Breaking News
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ.

*ಚುನಾವಣೆ ಅಸಂವಿಧಾನಿಕ ಎಂದು ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು

ಕಿಷ್ಕಿಂಧವಾಣಿ ಸುದ್ದಿ

ಬೆಂಗಳೂರು: ಏ.19 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಯನ್ನು ಕರ್ನಾಟಕ ಹೈಕೋರ್ಟ್ ಏ.17 ರಂದು

ತಡೆಯಾಜ್ಞೆ ನೀಡಿದೆ.

ಮತದಾರರ ಪಟ್ಟಿ ಪ್ರಕಟಣೆ ವಿಳಂಬ, ಕೆಲ ಮತದಾರರ ಹೆಸರು ಬಿಟ್ಟು ಹೋಗಿರುವುದು, ನಿಧರಾದವರು ಮತ್ತು ನಿವೃತ್ತರಾದವರನ್ನು ಪಟ್ಟಿಗೆ ಸೇರಿಸಿರುವ ಕುರಿತಂತೆ ಆಕ್ಷೇಪಗಳು ಹೆಚ್ಚಾಗಿದ್ದರಿಂದ ರಾಜ್ಯದ ವಿವಿಧಡೆ ಆರೋಪಗಳು, ದೂರುಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಕುರಿತು ಕೆಲವರು ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಏಪ್ರಿಲ್ 17ರಂದು ಸಂಜೆ ಚುನಾವಣೆ ಕುರಿತಂತೆ ತಡೆಯಾಜ್ಞೆ ನೀಡಿದೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡದೆ ಕೆಲವು ತಾಲೂಕುಗಳಲ್ಲಿ ಮತದಾರ ಪಟ್ಟಿಯನ್ನು ಆಕ್ಷೇಪಣೆ ಸಲ್ಲಿಸದೆ ಪಟ್ಟಿಯಿಂದ 3000ಕ್ಕೂ ಹೆಚ್ಚು ಶಿಕ್ಷಕರನ್ನ ಕೈ ಬಿಡಲಾಗಿದೆ. ಕನಕಗಿರಿ ಸೇರಿದಂತೆ ರಾಜ್ಯದ ಕೆಲವು ತಾಲೂಕಗಳ ಘಟಕಗಳಿಗೆ ಚುನಾವಣೆಯನ್ನು ನಡೆಸದಿರುವುದು ಸೇರಿ ಚುನಾವಣೆಯಲ್ಲಿ ಹಲವು ನ್ಯೂನ್ಯತೆ ಇದ್ದುದ್ದನ್ನು ಪ್ರಶ್ನಿಸಲಾಗಿದೆ.

ಚುನಾವಣೆ ಮಾಡಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಗಿ ನೀಡುವ ಮೂಲಕ ಮಹತ್ವದ ನಿರ್ಣಯ ಕೈಗೊಂಡಿದೆ.

ನಿಯಮಾನಸಾರ ಚುನಾವಣೆ ಮಾಡದೆ ತಾವೇ ಚುನಾವಣಾ ಪಟ್ಟಿಯನ್ನು ಬರೆದುಕೊಂಡು ಚುನಾವಣೆ ನಡೆದಿದೆ ಎಂದು ಬಿಂಬಿಸಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಜ್ಞೆ ಮೂಲಕ ಭಾರಿ ಅಕ್ರಮಕ್ಕೆ ಕಡಿವಾಣ ಬಿದ್ದಿದೆ ಎನ್ನಲಾಗುತ್ತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಕಗ್ಗೊಲೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ಸುಮಾರು 48ಕ್ಕೂ ಹೆಚ್ಚು ತಾಲೂಕುಗಳಲ್ಲಿ ಚುನಾವಣೆ ನಡೆಸದೆ ಅಧಿಕಾರದ ಆಸೆಯಿಂದ ಮತ್ತೊಮ್ಮೆ ಗದ್ದಿಗೆ ಹಿಡಿಯಲು ಹೊರಟವರಿಗೆ ನ್ಯಾಯಾಲಯದ ಆದೇಶವು ಭಾರಿ ಮುಖಭಂಗ ಉಂಟು ಮಾಡಿದೆ .

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ದೇಶಕರ ಚುನಾವಣೆ ಮತ್ತು ಇದರ ನ್ಯೂನ್ಯತೆಗೆ ಕುರಿತು ಕಿಷ್ಕಿಂಧ ವಾಣಿ ದಿನಪತ್ರಿಕೆ ಮುಂಚಿತವಾಗಿ ವಿಸೃತವಾದ ಸುದ್ದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು

ಬಸ್ ಮತ್ತು  ‌ಕಾರು ಡಿಕ್ಕಿ ಒಂದೇ ಕುಟುಂಬದ ಮೂರು ಹಸುಗೂಸುಗಳು ಸೇರಿ ಏಳು ಜನ ಭಸ್ಮ!

*ತಿಂಥಿಣಿ ಮೌನೇಶ್ವರ ದರ್ಶನ ಮುಗಿಸಿಕೊಂಡು ಮರಳಿ ಊರಿಗೆ ಹೊರಟವರು ವಿಧಿಯಾಟಕ್ಕೆ ಬಲಿ!

