Breaking News
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣ ನ್ಯಾಯಾಲಯದಿಂದ ತೀರ್ಪು ಪ್ರಕಟ.

 

* ಪ್ರಕರಣದಲ್ಲಿ ಭಾಗಿಯಾಗಿದ್ದ 12 ಜನರ ಪೈಕಿ ಆರು ಜನರಿಗೆ ಶಿಕ್ಷೆ ಉಳಿದವರು ದೋಷ ಮುಕ್ತ.

* ಏಪ್ರಿಲ್ 27ರಂದು ಶಿಕ್ಷೆಯ ಪ್ರಮಾಣ ಪ್ರಕಟ.

* ಆರೋಪಿಗಳು ನ್ಯಾಯಾಲಯಕ್ಕೆ ಬಿಗಿ

ಪೊಲೀಸ್ ಬಂದೋಬಸ್ತ್ ವ್ಯವಸ್ಥೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬಿಜೆಪಿ ಯುವ ಮೋರ್ಚಾದ ನಗರ ಅಧ್ಯಕ್ಷ ಕುರುಬರ ವೆಂಕಟೇಶ ಕೊಲೆ ಪ್ರಕರಣದ ತೀರ್ಪು ಗುರುವಾರ ನಗರದ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕಟಿಸಿದ್ದು ಪ್ರಕರಣದ 12 ಆರೋಪಿಗಳ ಪೈಕಿ ಆರು ಜನರಿಗೆ ಶಿಕ್ಷೆ ಪ್ರಕಟವಾಗಿದ್ದು ಉಳಿದವರು ದೋಷ ಮುಕ್ತರಾಗಿದ್ದಾರೆಂದು ಸರಕಾರಿ ಅಭಿಯೋಜಕಿ ಎನ್.ನಾಗಲಕ್ಷ್ಮಿ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 08 ರಂದು ಬೆಳಗಿನ ಜಾವ 2.30 ಕ್ಕೆ ಗಂಗಾವತಿಯ ಲೀಲಾವತಿ ಆಸ್ಪತ್ರೆಯ ಬಳಿ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಕುರುಬರ ವೆಂಕಟೇಶ ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ನಗರ ಠಾಣೆಯ ಪೊಲೀಸರು ಕೊಲೆಗೀಡಾದ ಕುರುಬ ವೆಂಕಟೇಶ ಪಾಲಕರಿಂದ ದೂರು ಪಡೆದು ತೀವ್ರಗತಿಯಲ್ಲಿ ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಕುರುಬರ್, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ್, ಭೀಮಾ ಅಲಿಯಾಸ್ ಭರತ್, ಸಲೀಂ ಮೊಹಮ್ಮದ್ ರಫೀಕ್ ಗಂಗಾಧರ ಗೌಳಿ ಅಲಿಯಾಸ್ ಗಂಗ್ಯಾ, ಕಾರ್ತಿಕ್, ದಾದಾಪೀರ್ ಮೊಹಮ್ಮದ್ ಅಲ್ತಾಫ್, ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ, ಶರಣಬಸವ ಅಲಿಯಾಸ್ ಹತ್ತು ರೊಟ್ಟಿ ಹಾಗೂ ಚೈತ್ರ ರವಿ ಕುರುಬರ್ ಈ ಆರೋಪಗಳನ್ನು ಬಂಧಿಸಿದ್ದರು.

ಸ್ಥಳೀಯ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ತೀವ್ರಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಥಮವಾಗಿದೆ.

ನಗರ ಪೊಲೀಸರು 977 ಪುಟದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕುರುಬರ ವೆಂಕಟೇಶ ಕೊಲೆ ಪ್ರಕರಣ ರಾಜ್ಯದ್ಯಂತ ತೀವ್ರ ಸಂಚಲನವನ್ನು ಉಂಟು ಮಾಡಿತ್ತು. ಜೊತೆಗೆ ಬಿಜೆಪಿ ರಾಜ್ಯ ಘಟಕ ಬೆಂಗಳೂರು ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸಿ ಕೂಡಲೇ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸಿತು.

