Breaking News
ಅಪಘಾತ ಪ್ರಕರಣ ಆರೋಪಿಗೆ ಶಿಕ್ಷೆ ಪ್ರಕಟ

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ಕಾರು ಬೈಕ್ ಡಿಕ್ಕಿ

ಅಪಘಾತ ಪ್ರಕರಣ ಒಂದರಲ್ಲಿ ಆರೋಪಿಗೆ ನಗರದ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಜೈಲು ವಾಸ ಹಾಗೂ ದಂಡ ವಿಧಿಸಿ ಶಿಕ್ಷೆಯನ್ನು ಪ್ರಕಟಿಸಿದ.

ನಗರದ ಎಆರ್ ಎಸ್ ಫಾರಂ ಹತ್ತಿರ 2021 ನೇ ಇಸ್ವಿ ನವೆಂಬರ್ 21 ರಂದು ಕಾರು ಹಾಗೂ ಬೈಕ್ ಅಪಘಾತ ಜರುಗಿ ತೊಂಡಿಹಾಳ ಗ್ರಾಮದ ಮೌಲಸಾಬ ತಂದೆ ಮೌಲಾಲಿ (23) ಮೃತಪಟ್ಟಿದ್ದ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್ ಮಂಗಳವಾರ ತೀರ್ಪು ನೀಡಿದ್ದು ಆರೋಪಿ ಹನುಮನಗೌಡ ಹಟ್ಟಿ ಈತನ ವಿರುದ್ಧ ಭಾರತ ದಂಡ ಸಂಹಿತೆ 304/ಎ ಅಡಿಯಲ್ಲಿ ಎರಡು ವರ್ಷ ಒಂಬತ್ತು ತಿಂಗಳು ಜೈಲು ಶಿಕ್ಷೆ ಹಾಗೂ 9500/ರೂ‌.ಗಳ ದಂಡ ವಿಧಿಸಿದ್ದಾರೆ.