Breaking News
ವಿದ್ಯುತ್ ಅಸಮರ್ಪಕ ಪೂರೈಕೆ ಲಕ್ಷ್ಮಿ ಕ್ಯಾಂಪ್,ಗುಂಡಮ್ಮಕ್ಯಾಂಪ್ ಸುತ್ತಲಿನ‌‌ ನಿವಾಸಿಗಳಿಂದ ರಸ್ತೆ ತಡೆದು ದಿಢೀರ್ ಪ್ರತಿಭಟನೆ!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ನಗರದ ಅಂಬೇಡ್ಕರ್ ಸರ್ಕಲ್ ಬಳಿ ಲಕ್ಷ್ಮಿ ಕ್ಯಾಂಪ್ ಗುಂಡಮ್ಮ ಕ್ಯಾಂಪ್ ಮುರಾರಿ ಕ್ಯಾಂಪ್ ಹಾಗೂ ಸುತ್ತಲಿನ ನಿವಾಸಿಗಳು ಶನಿವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಇದರಿಂದ ಕುಡಿಯುವ ನೀರು ಸೇರಿದಂತೆ ಬೇಸಿಗೆಯ ಬಿಸಿಲಿಗೆ ಮನೆಯಲ್ಲಿ ಚಿಕ್ಕ ಮಕ್ಕಳು ವೃದ್ಧರು ಪರಿತಪಿಸುವಂತಾಗಿದೆ.
ಈ ಬಗ್ಗೆ ಜೆಸ್ಕಾಂ ನವರಿಗೆ ಪದೇ ಪದೇ ಮನವಿ ಮಾಡಿದರೂ ನಿರೀಕ್ಷೆ ಮಾಡಲಾಗಿದೆ. ಕುಡಿಯುವ ನೀರು ಹಿಡಿಯಲು ವಿದ್ಯುತ್ ಅವಶ್ಯವಿದ್ದು ವಿದ್ಯುತ್ ಪೂರೈಕೆಯಲ್ಲಿ ಜೆಸ್ಕಾಂನವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಜುಲೈ ನಗರ ಮತ್ತು ಕೇಂದ್ರ ಬಸ್ ನಿಲ್ದಾಣದ ಮಧ್ಯೆ ಗೌಳಿಮಹಾದೇವಪ್ಪ ರಸ್ತೆ ತಡೆದಿದ್ದರಿಂದ
ಬಸ್ ಸಂಚಾರ ಸ್ಥಗಿತವಾಗಿ ಪ್ರಯಾಣಿಕರು ಪರಿತಪಿಸುವಂತಾಯಿತು.

ರಾಮಲಿಂಗೇಶ್ವರ ಬೆಟ್ಡದಿಂದ ಜನವಸತಿ ಪ್ರದೇಶಕ್ಕೆ ಆಗಮಿಸಿದ್ದ ಆರು ಪೀಟು ಉದ್ದದ ಹೆಬ್ಬಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ಪ್ರೇಮಿ ಚನ್ನಬಸವ ಸ್ವಾಮಿ!

*ಕಾಡಿನಲ್ಲೂ ಹಾವು ಸೇರಿ ಅನುಪದ್ರವಿ ಪ್ರಾಣುಗಳಿಗೆ ಮನುಷ್ಯರ ಕಿರುಕುಳ.

 *ಹಾವು ಎಂದರೆ ಈತನಿಗೆ ಪಂಚಪ್ರಾಣ.

ಕಿಷ್ಕಿಂಧವಾಣಿ ಸುದ್ದಿ.

ಗಂಗಾವತಿ: ನಗರದ ವಿರುಪಾಪುರ ತಾಂಡ ಪೊಲೀಸ್ ಕ್ವಾಟ್ರಸ್ ಹೊರ ವಲಯದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಬೆಟ್ಟದಿಂದ ಜನವಸತಿ ಪ್ರದೇಶಕ್ಕೆ ಆಗಮಿಸುತ್ತಿದ್ದ ಹೆಬ್ಬಾವನ್ನು ಹಿಡಿದು ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಉರಗ ಮತ್ತು ಪ್ರಾಣಿ

ಪ್ರೇಮವನ್ನು

ನಗರದ ಸರೋಜ ನಗರದ ನಿವಾಸಿ ಚನ್ನಬಸವ ಸ್ವಾಮಿ ಮೆರೆದಿದ್ದಾರೆ.

