Breaking News
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ನೀರಿನ ಅರವಟಿಗೆ ಆರಂಭ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಗಂಗಾವತಿ ವಿರುಪಾಪೂರ ತಾಂಡದ ಸದ್ಗುರು ಸೇವಾಲಾಲ್ ಮಹಾರಾಜ ಸರ್ಕಲ್ ಬಳಿ

ಕರ್ನಾಟಕ ರತ್ನ ಡಾ.ವಿಷ್ಣುವರ್ಧನ ಅಭಿಮಾನಿಗಳು ಹಾಗೂ

ವಿರೂಪಾಪೂರತಾಂಡ

ವತಿಯಿಂದ

ಶುದ್ಧ ಕುಡಿಯುವ ನೀರಿನ ಅವರಟಿಗೆ ಸೇವೆ ಆರಂಭಿಸಲಾಯಿತು.

ಬಿರು ಬೇಸಿಗೆಯ

ಬಿಸಿಲು ತಾಪಮಾನ ಹೆಚ್ಚಾಗುತ್ತಿದ್ದು ವಿರುಪಾಪೂರ ತಾಂಡ ಹಾಗೂ ನಗರದ ಅತಿ ಹೆಚ್ಚು ಜನರು ಕೂಲಿ ಕಾರ್ಮಿಕರು ಹಿರಿಯರು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಕೊಡುವ ಉದ್ದೇಶದಿಂದ ನೀರಿನ ಅರವಟಿಗೆ ಆರಂಭಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿರುಪಾಪೂರತಾಂಡದ

ವಿಷ್ಣುಸೇನ ಸಮಿತಿ,ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ

ಮಲ್ಲೆಪ್ಪ ಕುನ್ನಾ( ಕದಂಬ),

ಅಧ್ಯಕ್ಷ ಹನುಮಂತ ಜಾದವ್,ಉಪಾಧ್ಯಕ್ಷ

ಪಾಂಡು ನಾಯ್ಕ್ (ಬಟಣಿ),

ಪ್ರಧಾನ ಕಾರ್ಯದರ್ಶಿ

ರಾಜಾ ನಾಯಕ್,ಸಹಕಾರ್ಯದರ್ಶಿ

ಬಾಬು ನಾಯ್ಕ್ , ಸಂಘಟನಾ ಕಾರ್ಯದರ್ಶಿ

ರವಿಕುಮಾರ್ ಖಜಾಂಚಿ ಶಿವಪ್ಪ ,ವೆಂಕಟೇಶ್ ಗೋಬಿ ಹಾಗೂ

ಸಂಘದ ಕಾರ್ಯಕರಣಿ ಸದಸ್ಯರು ಹನಮಂತ ಪೂಜಾರಿ,ಪರಶುರಾಮ್,ಸೋಮ,ಅಶೋಕ ಹಸನಾ,ಚಂದ್ರ ನಾಯ್ಕ, ಕಿರಣಕುಮಾರ್,ರಾಮ ಮುನಿ,ರವಿಚಂದ್ರ ಚವ್ಹಾಣ ಸೇರಿದಂತೆ ಅನೇಕರಿದ್ದರು.

ಶ್ರೀ ನೀಲಕಂಠೇಶ್ವರ ದೇವಸ್ಥಾನದ 37ನೇ ವಾರ್ಷಿಕೋತ್ಸವ: ಶ್ರದ್ಧೆ, ಭಕ್ತಿಯಿಂದ ಜರುಗಿದ ರಥೋತ್ಸವ.

 

*ಕುರುಹೀನಶೆಟ್ಟಿ ಜಗದ್ಗುರು ಪೂಜ್ಯ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿ ಪ್ರಮುಖರ ಉಪಸ್ಥಿತಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಆರಾಧ್ಯ ದೈವ ಶ್ರೀ ನೀಲಕಂಠೇಶ್ವರ ದೇವರ ದೇವಸ್ಥಾನ ನಿರ್ಮಾಣದ 37ನೇ ವಾರ್ಷಿಕೋತ್ಸವದ ನಿಮಿತ್ಯ ಶ್ರೀ ನೀಲಕಂಠೇಶ್ವರ ಮಹಾರಥೋತ್ಸವ ಬಸವ ಜಯಂತಿಯಂದು ಸಂಜೆ ಸಾವಿರಾರು ಭಕ್ತರ ಮಧ್ಯೆ ಶ್ರದ್ದೆ, ಭಕ್ತಿಯಿಂದ ಜರುಗಿತು.