ನಗರ ಠಾಣೆಯ ಪೊಲೀಸರು ಪ್ರಕರಣ ನಡೆದು 15 ದಿನ ಒಳಗೆ ಎಲ್ಲಾ 12 ಜನ ಆರೋಪಿಗಳನ್ನು ಬಂಧಿಸಿ ಕೋರ್ಟಿಗೆ ಸಾಕ್ಷಾಧಾರಗಳನ್ನು ಮತ್ತು ದೋಷಾರೋಪನೆಯ ಪಟ್ಟಿಯನ್ನು ಸಲ್ಲಿಸಿ ವಿಚಾರಣೆಗೆ ಸಹಕರಿಸಿದ್ದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಅವರು ಪ್ರಕರಣವನ್ನು ತೀವ್ರವಾಗಿ

ಪರಿಗಣಿಸಿ ಪ್ರತಿನಿತ್ಯ ವಿಚಾರಣೆ ನಡೆಸಿ ಸಾಕ್ಷಾಧಾರಗಳಿಂದ ಮಾಹಿತಿ ಪಡೆದು ದಾಖಲಿಸಿಕೊಂಡು ದಾಖಲಿಸಿಕೊಂಡು ತೀರ್ಪು ಪ್ರಕಟಿಸಿದ್ದು ಏ. 27ರಂದು ಶಿಕ್ಷೆಯ ಪ್ರಮಾಣದ ಕುರಿತು ವಿಚಾರಣೆ ನಡೆಯಲಿದೆ.

ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಘೋಷಣೆ ಯಾಗುವ ನಿಮಿತ್ಯ ಆರೋಪಿತರನ್ನು ಕರೆ ತಂದಾಗ

ಕೋರ್ಟಿನ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ಪ್ರಕರಣ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಗುರುವಾರ ಕೋರ್ಟ್ ಸುತ್ತಲೂ ಸಾರ್ವಜನಿಕರು,ವಕೀಲರು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಅವರು ಈಗಾಗಲೇ ಸಾಣಾಪುರ ಕೆರೆ ಹತ್ತಿರ ವಿದೇಶಿ ಮಹಿಳೆ ಅತ್ಯಾಚಾರ ಮತ್ತು ಓರ್ವನ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ತೀರ್ಪು, ಕಾರಟಗಿಯಲ್ಲಿ ಶಿಕ್ಷಕನಿಂದ ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಚಾರಿತ್ರಿಕ ತೀರ್ಪು,

ಹಾಗೂ ಆನೆಗೊಂದಿ ತಳವಾರಘಟ್ಟ ಸೇತುವೆ ಬಿದ್ದ ಪ್ರಕರಣದಲ್ಲಿ ಆರೋಪಿತನಿಗೆ ಶಿಕ್ಷೆಯ ತೀರ್ಪು

ನೀಡಿದ್ದು ದೇಶದಾದ್ಯಂತ ಗಮನ ಸೆಳೆದಿವೆ.

ಕುರುಬರ ವೆಂಕಟೇಶ ಕೊಲೆ ಪ್ರಕರಣ ಅತ್ಯಂತ ಸೂಕ್ಷ್ಮ ಮತ್ತು ಗಂಭೀರವಾಗಿದ್ದರಿಂದ

ವಿಚಾರಣೆಯ ವೇಳೆ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಾಗಪ್ಪ ನಾಯ್ಕ ಅವರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ನೀಡಲಾಗಿತ್ತು.

ಕೊಲೆಗೀಡಾದ ಕುರುಬರ ವೆಂಕಟೇಶ್ ಅವರ ತಾಯಿ ಹಾಗೂ ಇಬ್ಬರು ಸಹೋದರಿಯರು ಕೋರ್ಟ್ ಆವರಣದಲ್ಲಿ ಭಾವುಕರಾಗಿ ನ್ಯಾಯಾಧೀಶರಿಗೆ ಅಭಿನಂದಿಸಿ ನೀವು ನಮ್ಮ ಪಾಲಿನ ದೇವರು ಕೊಲೆ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೈ ಮುಗಿದು ಬೇಡಿಕೊಂಡ‌ ದೃಶ್ಯ ಕಂಡು ಬಂತು.

ಪ್ರವಚನ ಮಾಡುವ ಗವಿಸಿದ್ದೇಶ್ವರ ಸ್ವಾಮಿಗಳು ಕಾರ್ಖಾನೆಗಳ ವಿರುದ್ದ ಹೋರಾಟ ಆರಂಭಿಸಿ ಹಿಂದೆ ಸರಿದದ್ದು ಸರಿಯಲ್ಲ:ಕುಂ.ವೀರಭದ್ರಪ್ಪ ಅಸಮಾಧಾನ.