ಚನ್ನಬಸವಸ್ವಾಮಿ ಅವರು ಮೂಲತಹ ದೈಹಿಕ ಶಿಕ್ಷಕರಾಗಿದ್ದು ತಮ್ಮ ವಿಭಿನ್ನ ಆಸಕ್ತಿ ಮತ್ತು ಧೈರ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಹಾವುಗಳನ್ನು ನೋಡಿ ಭಯಪಡುವ ಸಾಮಾನ್ಯ ಜನರ ನಡುವೆ, ಇವರು ಹಾವುಗಳನ್ನೇ ತಮ್ಮ ಪಂಚಪ್ರಾಣವಾಗಿ ನೋಡಿಕೊಳ್ಳುತ್ತಿರುವುದು ವಿಶೇಷವಾಗಿದೆ.

ಚನ್ನಬಸವಸ್ವಾಮಿ ಅವರು ಕೇವಲ ಹಾವುಗಳನ್ನಷ್ಟೇ ಪ್ರೀತಿಸುವುದಲ್ಲ, ಒಬ್ಬ ಪರಿಸರ ಪ್ರೇಮಿ ಮತ್ತು ಪ್ರಾಣಿಗಳ ಪ್ರೇಮಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಕೃತಿ ಹಾಗೂ ಜೀವಿಗಳ ಸಂರಕ್ಷಣೆಯ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ.

ಹಾವು‌ ಸೇರಿ ಪ್ರಾಣಿ,ಪಕ್ಷಿಗಳನ್ನು

ಸ್ನೇಹದಿಂದ ನೋಡಿಕೊಳ್ಳುತ್ತಿರುವುದು ಅವರ ಪ್ರೀತಿ ಮತ್ತು ಧೈರ್ಯಕ್ಕೆ ಉದಾಹರಣೆ. ಹಾವುಗಳ ಬಗ್ಗೆ ಇರುವ ಅನಾವಶ್ಯಕ ಭಯವನ್ನು ದೂರ ಮಾಡುವ ಕಾರ್ಯವನ್ನು ನಿರಂತರ ಮಾಡುತ್ತಿದ್ದಾರೆ.

 

***

“ಪ್ರಕೃತಿಯ ಪ್ರತಿಯೊಂದು ಜೀವಿಗೂ ತನ್ನದೇ ಆದ ಮಹತ್ವ ಇದೆ. ಹಾವುಗಳನ್ನೂ ನಾವು ರಕ್ಷಿಸಬೇಕು. ಅವು ನಮ್ಮ ಪರಿಸರದ ಭಾಗ, ಪರಿಸರ ಸಂರಕ್ಷಣೆ ಮತ್ತು ಪ್ರಾಣಿಗಳ ಮೇಲೆ ಎಲ್ಲರೂ ಪ್ರೀತಿ ತೋರಬೇಕು.ಇತ್ತೀಚೆಗೆ ಕೆಲ ವಿಕೃತಮನಸ್ಸಿನ ಯುವಕರು ಗಂಗಾವತಿ ಸುತ್ತಲಿನ ಬೆಟ್ಟಗಳಿಗೆ ಊಟ,ಮದ್ಯ ಸೇವನೆ ಮಾಡಲು ಹೋಗಿ ಉಳಿದ ಪದಾರ್ಥ,ಗಾಜಿನ ಚೂರು,ಪ್ಲಾಸ್ಟಿಕ್ ಎಸೆಯುವುದು,ಹಾವು,ಚೇಳು,ಉಡಾ,ಓತಿಕ್ಯಾತ,ಮೊಲ‌,ಪಾರಿವಾಳ ಮತ್ತು ಕೌಜುಗಾ

ಸೇರಿ ಸಣ್ಣ ಸಣ್ಣ ಪ್ರಾಣಿ,ಪಕ್ಷಿಗಳನ್ನು ಕೊಲ್ಲುತ್ತಿದ್ದಾರೆ.ಇದು ನಿಲ್ಲಬೇಕು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲೇ ಹಾವು ಕಂಡು ಬಂದಲ್ಲಿ ಸಂಪರ್ಕಿಸಿದರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗುತ್ತದೆ. ಹಾವು ಸೇರಿ ಯಾವುದೇ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮಾಡಿದರೆ ಪರಿಸರ ಸಮತೋಲ ಸಾಧ್ಯ.

-ಚನ್ನಬಸವಸ್ವಾಮಿ ಉರಗ ಪ್ರೇಮಿ ಗಂಗಾವತಿ.