ಕರುಹೀನ ಶೆಟ್ಟಿ ಸಮಾಜದ ಜಗದ್ಗುರು ಪೂಜ್ಯ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗಿನ ಜಾವ ಶ್ರೀ ನೀಲಕಂಠೇಶ್ವರ ಸ್ವಾಮಿಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಧ್ಯಾಹ್ನ ದೇವಸ್ಥಾನಕ್ಕೆ ಭೇಟಿ ನೀಡಿ ನೀಲಕಂಠೇಶ್ವರ ಸ್ವಾಮಿಯ ದರ್ಶನ ಪಡೆದು ಮಡಿತೇರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಕುರುಹಿನಶೆಟ್ಟಿ ಸಮಾಜದ ಮುಖಂಡರಾದ ಎಂ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಕುರುಹೀನಶೆಟ್ಟಿ ಸಮಾಜದ ಹಿರಿಯರು ಮತ್ತು ಶ್ರೀ ನೀಲಕಂಠೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಗುರು ಬಸವಣ್ಣ ವಿಶ್ವದ ಸಮಾನತೆಯ ಬೆಳಕು: ಗಾಲಿ ಜನಾರ್ದನ ರೆಡ್ಡಿ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿಶ್ವಗುರು ಬಸವಣ್ಣನವರು ವಿಶ್ವದ ಸಮಾನತೆಯ ಬೆಳಕಾಗಿ ಭಾರತದ ಹಿರಿಮೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಅವರು ನಗರದ ಶ್ರೀ ಕೃಷ್ಣದೇವರಾಯ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಬಸವೇಶ್ವರ ಮೂರ್ತಿಗೆ ಹೂಮಾಲೆ ಸಮರ್ಪಿಸಿ ಪೂಜೆ ಮಾಡಿದ ನಂತರ ಮಾತನಾಡಿದರು. ವಿಶ್ವದ ಮೊದಲ ಪಾರ್ಲಿಮೆಂಟ್, ಅನುಭವ ಮಂಟಪನ್ನು ಪರಿಚಯ ಮಾಡಿ ಸರ್ವ ಜನರನ್ನು ಇದರಲ್ಲಿ ಸೇರ್ಪಡೆ ಮಾಡಿದರು ಜೊತೆಗೆ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ನೀಡುವ ಮೂಲಕ ಯಾವುದೇ ಲಿಂಗ ತಾರತಮ್ಯ ಕ್ಕೆ ಅವಕಾಶ ನೀಡಿದೆ ಸರ್ವರು ಸಮಾನರು, ಜಗತ್ತು ಸಮಾನತೆಯ ಬದುಕಿನಲ್ಲಿ ಬಾಳಿದರೆ ಮಾತ್ರ ಸ್ವರ್ಗ ಇಲ್ಲೇ ಸೃಷ್ಟಿಯಾಗುತ್ತದೆ. ಜೊತೆಗೆ ಕಾಯಕ ಮತ್ತು ದಾಸೋಹದ ಮೂಲಕ ಪ್ರತಿಯೊಬ್ಬರು ಜೀವನವನ್ನು ನಡೆಸಬೇಕು. ದುಡಿದು ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಬೇಕೆನ್ನುವುದು ಬಸವಣ್ಣನವರ ಆದರ್ಶವಾಗಿದ್ದು, ಪ್ರತಿಯೊಬ್ಬರು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗುವ ಮೂಲಕ ಬಸವಣ್ಣನವರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡಬೇಕು. 12ನೇ ಶತಮಾನದಲ್ಲಿ ಬಸವಣ್ಣ ಬಿತ್ತಿದ ಸಮಾನತೆಯ ಮತ್ತು ಜಾತ್ಯಾತೀತ ಮನೋಭಾವ ರೂಢಿಸಿಕೊಳ್ಳಬೇಕು ಎಂದರು. ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಈ ಸಂದರ್ಭದಲ್ಲಿ ಮಾತನಾಡಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮುರಹರಿ ನಗರದಲ್ಲಿ ಸಮಗಾರ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ,ನಂತರ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮೇಗೌಡ್ರು, ಮಾಜಿ ಶಾಸಕ ಪರಣ್ಣ ಮುನವಳ್ಳಿ,

