Breaking News
ದ್ವಿತೀಯ ಪಿಯುಸಿ ಫಲಿತಾಂಶ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ.

 

*ಕಿಷ್ಕಿಂಧ ಪಿಯು ಕಾಲೇಜು ಅತ್ಯುತ್ತಮ ಸಾಧನೆ, ಶೇ. 100 ಫಲಿತಾಂಶ.

*ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಕಿಷ್ಕಿಂಧ ಪಿಯು ಕಾಲೇಜು ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸಿ ಗಮನಾರ್ಹ ಸಾಧನೆ ಮಾಡಿದೆ. ಒಟ್ಟು 163 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿರುವುದು ಕಾಲೇಜಿನ ಶೈಕ್ಷಣಿಕ ಬದ್ಧತೆಯನ್ನು ತೋರಿಸುತ್ತದೆ. ಇವರಲ್ಲಿ 145 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 18 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಡಾ.ಜಿ.ಚಂದ್ರಪ್ಪ ಹೇಳಿದರು.

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೇವಲ ಶೇ.45 ಅಂಕಗಳನ್ನು ಪಡೆದ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ, ಆಧ್ಯಾಪಕ ವೃಂದ ಮತ್ತು ಪಾಲಕರ ಸಹಕಾರದೊಂದಿಗೆ ಉತ್ತಮ ತರಬೇತಿ ನೀಡಿ, ಇಂದು ಶೇ. 95 ಮಟ್ಟದ ಸಾಧನೆಗೇರಿಸಿರುವುದು ಕಾಲೇಜಿನ ಮಹತ್ವದ ಸಾಧನೆಯಾಗಿದೆ.

ವಾಣಿಜ್ಯ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿ ಶೇ.100 ಫಲಿತಾಂಶ ತಂದುಕೊಟ್ಟಿದ್ದಾರೆ. ಕೆಲ ಕಾಲೇಜುಗಳು ಹೆಚ್ಚಿನ ಪರ್ಸೆಂಟೇಜ್ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ಕಿಷ್ಕಿಂಧ ಕಾಲೇಜು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ, ಅವರನ್ನು ಜಿಲ್ಲಾಮಟ್ಟದಲ್ಲಿ ಮೆರೆದಿರುವುದು ಗಮನಾರ್ಹವಾಗಿದೆ.

, “ನಮ್ಮ ಗುರಿ ಶೇಕಡಾವಾರು ಆಧಾರಿತ ಆಯ್ಕೆ ಅಲ್ಲ, ಬದಲಾಗಿ ಗುಣಮಟ್ಟದ ಶಿಕ್ಷಣ ನೀಡುವುದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಂಕಷ್ಟ ನಮಗೆ ತಿಳಿದಿದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ಮುಂದಕ್ಕೆ ತರುವುದು ನಮ್ಮ ಧ್ಯೇಯವಾಗಿದ್ದು ಪ್ರಾಂಶುಪಾಲ ಮುರಳೀ ಕೃಷ್ಣ ಹಾಗೂ ಆಡಳಿತ ಮಂಡಳಿ ಸದಸ್ಯರಾದ ವೀರಭದ್ರರಾವ್, ಡಾ. ಮಲ್ಲನಗೌಡ ಮತ್ತು ಅಧ್ಯಾಪಕರ ಪರಿಶ್ರಮದಿಂದ ಕಾಲೇಜಿಗೆ ಉತ್ತಮ ಹೆಸರು ಬಂದಿದೆ. ಪಾಲಕರ ಸಹಕಾರವೂ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಆಡಳಿತಾಧಿಕಾರಿ ವೀರಭದ್ರರಾವ್ ಮಾತನಾಡಿ, “ಕೆಲವು ಖಾಸಗಿ ಕಾಲೇಜುಗಳು ಪ್ರಚಾರಕ್ಕೆ ಆದ್ಯತೆ ನೀಡಿ ಪ್ರಚಾರದ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. ಪಾಲಕರು ಮತ್ತು ವಿದ್ಯಾರ್ಥಿಗಳು ಇಂತಹ ಪ್ರಚಾರಕ್ಕೆ ಮರುಳಾಗದೇ, ನಿಜವಾದ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯನ್ನು ಆಯ್ಕೆ ಮಾಡಬೇಕು,” ಎಂದು ಸಲಹೆ ನೀಡಿದರು.