ಗಂಗಾವತಿಗೆ ರೈಲು-ಬಿಹಾರದ ಲಲ್ಲೂ ಪ್ರಸಾದ ಯಾದವ್,ರೈಲ್ವೇ ಗುಪ್ತಾ….!

https://youtu.be/HRyU7wIT6YY?si=_c3jmUD1T5qERme4

https://youtu.be/HRyU7wIT6YY?si=_c3jmUD1T5qERme4

*ರೈಲ್ವೇಯಿಂದ ಅಭಿವೃದ್ಧಿಗೆ ಪೂರಕ ವ್ಯವಸ್ಥೆ ಆಗುತ್ತದೆ.
*ರೈಲ್ವೇ ಗುಪ್ತಾ ಬಂದ…ರಾಜಕಾರಣಿಗಳಿಂದ ಚೇಷ್ಟೇ!

ಕಿಷ್ಕಿಂಧವಾಣಿ ವಿಶೇಷ.

ಕೆ.ನಿಂಗಜ್ಜ.
ಗಂಗಾವತಿ: ಗಂಗಾವತಿ ನಗರಕ್ಕೆ ರೈಲ್ವೆ ಬಂದಿದ್ದೆ ಒಂದು ಇತಿಹಾಸ. ರೈಲ್ವೆ ಎಂದರೆ ಅಭಿವೃದ್ಧಿಗೆ ಪೂರಕ, ರೈಲ್ವೆ ಎಂದರೆ ದೇಶವನ್ನು ಒಗ್ಗೂಡಿಸುವ ಮಾರ್ಗ. ಗಂಗಾವತಿ ರೈಲ್ವೇ ಮಾರ್ಗಕ್ಕೆ 1997 ರಲ್ಲಿ ಬಸವರಾಜ ರಾಯ ರೆಡ್ಡಿ ಅವರು ಸಂಸದರಾಗಿದ್ದ ವೇಳೆ ಮುನಿರಾಬಾದ್ ನಲ್ಲಿ ಮುನಿರಾಬಾದ್ ಗದ್ವಾಲ ರೈಲ್ವೆ ಮಾರ್ಗಕ್ಕೆ ಭೂ ಪೂಜೆ ನೆರವೇರಿತು. ನಂತರ 35 ವರ್ಷಗಳಿಗೂ ಹೆಚ್ಚು ಈ ರೈಲ್ವೆ ಮಾರ್ಗ ಅನುದಾನದ ಕೊರತೆ ಮತ್ತಿತರ ಕಾರಣಕ್ಕಾಗಿ ಕಾಮಗಾರಿ ನೆನೆಗುದಿಗೆ ಬಿತ್ತು.
1997 ರಲ್ಲಿ ಮುನಿರಾಬಾದ್ ಗದ್ವಾಲ್ ರೈಲು ಮಾರ್ಗ ಕೇಂದ್ರ ಸರಕಾರದ ಬಜೆಟ್ ನಲ್ಲಿ ಘೋಷಣೆಯಾದರೂ 2004-09 ರಲ್ಲಿ ಈ ಕಾಮಗಾರಿಗೆ ಸ್ವಲ್ಪ ಮಟ್ಡಿನ ಚಾಲನೆ ದೊರಕಿತು.
ಅಂದಿನ ಸಂಸದರಾದ ಕೆ ವಿರೂಪಾಕ್ಷಪ್ಪ ಸಿಂಧನೂರು ಇವರು ಅಂದು ರಾಜ್ಯದಲ್ಲಿ ಎಸ್ಎಂ ಕೃಷ್ಣ ನೇತೃತ್ವದ ಸರ್ಕಾರಕ್ಕೆ ಮನವೊಲಿಸಿ ರೈಲ್ವೆ ಮಾರ್ಗಕ್ಕಾಗಿ ಭೂ ಸ್ವಾಧೀನ ಕಚೇರಿಯನ್ನು ಲಿಂಗಸಗೂರಿನಲ್ಲಿ ಆರಂಭಿಸಿದರು. ನಂತರ ಪ್ರತಿ ಬಜೆಟ್ ನಲ್ಲಿ ಇಂತಿಷ್ಟು ಅನುದಾನವನ್ನು ಮೀಸಲಿಸಿದರು.
ಆಗ ಗಂಗಾವತಿಯ ವರ್ತಕ ವಿಪಿ ಗುಪ್ತ ಅವರು ನಾಗರೀಕ ವೇದಿಕೆ ರಚನೆ ಮಾಡಿಕೊಂಡು ವೈಯಕ್ತಿಕವಾಗಿ ಹಣವನ್ನು ಖರ್ಚು ಮಾಡಿ ಪತ್ರ ವ್ಯವಹಾರ ನಡೆಸಿದರು. ಜೊತೆಗೆ ದೆಹಲಿ, ಬೆಂಗಳೂರು ಸೇರಿದಂತೆ ರೈಲ್ವೆ ವಲಯದ ಕಚೇರಿಗೆ ಪತ್ರ ಸಂಪರ್ಕ ಹಾಗೂ ಅಲೆದು ಮುನಿರಾಬಾದ್ ಗದ್ವಾಲ್ ರೈಲ್ವೆ ಮಾರ್ಗಕ್ಕೆ ಹೆಚ್ಚಿನ ಅನುದಾನ ಮತ್ತು ಇಚ್ಛಾಶಕ್ತಿ ತೋರುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು.
