Breaking News
ಕುರುಹೀನ ಶೆಟ್ಟಿ ಸಮಾಜದ ಆಶ್ರಯದಲ್ಲಿ.. ‘ತಾರಕಾ ಸುರನ ವಧೆ’ ಬಯಲಾಟ ಯಶಸ್ವಿ ಪ್ರದರ್ಶನ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ; ಕುರುಹಿನ ಶೆಟ್ಟಿ ಸಮಾಜದ ಶ್ರೀ ನೀಲಕಂಠೇಶ್ವರ ದೇವಸ್ಥಾನದ 37ನೇ ವಾರ್ಷಿಕೋತ್ಸವದ ಜಾತ್ರೆಯ ನಿಮಿತ್ತವಾಗಿ ಶ್ರೀ ನೀಲಕಂಠೇಶ್ವರ ಬಯಲಾಟ ಸಂಘ ದವರು ಪ್ರದರ್ಶಿಸಿದ ‘ತಾರಕಾಸುರನ ವಧೆ’ಬಯಲಾಟ ಯಶಸ್ವಿಯಾಗಿ ಪ್ರೇಕ್ಷಕರ ಮನಸ್ಸು ಸೂರೆಗೊಂಡಿತು. ಗಿರಿಜೆ ಮತ್ತು ಶಂಕರರ ಕಲ್ಯಾಣೋತ್ಸವ ಮತ್ತು ಇದರ ಹಿಂದಿನ ಇತಿಹಾಸವನ್ನು ನೆನಪಿಸುವ ತಾರಕಾ ಸುರನ ವಧೆ, ಹಂಪಿಯ ಹೇಮಕೂಟ, ವಿರೂಪಾಕ್ಷ ಮಂದಿರ,ಪಂಪಾ ಸರೋವರ,ಪಂಪಾ ಕ್ಷೇತ್ರದ ಸೌಂದರ್ಯವನ್ನು ಹೊಗಳುವ ಸನ್ನಿವೇಶಗಳು ಮತ್ತು ಶಿವನ ತಪೋಭಂಗ ಮಾಡುವ ಮನ್ಮಥನ ದೃಶ್ಯ ಮತ್ತು ತಾರಕಾಸುರನ ವಧೆ ಮಾಡುವ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ಇದ್ದವು.

ತಾರಕಾಸುರನ ವಧೆ ಬಯಲಾಟದ

ಪಾತ್ರ ವರ್ಗದಲ್ಲಿ ಯಲ್ಲಪ್ಪ ಪೊಲಕಲ್,ಐಲಿ ಮಾರುತಿ,ಐಲಿ ನಂಜುಂಡ,ಐಲಿ ರವಿ,ಮಾಂತಾ ಬಸವರಾಜ, ತಟ್ಟಿ ಚೇತನ್,ಐಲಿ ಶಂಕರ್, ಶಿರಿಗೇರಿ ಬಸವರಾಜ, ಬಂಡಿ ಮಾರುತಿ,

ಧೂಪಾ ಮಂಜುನಾಥ, ಗಿಟಗಿ ನೀಲಕಂಠ, ಕುಣಿಗಿ ನಾಗರಾಜ, ಅನುಪ ಮಾಂತಾ,ಪವಿತ್ರ ಗೊಲ್ಲರಹಳ್ಳಿ,ಅಂಜಿನಮ್ಮ ಕೂಡ್ಲಗಿ,ಮಲ್ಲಿಕಾರ್ಜುನ ಕೂರಂಟಿ,ಹಾರ್ಮೋನಿಯಂ ಚನ್ನಪ್ಪ ಕುರುಗೋಡು,ಕಥಾ ಸಂಚಾಲಕರಾಗಿ ವಿರೂಪಾಕ್ಷಪ್ಪ ಶಿರವಾರ ಕಾರ್ಯ ನಿರ್ವಹಿಸಿದರು.

ಬಯಲಾಟದಲ್ಲಿ ಮನ್ಮಥನ ಪಾತ್ರ ಮಾಡಿದ ಯಲ್ಲಪ್ಪ ಪೊಲಕಾಲ್ ಇವರನ್ನು ಸಂಗೀತ ಸ್ವರಾಂಜಲಿ ಕಲಾ ತಂಡದ ವತಿಯಿಂದ ಪತ್ರಕರ್ತ ಕೆ.ನಿಂಗಜ್ಜ, ಹನುಮಂತಪ್ಪ ಹುಲಿಹೈದರ್,ಖಾಜಾಹುಸೇನ ಮುಳ್ಳೂರು ಹಾಗೂ ತಿಮ್ಮಪ್ಪ ಸನ್ಮಾನಿಸಿದರು.