ಆಲ್ ಇಂಡಿಯಾ ಮಜ್ದೂರ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ಆರ್.ಬಿ.ಪಾಟೀಲ್,

ಬಿಜೆಪಿಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ ಆಗೋಲಿ, ಬಿಜೆಪಿ ಮುಖಂಡರಾದ ತಿಪ್ಪೇರುದ್ರಸ್ವಾಮಿ,ಹೆಚ್. ಗಿರೇಗೌಡ, ಮನೋಹರಗೌಡ ಹೇರೂರು, ವೀರೇಶ್ ಬಲಕುಂದಿ, ಸಿದ್ದರಾಮಯ್ಯ ಸ್ವಾಮಿ, ಪ್ರಸಾದ್, ಜೋಗದ ದುರ್ಗಪ್ಪ ದಳಪತಿ, ವಿಶ್ವನಾಥ್ ಕೆಸರಟ್ಟಿ, ಜಿಲಾನಿ ಪಾಷಾ, ದಿಲೀಪ್ ಕುಮಾರ ವಂದಾಳ, ಷಣ್ಮುಖಪ್ಪ, ಕಾಳಪ್ಪ, ಅರಳಿ ಶೇಖರಪ್ಪ, ಬಸವರಾಜು, ಶರಣಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು

ಅಕ್ರಮ ಹೆಂಡ (ಶೇಂದಿ)ಮಾರಾಟದ ಅಡ್ಡೆಯ ಮೇಲೆ ಗ್ರಾಮೀಣ ಪೊಲೀಸರ ದಾಳಿ.

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅಕ್ರಮವಾಗಿ ಹೆಂಡ (ಶೇಂದಿ) ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಡಿಎಸ್ಪಿ ಕಚೇರಿ ಜಾಗೃತದಳ ಹಾಗೂ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಅಕ್ರಮ ಹೆಂಡ ಹಾಗೂ ಆರೋಪಿತನನ್ನು ವಶಕ್ಕೆ ಪಡೆದ ಪ್ರಕರಣ ಕನಕಗಿರಿ ತಾಲೂಕಿನ ಹಿರೇಡಂಕನಕಲ್ ಗ್ರಾಮದಲ್ಲಿ ಸೋಮವಾರದಂದು ಮಧ್ಯಾನ್ಹ ಜರುಗಿದೆ.

ಹಿರೇ ಡಂಕನಕಲ್ ಗ್ರಾಮದ ಮುತ್ತಣ್ಣ ಮ್ಯಾಗಳಮಾನಿ (50) ಎನ್ನುವ ವ್ಯಕ್ತಿ ಕಳೆದ ಹಲವು ತಿಂಗಳುಗಳಿಂದ ಆಂಧ್ರಪ್ರದೇಶದಿಂದ ಅಕ್ರಮವಾಗಿ ಹೆಂಡವನ್ನು ತಂದು ಹಿರೇಡಂಕನಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕುರಿತು

ಡಿ. ವೈ. ಎಸ್. ಪಿ. ಜೆ.ಎಸ್. ನ್ಯಾಮಗೌಡ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕಚೇರಿ ಜಾಗೃತ ದಳ ಹಾಗೂ ಗ್ರಾಮೀಣ ಸಿಪಿಐ ರಂಗಪ್ಪ ದೊಡ್ಮನಿ ಹಾಗೂ ಪೊಲೀಸರು ದಾಳಿ ನಡೆಸಿ

ಅಕ್ರಮ ನಡೆಸುತ್ತಿದ್ದ ಆರೋಪಿ ಹಾಗೂ 48 ಲೀಟರ್ ಹೆಂಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.