ವೈಭವದಿಂದ ಜರುಗಿದ ಬಾಚಿಗೊಂಡನಹಳ್ಳಿ-2 ಶ್ರೀ ಆಂಜನೇಯ ಸ್ವಾಮಿ ನೂತನ ಮಹಾರಥೋತ್ಸವ.

* ಹೋಮ,ಹವನ,ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನೂತನ ರಥೋತ್ಸವಕ್ಕೆ ಚಾಲನೆ.
* ರಥ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳಿಗೆ ಪೂಜ್ಯರಿಂದ ಸನ್ಮಾನ.
ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ವೈಭವ,ಶ್ರದ್ಧೆ, ಭಕ್ತಿಯಿಂದ ಜರುಗಿದ ತಾಲೂಕಿನ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯದೈವ ಶ್ರೀಆಂಜನೇಯಸ್ವಾಮಿ ದೇವರ ನೂತನ ಮಹಾರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ತುಂಗಭದ್ರಾ ಡ್ಯಾಂ ನಿರ್ಮಾಣದ ನಂತರ ಸ್ಥಳಾಂತರಗೊಂಡಿದ್ದ ಬಾಚಿಗೊಂಡನಹಳ್ಳಿ-2 ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ತೇರು ಶೀಥಿಲಾವಸ್ಥೆಯಾಗಿದ್ದರಿಂದ ಗ್ರಾಮಸ್ಥರು ದೇಣಿಗೆ ಸಲ್ಲಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಹಗರಿಬೊಮ್ಮನಹಳ್ಳಿಯ ಸಿದ್ದಪ್ಪ ಚಿತ್ರಗಾರ ಶಿಲ್ಪಿ ಅವರು ವೈಶಿಷ್ಟ್ಯಪೂರ್ಣವಾಗಿ ಸಂಪ್ರದಾಯದಂತೆ
ಆರ್ಷಕವಾಗಿ ತೇರು ನಿರ್ಮಿಸಿದ್ದಾರೆ.
ಶ್ರೀ ರಾಮನವಮಿ ಶುಕ್ರವಾರದಂದು ಬೆಳಗಿನ ಜಾವ ಹೋಮ ಹವನ ರುದ್ರಾಭಿಷೇಕವನ್ನು ಕೈಗೊಂಡು ನಂತರ ದಂಪತಿಗಳ ಸಮೇತ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು ಸಂಜೆ ನಾಡಿನ ಹಲವು ಮಠಾಧೀಶರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು.
ರಥೋತ್ಸವದ ನಂತರ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯರಿಂದ ರಥ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಿದ್ದ ದಾನಿಗಳನ್ನು ಸತ್ಕರಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮಿ, ಹಂಪಸಾಗರದ ಮಹದೇವ ತಾತನವರು, ಕಡ್ಲ ಬಾಳಿನ ಗವಿಮಠದ ಶಾಂತವೀರ ಸ್ವಾಮಿಗಳು, ತೋಂಟದಾರ್ಯ ಮಠದ ಕಿರಿಯ ಸ್ವಾಮೀಜಿ, ಗಾಯಿತ್ರಿ ದೇವಸ್ಥಾನದ ಅರ್ಚಕ ವೆಂಕಟ ರಾಮರಾಜು,
ಗ್ರಾಮದ ಮುಖಂಡರಾದ ಹೊಳಗುಂದಿ ಕೊಟ್ರಪ್ಪ, ನೇತಾಜಿಗೌಡ,
ಶೇಖರಪ್ಪ ,ಶ್ರೀಕಾಂತ ನೇತಾಜಿ ಗೌಡ ವೀರಭದ್ರಪ್ಪ ಸಣ್ಣಬಸಪ್ಪ ಗೊಂಡಬಾಳ,ನೆಂಬದಾರ ಪಿತಾಂಬ್ರಪ್ಪ,ಬಿ.ಸುರೇಶ,ಗೊಂಡಬಾಳ ಮಂಜುನಾಥ,ಗೊಂಡಬಾಳ ನಾಗರಾಜ, ಗೊಂಡಬಾಳ ರುದ್ರಪ್ಪ,
ಜಿ.ಚೆನ್ನಪ್ಪ, ಹೇಮಂತಕುಮಾರ,ಆನಂದ ಹರಿಜನ,ಪರಶುರಾಮ, ಫಕೀರಪ್ಪದುರುಗಪ್ಪ,ದವಲಸಾನ,ರಾಜಸಾಬ,ಚಿತ್ವಾಡಗಿ ವಿರೇಶ,ಚಿತ್ವಾಡಗಿ ದುರುಗಪ್ಪ ಸರ್ವ ಸಮಾಜದವರು ಪಾಲ್ಗೊಂಡಿದ್ದರು.

