ಎಸ್ಸೆಸೆಲ್ಸಿ ಪರೀಕ್ಷೆ: ಹಾಲ್ಟ್ ಟಿಕೇಟ್ ಬಾರದೇ ಪರೀಕ್ಷೆ ಬರೆಯದ ಮರಳಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳು!
*ಹಾಜರಾತಿ ಕಡಿಮೆ ಹಾಗೂ ಕಿರು ಪರೀಕ್ಷೆಗೆ ಗೈರು ಹಾಲ್ಟ್ ಟಿಕೇಟ್ ಬರದಿರಲು ಕಾರಣ: ಮುಖ್ಯ ಶಿಕ್ಷಕಿ ಹೇಳಿಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಬುಧವಾರದಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ತಾಲೂಕಿನ ಮರಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳ ಪರೀಕ್ಷೆಯ ಪ್ರವೇಶ ಪತ್ರಗಳುವ ಹಾಜರಾತಿ ಕೊರತೆ ಮತ್ತು ಶಾಲೆಯ ಕಿರು ಪರೀಕ್ಷೆ ವಿದ್ಯಾರ್ಥಿಗಳು ಗೈರು ಆಗಿದ್ದು ಬೋರ್ಡ್ ನಿಂದಲೇ ಪ್ರವೇಶ ಪತ್ರಗಳು ಬಂದಿಲ್ಲ
ಎನ್ನುವ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಣೆ ಮಾಡಿಲ್ಲ ಎನ್ನಲಾಗುತ್ತಿದೆ.
ಹಾಲ್ ಟಿಕೆಟ್ ಬೋರ್ಡ್ ಬಂದರೂ ನಮಗೆ ವಿತರಣೆ ಮಾಡಿಲ್ಲ ಎಂದು 12 ಜನ ವಿದ್ಯಾರ್ಥಿಗಳು ಭಾರತೀಯ ದಲಿತ ಸೇನೆ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿ ನಮಗೆಲ್ಲ ಹಾಲ್ ಟಿಕೆಟ್ ವಿತರಿಸಬೇಕು.ನಮ್ಮ ಭವಿಷ್ಯದ ಜತೆ ಆಟವಾಡಿದ ಮುಖ್ಯ ಶಿಕ್ಷಕರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಮರಳಿ ಸರಕಾರಿ ಪ್ರೌಢಶಾಲೆಯ ಯಮನೂರ ಸಾಬ ,ಮೌನೇಶ,ಪ್ರದೀಪ್, ಮಹೇಶ,ನವಾಜ್,ಹೇಮಂತ,ಶಶಾಂಕ್,ನಿರಂಜನ್ ಮತ್ತು ಪ್ರವೀಣ್, ಶ್ರೀನಿವಾಸ, ವೆಂಕಟೇಶ ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಬಂದಿಲ್ಲ.
ಬಾಕ್ಸ್
ವಿದ್ಯಾರ್ಥಿಗಳು ಶಾಲೆಗೆ ಸತತ ಗೈರು ಮತ್ತು ಕಿರು ಪರೀಕ್ಷೆ ಬರೆದಿರುವುದರಿಂದ ಅವರುಗಳ ಹಾಲ್ ಟಿಕೆಟ್ ಅನ್ನು ಎಸೆಸೆಲ್ಸಿ ಪರೀಕ್ಷಾ ಮಂಡಳಿಯವರು ಕಳುಹಿಸಿಲ್ಲ. ಆದ್ದರಿಂದ ಇದರಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಇತರ ಶಿಕ್ಷಕರ ಪಾತ್ರ ಇಲ್ಲ, ಪಾಲಕರಿಗೂ ಸಹ ಅನೇಕ ಬಾರಿ ಮನೆಗೆ ಹೋಗಿ ಮಾಹಿತಿ ನೀಡಲಾಗಿದೆ.ಜೊತೆಗೆ ಮೊಬೈಲ್ ಮೂಲಕ ಕರೆ ಮಾಡಿ ವಿದ್ಯಾರ್ಥಿಗಳು ಸತತ ಗೈರು ಮತ್ತು ಕಿರುಪರೀಕ್ಷೆ ಬರೆದಿರುವ ಕುರಿತು ತಿಳಿಸಲಾಗಿದೆ.
-ಆಶಾ ಮುಖ್ಯ ಶಿಕ್ಷಕಿ.
–

