Breaking News
ತುಂಗಭದ್ರಾ ಡ್ಯಾಂ ನಿಂದ ಅಕ್ರಮವಾಗಿ ಕಾರ್ಖಾನೆಗಳಿಗೆ ನೀರು ಪೂರೈಕೆ,ವ್ಯಾಪಕ ಟೀಕೆ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ತುಂಗಭದ್ರಾ ಡ್ಯಾಂ ನಲ್ಲಿರುವ ನೀರನ್ನು ಅಕ್ರಮವಾಗಿ ಅಧಿಕಾರಿಗಳು ಕಾರ್ಖಾನೆಗಳಿಗೆ ಹರಿಸುತ್ತಿರುವುದು ಖಂಡನೀಯವಾಗಿದೆ. ನಿಯಮಗಳ ಪ್ರಕಾರ ಪ್ರಸ್ತುತ ಕಾರ್ಖಾನೆಗಳಿಗೆ ನೀರನ್ನು ಪೂರೈಕೆ ಮಾಡಲು ಬರುವುದಿಲ್ಲ, ಆದರೂ ಅಧಿಕಾರಿಗಳು ಅಕ್ರಮವಾಗಿ ಕಾರ್ಖಾನೆಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ನೀರನ್ನು ಹರಿಸುತ್ತಿದ್ದಾರೆ ಎಂದು ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ .

ತುಂಗಭದ್ರಾ ಜಲಾಶಯದಿಂದ ಮುನಿರಾಬಾದ್ ನೀರಾವರಿ ನಿಗಮದ ಕೇಂದ್ರ ವಲಯದ ಅಧಿಕಾರಿಗಳು ತುಂಗಭದ್ರಾ ಜಲಾಶಯದಿಂದ ಪ್ರಸ್ತುತ ಏಪ್ರಿಲ್ ತಿಂಗಳಲ್ಲೂ ಅಕ್ರಮವಾಗಿ ನೀರು ಸರಬರಾಜು ಮಾಡುವುದನ್ನು ತೀವ್ರವಾಗಿ ಖಂಡನೀಯವಾಗಿದೆ.

ಪ್ರಸ್ತುತ ಜಲಾಶಯದಲ್ಲಿ 12 ಟಿಎಂಸಿ ನೀರು ಇದ್ದು, ಇದರಲ್ಲಿ ಜಲಾಶಯದ ಜಲಚರಗಳಿಗಾಗಿ 2ಟಿಎಂಸಿ ಮೀಸಲಿದೆ. ಉಳಿದ 10ಟಿಎಂಸಿಯಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು, ಜಲಾಶಯದ ಎಡ ಮತ್ತು ಬಲ ಭಾಗದ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳಿಗೆ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಒದಗಿಸ ಬೇಕು. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರನ್ನು ಕೊಡಲು ಆಸ್ಪದ ಇಲ್ಲದಿದ್ದರೂ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುವ ಸಂಭವ ಇದೆ. ನಿಂತ ಬೆಳೆಗೆ ನೀರಿನ ಕೊರತೆ, ಜಲಚರ ಮೀಸಲು ನೀರಿನಲ್ಲಿ ಕೊರಟೆಯಾಗುವ ಸಂಭವ ಇದೆ.

ಜಲಾಶಯದ ನೀರನ್ನು ಅಕ್ರಮವಾಗಿ ನೀಡುತ್ತಿರುವ ನೀರಾವರಿ ನಿಗಮದ ಮುಖ್ಯ ಅಭಿಯತರರು ಹಾಗೂ ಅಧೀಕ್ಷಕ ಅಭಿಯಂತರನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕೆಂದು

ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ . ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಯ ನಡೆಸಲಾಗುವುದೆಂದು ತಿಳಿಸಿದ್ದಾರೆ.

ಬಾಲ್ಯವಿವಾಹ ಪ್ರಕರಣ ಮೂರು ಜನರಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ.