ಕೇಂದ್ರದಲ್ಲಿ ಯುಪಿಎ-2 ಸರಕಾರ ಇದ್ದ ಸಂದರ್ಭದಲ್ಲಿ ರೈಲ್ವೇ ಸಚಿವರಾಗಿದ್ದ ಲಲ್ಲೂ ಪ್ರಸಾದ ಯಾದವ್ ಅವರನ್ನು ಭೇಟಿ ಮಾಡಲು ಸಂಸದರಾಗಿದ್ದ ಕೆ.ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ 38 ಜನರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಲಲ್ಲೂ ಪ್ರಸಾದ ಯಾದವ್ ಅವರನ್ನು ಹಿಂದಿ ಭಾಷೆಯಲ್ಲಿ ಮಾತನಾಡಿ ಮನವೊಲಿಸಿದ ನಂತರ ಮುನಿರಾಬಾದ್ ಗದ್ವಾಲ್ ರೈಲು ಮಾರ್ಗ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶೇ50:50ಯೋಜನೆಯಾಗಿದ್ದು ರಾಜ್ಯ ಸರಕಾರದ ಶೇ.50 ಅನುದಾನ ಕೊಡಲು ಒಪ್ಪಿಗೆ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕೊಡಬೇಕಿದ್ದು, ಈ ಪತ್ರವನ್ನು ಕೊಟ್ಟರೆ ಈ ಕೂಡಲೇ ಯೋಜನೆಗೆ ಚಾಲನೆ ನೀಡುವುದಾಗಿ ಲಲ್ಲೂ ಪ್ರಸಾದ್ ಯಾದವ್ ದೆಹಲಿಗೆ ತೆರಳಿದ್ದ ಯೋಗಕ್ಕೆ ಸ್ಪಷ್ಟಪಡಿಸಿದರು.
ಕೂಡಲೇ ಗಂಗಾವತಿಗೆ ಗುಪ್ತಾ ಆಗಮಿಸಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ಮನವರಿಕೆ ಮಾಡಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪತ್ರ ಪಡೆಯಲು ಬೆಂಗಳೂರಿಗೆ ತೆರಳಿದರು. ಆಗ ಬೆಂಗಳೂರಿನಲ್ಲಿ ಇಕ್ಬಾಲ್ ಅನ್ಸಾರಿ ಅವರು ಗುಪ್ತಾ ಅವರನ್ನು ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಹೆಚ್. ಡಿ. ರೇವಣ್ಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹತ್ತಿರ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ರೈಲ್ವೆ ಯೋಜನೆಗೆ ಶೇಕಡ 50ರಷ್ಟು ಅನುದಾನ ಕೊಡುವ ರಾಜ್ಯ ಸರ್ಕಾರದ ಒಪ್ಪಿಗೆ ಪತ್ರವನ್ನು ಕೇಂದ್ರಕ್ಕೆ ರವಾನಿಸುವಲ್ಲಿ ಯಶಸ್ವಿಯಾದರು.
ನಂತರ ಕೇಂದ್ರ ಸರ್ಕಾರ ರೈಲ್ವೆ ಮಾರ್ಗದ ಕಾಮಗಾರಿಗೆ ಶರವೇಗ ನೀಡಿ 2024ರಲ್ಲಿ ಹುಬ್ಬಳ್ಳಿಯಿಂದ ಗಂಗಾವತಿವರೆಗೆ ರೈಲು ಸಂಚಾರವನ್ನು ಆರಂಭಿಸಿತು.
ಗಂಗಾವತಿಗೆ ರೈಲು ಬರುವಲ್ಲಿ ವಿ.ಪಿ. ಗುಪ್ತಾ ಅವರ ಪಾತ್ರ ಸ್ಮರಣೀಯ, ಅವರಿಗೆ ಈಗ 95 ವಯಸ್ಸು ಆಗಿದ್ದು ಅವರ ರೈಲ್ವೆ ಹೋರಾಟವು ಇತಿಹಾಸದಲ್ಲಿ ಉಳಿಯುತ್ತದೆ. ಗಂಗಾವತಿಗೆ ರೈಲು ಬರುವಂತೆ ಮಾಡಲೇಬೇಕು ಎನ್ನುವ ಛಲದೊಂದಿಗೆ 20 ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿದರು.
ಗಂಗಾವತಿಗೆ ರೈಲು ಬಂದ ನಂತರ ಗಂಗಾವತಿಯ ಜನರು ಗುಪ್ತಾ ಅವರನ್ನು ರೈಲ್ವೆ ಗುಪ್ತಾ ಎಂದು ಕರೆಯುತ್ತಿದ್ದಾರೆ.ಗುಪ್ತಾ ಅವರ ಹೋರಾಟಗಾರರನ್ನು ಜನರು ಎಂದಿಗೂ ಮರೆಯುವುದಿಲ್ಲ.