ಒಟ್ಟಾರೆ, ಕಿಷ್ಕಿಂಧ ಪಿಯು ಕಾಲೇಜು ಕಡಿಮೆ ಅಂಕಗಳಿಂದ ಬಂದ ವಿದ್ಯಾರ್ಥಿಗಳನ್ನು ಉತ್ತೇಜಿಸಿ, ಶೇ.100 ಫಲಿತಾಂಶ ಸಾಧಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ

ಈ ಸಂದರ್ಭದಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸಲಾಯಿತು ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಪಾಲಕರು ಉಪಸ್ಥಿತರಿದ್ದರು

ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥಮಾನವಹಕ್ಕುಗಳ ಉಲ್ಲಂಘಟನೆಯಾಗುತ್ತಿದೆ: ಹೆಚ್.ಆರ್.ಶ್ರೀನಾಥ

 

*ರಾಜ್ಯ ಸರಕಾರ ಆನೆಗೊಂದಿ ಭಾಗವನ್ನು ಹಂಪಿ ಪ್ರಾಧಿಕಾರದಿಂದ ಕೂಡಲೇ ಕೈ ಬಿಡಬೇಕು.

*ಪ್ರಾಧಿಕಾರದಿಂದ ಬಡವರ ಊಟಕ್ಕೂ ಸಂಚಕಾರ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಆನೆಗೊಂದಿ ಭಾಗದಲ್ಲಿರುವ ಸ್ಮಾರಕಗಳ ಸಂರಕ್ಷಣೆಯ ನೆಪದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಸೇರ್ಪಡೆ ಮಾಡಿದ್ದು ಪ್ರಾಧಿಕಾರದ ನಿಯಮಗಳ ಪಾಲನೆ ನೆಪದಲ್ಲಿ ಅಧಿಕಾರಿಗಳು ಮಾನವ ಹಕ್ಕುಗಳ ಉಲ್ಲಂಘಟನೆಯ ಕಾರ್ಯ ನಿರಂತರವಾಗಿದ್ದು ಬಡವರ ಊಟಕ್ಕೂ ಸಂಚಕಾರ ಉಂಟಾಗಿದೆ. ರಾಜ್ಯ ಸರಕಾರ ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಡುವಂಡೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ ಒತ್ತಾಯಿಸಿದರು.