 

*ಉಸಿರಿದ್ದರೆ ಪ್ರವಚನ, ಜನರ ಜೀವ ಉಳಿಸಲು ಗವಿಶ್ರೀಗಳು ಮುಂದಾಗಲಿ

*ಗದುಗಿನ ತೋಂಟದ ಶ್ರೀಗಳು ನಮಗೆ ಮಾದರಿ: ಕೋರಣೇಶ್ವರ ಸ್ವಾಮೀಜಿ

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ : ಪ್ರವಚನಗಳ ಮೂಲಕ ಖ್ಯಾತರಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳವನ್ನು ಕಾರ್ಖಾನೆಗಳ ಧೂಳು ಮುಕ್ತ ಮಾಡಲು ಹೋರಾಟ ಆರಂಭಿಸಿ ಈಗ ಯಾಕೆ ಹಿಂದೇಟು ಹಾಕುತ್ತಿದ್ದಾರೆ ತಿಳಿಯುತ್ತಿಲ್ಲ, ಕೂಡಲೇ ಶ್ರೀಗಳು ಹೋರಾಟವನ್ನು ತಾರ್ಕಿಕ

ರ ಹಂತಕ್ಕೆ ಮುಟ್ಟೀಸಬೇಕು ಎಂದು ಖ್ಯಾತ ಕಥೆಗಾರ ಮತ್ತು ಸಾಹಿತಿ. ಕುಂ ವೀರಭದ್ರಪ್ಪ ಹೇಳಿದರು.

ಅವರು ಕೊಪ್ಪಳ ನಗರದಲ್ಲಿ ನಡೆಯುತ್ತಿರುವ ಬಲ್ಡೋಟಾ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಲ್ಲಿನ ಗವಿಶ್ರೀಗಳು ಪ್ರವಚನ ಮಾಡುವುದಾದರೆ ಮೊದಲು ಈ ಜನರ ಜೀವ ಉಳಿಸಲಿ. ಸರ್ಕಾರದ ವಿರುದ್ಧ ಧ್ವನಿ ಎತ್ತಲಿ. ಈ ಹೋರಾಟ ಆರಂಭ ಮಾಡಿದ ಗವಿಶ್ರೀ ತಾರ್ಕಿಕ ಅಂತ್ಯವನ್ನು ಅವರೆ ಕಾಣಿಸಬೇಕು, ಯಾಕೆ ಹಿಂದಡಿ ಇಟ್ಡರು ಎನ್ನುವದು ನಿಗೂಢವಾಗಿದೆ.

ನಾನು ಹಿರೇಬಗನಾಳ, ಹಾಲವರ್ತಿ ಎನ್ನುವ ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಹೋಗಿ ಜನರನ್ನು ಮಾತನಾಡಿಸಿದಾಗ ಅವರ ಮುಖದಲ್ಲಿ ಲವಲವಿಕೆ ಇಲ್ಲ. ಆ ಜನ ಬದುಕುವ ಆಸೆಯನ್ನೇ ಬಿಟ್ಟವರಂತೆ ಕಂಡರು. ಜನ ಯಾವುದೇ ಪಕ್ಷದ ಮುಖಂಡರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ಒಂದು ರೀತಿ ಬಸವಳಿದು, ಬೇಸರಗೊಂಡು ನಮ್ಮನ್ನು ಯಾರು ಕಾಪಾಡುತ್ತಾರೆ ಎಂದು ಮುಗಿಲು ನೋಡುತ್ತಿದ್ದಾರೆ.