ಕಿಷ್ಕಿಂಧವಾಣಿ ಸುದ್ದಿ

ಸುರಪುರ:

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಬಸ್ ಮತ್ತು ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಂಚರಿಸುತ್ತಿದ್ದ ಕಾರು ನಡುವೆ ಯಾದಗಿರಿ ‌ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಏಳು ಮಂದಿ ಸಜೀವ ದಹನಗೊಂಡಿದ್ದಾರೆ.

ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಮೂರು ಹಸುಗೂಸುಗಳು ಸೇರಿ‌

ಏಳು ಮಂದಿ ಜೀವಂತ ಭಸ್ಮವಾಗಿದ್ದಾರೆ. ಘಟನೆಯಲ್ಲಿ ಹಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ನೆರವಿನ ಕಾರ್ಯಾಚರಣೆ ಮಾಡಿದರು.

ಮೃತಪಟ್ಟವರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಮೃತಪಟ್ಟವರು. ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷ) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ,ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡುಕುಟುಂಬ ಸಿರವಾರಕ್ಕೆ ವಾಪಸಗುತ್ತಿದ್ದಾಗ ಈ ದುರಂತ ನಡೆದಿದೆ. ಬಸ್‌ಗೆ ಬೆಂಕಿ ತಗುಲಿದರೂ 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಬೆಂಕಿಯಲ್ಲಿ ಕರಕಲಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ತನಿಖೆ ನಡೆಸಿದ್ದಾರೆ

ತಾಲೂಕಿನಾದ್ಯಂತ ಗುಡುಗು ಸಹಿತ ಅಕಾಲಿಕ ಮಳೆಗೆ ಜನ ಜಾನುವಾರುಗಳಿಗೆ ಅಪಾರ ಹಾನಿ.

 

*ನೆಲಕ್ಕುರುಳಿದ ಭತ್ತದ ಬೆಳೆ ಮಾವಿನ ಫಸಲು,ಪರಿಹಾರಕ್ಕೆ ಆಗ್ರಹ.

*ಸಿದ್ದಿಕೇರಿಯಲ್ಲಿ ಆರು ಆಕಳು ಸಾವು!

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತಾಲೂಕಿನಾದ್ಯಂತ ಗುರುವಾರ ಮಧ್ಯ ರಾತ್ರಿ ಸುರಿದ ಗುಡುಗು ಸಹಿತ ಅಕಾಲಿಕ ಮಳೆಗೆ ಗಂಗಾವತಿ ನಗರ,ಹೊಸಳ್ಳಿ, ಸಿದ್ದಿಕೇರಿ,ಮಲ್ಲಾಪೂರ,ಆನೆಗೊಂದಿ ಹಾಗೂ ಢಣಾಪೂರ ಗ್ರಾಮಗಳಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ,ಮಾವಿನ ಫಸಲು ಮತ್ತು ಬಾಳೆ ಬೆಳೆ,ತೆಂಗಿನ ಗಿಡಗಳು, ನೆಲಕ್ಕುರುಳಿ ಅಪಾರ ಹಾನಿಯಾಗಿದೆ.

ಹಿರೇಜಂತಗಲ್ ಗ್ರಾಮದ

ಯಮನೂರಪ್ಪ ಅವರ ಬೆಳೆದ ಭತ್ತದ ಹೊಲ ಸಂಪೂರ್ಣವಾಗಿ ನಾಶವಾಗಿದ್ದು, ಸುಮಾರು ₹10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಹೊಸಹಳ್ಳಿ ಗ್ರಾಮದ ರೈತ ವಿಠೋಬಣ್ಣ ಇವರಿಗೆ 3 ಎಕರೆ ಭತ್ತದ ಬೆಳೆ ಕೂಡ ಮಳೆಗೆ ಸಂಪೂರ್ಣ ಹಾನಿಯಾಗಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ನಷ್ಟವನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ರೈತರ ಆಗ್ರಹ:

ಬೆಳೆ ನಷ್ಟಕ್ಕೆ ತುರ್ತು ಪರಿಹಾರ ಘೋಷಣೆ

ಜಾನುವಾರು ಸಾವುಗಳಿಗೆ ಪರಿಹಾರ ಧನ

ಮನೆ ಹಾನಿಗೆ ಪರಿಹಾರ ಮತ್ತು ಪುನರ್ ನಿರ್ಮಾಣ ನೆರವು

ಪ್ರಕೃತಿ ವಿಪತ್ತು ಘೋಷಿಸಿ ವಿಶೇಷ ಪ್ಯಾಕೇಜ್ ಬಿಡುಗಡೆ

ಈ ಅಕಾಲಿಕ ಮಳೆಯಿಂದ ಗಂಗಾವತಿ ತಾಲೂಕಿನ ರೈತರ ಬದುಕು ಮತ್ತೊಮ್ಮೆ ಸಂಕಷ್ಟದ ಅಂಚಿಗೆ ತಳ್ಳಲ್ಪಟ್ಟಿದೆ.