜನೇಯ ಸ್ವಾಮಿ ನೂತನ ಮಹಾರಥೋತ್ಸವ.

* ಹೋಮ,ಹವನ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನೂತನ ರಥೋತ್ಸವಕ್ಕೆ ಚಾಲನೆ.
* ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಪೂಜ್ಯರಿಂದ ಸನ್ಮಾನ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ವೈಭವ,ಶ್ರದ್ಧೆ, ಭಕ್ತಿಯಿಂದ ಜರುಗಿದ ತಾಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯದೈವ ಶ್ರೀಆಂಜನೇಯಸ್ವಾಮಿ ದೇವರ ನೂತನ ಮಹಾರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ತುಂಗಭದ್ರಾ ಡ್ಯಾಂ ನಿರ್ಮಾಣದ ನಂತರ ಸ್ಥಳಾಂತರಗೊಂಡಿದ್ದ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ತೇರು ಶೀಥಿಲಾವಸ್ಥೆಯಾಗಿದ್ದರಿಂದ ಗ್ರಾಮಸ್ಥರು ದೇಣಿಗೆ ಸಲ್ಲಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಹಗರಿಬೊಮ್ಮನಹಳ್ಳಿಯ ಸಿದ್ದಪ್ಪ ಚಿತ್ರಗಾರ ಶಿಲ್ಪಿ ಅವರು ವೈಶಿಷ್ಟ್ಯಪೂರ್ಣವಾಗಿ ಸಂಪ್ರದಾಯದಂತೆ
ಆರ್ಷಕವಾಗಿ ತೇರು ನಿರ್ಮಿಸಿದ್ದಾರೆ.
ಶ್ರೀ ರಾಮನವಮಿ ಶುಕ್ರವಾರದಂದು ಬೆಳಗಿನ ಜಾವ ಹೋಮ ಹವನ ರುದ್ರಾಭಿಷೇಕವನ್ನು ಕೈಗೊಂಡು ನಂತರ ದಂಪತಿಗಳ ಸಮೇತ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ಸಂಜೆ ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು.
ರಥೋತ್ಸವದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯರಿಂದ ರಥ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಿದ್ದ ದಾನಿಗಳನ್ನು ಸತ್ಕರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಹಂಪಸಾಗರದ ಮಹದೇವ ತಾತನವರು, ಕಡ್ಲ ಬಾಳಿನ ಗವಿಮಠದ ಶಾಂತವೀರ ಸ್ವಾಮಿಗಳು, ತೋಂಟದಾರ್ಯ ಮಠದ ಕಿರಿಯ ಸ್ವಾಮೀಜಿ, ಗಾಯಿತ್ರಿ ದೇವಸ್ಥಾನದ ಅರ್ಚಕ ವೆಂಕಟ ರಾಮರಾಜು,
ಗ್ರಾಮದ ಮುಖಂಡರಾದ ಹೊಳಗುಂದಿ ಕೊಟ್ರಪ್ಪ, ನೇತಾಜಿಗೌಡ,
ಶೇಖರಪ್ಪ ,ಶ್ರೀಕಾಂತ ನೇತಾಜಿ ಗೌಡ ವೀರಭದ್ರಪ್ಪ ಸಣ್ಣಬಸಪ್ಪ ಗೊಂಡಬಾಳ,ನೆಂಬದಾರ ಪಿತಾಂಬ್ರಪ್ಪ,ಬಿ.ಸುರೇಶ,ಗೊಂಡಬಾಳ ಮಂಜುನಾಥ,ಗೊಂಡಬಾಳ ನಾಗರಾಜ, ಗೊಂಡಬಾಳ ರುದ್ರಪ್ಪ,
ಜಿ.ಚೆನ್ನಪ್ಪ, ಹೇಮಂತಕುಮಾರ,ಆನಂದ ಹರಿಜನ,ಪರಶುರಾಮ, ಫಕೀರಪ್ಪದುರುಗಪ್ಪ,ದವಲಸಾನ,ರಾಜಸಾಬ,ಚಿತ್ವಾಡಗಿ ವಿರೇಶ,ಚಿತ್ವಾಡಗಿ ದುರುಗಪ್ಪ ಸರ್ವ ಸಮಾಜದವರು ಪಾಲ್ಗೊಂಡಿದ್ದರು.