ಬಾಧಿತ ಹಳ್ಳಿ ಪ್ರದೇಶ ಸುಟ್ಟ ಮಸಣವಾಗಿ ಕಪ್ಪಿಟ್ಟಂತೆ ಕಾಣುತ್ತಿದೆ. ಅಲ್ಲಿಗೆ ಹೋದ ವೈದ್ಯರು ಇಲ್ಲಿರಬೇಡಿ, ದನಕರು ಕಟ್ಟಬೇಡಿ ಎಂದು ಸಲಹೆ ನೀಡುತ್ತಾರೆ. ಮತ್ತೆ ಈ ಜನ ಎಲ್ಲಿಗೆ ಹೋಗಬೇಕು.? ಸರ್ಕಾರದ ಹತ್ತಿರ ಇದಕ್ಕೆ ಉತ್ತರ ಇದೆಯೇ? ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿನಂತೆ ತುಂಗಾ ಪಾನ ಮಾಡಬೇಡಿ ಎಂದು ಸರ್ಕಾರ ಎಚ್ಚರಿಸುವ ಮಟ್ಟಿಗೆ ನೀರು ಮಾಲಿನ್ಯ ಮಾಡಿದ್ದು ಇದೇ ಫ್ಯಾಕ್ಟರಿಗಳಲ್ಲವೆ ಎಂದು ಪ್ರಶ್ನೆ ಮಾಡಿದರು. ಹಳ್ಳಿಯ ಒಬ್ಬ ಮಹಿಳೆ ಮಕ್ಕಳಿಗೆ ಇಂತಹ ರೋಗ ಬಂದರೆ ನಮ್ಮ ಶವಗಳಿಗೆ ಸಂಸ್ಕಾರ ಮಾಡಲು ಯಾರಿರುತ್ತಾರೆ. ಇಲ್ಲಿಗೆ ಅಧಿಕಾರಿಗಳು, ರಾಜಕಾರಣಿಗಳು ಬರುತ್ತಾರೆ. ಅಯ್ಯೊ ಪಾಪ ಎನ್ನುತ್ತಾರೆ. ಮುಂದೆ ಹೋಗಿ ಮರೆತು ಬಿಡುತ್ತಾರೆ. ನಮ್ಮನ್ನು ಈ ಕಷ್ಟದಿಂದ ಪಾರು ಮಾಡುವವರು ಯಾರು ಎಂದು ನಮ್ಮನ್ನೇ ಕೇಳುತ್ತಾರೆ. ತಾಯಿ ಎದೆಹಾಲು ನಂಜಾಗಿ ಕೊಲುವೆಡೆ ಮತ್ತಾರಿಗೇಳಲಿ ಎನ್ನುವ ಶರಣರ ವಚನ ಉಲ್ಲೇಖ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಆಳಂದ ವಿರಕ್ತ ಮಠದ ಶ್ರೀ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಈ ಹೋರಾಟ ಅತ್ಯಂತ ಸಾರ್ಥಕ, ಸಾತ್ವಿಕವಾಗಿದ್ದು. ಜೀವ, ಆರೋಗ್ಯ, ಭೂಮಿ, ಕೃಷಿ ಉಳಿಸಿಕೊಳ್ಳಲು ನಡೆಸಿದ ನಿಮ್ಮ ಹೋರಾಟ ಗದುಗಿನ ತೋಂಟದ ಶ್ರೀ ಸಿದ್ದಲಿಂಗ ಸ್ವಾಮಿಗಳೆ ಪ್ರೇರಣೆಯಾಗಿದ್ದಾರೆ. ಇಲ್ಲಿ ಜಾನುವಾರುಗಳು ನೀರು ಇಲ್ಲದೆ, ಬಸಾಪುರ ಕೆರೆಯನ್ನು ಬಲ್ಡೋಟ ನುಂಗಿದಾಗ ಗೋರಕ್ಷಕರು ಎಲ್ಲಿದ್ದರು, ಈಗಲಾದರೂ ಮುಂದೆ ಬರಬೇಕು, ಅವರಿಗೆ ಈ ಗೋವುಗಳು ನೆನಪಾಗುವುದಿಲ್ಲವೇ? ದೇವರ ದಾಸಿಮಯ್ಯನ ವಚನ ಉಲ್ಲೇಖ ಮಾಡಿ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ಎಂದಿರುವಂತೆ, ಈ ಸರ್ಕಾರಗಳು ಕಂಪನಿ ಕಾರ್ಖಾನೆಗಳ ದಾನವೇ ಎನ್ನುವಂತೆ ನಡೆದುಕೊಳ್ಳುತ್ತಿವೆ. ಬಗನಾಳ ಮಹಿಳೆಯೋರ್ವರು ನೋವು ತೋಡಿಕೊಂಡು ಬೆಳಿಗೆದ್ದು ಬಾಯಿಂದ ಉಗಿದಾಗ ಬರೀ ಕಪ್ಪು ಉಗುಳು ಬರುತ್ತದೆ. ಮೂಗಿನಿಂದಲೂ ಕಪ್ಪು ದ್ರವವೇ ಬರುತ್ತದೆಂದು ಹೆಳುತ್ತಾರೆ. ಸರ್ಕಾರಗಳು ಬದಲಾದರೂ ಅವರ ಧೋರಣೆ ಬದಲಾಗಲಿಲ್ಲ. ಎಲ್ಲಾ ಧೋರಣೆಗಳು ನಿಸರ್ಗ ನಾಶ ಮಾಡುವುದೆ ಆಗಿದೆ. ನಾನು ಈ ಹೋರಾಟಕ್ಕಾಗಿ ಹಲವು ಸ್ವಾಮಿಗಳೊಂದಿಗೆ ಇಲ್ಲಿಯೆ ಇದ್ದು ಹೋರಾಡಲು ಸಿದ್ಧ. ಗವಿಶ್ರೀ ಮುಂದೆ ನಿಲ್ಲುವ ಕಾಲ ಇದು ಎಂದರು.