*2021ರಲ್ಲಿ ಕೃಷ್ಣದೇವರಾಯ ನಗರದಲ್ಲಿ ಪ್ರಕರಣ. *ಅಪ್ರಾಪ್ತ ಬಾಲಕಿಯ ತಂದೆ ಸೇರಿ ಮದುಮಗ ಹಾಗೂ ತಾಯಿ ಗೆ ಶಿಕ್ಷೆ ಪ್ರಕಟ.
*ಎರಡು ವರ್ಷ ಸೆರೆ ವಾಸ ಮತ್ತು ತಲಾ ಹತ್ತು ಸಾವಿರ ರೂ.ದಂಡ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಕೃಷ್ಣದೇವರಾಯ ನಗರದಲ್ಲಿ 2021 ಮೇ 5 ರಂದು ಜರುಗಿದ್ದ ಬಾಲ್ಯ ವಿವಾಹಕ್ಕೆ ಸಂಬಂಧಪಟ್ಟಂತೆ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ ಅವರು ಆರೋಪಿಗಳಿಗೆ ಎರಡು ವರ್ಷ ಜೈಲು ಹಾಗೂ ತಲಾ ಹತ್ತು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ತಾಲೂಕಿನ ಕೃಷ್ಣದೇವರಾಯ ನಗರದಲ್ಲಿ   05-05-2021 ರಂದು ಬೆಳಗ್ಗೆ 06-00 ಅವಧಿಯಲ್ಲಿ ಆರೋಪಿ  ಮಹೇಶ ತಂದೆ ಬಸ್ಸಪ್ಪ ಕುಡಲ್ಲಿ ಇತನು ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು   ದುರಗಮ್ಮ, ಕೃಷ್ಣಪ್ಪ ದಂಪತಿಗಳ ಮಗನಾದ  ಈರಣ್ಣ   ನಾಯಕ ಎನ್ನುವ ಯುವಕನಿಗೆ ಕೊಟ್ಟು   ಬಾಲ್ಯ ವಿವಾಹ ಮಾಡಿದ್ದರಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 09, 10 ಅಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.  ಆರೋಪಿತರ ಮೇಲೆ ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ದೋಷಾರೋಪಣ ಪಟ್ಟಿಯನ್ನು ಅಂದಿನ ತನಿಖಾಧಿಕಾರಿ ಯಲಪ್ಪ ಪಿಎಸ್‌ಐ (ನಿವೃತ್ತ) ಹಾಗೂ ಪಿಎಸ್ ಐ  ಶಾರದಮ್ಮ  ಇವರು  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.   ಪ್ರಕರಣದ  ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆ. ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ ಇವರು ಪ್ರಕರಣದ ಆರೋಪಿಗಳಾದ  ಈರಣ್ಣ  ನಾಯಕ, ದುರಗಮ್ಮ ಮತ್ತು ಮಹೇಶ ಕುಡಡ್ಲಿ ಇವರ ಮೇಲೆ ವಿಚಾರಣೆಯಲ್ಲಿ ಸಾಕ್ಷ್ಯಾಧಾರಗಳು ಕಂಡುಬಂದಿದ್ದರಿಂದ ಆರೋಪಿತರು ದೋಷಿಯೆಂದು ನಿರ್ಣಹಿಸಿ ತೀರ್ಪು ನೀಡಿದ್ದಾರೆ. ಆರೋಪಿತರಿಗೆ ಅಪರಾಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 9, 10 ಅಪರಾಧಕ್ಕೆ 2 ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸತಕ್ಕದು ಮತ್ತು ತಲಾ 10,000 ಸಾವಿರ ರೂಪಾಯಿ ಜುಲ್ತಾನೆ. ಶಿಕ್ಷೆಯನ್ನು ವಿಧಿಸಿ ಆದೇಶಿಸಲಾಗಿದೆ.   ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಹಿರೇಮಠ  ವಾದ ಮಂಡಿಸಿದ್ದರು.  ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಸೈಯ್ ಗೌಸ್, ಮಾಂತೇಶ,  ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಸಾಕಷ್ಟು ಸಹಕಾರ ನೀಡಿದ್ದು ಇರುತ್ತದೆ.