ಅವರು ತಾಲೂಕಿನ ಸಾಣಾಪೂರ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ದೀನ ದಲಿತರು, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರ ಜೀವನವನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ಇಡೀ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದಲ್ಲಿ ಸರ್ವರೂ ನಡೆಯುವ ಮೂಲಕ ದೇಶವನ್ನು ಸಮ ಸಮಾಜದ ಕಡೆ ತೆಗೆದುಕೊಂಡು ಹೋಗಬೇಕಿದೆ. ಆದರೆ ನೌಕರ ಶಾಹಿ ವರ್ಗದವರು ಆನೆಗೊಂದಿ ಭಾಗದಲ್ಲಿ ಎಸ್ಸಿ ಎಸ್ಟಿ ಹಿಂದುಳಿದವರು ಗುಡ್ಡಗಾಡು ಪ್ರದೇಶದಲ್ಲಿ ಶತಮಾನಗಳಿಂದ ಜೀವನ ಕಟ್ಟಿಕೊಂಡು ಜೀವನ ಮಾಡುತ್ತಿದ್ದು ಕಳೆದ 35 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹಂಪಿ ಅಭಿವೃದ್ದಿ ಪ್ರಾಧಿಕಾರದ ನೆಪದಲ್ಲಿ ಹೊಸಪೇಟೆಯಲ್ಲಿರುವ ಹೊಟೇಲ್ ಲಾಭಿಯವರ ಮಾತು ಕೇಳಿ ಆನೆಗೊಂದಿ ಭಾಗದ 15 ಗ್ರಾಮಗಳ ಜನರ ಜೀವನ ಜತೆ ಆಟವಾಡುತ್ತಿದ್ದಾರೆ. ಇಡೀ ಪ್ರದೇಶವನ್ನು ಕೋರ್ ಝೋನ್, ಗ್ರೀನ್ ಝೋನ್ ಎಂದು ವಿಂಗಡಿಸಿ ನಿಯಮಗಳ ನೆಪದಲ್ಲಿ ಬಿದ್ದ ಮನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಕೂಡಲೇ ಹಂಪಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಕೈ ಬಿಟ್ಟು ಕಿಷ್ಕಿಂಧಾ ಪ್ರಾಧಿಕಾರ ರಚನೆ ಮಾಡಿ ಸ್ಥಳೀಯರ ಬದುಕನ್ನು ಹಸನು ಮಾಡಬೇಕು. ಅಂಬೇಡ್ಕರ ಅವರ ಆಶಯವೂ ಅದೇ ಆಗಿದ್ದು ಸ್ಥಳೀಯರು ಉಗ್ರ ಹೋರಾಟ ಮಾಡುವ ಮೊದಲು ರಾಜ್ಯ ಸರಕಾರ 1988 ಪುರತತ್ವ ಕಾಯ್ದೆ ತಿದ್ದುಪಡಿ ಮಾಡಿ ಆನೆಗೊಂದಿ, ವಿರೂಪಾಪೂರಗಡ್ಡಿ ಗ್ರಾಮಗಳನ್ನು ಕೋರ್ ಝೋನ್ ದಿಂದ ತೆಗೆದು ಹಾಕಬೇಕು. ಸ್ಥಳೀಯ ಸ್ಮಾರಕಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರೇ ಸಂರಕ್ಷಣೆ ಮಾಡಿ ಇಂದು ಅವುಗಳನ್ನು ನೋಡಲು ಉಳಿಸಿದ್ದಾರೆ. ಮುಂದೆಯೂ ಸ್ಥಳೀಯರು ಸಂರಕ್ಷಣೆ ಮಾಡುತ್ತಾರೆ. ಶಾಸಕರು, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಪ್ರಾಧಿಕಾರದ ಕಿರುಕುಳದಿಂದ ತಪ್ಪಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿ ಡಾ.ಚಂದ್ರಶೇಖರ ಅವರು ಡಾ.ಬಿ.ಆರ್.ಅಂಬೇಡ್ಕರ ಅವರ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃರ ಹಿರಿಯ ಪತ್ರಕರ್ತ ಕೆ.ಮಲ್ಲಿಕಾರ್ಜುನ, ಕೊಪ್ಪಳದ ಮುಖಂಡರಾದ ಸೈಯದ್, ಪಬ್ಲಿಕ್ ಪವರ್ ಸಂAಘಟನೆಯ ನ್ಯಾಯವಾದಿ ಬಿ.ಆರ್.ಪಾಟೀಲ್,

ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ, ಮಾಜಿ ಉಪಾಧ್ಯಕ್ಷ ನರಸಿಂಹಲು, ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ರಾಜ್ಯ ಮುಖಂಡ ಕೋಡಿ ನಾಗೇಶ, ನಾಗಮುನಿರೆಡ್ಡಿ, ರಘುರಾಮ ರೆಡ್ಡಿ ಸೇರಿ ಗ್ರಾಮಸ್ಥರಿದ್ದರು.

