Breaking News
ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಿರಾಣಿ ಅಂಗಡಿ, ಪಂಚರ್ ಶಾಪ್ ಸುಟ್ಟು ಭಸ್ಮ, ಲಕ್ಷಾಂತರ ನಷ್ಟ.

*ಗಂಗಾವತಿ ಬಸವೇಶ್ವರ ಸರ್ಕಲ್ ಬಳಿ ಘಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪ್ ಸುಟ್ಟ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಲ್ ಬಳಿ ಜರುಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೇಗೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಧ್ಯರಾತ್ರಿ ಏಕಾಏಕಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪಿಗೆ ಬೆಂಕಿ ಹತ್ತಿಕೊಂಡು ಕಿರಾಣಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ದವಸ ಧಾನ್ಯ ಹಾಗೂ ಪ ಪಂಚರ್ ಶಾಪಿನಲ್ಲಿದ್ದ ಟೈರ್,ಟ್ಯೂಬ್ ಇತರೆ ಸಲಕರಣೆಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ.

ಕಿರಾಣಿ ಅಂಗಡಿ ಮಾಲೀಕ ಅಮಾತೆಮ್ಮ ಹಾಗೂ ಪಂಚರ್ ಶಾಪ್ ಮಾಲೀಕ ಶಾಮೀದ್ ಅಲಿ ಬೆಂಕಿ ಅನಾವುತದ ಬಗ್ಗೆ ಕೇಸ್ ದಾಖಲಿಸಿದ್ದಾರೆ.