ಧಾರವಾಡ ಪರಿಸರ, ಮಹಿಳಾಪರ ಬರಹಗಾರರಾದ ಶಾರದಾ ಗೋಪಾಲ್ ಅತ್ಯಂತ ಭಾವುಕರಾಗಿ ಮಾತನಾಡಿ, ಮೂರು ವರ್ಷದ ಮಗುವಿಗೆ ಪಾರ್ಶ್ವವಾಯು, ಹುಟ್ಟುವಾಗಲೇ ಹೃದಯರಂದ್ರ, ಏನಿದು ಆಶ್ಚರ್ಯ ಮಹಿಳೆಯರು ಗರ್ಭದರಿಸುತ್ತಿಲ್ಲ. ಅಂಗವಿಕಲ ಮಕ್ಕಳು, ವೈವಾಹಿಕ ಸಂಬಂಧಗಳಿಗೆ ಹಿನ್ನೆಡೆ, ಯಾರೂ ಸಂಬಂಧ ಬೆಳೆಸಲು ಮುಂದೆ ಫರುತ್ತಿಲ್ಲ. ತವರು ಮನೆಯಲ್ಲಿ ಮಕ್ಕಳು, ಮಡದಿ ಎಷ್ಟೊಂದು ಸಮಸ್ಯೆಗಳು ಇಲ್ಲಿವೆ. ಈ ಸಮಸ್ಯೆ ಯಾರಿಂದಾಗಿದೆಯೋ ಅವರು ಸದಾಕಾಲ ಮೌನವಾಗಿದ್ಧಾರೆ. ನಮಗೇನೂ ಗೊತ್ತಿಲ್ಲ ಎನ್ನುವ ನಡೆ. ಮತ್ತೆ ಯಾವಾಗ ಈ ಕಷ್ಷ ಪರಿಹಾರವಾಗುವುದು. ಎಂದು ಕಣ್ಣೀರಾದರು.

ಕಲಬುರಗಿ ವಿವಿ ವಿಶ್ರಾಂತ ಉಪಕುಲಪತಿ ಡಾ. ಪ್ರತಾಪ ಸಿಂಗ್ ತಿವಾರಿ, ಗವಿಸಿದ್ದೇಶ್ವರ ಮಹಾ ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಕಲಬುರಗಿ ನಿವಾಸಿ ಎಸ್.ಎಲ್. ಮಾಲಿಪಾಟೀಲ್, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಮಲ್ಲಿಕಾರ್ಜುನ ಬಿ. ಗೋನಾಳ, ಅಲ್ಲಮಪ್ರಭು ಬೆಟ್ಟದೂರು, ಮಂಜುನಾಥ ಜಿ. ಗೊಂಡಬಾಳ, ರಾಜೇಶ ಸಸಿಮಠ, ಸೌಮ್ಯ ನಾಲ್ವಾಡ, ಡಾ. ಮಂಜುನಾಥ ಸಜ್ಜನ್, ಜ್ಯೋತಿ ಎಂ. ಗೊಂಡಬಾಳ, ಸರೋಜಾ ಬಾಕಳೆ

ಸೇರಿದಂತೆ ಅನೇಕರಿದ್ದರು.