ವಿದೇಶಿ ಮಹಿಳೆ ಅತ್ಯಾಚಾರ ಕೇಸ್ ಸೇರಿ ಅತೀ ಸೂಕ್ಷ್ಮ ಕೇಸ್ ಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ವಿಯಾದ    ಪಿಐ ಪ್ರಕಾಶ ಎಲ್.ಮಾಳೆಯವರಿಗೆ ಮುಖ್ಯಮಂತ್ರಿ ಪದಕ ಘೋಷಣೆ. 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ರಾಜ್ಯ ಪೊಲೀಸ್‌ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಗಂಗಾವತಿ ನಗರದ ಪೊಲೀಸ್ ಠಾಣೆ ಪಿಐ ಪ್ರಕಾಶ ಎಲ್.ಮಾಳೆ ಅವರು ಭಾಜನರಾಗಿದ್ದಾರೆ. ಅವರು ತಮ್ಮ ಕರ್ತವ್ಯದ ಅವಧಿಯಲ್ಲಿ ತೋರಿದ ನಿಷ್ಠೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತ್ತೀಚಿಗೆ ಜರುಗಿದ ಸಾಣಾಪುರ ಕೆರೆಯ ಹತ್ತಿರ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಕೋಮು ಸಂಘರ್ಷ ಇತರೆ ಸೂಕ್ಷ್ಮ ಕೇಸ್ ಗಳಲ್ಲಿ ಪ್ರಕಾಶ್ ಮಾಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಇತರ ಅಧಿಕಾರಿಗಳ ಜೊತೆಗೆ ಕಾರ್ಯ ಮಾಡಿದ್ದಾರೆ.

ಈಗಾಗಲೇ ವಲಯ ಪೊಲೀಸ್ ಅಧಿಕಾರಿಗಳು ಪ್ರಕಾಶ್ ಮಾಳೆ ಸೇರಿದಂತೆ ಈ ಪ್ರಕರಣಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಸನ್ಮಾನಿಸಿದ್ದಾರೆ.

ಮಾಳೆ ಅವರು ಕೊಪ್ಪಳ,ರಾಯಚೂರು,ಬಳ್ಳಾರಿ ಜಿಲ್ಲೆಯಲ್ಲಿ ಪಿಎಸೈ, ಸಿಪಿಐಯಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಳೆ ಅವರ ಕರ್ತವ್ಯವನ್ನು ಪೊಲೀಸ್ ಇಲಾಖೆ ಗುರುತಿಸಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ

ಘೋಷಿಸಿಸಲಾಗಿದೆ.

ಪ್ರಶಸ್ತಿ ಭಾಜನರಾದ ಪ್ರಕಾಶ ಮಾಳೆ ಯವರನ್ನು

ಗಂಗಾವತಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಅಭಿನಂದಸಿ ಸನ್ಮಾನಿಸಿ ಗೌರವಿಸಿದರು.

ಏ 02ಕ್ಕೆ ಪ್ರದಾನ:

ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏ. 02 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.

ಈ ಸಂದರ್ಭದಲ್ಲಿ ಪಿಎಸ್ಐ ಟಿ.ಜಿ.ನಾಗರಾಜ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರಿದ್ದರು.

ಅಕ್ರಮ‌ ಪಿಡಿಎಸ್ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ ಸಂಘಟನೆಗಳ ಮುಖಂಡರು!

*ಮಾನ್ವಿ ಮೂಲದ ಗಣ್ಯ ವ್ಯಕ್ತಿಯೊರ್ವನ ಮಾಲೀಕತ್ವದ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ ಆರೋಪ.

*ಕೂಕನಪಳ್ಳಿಯಿಂದ ಮಾನ್ವಿ ರೈಸ್ ಮಿಲ್ ಗೆ ಪಿಡಿಎಸ್ ಅಕ್ಕಿ ಸಾಗಾಣಿಕೆ.

*ಅಕ್ರಮ ಕುರಿತು ಪ್ರಭಾವುಗಳ ಕೈವಾಡ,

ಪೊಲೀಸ್ ಕೇಸ್ ದಾಖಲಿಸುವಂತೆ ಸಂಘಟನೆಯ ಮುಖಂಡರ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಗಳನ್ನು ಕನ್ನಡಪರ,ದಲಿತಪರ ಸಂಘಟನೆಗಳ ಮುಖಂಡರು ಹಿಡಿದು ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ಗಂಗಾವತಿಯ ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಶನಿವಾರ ಬೆಳಗ್ಗೆ ಜರುಗಿದೆ.

ಖಚಿತ ಮಾಹಿತಿಯ ಮೇರೆಗೆ ಸಂಘಟನೆಗಳ ಮುಖಂಡರು ವಡ್ಡರಹಟ್ಟಿ ಕ್ಯಾಂಪ್ ಹತ್ತಿರ ಕೂಕನಪಳ್ಳಿ ಯಿಂದ ಮಾನ್ವಿ ಕಡೆಗೆ ಹೊರಟಿದ್ದ ನಾಲ್ಕು ಲಾರಿಗಳ ಪೈಕಿ ಒಂದನ್ನು ಹಿಡಿದು ದಾಖಲಾತಿ ಪರಿಶೀಲಿಸಿ ನಂತರ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯ

ಚೀಲಗಳು ಇರುವ ಕುರಿತು ಮಾಹಿತಿ ನೀಡಿದ್ದಾರೆ.

