ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ.
*ಚುನಾವಣೆ ಅಸಂವಿಧಾನಿಕ ಎಂದು ಕಿಷ್ಕಿಂಧವಾಣಿ ಪತ್ರಿಕೆಯಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು
ಕಿಷ್ಕಿಂಧವಾಣಿ ಸುದ್ದಿ
ಬೆಂಗಳೂರು: ಏ.19 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಚುನಾವಣೆಯನ್ನು ಕರ್ನಾಟಕ ಹೈಕೋರ್ಟ್ ಏ.17 ರಂದು
ತಡೆಯಾಜ್ಞೆ ನೀಡಿದೆ.
ಮತದಾರರ ಪಟ್ಟಿ ಪ್ರಕಟಣೆ ವಿಳಂಬ, ಕೆಲ ಮತದಾರರ ಹೆಸರು ಬಿಟ್ಟು ಹೋಗಿರುವುದು, ನಿಧರಾದವರು ಮತ್ತು ನಿವೃತ್ತರಾದವರನ್ನು ಪಟ್ಟಿಗೆ ಸೇರಿಸಿರುವ ಕುರಿತಂತೆ ಆಕ್ಷೇಪಗಳು ಹೆಚ್ಚಾಗಿದ್ದರಿಂದ ರಾಜ್ಯದ ವಿವಿಧಡೆ ಆರೋಪಗಳು, ದೂರುಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಕುರಿತು ಕೆಲವರು ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಏಪ್ರಿಲ್ 17ರಂದು ಸಂಜೆ ಚುನಾವಣೆ ಕುರಿತಂತೆ ತಡೆಯಾಜ್ಞೆ ನೀಡಿದೆ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡದೆ ಕೆಲವು ತಾಲೂಕುಗಳಲ್ಲಿ ಮತದಾರ ಪಟ್ಟಿಯನ್ನು ಆಕ್ಷೇಪಣೆ ಸಲ್ಲಿಸದೆ ಪಟ್ಟಿಯಿಂದ 3000ಕ್ಕೂ ಹೆಚ್ಚು ಶಿಕ್ಷಕರನ್ನ ಕೈ ಬಿಡಲಾಗಿದೆ. ಕನಕಗಿರಿ ಸೇರಿದಂತೆ ರಾಜ್ಯದ ಕೆಲವು ತಾಲೂಕಗಳ ಘಟಕಗಳಿಗೆ ಚುನಾವಣೆಯನ್ನು ನಡೆಸದಿರುವುದು ಸೇರಿ ಚುನಾವಣೆಯಲ್ಲಿ ಹಲವು ನ್ಯೂನ್ಯತೆ ಇದ್ದುದ್ದನ್ನು ಪ್ರಶ್ನಿಸಲಾಗಿದೆ.
ಚುನಾವಣೆ ಮಾಡಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಗಿ ನೀಡುವ ಮೂಲಕ ಮಹತ್ವದ ನಿರ್ಣಯ ಕೈಗೊಂಡಿದೆ.
ನಿಯಮಾನಸಾರ ಚುನಾವಣೆ ಮಾಡದೆ ತಾವೇ ಚುನಾವಣಾ ಪಟ್ಟಿಯನ್ನು ಬರೆದುಕೊಂಡು ಚುನಾವಣೆ ನಡೆದಿದೆ ಎಂದು ಬಿಂಬಿಸಲು ಹೊರಟ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಹೈಕೋರ್ಟ್ ತಡೆಯಾಜ್ಞೆ ಮೂಲಕ ಭಾರಿ ಅಕ್ರಮಕ್ಕೆ ಕಡಿವಾಣ ಬಿದ್ದಿದೆ ಎನ್ನಲಾಗುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಕಗ್ಗೊಲೆ ಮಾಡುವ ಮೂಲಕ ಇಡೀ ರಾಜ್ಯದಲ್ಲಿ ಸುಮಾರು 48ಕ್ಕೂ ಹೆಚ್ಚು ತಾಲೂಕುಗಳಲ್ಲಿ ಚುನಾವಣೆ ನಡೆಸದೆ ಅಧಿಕಾರದ ಆಸೆಯಿಂದ ಮತ್ತೊಮ್ಮೆ ಗದ್ದಿಗೆ ಹಿಡಿಯಲು ಹೊರಟವರಿಗೆ ನ್ಯಾಯಾಲಯದ ಆದೇಶವು ಭಾರಿ ಮುಖಭಂಗ ಉಂಟು ಮಾಡಿದೆ .
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ದೇಶಕರ ಚುನಾವಣೆ ಮತ್ತು ಇದರ ನ್ಯೂನ್ಯತೆಗೆ ಕುರಿತು ಕಿಷ್ಕಿಂಧ ವಾಣಿ ದಿನಪತ್ರಿಕೆ ಮುಂಚಿತವಾಗಿ ವಿಸೃತವಾದ ಸುದ್ದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು



