ಹಂಪಿ ಪ್ರಾಧಿಕಾರದ ನೋಟೀಸ್ ವಿರುದ್ಧ ಹೈಕೋರ್ಟ್ ಗೆ ಹೋಗಿದ್ದ ಸಾಣಾಪುರ ಮತ್ತು ಆನೆಗೊಂದಿ ಭಾಗದ ರೆಸಾರ್ಟ್ ಮಾಲೀಕರ ದಾವೆ ತಿರಸ್ಕಾರ.
*ಶೀಘ್ರ ಪ್ರಾಧಿಕಾರದ ಹಾಗೂ ಜಿಲ್ಲಾಡಳಿತದಿಂದ ತೆರವು ಕಾರ್ಯಾಚರಣೆ!
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಾಣಾಪುರ ಭಾಗದ ಕೃಷಿ ಭೂಮಿಯಲ್ಲಿ
ರೆಸಾರ್ಟ್, ಹೊಟೇಲ್ ಗಳ ನಿರ್ಮಾಣ ಮಾಡಲಾಗಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವಲಯ ನಿಯಮಾವಳಿಗಳಿಗೆ ವಿರುದ್ದವಾಗಿದೆ ಎಂದು ಪ್ರಾಧಿಕಾರ ಕಳೆದ ನಾಲ್ಕೈದು ವರ್ಷಗಳ ಹಿಂದೆ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ 16 ಜನ ರೆಸಾರ್ಟ್ ಹೊಟೇಲ್ ಮಾಲೀಕರು ತಡೆಯಾಜ್ಞೆ ತಂದಿದ್ದರು.ಇದೀಗ ಪ್ರಾಧಿಕಾರವು ಪ್ರಸ್ತುತ 2007 ನಿಯಮಾಳಿ ಹಾಗೂ ವಲಯ ನಿಯಮಾವಳಿಗಳ ಉಲ್ಲಂಘನೆ ಕುರಿತು ಹೈಕೋರ್ಟ್ ಗೆ ಮನವರಿಕೆ ಮಾಡಿದ್ದು ಏ.21 ರಂದು
ರೆಸಾರ್ಟ್ ,ಹೊಟೇಲ್ ಮಾಲೀಕರ ತಡೆಯಾಜ್ಞೆಯನ್ನು ವಜಾಗೊಳಿಸಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಮೇಶ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಗಮನಕ್ಕೆ ತಂದು ಪದ್ಮಾವತಿ ಶ್ರೀನಿವಾಸರಾವ್,ನಾಮಗೌಡ,ಜಮಲಪ್ಪ,ಶಬ್ಬೀರ್ ಅಹಮದ್,ಶೇರಖಾನ್(2),ಮಹಮದ್ ಅಲಿ,ಯಲಕೂರಿ ರಮೇಶ,ರಾಮಾಂಜನೇಯ, ಪೆದ್ದಚಂದ್ರಯ್ಯ,ಲಕ್ಷ್ಮಿ,ಮಣಿಮಹೇಶ,ಮಲದಮ್ಮ,ನೂರಜಹಾನ್ ಮತ್ತು ಶೇರಖಾನ್ ಇವರ ಮಾಲೀಕತ್ವದ ರೆಸಾರ್ಟ್ ಹೊಟೇಲ್ ಗಳನ್ನು ಶೀಘ್ರ ತೆರೆವು ಮಾಡಲಾಗುವುದು ತಿಳಿಸಿದ್ದಾರೆ.