ಮಾಲವಿ ಡ್ಯಾಂ ಕ್ರಸ್ಟ್‌ ಗೇಟ್ ಗಳ ಅಳವಡಿಕೆಗೆ 4 ಕೋಟಿ ರೂ.ಮಂಜೂರಿಯಾದರೂ ಗುತ್ತಿಗೆದಾರ ನಾಪತ್ತೆ! ಕಾಮಗಾರಿ ವಿಳಂಭ ರೈತಸಂಘದ ಮುಖಂಡರಿಂದ ಪ್ರತಿಭಟನೆಯ ಎಚ್ಚರಿಕೆ.

­

 

*ಶಾಸಕರು,ಉಸ್ತುವಾರಿ ಸಚಿವರು ಹಾಗೂ ಸಂಸದರ ವಿರುದ್ದ ಆಕ್ರೋಶ.

*ರಾಜ್ಯ ಸರ್ಕಾರದ ವಿರುದ್ಧ ರೈತ ಸಂಘದ ನೇತೃತ್ವದಲ್ಲಿ ಏ 27ರಂದು ಉಗ್ರ ಪ್ರತಿಭಟನೆ.

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಮಳೆ ಆಶ್ರಿತ ಬಯಲು ಪ್ರದೇಶವಾಗಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಡ್ಯಾಂ ಕ್ರಸ್ಟ್‌ ಗೇಟ್ ಗಳ ಅಳವಡಿಕೆ,ದುರಸ್ತಿ ಕಾಮಗಾರಿಗೆ 4ಕೋಟಿ ರೂ.ಮಂಜೂರು ಆಗಿದ್ದರೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕ್ರಸ್ಟ್‌ ಗೇಟ್ ಅಳವಡಿಸುವ ಕಾಮಗಾರಿ ಅರ್ಧಂಬರ್ಧ ಮಾಡಿ ನಾಪತ್ತೆಯಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಎರಡು ಕ್ರಸ್ಟ್ ಗೇಟ್ ಗಳ ಜೋಡಣೆ ಇಲ್ಲದೆ ಇರುವುದರಿಂದ ಮಳೆಗಾಲದಲ್ಲಿ ನೀರು ಹೋಲಾಗುವ ಆತಂಕವಿದೆ ಇದಕ್ಕೆ ತಾಲೂಕಿನ ಶಾಸಕರು, ಉಸ್ತುವಾರಿ ಸಚಿವರು, ಸಂಸದರು ಹಾಗೂ

ರಾಜ್ಯ ಸರ್ಕಾರ ನೇರ ಹೊಣೆಯಾಗಿದೆ. ಕೂಡಲೇ ಕ್ರಸ್ಟ್ ಗೇಟ್ ಗಳ ಜೋಡಣೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳೆಗಾಲದ ವೇಳೆಗೆ ಡ್ಯಾಂ ನಲ್ಲಿ ಮಳೆ ನೀರು ನಿಲ್ಲುವಂತೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅವರು ಬುಧವಾರ ಮಾಲವಿ ಡ್ಯಾಂ ಸ್ಥಳಕ್ಕೆ ರೈತ ಸಂಘಟನೆಯ ನಿಯೋಗದೊಂದಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಗರಿಬೊಮ್ಮನಹಳ್ಳಿ ತಾಲುಕಿನ ಜೀವನಾಡಿ ಹಾಗೂ ಪಂಪ್ ಸೆಟ್ ಗಳ ಅಂತರ ಜಲ ಹೆಚ್ಚಳಕ್ಕೆ ಕಾರಣವಾಗಿರುವ ಮಾಲವಿ ಜಲಾಶಯದ ೧೦ ಗೇಟ್‌ಗಳ ಪೈಕಿ ೮ ಕ್ರಸ್ಟ್‌ಗೇಟ್ ದುರಸ್ಥಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಎರಡ ಕ್ರಸ್ಟ್‌ ಗೇಟ್ ಅಳವಡಿಕೆ ಕಾರ್ಯ ಕಳೆದ ೨ ತಿಂಗಳಿಂದ ಸ್ಥಗಿತಗೊಂಡಿದೆ ,ಇದೇ ಏಪ್ರಿಲ್ ೨೬ರ ಒಳಗಾಗಿ ಕಾರ್ಯ ಪ್ರಾರಂಭವಾಗದಿದ್ದರೆ ಎ.೨೭ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶಾಸಕ ನೇಮಿರಾಜ್,ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್,ಸಂಸದ ಈ.ತುಕಾರಾಂ

ಹಾಗೂಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ವಿರುಧ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನೀರು ಸಂಗ್ರಹ ಮಾಡುವ ಡ್ಯಾಂ ಮತ್ತು ಬೃಹತ್ ಕೆರೆಗಳು ಇರಲಿಲ್ಲ,

ದಿವಂಗತ ಶಾಸಕರಾದ ಬಾಚಿಗೊಂಡನಹಳ್ಳಿಯ

ಚನ್ನಬಸವನಗೌಡ್ರು ಮಾಲವಿ ಡ್ಯಾಂ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಸ್ತುತದಲ್ಲಿ ಡ್ಯಾಂ ರಾಜ್ಯ ಸರಕಾತ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ, ಕುಡಿಯುವ ನೀರಿಗಾಗಿ ಬಳಸುವಂತೆ ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಮಾಲವಿ ಜಲಾಶಯಕ್ಕೆ 800 ಕೋಟಿ ರೂ.ಗಳನ್ನು ಖರ್ಚು ಮಾಡಿ ಮಾಲವಿ ಡ್ಯಾಂ ಭರ್ತಿ ಮಾಡುವ ಕೆಲಸವಾಗಿದ್ದು ಪ್ರಸ್ತುತ

ಕ್ರಸ್ಟ್‌ ಗೇಟ್ ದುರಸ್ಥಿ ಕಾಮಗಾರಿಯ ೨ ಗೇಟ್ ಅಳವಡಿಕೆ ವಿಳಂಬವಾಗಿದೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿ ಹಾಗೂ ಸಂಭಂಧಿಸಿದ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ.

ಮಾಲವಿ ಡ್ಯಾಂ ಕೇವಲ 7.5 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗಷ್ಡೆ ಸಂಬಂಧಿಸಿದ್ದಲ್ಲ,

ಇಡೀ ಹಗರಿಬೊಮ್ಮನಹಳ್ಳಿ ಸಾರ್ವಜನಿಕರಿಗೆ ಜೀವನಕ್ಕೆ ಸಂಬಂಧಿಸಿದ ವಿಷಯವಾಗಿದೆ.

ಇನ್ನೂ ಕೆಲವೇ ದಿನಗಳಲ್ಲಿ ಮುಂಗಾರು ಮಳೆಗಾಲ ಪ್ರಾರಂಬವಾಗುತ್ತದೆ, ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾದರೆ ಡ್ಯಾಂನಲ್ಲಿ ಸಂಗ್ರಹವಾಗುತ್ತದೆ.

ಕೂಡಲೇ ಎರಡು ಕ್ರಸ್ಟ್‌ ಟ್ರಸ್ಟ್ ಗೇಟ್ಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಕಳೆದ ವರ್ಷ ನೀರು ಪೋಲದಂತೆ ಈ ಮಳೆಗಾಲದಲ್ಲೂ ಡ್ಯಾಂ ನೀರು ಪೋಲಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಸಾಹಿತಿ ಬಾಚಿಗೊಂಡನಹಳ್ಳಿ

ಹುರಕಡ್ಲಿ ಶಿವಕುಮಾರ್, ರಾಜ್ಯ ರೈತ ಸಂಘದ ತಂಬ್ರಹಳ್ಳಿ ರವಿಕುಮಾರ ಸೇರಿದಂತೆ ರೈತ ಮುಖಂಡರಿದ್ದರು.