ತುಂಗಭದ್ರಾ ಡ್ಯಾಂ ನಿಂದ ಅಕ್ರಮವಾಗಿ ಕಾರ್ಖಾನೆಗಳಿಗೆ ನೀರು ಪೂರೈಕೆ,ವ್ಯಾಪಕ ಟೀಕೆ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತುಂಗಭದ್ರಾ ಡ್ಯಾಂ ನಲ್ಲಿರುವ ನೀರನ್ನು ಅಕ್ರಮವಾಗಿ ಅಧಿಕಾರಿಗಳು ಕಾರ್ಖಾನೆಗಳಿಗೆ ಹರಿಸುತ್ತಿರುವುದು ಖಂಡನೀಯವಾಗಿದೆ. ನಿಯಮಗಳ ಪ್ರಕಾರ ಪ್ರಸ್ತುತ ಕಾರ್ಖಾನೆಗಳಿಗೆ ನೀರನ್ನು ಪೂರೈಕೆ ಮಾಡಲು ಬರುವುದಿಲ್ಲ, ಆದರೂ ಅಧಿಕಾರಿಗಳು ಅಕ್ರಮವಾಗಿ ಕಾರ್ಖಾನೆಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ನೀರನ್ನು ಹರಿಸುತ್ತಿದ್ದಾರೆ ಎಂದು ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ .
ತುಂಗಭದ್ರಾ ಜಲಾಶಯದಿಂದ ಮುನಿರಾಬಾದ್ ನೀರಾವರಿ ನಿಗಮದ ಕೇಂದ್ರ ವಲಯದ ಅಧಿಕಾರಿಗಳು ತುಂಗಭದ್ರಾ ಜಲಾಶಯದಿಂದ ಪ್ರಸ್ತುತ ಏಪ್ರಿಲ್ ತಿಂಗಳಲ್ಲೂ ಅಕ್ರಮವಾಗಿ ನೀರು ಸರಬರಾಜು ಮಾಡುವುದನ್ನು ತೀವ್ರವಾಗಿ ಖಂಡನೀಯವಾಗಿದೆ.
ಪ್ರಸ್ತುತ ಜಲಾಶಯದಲ್ಲಿ 12 ಟಿಎಂಸಿ ನೀರು ಇದ್ದು, ಇದರಲ್ಲಿ ಜಲಾಶಯದ ಜಲಚರಗಳಿಗಾಗಿ 2ಟಿಎಂಸಿ ಮೀಸಲಿದೆ. ಉಳಿದ 10ಟಿಎಂಸಿಯಲ್ಲಿ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು, ಜಲಾಶಯದ ಎಡ ಮತ್ತು ಬಲ ಭಾಗದ ವಿಜಯನಗರ ಕಾಲುವೆಗಳಿಗೆ ನಿಂತ ಬೆಳೆಗಳಿಗೆ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಒದಗಿಸ ಬೇಕು. ಆದರೆ ನೀರಾವರಿ ನಿಗಮದ ಅಧಿಕಾರಿಗಳು ಕಾರ್ಖಾನೆಗಳಿಗೆ ನೀರನ್ನು ಕೊಡಲು ಆಸ್ಪದ ಇಲ್ಲದಿದ್ದರೂ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಕೊರತೆಯಾಗುವ ಸಂಭವ ಇದೆ. ನಿಂತ ಬೆಳೆಗೆ ನೀರಿನ ಕೊರತೆ, ಜಲಚರ ಮೀಸಲು ನೀರಿನಲ್ಲಿ ಕೊರಟೆಯಾಗುವ ಸಂಭವ ಇದೆ.
ಜಲಾಶಯದ ನೀರನ್ನು ಅಕ್ರಮವಾಗಿ ನೀಡುತ್ತಿರುವ ನೀರಾವರಿ ನಿಗಮದ ಮುಖ್ಯ ಅಭಿಯತರರು ಹಾಗೂ ಅಧೀಕ್ಷಕ ಅಭಿಯಂತರನ್ನು ಅಮಾನತುಗೊಳಿಸಿ, ತನಿಖೆ ನಡೆಸಬೇಕೆಂದು
ತುಂಗಭದ್ರಾ ಉಳಿಸಿ ಆಂಧೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ್ ಎಂ ಆರ್ ಒತ್ತಾಯಿಸಿದ್ದಾರೆ . ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆಯ ನಡೆಸಲಾಗುವುದೆಂದು ತಿಳಿಸಿದ್ದಾರೆ.