****
ರೈಲ್ವೆ ಮಾರ್ಗದಿಂದ ನೇರ ಪರೋಕ್ಷವಾಗಿ ಅನೇಕ ಲಾಭಗಳಿದ್ದು ಗಂಗಾವತಿ ಗೆ ರೈಲ್ವೇ ಬರಲು ಎಲ್ಲಾ ಸಂಸದರು,ಶಾಸಕರು,ಸಚಿವರುಗಳು,ಜಿ.ಪಂ.ಸದಸ್ಯರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪತ್ರಕರ್ತರು ಕಾರಣರಾಗಿದ್ದಾರೆ. ಕೆಲವು ರಾಜಕಾರಣಿಗಳು ಗುಪ್ತ ಅವರು ರೈಲು ಹೋರಾಟದಿಂದ ಹೆಚ್ಚು ಪ್ರಚಾರ ಪಡೆದು ನಮ್ಮನ್ನು ಹಿಂದೆ ಬೀಳಿಸುತ್ತಾರೆ ಎಂಬ ಭಾವನೆಯಿಂದ ನನಗೆ ಯಾವುದನ್ನು ಹೇಳುತ್ತಿರಲಿಲ್ಲ, ಆದರೂ ನಾನು ಗಂಗಾವತಿಗಾಗಿ ಇಲ್ಲಿಯ ಜನರಿಗಾಗಿ ರೈಲ್ವೆ ಬೇಕೇ, ಬೇಕು ಎಂದು ನಿರಂತರವಾಗಿ ಹೋರಾಟ ಮಾಡಿದೆ ನನ್ನನ್ನು ಕೆಲವರು ಹುಚ್ಚ ಎಂದರು. ಆದರೂ ಅವರಿಗೆ ಯಾವುದೇ ಉತ್ತರ ಕೊಡದೆ ಎಲ್ಲರ ಸಹಕಾರದೊಂದಿಗೆ ರೈಲು ಹೋರಾಟ ಮಾಡಿದೆ, ಇದೀಗ ರೈಲು ಬಂದಿದೆ ಬಹಳ ಸಂತೋಷವಾಗಿದೆ. ಈ ರೈಲು ಮಾರ್ಗ ದೇಶದ ವಿವಿಧ ಮೆಟ್ರೋ ನಗರಗಳ ಜೊತೆಗೆ ಧೋರಣೆಯಾದರೆ ಮಾತ್ರ ಇನ್ನಷ್ಟು ಅಭಿವೃದ್ಧಿಗೆ ಚಾಲನೆ ದೊರೆಯುತ್ತದೆ. ಯುವಕರು ಮುಂಬರುವ ದಿನಗಳಲ್ಲಿ ರೈಲ್ವೆ ಕುರಿತು ಇನ್ನಷ್ಟು ಹೋರಾಟ ಮಾಡುವ ಮೂಲಕ ದೇಶದ ವಿವಿಧ ನಗರಗಳಿಗೆ ರೈಲ್ವೆ ಸಂಪರ್ಕ ಮತ್ತು ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ.
-ವಿ.ಪಿ.ಗುಪ್ತಾ ರೈಲ್ವೇ ಹೋರಾಡಗಾರರು.