ಕುಡುಗೋಲಿನಿಂದ ಹಲ್ಲೆ: ಐವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ ನ್ಯಾಯಾಲಯ.
ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆದು ಕುಡುಗೋಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪಿಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಲಯ ಆರೋಪಿತರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಸಾವಿರ ದಂಡ ಹಾಗು 6 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ರೂ.2,500/- ದಂಡ ವಿಧಿಸಿದ ನ್ಯಾಯಾಲಯದ ತೀರ್ಪು ಪ್ರಕಟಿಸಿದೆ.
28.10.2015 ರಂದು ಸಂಜೆ 7-00 ಗಂಟೆಗೆ ದಶಮಾಪುರ ಗ್ರಾಮದಲ್ಲಿ ಹಿರಿಯರ ಆಸ್ತಿ ಪಾಲು ವಿಭಾಗ ಮಾಡಿಕೊಂಡ ವಿಷಯದಲ್ಲಿ ಹಳೇ ವೈಶಮ್ಯದಿಂದ ಆಯುಧಗಳನ್ನು ಹಿಡಿದುಕೊಂಡು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೆ. ಕನಕಪ್ಪ, ಅನ್ನಪೂರ್ಣ. ಅಂಜಿನಪ್ಪ ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ತೀವ್ರ ಗಾಯಪಡಿಸಿ ಪ್ರಾಣ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೆ.ಅಂಜಿನಪ್ಪ, (ಮೃತ ಪಟ್ಟಿರುತ್ತಾರೆ), ಕೆ.ರಂಗಪ್ಪ, ಕೆ.ಅಶೋಕ್, ಕೊಡ್ಲಮ್ಮ. 5) ದುರುಗಮ್ಮ ಇವರ ವಿರುದ್ಧ ಕಲಂ:143, 147, 148, 324, 326, 504, 506 ಆಧಾರ 149 ಐಪಿಸಿ ರೀತ್ಯ ಈ ದೋಷಾರೋಪಣ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ನಿವೇಧಿಸಿಕೊಳ್ಳಲಾಗಿತ್ತು. ಅಭಿಯೋಜನಾ ಪರವಾಗಿ ಸಾಕ್ಷಿದಾರರನ್ನು ವಿಚಾರಣೆ ಮಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಮಧುಸೂದನ ಡಿ.ಕೆ ಅವರು ಸದರಿ ಆರೋಪಿ /ನಂಬರ್-02 ಮತ್ತು 03 ರವರಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 5 ಸಾವಿರ ರೂಪಾಯಿ ದಂಡ ಮತ್ತು 4 ಮತ್ತು 5 ನೇ ಆರೊಪಿತರಿಗೆ 6 ತಿಂಗಳು ಸಾದಾ ಸ್ವರೂಪದ ಜೈಲು ಶಿಕ್ಷೆ ಮತ್ತು ತಲಾ 2,500/- ರೂ. ದಂಡ ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿ ವಾಸು.ಬಿ.ಎಸ್ ಮುಖ್ಯ ಪೇದೆ ಮತ್ತು .ಪಿ.ಎಸ್.ಐ. ಯಶ್ವಂತ್ ಬಿಸ್ನಳ್ಳಿ ಪ್ರಕರಣದ ತನಿಖೆ ನಡೆಸಿ ದೋಷಾರೋಪಣ
ಪತ್ರವನ್ನು ಮ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿ.ಸಿ-148 ರವಿಚಂದ್ರ ತಳವಾರ ಮತ್ತು ಸಮನ್ಸ್ ಪಿ.ಸಿ-278 ಕೊಟ್ರೇಶ್ ಇವರು ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾರೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಘವೇಂದ್ರ,ಟಿ ಸಾಕ್ಷಿ ವಿಚಾರಣೆಯನ್ನು ನಡೆಯಿಸಿ ವಾದ ಮಂಡಿಸಿ ಆರೋಪಿತನಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