ಕೂಡಲೇ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಶೇಖರಪ್ಪ ಹಾಗೂ ಪೊಲೀಸ್ ಇಲಾಖೆಯವರು ಲಾರಿಯನ್ನು ನಗರ ಪೊಲೀಸ್ ಠಾಣೆಗೆ ತಂದು ಅಕ್ಕಿ ಸಾಗಿಸುತ್ತಿದ್ದ ಕುರಿತು ಅಧಿಕೃತ ಬಿಲ್ ಹಾಗೂ ಚಾಲಕನಿಂದ ಮಾಹಿತಿಯನ್ನು ಪಡೆದು 35 ಟನ್ ಅಕ್ಕಿಯಲ್ಲಿ ಪಿಡಿಎಸ್ ಹಾಗೂ ಇತರೆ ಅಕ್ಕಿ ಇರುವ ಕುರಿತು ತಪಾಸಣೆ ನಡೆಸುತ್ತಿದ್ದಾರೆ.

ಒಂದು ಮಾಹಿತಿ ಪ್ರಕಾರ ಮಾನ್ವಿಯ ಕಾಂಗ್ರೆಸ್ ಮುಖಂಡನೊರ್ವನ ಮಾಲೀಕತ್ವದ ರೈಸ್ ಮಿಲ್ ನಲ್ಲಿ ಪಿಡಿಎಸ್ ಅಕ್ಕಿಯನ್ನು ಪಾಲೀಸ್ ಮಾಡಿ ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು

ಇದಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ಅಕ್ಕಿ ತುಂಬಿಸಿಕೊಂಡು ಮಾನ್ವಿಗೆ ಸಾಗಿಸುವ ಕುರಿತು ಮಾಹಿತಿ ಇದೆ.

ಗೊಂದಲ: ಸಂಘಟನೆ ಅವರು ಹೇಳುವ ಪ್ರಕಾರ ಕುಕನಪಳ್ಳಿ

ಯಿಂದ ಮಾನ್ವಿಗೆ 5 ಲಾರಿಗಳಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತ, ನಾವು ಬರುವ ವೇಳೆಗೆ ನಾಲ್ಕು ಲಾರಿಗಳು ಪಾಸ್ ಆಗಿದ್ದು ಒಂದು ಲಾರಿಯನ್ನು ಮಾತ್ರ ನಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.ಲಾರಿಗಳು ಸಂಚಾರ ಮಾಡಿದ ವಿಡಿಯೋ ಹೇಮಗುಡ್ಡ ಮತ್ತು ಮರಳಿ ಟೋಲ್ ನಲ್ಲಿ ಚಿತ್ರೀಕರಣವಾಗಿದ್ದು ಮಾನ್ವಿ ಮೂಲದ ಕೆಲವು ಪ್ರಮುಖರು ಹಾಗೂ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಪಿಡಿಎಫ್ ಅಕ್ಕಿಯನ್ನು ಮಾರಾಟ ಮಾಡುವ ಜಾಲಹೊಂದಿದ್ದು,ಆ ಮೂಲಕ ರಾಯಚೂರು,ಕೊಪ್ಪಳ ಜಿಲ್ಲೆಯಿಂದ ಪಿ ಡಿ ಎಸ್ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಪಾಲಿಶ್ ಮಾಡಿ,ಬೇರೆ ರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ಕೇಸ್ ಆಗದಂತೆ ಮಾನ್ವಿದ ರಾಜ್ಯ ಮಟ್ಟದ ಕಾಂಗ್ರೆಸ್ ಪಕ್ಷದ ರಾಜಕೀಯ ವ್ಯಕ್ತಿಯ ಮೂಲಕ ಪೊಲೀಸ್ ಮೇಲೆ ಒತ್ತಡ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಕೇಸ್ ದಾಖಲು:

ಕೆಲವು ಸಂಘಟನೆಯವರು ವಡ್ಡರಹಟ್ಟಿ ಹತ್ತಿರ ಲಾರಿಯೊಂದನ್ನ ತಡೆದು ಅದರಲ್ಲಿ ಪಿ ಡಿ ಎಸ್ ಅಕ್ಕಿಯ ಚೀಲಗಳು ಇವೆ ಎಂದು ಪೊಲೀಸ್ ಠಾಣೆಗೆ ಆಹಾರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಒಪ್ಪಿಸಿದ್ದು ,ಈ ಕುರಿತು ಪರಿಶೀಲನೆ ಮಾಡಿ ಅಕ್ರಮ ಪಿ ಡಿ ಎಸ್ ಹಾಕಿ ಸಾಗಾಟದ ಕುರಿತು ದೂರು ದಾಖಲಿಸಿಕೊಳ್ಳಲಾಗುತ್ತದೆ ಎಂದು ಡಿವೈಎಸ್ ಪಿ

ಜೆ.ಎಸ್. ನ್ಯಾಮಗೌಡ ತಿಳಿಸಿದ್ದಾರೆ.