Breaking News
ಗಂಗಾವತಿ: ಕೊನೆಗೂ ಖಾಯಂ ನೂತನ ತಹಸೀಲ್ದಾರರಾಗಿ , ಯು ವಸಂತಕುಮಾರಿ ಅವರನ್ನು ವರ್ಗಾಯಿಸಿದ ಕಂದಾಯ ಇಲಾಖೆ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿಯ ನೂತನ ತಸೀಲ್ದಾರರಾಗಿ ಬೆಂಗಳೂರು ಉತ್ತರ ನಗರಪಾಲಿಕೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಯು ವಸಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ
ನರಸಿಂಹಮೂರ್ತಿ ಜಿ.ಕೆ ಇವರು ಆದೇಶ ಹೊರಡಿಸಿದ್ದಾರೆ.
ಇದುವರೆಗೂ ಯು.ವಸಂತಕುಮಾರಿ, ತಹಶೀಲ್ದಾರ್ ಗ್ರೇಡ್-2, ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಆದೇಶದವರೆಗೆ ತಹಶೀಲ್ದಾರ್ ಗ್ರೇಡ್-1 ಗಂಗಾವತಿ ತಾಲ್ಲೂಕಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಯು ವರ್ಗಾಯಿಸಿದ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕಂದಾಯ ಇಲಾಖೆಗೆ ಮಾಹಿತಿ ಕಳುಹಿಸುವಂತೆ ಸೂಚಿಸಲಾಗಿದೆ.
ಗಂಗಾವತಿ ತಹಸೀಲ್ದಾರ್ ಆಗಿದ್ದ ಯು.ನಾಗರಾಜ ಇವರನ್ನು ಸರಕಾರ ವರ್ಗಾಯಿಸಿದ ನಂತರ ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ ಅವರಿಗೆ ಗಂಗಾವತಿ ತಹಸೀಲ್ದಾರ್ ಹುದ್ದೆಯನ್ನು ಪ್ರಭಾರವನ್ನು ವಹಿಸಲಾಗಿತ್ತು.